ನೆನಪುಗಳೇನೊ...
ಅಚ್ಚಳಿಯದೆ ಉಳಿದುಕೊಂಡು
ಬಿಡುತ್ತವೆ... ಬದುಕಿನ
ಪುಟಗಳಲ್ಲಿ
ರಂಗೀ....
ಸಂಬಂಧಗಳೇ....
ಋತುವಿಗಳಿಗಿಂತಲೂ
ಹೆಚ್ಚಾಗಿ ಬದಲಾಗುತ್ತಲೆ
ಇರುತ್ತವೆ...
ಹಿಂದೆ ಆಡಿಕೊಳ್ಳುತ್ತಾರೆ
ಎಂದ ಮಾತ್ರಕ್ಕೆ
ಮುಡಿಗೆ ಮಲ್ಲಿಗೆಯನ್ನು
ಮುಡಿಯದೆ ಇರಲಾದಿತೆ..?
ಉಪ್ಪನ್ನು ಸುರಿಯಲೆಂದೆ
ನಿಂತವರಿಗೆ... ಹಾಲಾದರೇನು?
ಅನ್ನವಾದರೇನು?
ಹೆಗಲು ಕೊಟ್ಟು
ಮಾತ್ರಕ್ಕೆ ಋಣಗಳು
ತೀರಿ ಹೋಗುತ್ತವೆ
ಎಂದಾದರೆ...
ಸಂಬಂಧಗಳಿಗೆಲ್ಲಿದೆ
ಬೆಲೆ..!!!
ಮಸೀದಿ, ಗುಡಿ-ಗುಂಡಾರಗಳನ್ನು
ಸುತ್ತು ಹಾಕಿದರೆ
ಪಾಪವು ಕಳೆದು
ಹೋಗುತ್ತೆಂದಾದರೆ
ಪುಣ್ಯಕ್ಕೆಲ್ಲಿದೆ ಇಲ್ಲಿ
ನೆಲೆ..!!
ಪಡೆದುಕೊಂಡವರಿಂದ
ನಾನೇನು ಹೆಚ್ಚಿನದನ್ನು
ನಿರೀಕ್ಷಿಸಲಿರಲಿಲ್ಲ!!
ಹನಿ ಕಣ್ಣೀರೊಂದನ್ನು
ಹೊರತುಪಡಿಸಿ...
ಇರಲಿ ಬಿಡಿ... ಅವರೆಲ್ಲ
ನಿಶ್ಚಿಂತರಾಗಿದ್ದಾರೆ ಈಗ
ನಿಟ್ಟುಸಿರೊಂದನು
ಹೊರ ಚೆಲ್ಲಿ..!!
ಸತ್ತು... ಹೆಣವಾದ
ಮೇಲಾದರೂ....
ಒಣ ಕಟ್ಟಿಗೆಗಳನ್ನಾದರು
ಇಟ್ಟು ಸುಡಬಾರದಿತ್ತೆ..!!
ಉಸಿರಿದ್ದಾಗ..
ಹಸಿ - ಬಿಸಿ ಮಾತುಗಳಿಂದ
ಬದುಕನ್ನು ಕೊಂದಿದ್ದೆ...
ಸಾಕಿತ್ತು..!!!
ಕೊಟ್ಟು - ತೆಗೆದುಕೊಳ್ಳುವ
ಲೋಕದಲ್ಲಿ....ಬಿಟ್ಟು
ಹೋಗುವುದಕ್ಕೇನಿದೆ..??
ಹುಗಿದ ಗೋರಿಯ ಮೇಲೂ....
ಗೆದ್ದಿಲೊಂದು ಗೂಡನ್ನು
ಕಟ್ಟುತ್ತದೆ...!!
ನಿನ್ನ ನೆನಪನಿಲ್ಲಿ
ಮರುಕಳಿಸುವುದಕ್ಕೆ
ಈ ಬದುಕಿಗೂ ಒಂದಿಷ್ಟು
ಸುಂಕವನ್ನು ಕಟ್ಟಬೇಕಿದೆ..!!