Wednesday, January 18, 2017

ಸ್ವಾಮಿ ವಿವೇಕಾನಂದರು

ನೋಡಿದಿರಾ
ಸಿಂಹ ನಡಿಗೆಯ ಬೆಟ್ಟದೆದೆಯ
ಸಲಗರೆಟ್ಟೆಯ ನಕ್ಷತ್ರಪುಂಜವದನದ
ಕಾವಿಯ ಧರಿಸಿ ಬರುವ ಕಾಳಿ ಸುತನ
ಧಾರ್ಮಿಕ ಬುಟ್ಟಿಯೊಳಗಿನಿಂದ
ಭರತ ಖಂಡವ ಉದ್ಧರಿಸಲು
ಅವಳ ಕೀರ್ತಿ ಪತಾಕೆಯ ಜಗದ ಮನೆ
ಮನಗಳಲಿ ಹಾರಿಸಿಬರಲು
ವೀಣೆಯಸುತನೇತ್ತಿದ ಶಿಷ್ಯನ 

ಅಬ್ಬಬ್ಬಾ ! ಮೊಗದಲೆಂದತಹ ಕಾಂತಿ
ಕಲ್ಲು ಮನಸ್ಸಿನ ನಾಸ್ತಿಕನು ಕಂಡೊಡೆ
ದೈವಾಸಕ್ತಿಯ ಹೊಂದುವಂತೆ
ಕತ್ತಲು ತುಂಬಿದ ಮನಗಳಿಗೆ ಜ್ಞಾನದ
ಹಾದಿಯ ತೋರುವ ದೀವಿಗೆಯಂತೆ
ಪಾಪದ ಗಂಟುಗಳೆಲ್ಲ ಸುಟ್ಟು
ಬೂದಿಯಾಗುವನುಭವ ತೋರಿದಂತೆ
ಮನದ ಸಂಕಟದ ಸಂಕೋಲೆಗಳ
ಕತ್ತರಿಸುವಂಥಹ ನೋಟ

ಆಡುವ ನುಡಿಗಳಾದರೂ ಬಯಲು
ಬಂಡೆಗೆ ಸಿಡಿಯುವ ಸಿಡಿಲ ನುಡಿಗಳು
ಈ ನೆಲವೆಂದರೆ ಅಸ್ಪೃಶ್ಯರ ಗೂಡು
ಮತಾಂಧರ ಕೋಟೆ, ಜಗದೊಟದ
ಪರಿವೆಯಿರದ ಕೊಳಚೆಯೊಳಗೆ ಬಿದ್ದು
ಹೊರಳಾಡುವವರೆಂದವರ ಕಣ್ಣಿಗೆ
ಕಟ್ಟಿದ ಪೊರೆಯನು, ಮನಸಲಿ
ಬೆಳೆಸಿದ್ದ ಕೊಳಕನು ಒಂದೇ ಮಾತಿನಲಿ
ತೊಡೆದು ಹಾಕಿದೆ
ನನ್ನ ಸಹೋದರ ಸಹೋದರಿಯರೆ

ಆ ಮಾತು
ಕೆಂಪು ಬಣ್ಣದ ಮುಖದವರ ಮನದ
ಕಪ್ಪು ಗೋಡೆಯನು ಒಡೆದು ಹಾಕಿತು
ವಿಶ್ವಕ್ಕೆ ಸಾರಿತು ಭರತ ಭೂಮಿ ಸರ್ವ
ಧರ್ಮ ಸಮನ್ವಯ ತೋಟವೆಂದು
ಅವರೆಲ್ಲ ತಲೆಯೆತ್ತಿ ಇತ್ತ ನೋಡಲಾರಂಬಿಸಿದರು
ಒಂದು ಹೂ ಇಷ್ಟೊಂದು ಸುಗಂಧ
ಬೀರುವುದೆಂದರೆ  ಆ ಖಂಡದ
ಇತರ ಹೂವುಗಳು ಎಷ್ಟು ಸುಗಂಧಗಳ
ಸೂಸಬಹುದೆಂದು

