Friday, June 28, 2024

ಚುಟುಕುಗಳು

ಜಗತ್ತು...
ಕಲೆತಂತಹ
ಇತಿಹಾಸವನ್ನೆ...
ಮರೆತುಬಿಡುತ್ತದೆ..!!!
ಇನ್ನೂ ನಾವು
ಯಾವ ಲೆಕ್ಕ..?
ಮಾತಿರಲಿ...
ಕಣ್ಣೆತ್ತಿಯೂ...
ನೋಡದ ಹಾಗೆ
ಓಡಿಸಿಕೊಂಡು ಹೋಗುತ್ತಿದೆ
ರೊಕ್ಕ.‌.!!

ಅಮವಾಸೆಯ,
ಕಗ್ಗತ್ತಲಲ್ಲೂ....
ಹುಣ್ಣಿಮೆ ಚಂದ್ರನ ಕಾಣಲು
ಹವಣಿಸುತ್ತಿದ್ದೆ...!!
ತುಂಬು ಹುಣ್ಣಿಮೆಯು
ಸ್ಖಲಿಸಿದ ಬೆಳಕಿನಲ್ಲಿ
ಅವನು ಕತ್ತಲನ್ನೆ
ತುಂಬಿ ಹೋಗಿದ್ದ..!!

@@@@@

ಕಾದ ಎಣ್ಣೆಗೆ...
ವಗ್ಗರಣೆ ಹಾಕಿ
ಬಿಟ್ಟು ಬಿಟ್ಟರೆ...
ಸೀದು ಹೋಗುತ್ತದೆ..!!
ಪ್ರೀತಿಸುತ್ತಿದ್ದಾಳಲ್ಲವೆಂದುಕೊಂಡರೆ
ಜೀತದಾಳಿನ ಭಾವ
ಎದೆಯನ್ನು ಸುಡುತ್ತಿರುತ್ತದೆ..‌!!

@@@@

ಗಿಡವನ್ನು ನೆಟ್ಟು
ನೀರೆರೆದವನಾರೋ...?
ಇಲ್ಲಿ ಶಿಲ್ಪಿಯನ್ನು
ವೈಭವಿಕರಿಲಾಗುತ್ತದೆ...!!!
ಮುಡಿಗೆ ಮಲ್ಲಿಗೆ
ಮುಡಿಸಿದವನನ್ನು ಬಿಟ್ಟು
ಮುಡಿಸಿಕೊಂಡವಳ
ಮುಡಿಯನ್ನು ಹಿಡಿದು
ಜಗತ್ತು...ಕಿತ್ತಾಡತೊಡಗುತ್ತದೆ....!!

@@@

ಹಾಸಿಗೆಯಲ್ಲಿ ....
ಕಳೆದುಕೊಂಡಿದ್ದಕ್ಕಿಂತ
ಲೋಕದ ನಿಂದನೆಯನ್ನು
ಪಡೆದುಕೊಂಡದ್ದೆ ಹೆಚ್ಚು...!!
ಹುಳಿಯುಂಡ ನಾಲಿಗೆ,
ಬಿಡುವುದೆ...
ಕಿಚ್ಚಿನೊಳಗೆ ನೂಕುವ
ಹುಚ್ಚು...!!

ಹೇಗೆ ಅರಿಯಬಲ್ಲೇನು
ನಿನ್ನ ಮನಸಿನೊಳಗಿನ
ಮರ್ಮ..!!
ಕೃಷ್ಣ ಪರಮಾತ್ಮನನ್ನೆ
ಬಿಡಲಿಲ್ಲ ಕರ್ಮ..‌!!
ಈ ಬಡಪಾಯಿ ಅಕ್ಷರ
ಬಡವನನ್ನು ಉಳಿಸುವುದೆ
ಹುಸಿ ಪ್ರೇಮ..
@@@@@@

ಕೈಗಳು ಹೂಗಳನ್ನು
ಕಿತ್ತಿದ ಪಾಪದ ನಂಟನ್ನು
ಹೊತ್ತುಕೊಂಡಿವೆ...!!
ನೀನೆ ಮುಡಿದು
ಈ ಅಕ್ಷರ ಬಡವನನ್ನು
ಕೃತಾರ್ಥನನ್ನಾಗಿಸು
ಚೆಲುವೆ...

