Sunday, May 22, 2022

ಗೆಳೆಯ

ಕೆನ್ನೆಗೆ...
ಅರಿಷಿಣವ ಸವರಿ,
ದೃಷ್ಟಿಬೊಟ್ಟನೊಂದನಿಡುವ
ಅವಕಾಶವನ್ನು ಏಕೆ
ಕಳೆದುಕೊಂಡುಬಿಟ್ಟೆ
ಗೆಳೆಯ..!!
ಗಿಣಿ ಕಚ್ಚಿ ಬಿಟ್ಟ
ಹಣ್ಣಿನಂತೆ, ಈ
ಗಲ್ಲದ ಮೇಲೆ ನಿನ್ನ
ಹಲ್ಲಿನ ಗುರುತನ್ನಾದರೂ
ಉಳಿಸಿ ಹೋಗಬೇಕಿತ್ತಲ್ಲವೇನು?

Monday, May 9, 2022

ರಂಗೀ

ಅವಳನ್ನೊಮ್ಮೆ
ತಡೆದು ನಿಲ್ಲಿಸು!! ನನ್ನ
ಕಣ್ಣೀರಿನಿಂದ ಅವಳ
ಅಂಗಾಲನ್ನು
ತೊಳೆಯಬೇಕಿದೆ
ರಂಗೀ....
ಒಲವನ್ನು ಹೊಸಕಿ
ಹೋದ ಪಾಪದ ಗುರುತು....
ಊರಿನವರಿಗೆಲ್ಲ
ಗೊತ್ತಾಗದಿರಲಿ!!