ಎಲ್ಲರು ಮಲಗಿರುವಾಗ, ನಾನೊಬ್ಬನೇಕೆ
ಎದ್ದಿರಲಿ?
ಬುದ್ದನ ಹಾಗಿಲ್ಲೀ...ಯಾರು ಪ್ರಭುದ್ಧರೆನಲ್ಲವಲ್ಲ!!
ಬೆಳಕನು ಅರಸಲು ಇರುಳಲಿ ಮನೆ ಬಿಟ್ಟವರದೆಷ್ಟು ಮಂದಿ
ಎಲ್ಲರ ಮನೆಯ ಬಾಗಿಲುಗಳು, ಜೈಲು ಕೋಣೆಗಿಂತಲೂ
ಬಲಿಷ್ಠವಾಗಿರುವಾಗ.
ಹೇಳುವುದಕ್ಕೆ, ಕೇಳುವುದಕ್ಕೆ ಇನ್ನೇನುಳಿದಿದೆ?
ಮಾತು ಮಾತಿಗೂ ಬೆನ್ನು ತೋರಿಸುವವರೀರುವಾಗ!
ಸುಮ್ಮನೆ, ಒಡೆದು ಹೋದ ಮುತ್ತುಗಳ ಜೋಡಿಸುವ
ವ್ಯರ್ಥ ಪ್ರಯತ್ನ
ಮುಟ್ಟಿದರೆ ನುಂಗಿಬಿಡುವಂತಹ ವಿಲಕ್ಷಣ ಸೋಂಕಿತ
ಮನಸುಗಳು.
ಅಳಿಸುವುದಕ್ಕೆ ನನ್ನ ಕೈಯ್ಯಲ್ಲೊಂದು ಡಸ್ಟರ್ ಇರಬೇಕಾಗಿತ್ತು!!
ಅಳಿಸಿ ಬರೆದರೆ? ಮತ್ತೆ ಜೀವ-ಭಾವ ಮೂಡುವುದೇನು
ಸಂಬಂಧಗಳಲ್ಲಿ!
ಹುಚ್ಚುತನ!! ನಾನೇನ್ನಬಹುದು, ಅವರು ತೆವಲೆಂದು ಕರೆದು ಬಿಡುತ್ತಾರೆ.
ಬರೆದ ಪದಗಳಿಗೆ ಬೆಲೆಯಿಲ್ಲವೆಂದ ಮೇಲೆ, ಪುಸ್ತಕ
ಲೇಖಕನಿಗೂ, ಓದುಗರ ಜೇಬಿಗೂ ಹೊರೆ.
ಹೋಗಲಿಬಿಡಿ ಎಂದು ಕೈಯ್ಯನ್ನು ತೊಳೆದುಕೊಂಡು ಬಿಡುವುದಾ?
ಯಾರೊ ಹಚ್ಚಿದ ದೀಪವನು ಊದಿ, ಕತ್ತಲಲಿ ಗಹಗಹಿಸಿ
ನಗುತ್ತಲಿರುವುದಾ?
ಹರಕು-ಮುರಕು ಗುಡಿಸಲಿಗೆ ಕಡ್ಡಿಯ ಗೀರಿ, ಬಂಗಲೆಯಲ್ಲಿ ಹೊದ್ದು ಮಲಗಿಬಿಡುವುದಾ?
ತುಂಬಿಕೊಳ್ಳಲಿಲ್ಲ ಅರಿವನ್ನು, ಹಂಚಿಕೊಳ್ಳಲಿಲ್ಲ
ಅನುಭವವನ್ನು, ತೋರಿಸುವ ದಾರಿಗಳಂತು ಪ್ರಪಾತಗಳೆ.
ಹಾದಿಗೆ ಹಚ್ಚಿದ ಮುಳ್ಳುಗಳ ನಡುವೆಯೂ ಹೂವೊಂದು
ನಸುನಗುತ್ತದೆ, ಚಿವುಟದಿದ್ದರೆ ಸಾಕು, ದುಂಬಿ ಮಧುವನ್ನು
ಹೀರಲಿ, ಗೂಡನ್ನು ತುಂಬಿಸಲಿ, ತುಂಬು ಜೇನು ಎಲ್ಲರ
ನಾಲಿಗೆಯ ಮೇಲಿನ ವಿಷವನ್ನು ಕಳೆಯಲಿ, ಬದಲಾಗಲಿ,
ಹೊಸಬೆಳಕು ಮೂಡಲಿ.
ಇದಾಗದಿದ್ದರೆ?, ಜೇನು ವಿಷವಾಗಿಬಿಡಲಿ, ಬಿದ್ದು ಹೋಗಲಿ ಸಾಲು ಸಾಲು ಹೆಣಗಳು, ಗಂಟಲಿಗೆ ಹನಿ ನೀರು ದಕ್ಕದಂತೆ.
ತಟ್ಟಿಬಿಡಲಿ ನಿಸ್ಸಹಾಯಕ ಕೈಗಳ ಶಾಪ, ದಾರಿ ಹೆದ್ದಾರಿಗಳಗುಂಟ
ತುಂಬಿ ಬಿಡಲಿ ಮಾಂಸದ ಮುದ್ದೆಗಳು.
ಶತ ಶತಮಾನಗಳಿಂದ ಹಸಿವಿನಿಂದ ಹಾರಾಡುತಿರುವ ಹದ್ದುಗಳು ಕುಕ್ಕಿ... ಕುಕ್ಕಿ.. ಎಳೆದು ತಿಂದು ತೇಗಿಬಿಡಲಿ,
No comments:
Post a Comment