ಪ್ರತಿ ಹೆಣ್ಣಿಗೂ ತಾಯಿ ತಾಯಿ ಎಂದು
ಕರೆಯುತ್ತ ಎಲ್ಲ ಹೆಣ್ಣು ರೂಪಗಳಲ್ಲಿಯೂ
ತಾಯಿಯ ಕಂಡ ಮಹಾನ ವಾಗ್ಮಿ
ಜಗತ್ತನ್ನೆ ಭರತಖಂಡದತ್ತ ನಿಬ್ಬೆರಗಾಗಿ
ನೋಡುವಂತೆ ಮಾಡಿದ ಸನ್ಯಾಸಿ
ಕ್ರೈಸ್ತರು ಕೈ ಕೈ ಹೊಸೆದು ಮತಾಂತರಗೈಯಲು
ಈ ಭೂಮಿಗೆ ಕಳಿಸುತ್ತಿದ್ದವರೆ ತಮ್ಮ
ನೆಲದಲ್ಲಿ ಸಂಕುಚಿತಗೊಳ್ಳುವಂತೆ
ಮಾಡಿದ ವೀರಸನ್ಯಾಸಿ

ಹೊಸತೊಂದು ಕಿರಣ ಚಿಮ್ಮುವದು
ನಿನ್ನ ಹೊತ್ತಿಗೆಯ ತೆರೆದರೆ
ಬಾಳಿಗೆ ದಾರಿ ಕಾಣುವುದು
ಸಾಧಿಸಲು ಗುರಿ ಸಿಕ್ಕುವುದು
ಈ ಪುಣ್ಯಭೂಮಿಯ ಮಗನೆಂದು
ಎದೆತಟ್ಟಿ ಹೇಳಲು ಹರುಷವಾಗುವುದು

Tuesday, January 17, 2017

ಕನಸು

ತೂಗು ತೊಟ್ಟಿಲಾಗಿದೆ
ನಾ ಕಂಡ ಕನಸು
ನಿಲ್ಲದೆ ಇರಲಿ ತೊಟ್ಟಿಲು
ತೂಗಿ ತೂಗಿ ಜಾರಿಸಲಿ
ನನ್ನನು ಸ್ವಪ್ನಕೆ
ಕಾಣಬಯಸುವೆ
ಅವನೊಡನೆ ಕಳೆದ
ಘಳಿಗೆಗಳ ಕಳೆಯದೆ

ಎಚ್ಚರವಾಗದಿರಲಿ
ಅವನೊಂದಿಗಿನ ದಾರಿ
ಅಪೂರ್ಣವಾದರೂ
ಕನಸುಗಳಾದರೂ
ಪೂರ್ಣಗೊಳ್ಳುವವರೆಗೂ
ಕಟ್ಟಿದ್ದ ಭಾವನೆಯ
ಮೋಡಗಳೆಲ್ಲ ಕರಗಿ
ನೀರಾಗಿ ಸುರಿಯುವ
ವರೆಗಾದರೂ

ರಾತ್ರಿಗಳೆ ದೀರ್ಘವಾಗಿರಿ
ಮಾತನಾಡುವ ಮಾತುಗಳು
ಮನದಲಿ ಮನೆ ಮಾಡಿ
ಮಲುಗುವ ಮೊದಲೆ
ಅವನೊಂದಿಗೆ ಹಂಚಬೇಕಿದೆ
ದೇಹವ ಹಂಚದಿದ್ದರೂ
ಉಸಿರ ಬಿಸಿಯು ಆರುವ
ಮುನ್ನ ಉಸುರಬೇಕಿದೆ
ಅವನೆದೆಗೆ ನಾಲ್ಕು ಮಾತು

