ಹತ್ತಿ ಕಾಯಿಯ ತೊಗಟೆ
ಬಲು ದಪ್ಪ| ಅದರೊಳಗಿನ
ಹತ್ತಿ ಬಲು ನಿಪ್ಪ
ಬದಾಮಿ ಕಾಯಿ ತೊಗಟಿ
ಬಲು ಗಟ್ಟಿ| ಅದರೊಳಗಿನ
ಬದಾಮಿ ತಿನ್ನಾಕ ಇನ್ನೂ ತುಟ್ಟಿ
ಕಿತ್ತಳೆ ಹಣ್ಣಿನ ಸಿಪ್ಪಿ
ಬಲು ಮೆತ್ತಗ| ಅದನ್ನ ಸಿಳಾಕ
ಹೋದ್ರ ಕಣ್ಣಾಗ ಬರೀ ನೀರ
ಬಾಳೆ ಹಣ್ಣಿನ ಸಿಪ್ಪಿ
ಬಲು ಸುಲಭ| ಇದನ್ನ
ತಿಂದ್ರ ಮಲ ಇನ್ನೂ ಸುಲಭ
ಹತ್ತಿ ಕಾಯಿಯ ತೊಗಟೆ
ಬಲು ದಪ್ಪ| ಅದರೊಳಗಿನ
ಹತ್ತಿ ಬಲು ನಿಪ್ಪ
ಬದಾಮಿ ಕಾಯಿ ತೊಗಟಿ
ಬಲು ಗಟ್ಟಿ| ಅದರೊಳಗಿನ
ಬದಾಮಿ ತಿನ್ನಾಕ ಇನ್ನೂ ತುಟ್ಟಿ
ಕಿತ್ತಳೆ ಹಣ್ಣಿನ ಸಿಪ್ಪಿ
ಬಲು ಮೆತ್ತಗ| ಅದನ್ನ ಸಿಳಾಕ
ಹೋದ್ರ ಕಣ್ಣಾಗ ಬರೀ ನೀರ
ಬಾಳೆ ಹಣ್ಣಿನ ಸಿಪ್ಪಿ
ಬಲು ಸುಲಭ| ಇದನ್ನ
ತಿಂದ್ರ ಮಲ ಇನ್ನೂ ಸುಲಭ
ಕರಿಮೋಡವು ನೀರಾಗಿ ಸುರಿದು, ಸರಿದು
ರವಿ ಕಿರಣಕೆ ಮೋಡವು ಮ್ಯದುಂಬಿ ಬೆಳ್ಳಿಯ
ಬಟ್ಟಲಿನಂತೆ ನೀಲಾಕಾಶಾದಲ್ಲಿ ತೇಲುತಿರಲು
ಸುರಿದ ಹನಿಯು ನೆಲವ ತಣಿಸಿ, ಕೆರೆ-ತೊರೆಯ
ಉಣಿಸಿ ಧರೆಯ ಒಡಲ ಸೆಲೆಯ ಸೇರಿತು
ಕಳೆಯಿತೆರಡುದಿನ
ಆಗಸ ಖಾಲಿ ಖಾಲಿ, ಅಲ್ಲೊಂದು ಇಲ್ಲೊಂದು
ಬೆಳ್ಳಿಯ ಮೋಡಗಳ ಪಯಣ, ಭೂತಾಯಿಯ
ಒಡಲು ತಂಪಾಗಿ, ಹಸಿರು ಮೊಳೆತು
ಮರಗಿಡದೊಳು ಚಿಗುರೆಲೆ ಚಿಗುರಿ
ಮರವನಪ್ಪಿಸುಮಗಂಧವಸೂಸಿ
ಹಕ್ಕಿಯ ಕಲರವ ಬಾನಗಲ ತುಂಬಿ
ನಕ್ಕು ನಲಿಯಿತು ಆ ಕರಿಮೋಡ
ತಾಯಿಯ ಒಡಲನು ತಂಪಾಗಿಸಿತು
ಆ ಕರಿಮೋಡ
ನಾನಂದುಕೊಂಡಿದ್ದೆ....
ನಾನೂ ಒಬ್ಬ ಕವಿಯೆಂದು
ಒಲ್ಲದ, ಒಗ್ಗದ, ಹಿಗ್ಗದ, ಕುಗ್ಗದ
ಬಳಸಿದ, ಬಳಸಲಾರದ, ಸಿಕ್ಕ, ಸಿಗಲಾರದ
ಹಳೆ, ಹೊಸ ಪದಗಳ ತುರುಕಿ
ತಿರುಚಿ, ನಿಗಿಚಿ ಬರೆಯುವ ಕವಿಯೆಂದು
ಹಳೆತನದಲಿ ಹೊಕ್ಕು ಹೊಸತನವನು ತಂದು
ಇರದಿರುವಿಕೆಯನು ಇದೆಯಂದು
ಮರಣಿಸಿದ ಕಾಗದದ ಮೇಲೆ ಕವಿತೆ
ಕವಿತೆ ಎಂಬ ಜೀವ ತುಂಬುವ ಕವಿಯೆಂದು
ನಡೆದು ಹೋದ, ಇಂದೆ ಇರುವ
ಮುಂದೆ ಬರುವ ವಿಷಯಗಳನರಿದು
ಕುಡಿದು, ಕುಡಿಸುವ ಕವಿಯೆಂದು
ನಾನಂದುಕೊಂಡಿದ್ದೆ...