ಚಿತ್ತಿ ಮಳಿಯಾಗ ಮನಸಿನ ಚಿತ್ತಕ್ಕ
ಬೆಂಕಿ ಹಚ್ಚಿ ಕೂರಬೇಡ...
ಮತ್ತಿನ ಗಮ್ಮತ್ ಅರಿಯದ ಹುಡುಗನ
ತಲಿಗೆ, ನಿನ್ ಪ್ರೀತಿ ಅಮಲು ಎರಿಸಬ್ಯಾಡ..
ಜೋಳ ಬಿತ್ತಾಕ ಹದ ಮಾಡಿದ ಹೊಲದಂಗ
ನನ್ನೆದಿ ನೆಲದಾಗ ...ಪ್ರೀತಿ ಬೀಜ ಬಿತ್ತದನ...ವಿರಹದ ಕಸ ಬಿಳಿಸಿ ಹೋಗಬ್ಯಾಡ...
ಅನ್ನ.. ಕೊಡೊ ಭೂಮಿಗೆ ದುಡಿಯೊರ ಇಲ್ದಂಗ
ಆಗೈತಿ, ಅಂತದ್ರಾಗ...ನನ್ ದುಃಖಕ್ಕ ಯಾರ ಹೆಗಲ
ಕೊಡ್ತಾರ..
ಧರ್ಮರಾಯನ ಬಾಯಿಂದಲೂ ಅಧರ್ಮ
ನುಡದಿತ್ತಂತ... ಅಂತ ಬಾಯಿಲೆ ಏನು ಹೇಳಬ್ಯಾಡ...
ಮಾತೆಲ್ಲ ಮುತ್ತಾಗು..ವು ಕಣ್ಣಾಗ..!! ಆ ಕಣ್ಣಂಚಿದ
ನೋಡಿಬಿಡೊಮ್ಮೆ.. ಓದ್ಕೊಂಡು ಎದಿಯಾಗ ಮುಚ್ಚಿಟ್ಕೊಂಡಬಿಡ್ತೀನಿ ಕಪ್ಪೆಚಿಪ್ಪನಂಗ..
ಕೆರಿ ದಂಡಿ ಯಾವಾಗಲೂ ಮೆತ್ತಗ ಇರುವಂಗ
ತುಪ್ಪದಾಗ ಹುರದ ಮಾಡಿದ ಬೇಸನ ಉಂಡಿ
ಹಂಗ ಆಗೈತಿ ಮನಸ್ಸು...!!
ಪ್ರೀತಿ ಹಾಲಿಗೆ ಹೆಪ್ಪ್ ಹಾಕತೀಯೊ ಉಪ್ಪ ಹಾಕತಿಯೋ
ಗೊತ್ತಿಲ್ಲ..
ಒಟ್ಟನ್ಯಾಗ ಒಡದ ಹಾಕಬ್ಯಾಡ ನೋಡ ಈ
ಹುಡುಗನ ಕನಸ್ಸು...!!
No comments:
Post a Comment