@@@

ಕಾಡಿಗೆ ಕಣ್ಣುಗಳ ಪಾಶಕ್ಕೆ
ಸಿಕ್ಕು..‌.ಎದೆಯಲ್ಲಿಯೆ
'ದಫನ್' ಆಗಿ ಹೋಯಿತಲ್ಲ
ಹುಟ್ಟಿದ್ದ ಎರಡು ಸಾಲು....!!
ಯಾವ ನ್ಯಾಯಾಲಯದಲ್ಲಿ
ದಾವೆ ಹೂಡಲಿ ಹೇಳು...
ಹಂಚಿಕೊಳ್ಳಲು ವಿರಹದ
ಪಾಲು...!!



ಹುಟ್ಟಿದ್ದೆ... ಎರಡು ಸಾಲುಗಳು
ಕಾಡಿಗೆ ಕಣ್ಣುಗಳ ಪಾಶಕ್ಕೆ
ಸಿಲುಕಿ, ಅವುಗಳು ಎದೆಯಲ್ಲಿಯೇ...
'ದಫನ್' ಆಗಿ
ಹೋದವಲ್ಲ...!!
ಹೇಳದೆ ಹೋದರೆ...!!
ಸಂಜೆ ವೇಳೆಗೆ, ಗೆಳೆಯರೆಲ್ಲ
'ಕಫನ್' ನನ್ನು ತರಲು
ಪೇಟೆಗೆ ಹೊರಡುವರಲ್ಲ..!!

@@@@@

ಸಂಪಾದಿಸದ್ದನ್ನೆಲ್ಲ
ಅವಳ ಪ್ರೇಮ ಪತ್ರಗಳಿಗಾಗಿ
ಖರ್ಚು ಮಾಡಿಬಿಟ್ಟೆ
ಅವುಗಳನ್ನೆಲ್ಲ ಈಗ
ತೂಕಕ್ಕೆ ಹಾಕಿದರೂ...
ಸಂಜೆಯ ಒಂದು ಮದು
ಬಟ್ಟಲು ಬರಯವುದಿಲ್ಲ...

@@@@@

ಅವಳು ಹಾದು ಹೋಗದೆ
ಹೂವುಗಳರಳುವುದಿಲ್ಲ...!!
ಎಂದುಕೊಂಡಿದ್ದೆ..
ಅರಳಿವೆ..,
ನನ್ನನ್ನು ಕೈ ಬಿಡಲಾರಳೆಂಬ
ಭರವಸೆಯಲ್ಲಿದ್ದೆ....
ಮರೆತು ಹೋಗಿದ್ದಾಳೆ
ಅಷ್ಟೇ...

@@@@

ಆ ಗಲ್ಲದ ಮೇಲೊಂದು
ಸಿಹಿಯಾದ ಬೆಲ್ಲವಿದೆಯಂತೆ..!!
ಸವಿದವರಾರೋ...!!?
ಬರೆದು ಕಳುಹಿಸಿದ
ಪತ್ರಕ್ಕೆ ಉತ್ತರವಿಲ್ಲ...
ಮನದೊಳಗೆನಿದೇಯೊ
ಬಲ್ಲವರಾರು..?

@@@

ಬೇಲಿಯ ಮೇಲೆ ಹರಡಿದ
ಬಳ್ಳಿಯ ಹೂಗಳು ಜಾರಿ
ಬೀಳುವುದು ಮುಳ್ಳುಗಳ
ಮೇಲೆಯೆ...!!
ನೋವಾಯಿತೆ..!! ನೆಂದು
ದುಂಬಿಯೂ...ಕೇಳುವುದಿಲ್ಲ..!!


ಕಲ್ಲು ಬಂಡೆಗಳ ಮೇಲೂ...
ಪ್ರೀತಿ ಕುರುಹುಗಳನ್ನು
ಬಿಟ್ಟು ಬರುತ್ತಾರೆ...

No comments:

Post a Comment