Tuesday, January 6, 2026

ಹೆಸರಿಡದ ಕವಿತೆಗಳು

ಅವನು ನಿಜಕ್ಕೂ... ಕವಿಯೆ...
ಅವಳಂದಕೆ ಸೋತ ಪದಗಳ
ಸೂಸಿ... ಸಾವೆ....ಇರದ ಕವಿತೆಗಳ
ಕಟ್ಟಿ.. ಕಲ್ಲೆದೆಗಳಲ್ಲೂ ಹೂವರಳಿಸುವ
ಅವನ ವಾಚನ, ಅವಳ ಕಿವಿಗೂ
ಬಿದ್ದಿತ್ತು, ಮಾರ್ಜಾಲ ಜಗತ್ತಿಗಂಜಿ
ಅವಳು ನಗಲಿಲ್ಲ...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ....
ರಾಮನಿಗೆ ದಕ್ಕದ ಮಾಯಾ ಜಿಂಕೆಯ
ಹಾಗೆ, ಮಿಂಚಿ ಮಾಯವಾದಳ
ಚಿತ್ತಾರವನ್ನು ನೆತ್ತರಿನಲ್ಲೆ ಚಿತ್ರಿಸಿಟ್ಟ
ಕಾಮದ ಲೋಕ ಬೆಂಕಿಯಿಟ್ಟಿತು...!!
ಬಂಡೆಗಲ್ಲುಗಳ ಮೇಲೆ ಕೆತ್ತಿದ
ಹೆಸರಿನ ಮೇಲೆ; ಬೀಡಾ ಉಗುಳಿ
ಅದನ್ನು ಅತ್ಯಾಚಾರಗೊಳಿಸಲಾಯಿತು..
ಇಲ್ಲಿ ಕವಿ ಸೋತಿಲ್ಲ....

ಅವನು ನಿಜಕ್ಕೂ‌... ಕವಿಯೆ....
ಅವನೆಂದು ಕನಸಿನರಮನೆಯ ಕಟ್ಟಲಿಲ್ಲ..
ವಾಸ್ತವದ ಗುಡಿಸಲಿನಲ್ಲಿಯೆ
ಬದುಕನ್ನು ಕಟ್ಟಿಕೊಳ್ಳಲೆತ್ನಿಸಿದ,
ಅಂತಸ್ತಿನ ಸಣ್ಣ ಕಿಡಿಯೊಂದು ಸೋಕಿ
ಅದು ಸುಟ್ಟು ಬೂದಿಯಾಗಿ ಹೋಯಿತು...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ...
ಉಸಿರುಸಿರಿನಲ್ಲೂ ಅವಳೆ
ಬೇರೆತು ಹೋಗಿರುವಾಗ...ಮರೆತು ಬಿಡುವ
ಪ್ರಮೇಯವೆಲ್ಲಿ ಬಂತು...!!
ಇವನ ಉಸಿರು ನಿಲ್ಲದ ತನಕ
ಅವಳ ಹೆಸರಿಗೆ ಸಾವಿಲ್ಲ...
ಅವಳ ಸಾವಿನ ನಂತರ ಇವನ
ಉಸಿರಿಗೆ ಅರ್ಥವಿಲ್ಲ...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ...
ಯಾವ ಪದವ ಕಟ್ಟಿದರೇನು
ಅವಳದೆ ಭಾವ....
ಯಾವ ವಾದ್ಯವ ನುಡಿಸಿದರೇನು
ಅವಳದೆ ರಾಗ.....
ಜಗತ್ತಿಗೇನು..? ತನ್ನಿಚ್ಚೆಯಂತೆ
ನಡೆಯದೆ ಹೋದರೆ ಹುಚ್ಚ, ತೆವಲುಗಾರ
ನೆನ್ನುತ್ತದೆ..
ಅದೆಂದು ಒಳಗಣ್ಣಿನಿಂದ ನೋಡುವುದೆ
ಇಲ್ಲ..!! ಎಲ್ಲ ವ್ಯಾಪಾರಿಕರಣ...
ಎಲ್ಲ ವ್ಯಾಪಾರಿಕರಣ... ಹೀಗಾಗಿ
ಇಲ್ಲಿ ಕವಿ ಸೋತಿಲ್ಲ... ಸೋಲುವುದು ಇಲ್ಲ...