ಬಾರದಿರೂ ಸೂರ್ಯ
ಹೊನ್ನಿನ ಕಿರಣಗಳ ಸೂಸುತ್ತ
ಕನಸನ್ನು ಅರ್ಧಕ್ಕೆ ಕತ್ತರಿಸಲು
ಕರೆದು ತರಬೇಕಿದೆ ಮನದ
ಮಂದಿರಕೆ ಅವನನ್ನು ನೀ
ಬರುವ ಮೊದಲೆ
ನಿನ್ನ ಕಿರಣದ ಕಾಂತಿಗೆ
ಮಸುಕಾಗಿ ಸಿಗದೆ ಹೋಗುವನವನು

ನಿದಿರೆ ಲಕ್ಷ್ಮೀಯೆ ತೊರೆಯದಿರು
ಇನ್ನೆರಡು ಮೆಟ್ಟಿಲನು
ಅವನಿರದ ಸಂಜೆಗೆ ಕಾಯುತ್ತಿದ್ದೇನೆ
ನನ್ನನು ನಿರಾಕರಿಸಿ ಬೆನ್ನು ತೋರಿದ
ಸಮಯವನು ಮತ್ತೆ ತಿದ್ದಬೇಕಿದೆ
ಆ ಸಂಜೆಯ ಅಳಿಸಿ
ಅವನ ಮರಳಿ ಕರೆದು ತಂದು ನಿಲ್ಲಿಸಬೇಕಿದೆ
ಸ್ವಪ್ನದಲಿ
ವೇದನೆ ನೀವೇದನೆಗಳ ಹಂಚಿಕೊಳ್ಳಬೇಕಿದೆ
ಈ ರಾತ್ರಿಯಲಿ
ತೂಗು ಇರುಳ ಕಾಂಚಳೆ ತೊಟ್ಟಿಲ
ಮನದ ಹೊಸ್ತಿಲು ಅವನು
ದಾಟುವ ಮುನ್ನ

Monday, January 16, 2017

ನೀ ಬರೆದ ಬದುಕು

ನೀನು ತೊರೆದು ಹೋದ
ದಿನದಿಂದ
ಎದೆಯ ಕಣ್ಣೀರ ಪಾತ್ರೆಯು ತುಂಬಿ
ಕಂಗಳ ಬಟ್ಟಲಲಿ ಜಿನುಗುತಿಹುದು
ಹನಿ ಹನಿಯಾಗಿ

ಮಾತನಾಡದೆ ಮರೆಯಾದೆ
ನಾನಾಡುವ ಮಾತುಗಳ ಉಸಿರಲಿ
ಬೆರೆತು ಉಸಿರಾಗುವೆನೆಂದವಳು
ಮುಳ್ಳು ಚುಚ್ಚಿದ ಗಾಲಿಯ ಗಾಳಿಯು
ಹಾರಿದಂತೆ ಕರಗಿಹೋದೆ

ನಡೆಸದೆ ಕುಳ್ಳರಿಸಿ ನಡೆದೆ
ಬಾಳಿನುದ್ದಕೂ ಬರುವೆನೆಂದವಳು
ದಾರಿಯನರಿಯದ ಘಟ್ಟಗಳ
ತೆಪ್ಪಲಲಿ ಬಿಟ್ಟು

ಸಾಯಿಸದೆ ಮಲಗಿಸಿ ಹೋದೆ
ಹೀಗೆ ಕಹಿ ನೆನಪುಗಳೆಂಬ ಭತ್ತದ
ಬಣವೆಯ ಹುಲ್ಲಿನ ಮೇಲೆ

ನಾನು ನಂಬಿದ್ದೆ ಬ್ರಹ್ಮ ಬರಹವನು
ಇಂದು ನೀನು ಸುಳ್ಳಾಗಿಸಿದೆ
ಕಾರಣ
ಮುಂದಿನ ಬದುಕು ನೀ ಬರೆದುದಾಗಿದೆ

ಉಳಿಯುವುದೆ?

