ಅಮವಾಸೆಯ,
ಕಗ್ಗತ್ತಲಲ್ಲೂ....
ಹುಣ್ಣಿಮೆ ಚಂದ್ರನ ಕಾಣಲು
ಹವಣಿಸುತ್ತಿದ್ದೆ...!!
ತುಂಬು ಹುಣ್ಣಿಮೆಯು
ಸ್ಖಲಿಸಿದ ಬೆಳಕಿನಲ್ಲಿ
ಅವನು ಕತ್ತಲನ್ನೆ
ತುಂಬಿ ಹೋಗಿದ್ದ..!!
@@@@@
ಕಾದ ಎಣ್ಣೆಗೆ...
ವಗ್ಗರಣೆ ಹಾಕಿ
ಬಿಟ್ಟು ಬಿಟ್ಟರೆ...
ಸೀದು ಹೋಗುತ್ತದೆ..!!
ಪ್ರೀತಿಸುತ್ತಿದ್ದಾಳಲ್ಲವೆಂದುಕೊಂಡರೆ
ಜೀತದಾಳಿನ ಭಾವ
ಎದೆಯನ್ನು ಸುಡುತ್ತಿರುತ್ತದೆ..!!
@@@@
ಗಿಡವನ್ನು ನೆಟ್ಟು
ನೀರೆರೆದವನಾರೋ...?
ಇಲ್ಲಿ ಶಿಲ್ಪಿಯನ್ನು
ವೈಭವಿಕರಿಲಾಗುತ್ತದೆ...!!!
ಮುಡಿಗೆ ಮಲ್ಲಿಗೆ
ಮುಡಿಸಿದವನನ್ನು ಬಿಟ್ಟು
ಮುಡಿಸಿಕೊಂಡವಳ
ಮುಡಿಯನ್ನು ಹಿಡಿದು
ಜಗತ್ತು...ಕಿತ್ತಾಡತೊಡಗುತ್ತದೆ....!!
ಅಕ್ಷರ ಬಡವ....