ಚುಟುಕುಗಳು


ಕತ್ತರಿಸಲು ಖಡ್ಗವನ್ನು ಹಿಡಿದು
ನಿಂತವರ ಮುಂದೆಯೆ... ಕತ್ತನ್ನು
ಒಡ್ಡಿದ್ದೆ..!!
ಪ್ರೀತಿಸುವವಳು.. ಅವಳಿಗಾಗಿ
ಸರ್ವಸ್ವವನ್ನೆ ಕೊಟ್ಟಿದ್ದೆ...
ಕಲ್ಲು ಎದೆಯವರು ಕೊರಳಿಗೆ
ಹಾರವನ್ನು ಹಾಕಿದರು...!!
ಮುಷ್ಠಿಯಲ್ಲಿ ಇದ್ದ ಜೀವವನ್ನು
ಅವಳು ಉಫ್ ಎಂದು
ಊದಿಬಿಟ್ಟಳು...
@@@@

ನಮ್ಮಿಬ್ಬರನ್ನು ಬೇರ್ಪಡಿಸಲು
ಕಾಲಕ್ಕೂ ಕಸುವಿಲ್ಲ ಎಂದವಳು....
ಕಾಲಿನ ಕಸಕ್ಕಿಂತ ನನ್ನನ್ನು
ಕಡೆಯಾಗಿಸಿದಳಲ್ಲ...
ಪ್ರಶ್ನಿಸುವುದಾದರೂ ಯಾರನ್ನು
ಈಗ..ಕಾಲವನ್ನೊ..?
@@@@@

ಬಾಳ ದಾರಿಯಲ್ಲಿ
ಸಾವು ಹಾದಿ ತಪ್ಪಿಬಿಟ್ಟಿದೆ..!!
ನೋವು... ಎದೆಯ ಅಂಗಳದಲ್ಲಿ
ದಣಿವಿಲ್ಲದೆ ನೃತ್ಯುಸುತ್ತಿದೆ
ಗೆಳೆಯ...
ಮರಳುಗಾಡಿನಲ್ಲಿ ಸಾಕಲು
ಹವಣಿಸುವ ಬಸವನ
ಹುಳುವಿನಂತಾಗಿದೆ ನನ್ನ ಪಾಡಿಗ...

ಅವನಿಗಿಂತ ನಾನೇನು ಕಮ್ಮಿ
ಒಂದು‌ ಧಮ್ ಎಳೆದುಬಿಟ್ಟೆ
ಉಸಿರುಗಟ್ಟಿದ ಹಾಗಾಯಿತು..
ಎದೆಯ ಗೂಡಲ್ಲಿ ಅವನಿನ್ನು
ಬೆಚ್ಚಗೆ ಇದ್ದಾನೆ

@@@
ಅವಳ ಕೆಂದುಟಿಯಲ್ಲಿ...
ಅಮೃತವೆ ತುಂಬಿತ್ತಂತೆ...!!
ಅವಳು,  ಮಾತಿನಲ್ಲೆ
ವಿಷವನ್ನು
ಉಣಬಡಿಸಿದಳು..!!


@@@

ಬಾಳಿನ
ಹಾದಿಯುದ್ದಕ್ಕೂ....
ಮುಳ್ಳುಗಳನ್ನೆ ಚೆಲ್ಲಿದವರು
ನನ್ನ ಹೆಣದ ಚಟ್ಟಕ್ಕೆ
ಹೂವಿನ ಹಾಸನ್ನು
ಹೊದಿಸುತ್ತಿದ್ದಾರೆ...!!

@@
ಯಾವುದೋ... ಲೋಕದಲ್ಲಿ
ಮುಳುಗಿದ್ದ ನನ್ನನ್ನು..
ಬೀಗವೆ ಇಲ್ಲದ ನಿನ್ನೆದೆಯ
ಸೆರೆಮನೆಯಲ್ಲಿ
ಬಂಧಿಯಾಗಿಸಿಕೊಂಡುಬಿಟ್ಟೆ...!!
ಇಲ್ಲಿಂದ ಹೊರಡುವುದು
ಇನ್ನೂ ನಿನ್ನ ಉಸಿರು
ನಿಂತ ಮೇಲೆಯೆ....

