Sunday, May 22, 2022

ಗೆಳೆಯ

ಕೆನ್ನೆಗೆ...
ಅರಿಷಿಣವ ಸವರಿ,
ದೃಷ್ಟಿಬೊಟ್ಟನೊಂದನಿಡುವ
ಅವಕಾಶವನ್ನು ಏಕೆ
ಕಳೆದುಕೊಂಡುಬಿಟ್ಟೆ
ಗೆಳೆಯ..!!
ಗಿಣಿ ಕಚ್ಚಿ ಬಿಟ್ಟ
ಹಣ್ಣಿನಂತೆ, ಈ
ಗಲ್ಲದ ಮೇಲೆ ನಿನ್ನ
ಹಲ್ಲಿನ ಗುರುತನ್ನಾದರೂ
ಉಳಿಸಿ ಹೋಗಬೇಕಿತ್ತಲ್ಲವೇನು?

No comments:

Post a Comment