ಗಾಳಿಗೆ ಸಿಕ್ಕ ಎಲೆಯು
ರಂಬೆಯ ತೊರೆಯದೆ?
ಗಾಳಕ್ಕೆ ಸಿಕ್ಕ ಮೀನಿನ
ಜೀವ ಹರಿಯದೆ ?

ಮೋಹಕ್ಕೆ ಬಿದ್ದ ಮನಸ್ಸು
ದುರಾಸೆಯ ಹೊಂದದೆ?
ಕ್ರೋಧಕ್ಕೆ ಬಿದ್ದ ಬುದ್ದಿ
ದುರ್ಗತಿಯ ಹೊಂದದೆ?

ಬಾಣ ಹೊಕ್ಕ ಎದೆಯು
ಉಸುರುವುದೆ ?
ದುಂಬಿ ಹೊಕ್ಕ ಹೂವು
ಬಸರುವುದೆ?

ಕತ್ತಿಗೆ ಕೊಟ್ಟ ಕತ್ತು
ನಿಲ್ಲುವುದೆ ?
ಹೆಣ್ಣಿಗೆ ಕೊಟ್ಟ ಮನಸ್ಸು
ಉಳಿಯುವುದೆ?

ಮಂದಿರ ಮಸೀದಿ ಮತ್ತು ಚರ್ಚ್

ನನಗೆ ಅರಿವು ಬಂದಾಗಿನಿಂದ
ನೋಡುತ್ತಿದ್ದೇನೆ ಕೇಳುತ್ತಿದ್ದೇನೆ
ಇನ್ನೂ ಓದುತ್ತಲೆ ಇದ್ದೇನೆ
ಯಾವ ಪತ್ರಿಕೆಯಲ್ಲಾಗಲಿ
ದೂರದರ್ಶನದಲ್ಲಾಗಲಿ ಸಭೆ
ಸಮಾರಂಭಗಳಲ್ಲಾಗಲಿ ವಾಚಿಸುವ
ಕವಿಯಾಗಲಿ ಬರಹಗಾರನಾಗಿರಲಿ
ಇದರ ಬಗ್ಗೆ ಬರೆದು ವಾಚಿಸದೆ ಇರುವವಂತಿರುವರಿಲ್ಲ
ಅದುವೆ ಮಸೀದಿ ಮಂದಿರ ಮತ್ತು ಚರ್ಚ್

ಈ ಮಣ್ಣಿನಲಿ ಮಾತೊಂದಿದೆ
ಧರ್ಮದಿಂದಲೆ ವಿಶ್ವಕ್ಕೆ ಶಾಂತಿ
ಎಲ್ಲಿಹುದು ?
ಧರ್ಮದಿಂದಲೆ ಹಚ್ಚುತಿರುವಲ್ಲ ವಿಶ್ವಕ್ಕೆ ಬೆಂಕಿ
ಕಟ್ಟಿದ ಕಲ್ಲುಗಳಿಗೇನೂ ಗೊತ್ತು
ಅದು ಮಂದಿರ ಮಸೀದಿ ಚರ್ಚ್ ಎಂದು
ಅದನೊಡೆದು ಇದನ್ನು ಕಟ್ಟುವರು ಇದನೊಡೆದು
ಅದನ್ನು ಕಟ್ಟುವರು
ಮಂದಿರ ಚರ್ಚ್ ಗಳಲಿರುವ ಕಲ್ಲು ಮೂರ್ತಿಗಳಿಗೆ
ಮಸೀದಿಯ ಗೋಡೆಗಳಿಗೇನೂ ಗೊತ್ತು
ತಾವು ಯಾವ ಜಾತಿಯೆಂದು
ಕುಲವ ಹುಟ್ಟಿಸಿದವರು ಹೇಳದ ಹೊರತು

