ಹೂವಿನ ಎಸುಳಗಳನ್ನು
ಕಿತ್ತು ಹಾಕಿದ ಪಾಪವನ್ನೇಕೆ
ಹೊತ್ತುಕೊಂಡೆ
ರಂಗೀ....
ಈ ಗುಲಾಮನಿಗೆ
ಕೇವಲ ಸನ್ನೆಯನ್ನು
ಮಾಡಿದ್ದರೆ ಸಾಕಿತ್ತಿಲ್ಲವೇನು?
ಫಲವನ್ನು ನಾನನುಭವಿಸುತ್ತಿದ್ದೆ!!
@@@@@@
ಹೀಗೆ ನಿನ್ನ ಕಾಲಡಿಯಲ್ಲಿ
ಕಿತ್ತು ಹಾಕಿಕೊಂಡಿರುವ
ಹೂವಿನ ದಳಗಳನ್ನು
ತೋಟದ ಮಾಲಿಗೆ
ತೋರಿಸಬೇಡ
ರಂಗೀ....
ನೆತ್ತರನು ಬಸೆದು
ಬೆಳೆದ ಹೂವದು...
ನೋಡಿ, ಎದೆಯೊಡೆದು
ಸತ್ತು ಹೋದಾನು..!!
No comments:
Post a Comment