@@
ಯಾವುದೋ... ಲೋಕದಲ್ಲಿ
ಮುಳುಗಿದ್ದ ನನ್ನನ್ನು..
ಬೀಗವೆ ಇಲ್ಲದ ನಿನ್ನೆದೆಯ
ಸೆರೆಮನೆಯಲ್ಲಿ
ಬಂಧಿಯಾಗಿಸಿಕೊಂಡುಬಿಟ್ಟೆ...!!
ಇಲ್ಲಿಂದ ಹೊರಡುವುದು
ಇನ್ನೂ ನಿನ್ನ ಉಸಿರು
ನಿಂತ ಮೇಲೆಯೆ....

@@@
ಸಿಗರೇಟ್ ಎಷ್ಟೇ ದುಬಾರಿ
ಆಗಿದ್ದರೂ..
ಸುಟ್ಟು ಬೂದಿಯಾಗುತ್ತದೆ..!
ಹಾಲು ಅದೇಷ್ಟೆ...
ಮಂದವಾಗಿದ್ದರೂ..
ಸರಿಯಾದ ಅಳತೆಯಲ್ಲಿ
ಸಕ್ಕರೆಯನ್ನು ಹಾಕದಿದ್ದರೆ...
ಚಹಾ, ಸಪ್ಪೆ ಎಂದೆನ್ನಿಸುತ್ತದೆ...!!
ಸಂಬಂಧಗಳನ್ನು ಕೇವಲ
ಅನುಕೂಲಕ್ಕಾಗಿ ಉಳಿಸಿಕೊಂಡಿದ್ದರೆ..
ಒಂದಿಲ್ಲೊಂದು ದಿನ ಉರಿದು ಹೋಗುತ್ತವೆ..!!
ನೀವು ಸೋಲದೆ, ಬಾಳಿನುದ್ದಕ್ಕೂ
ಅವರೆ ಸೋಲುತ್ತಿರಲೆಂದು
ಬೀಗುವವರ ಬದುಕಿನಲ್ಲಿ
ಅರ್ಥವೆಲ್ಲಿದೆ...??

@@@@
ಛೇ...
ನಿನ್ನ ಮಧುರಸವಿಂದು
ಅದೇಷ್ಟು ಕಹಿಯಾಗಿದೆ
ಸಾಕಿ...
ಏಕೆ...? ಅವಳ
ಅದರದ ಸವಿ
ಮತ್ತೆ ನೆನಪಾಯಿತೇನು?

@@@@
ನಿಮ್ಮನ್ನು ಬಿಟ್ಟು....
ಅವರೆಲ್ಲ ಅದೇಷ್ಟು
ಮುಂದೆ ಹೊರಟು ಹೋಗಿದ್ದಾರೆ...
ಕ್ಷಮಿಸಿ, ನನ್ನ ಬಳಿ
ಅಂತಾವ ಮುಖವಾಡಗಳಿಲ್ಲ..!!

,@@@
ನನ್ನ ಪ್ರೀತಿಯ
ಋಣವನ್ನು ತೀರಿಸಲಾಗದೆ
ಹೋಗುತ್ತಿರುವುದಕ್ಕೆ
ಪಶ್ಚಾತ್ತಾಪಿಸಬೇಡ...!!
ಹುಟ್ಟಿದ ಪ್ರತಿಯೊಂದು
ಜೀವಿಯೂ... ಒಂದಿಲ್ಲೊಂದು
ಋಣವನ್ನು ಹೊತ್ತುಕೊಂಡು
ಸಾಯಲೆಬೇಕು...!!

@@@@

ಅವಳು ನನ್ನ ಬಳಿ
ಬಿಟ್ಟು ಹೋಗಿದ್ದ
ಪ್ರೀತಿಯನ್ನು, ಮತ್ತೆ
ಎದುರಾದಾಗ ಕೊಡಲು
ಹೋದೆ...!!
ಅವಳ ಉಡಿ ತುಂಬಿ
ತುಳುಕುವಷ್ಟು ಒಲವನ್ನು
ಮತ್ತಾರೋ ಸುರಿದಿಟ್ಟಿದ್ದರು...💐
👌