ಎಲ್ಲ ಧರ್ಮಗಳು ಸಾರುವದು ತೋರುವದು
ಮಾನವ ಜನ್ಮಕ್ಕೆ ಮುಕ್ತಿಯ ದೊರಕಿಸಿ ಕೊಡುವದಾಗಿದೆ
ಎಂದು ಎಂದವರು ಸದಾ ಹಸನ್ಮುಖ ಮೊಗದ
ಪರಮಹಂಸರು
ಯಾವ ಕಟ್ಟಡದ ಮೆಟ್ಟಿಲೇರಿದರೂ ಮುಕ್ತಿಗೆ
ದಾರಿ ದೀವಿಗೆಯ ತೋರಬೇಕು
ಏನು ಮಾಡುವುದು
ಒಳಗಿರುವ ಜನರೇನೂ ಸಾಮಾನ್ಯರಲ್ಲವಲ್ಲ
ಬರುವ ಜನರಿಗೆ ಮುಕ್ತಿಯ ಮಾರ್ಗ ತೋರದೆ
ರಾಜಕೀಯಕ್ಕೆ ಜಾತಿಯ ಆಧಾರದ ಓಟ್ ಬ್ಯಾಂಕಿನಂತೆ
ಇವರ ಧರ್ಮದ ಪ್ರಚಾರಕ್ಕಾಗಿ ಮತಾಂತರದ
ಮಾತುಗಳ ಮೂಲಕ ಅವರ ಸುಪ್ತ ಮನಸ್ಸಿಗೆ
ಕಿಡಿಯನಿಟ್ಟು ಸ್ವಾಸ್ಥ ಸಮಾಜದಲ್ಲಿ ಧರ್ಮದ
ಹೊಗೆಯನೆಬ್ಬಿಸುವರು

ಕುಂತಿರುವ ನಿಂತಿರುವ ಇಲ್ಲದಿರುವ ಕಟ್ಟಡದೊಳಗಿನ
ದೇವರಾದರೂ ಏನು ಮಾಡಬೇಕು ಸೂತ್ರದಾರಿಯ
ಮುಂದೆ ಇವರಾಡುವ ನಾಟಕವ ಕಂಡು ಮನದಲಿ
ನಗುವುದನೊಂದ ಬಿಟ್ಟು
ಬರುವ ಭಕ್ತರಿಗಾದರೂ ಬುದ್ದಿಯಿಲ್ಲ ಯಾಕೆಂದರೆ
ಅವರ ಬುದ್ದಿ ಬಾಗಿಲ ಬಳಿ ಬಿಟ್ಟ ಮೆಟ್ಟನು
ಕಾಯುತ್ತಿರುವದಲ್ಲ
ಮನಸಿನ ಶಾಂತಿ ಬದುಕಿನ ಮುಕ್ತಿ ಎರಡೂ
ನಿಮ್ಮ ನಡೆ ನುಡಿಗಳಲೆ ಅಡಗಿದೆ
ಮನದ ಕದವ ತೆರೆದು ನೋಡಿರಿ
ಲೋಕವನೊಮ್ಮೆ ಒಳಗಣ್ಣಿನಿಂದ ಕಾಣಿರಿ
ದಾನವ ನೀಡುವ ಶಾಂತಿಗಿಂತ ಮಿಗಿಲಿಲ್ಲ
ಇನ್ನೊಬ್ಬರ ಏಳ್ಗೆಗೆ ಬಾಳುವ ಬದುಕಿಗಿಂತ ಮುಕ್ತಿಯಿಲ್ಲ

ನಿಮ್ಮ ಮನಕೆ ನೀವು ಶಾಂತಿಯ ತರಲಾರದೆ
ಸಮಾಜ ನಾಡು ವಿಶ್ವದಲಿ ಶಾಂತಿಯ ಹೇಗೆ
ಕಾಣುವಿರಿ ತುಂಬುವಿರಿ
ನಿಮ್ಮ ದಾರಿಗೆ ಮುಕ್ತಿಯ ಪಡೆಯದೆ
ಪರರಿಗೆ ಯಾವ ಹಾದಿಯ ತುಳಿಸುವಿರಿ
ಸಾಕಿನ್ನೂ ಪ್ರಕೋಪಗಳಿಗೆ ಬುಡಸಡಿಲುಗೊಳ್ಳುವ
ಭೂಕಂಪಗಳಿಗೆ ಉರುಳುವ, ಗುಡುಗು ಸಿಡಿಲಿಗೆ
ಕತ್ತರಿಸಿ ಛಿದ್ರಗೊಳ್ಳುವ ಕಟ್ಟಡಗಳ ನಂಬದೆ
ಮನದ ದೇವರವನು ಮನುಜರ ಏಳ್ಗೆಯಲಿ
ಪ್ರತಿಫಲಾಕ್ಷೆ ಬಯಸದೆ ಮಾಡುವ ಕಾರ್ಯಗಳಲಿ
ಕಾಣೋಣ

ಮಂದಿರ ಮಸೀದಿ ಮತ್ತು ಚರ್ಚ್

ನನಗೆ ಅರಿವು ಬಂದಾಗಿನಿಂದ
ನೋಡುತ್ತಿದ್ದೇನೆ ಕೇಳುತ್ತಿದ್ದೇನೆ
ಇನ್ನೂ ಓದುತ್ತಲೆ ಇದ್ದೇನೆ
ಯಾವ ಪತ್ರಿಕೆಯಲ್ಲಾಗಲಿ
ದೂರದರ್ಶನದಲ್ಲಾಗಲಿ ಸಭೆ
ಸಮಾರಂಭಗಳಲ್ಲಾಗಲಿ ವಾಚಿಸುವ
ಕವಿಯಾಗಲಿ ಬರಹಗಾರನಾಗಿರಲಿ
ಇದರ ಬಗ್ಗೆ ಬರೆದು ವಾಚಿಸದೆ ಇರುವವಂತಿರುವರಿಲ್ಲ
ಅದುವೆ ಮಸೀದಿ ಮಂದಿರ ಮತ್ತು ಚರ್ಚ್

ಈ ಮಣ್ಣಿನಲಿ ಮಾತೊಂದಿದೆ
ಧರ್ಮದಿಂದಲೆ ವಿಶ್ವಕ್ಕೆ ಶಾಂತಿ
ಎಲ್ಲಿಹುದು ?
ಧರ್ಮದಿಂದಲೆ ಹಚ್ಚುತಿರುವಲ್ಲ ವಿಶ್ವಕ್ಕೆ ಬೆಂಕಿ
ಕಟ್ಟಿದ ಕಲ್ಲುಗಳಿಗೇನೂ ಗೊತ್ತು
ಅದು ಮಂದಿರ ಮಸೀದಿ ಚರ್ಚ್ ಎಂದು
ಅದನೊಡೆದು ಇದನ್ನು ಕಟ್ಟುವರು ಇದನೊಡೆದು
ಅದನ್ನ ಕಟ್ಟುವರು
ಮಂದಿರ ಚರ್ಚ್ ಗಳಲಿರುವ ಕಲ್ಲು ಮೂರ್ತಿಗಳಿಗೆ
ಮಸೀದಿಯ ಗೋಡೆಗಳಿಗೇನೂ ಗೊತ್ತು
ತಾವು ಯಾವ ಜಾತಿಯೆಂದ
ಕುಲವ ಹುಟ್ಟಿಸಿದವರು ಹೇಳದ ಹೊರತು

ಎಲ್ಲ ಧರ್ಮಗಳು ಸಾರುವದು ತೋರುವದು
ಮಾನವ ಜನ್ಮಕ್ಕೆ ಮುಕ್ತಿಯ ದೊರಕಿಸಿ ಕೊಡುವದಾಗಿದೆ
ಎಂದು ಎಂದವರು ಸದಾ ಹಸನ್ಮುಖ ಮೊಗದ
ಪರಮಹಂಸರು
ಯಾವ ಕಟ್ಟಡದ ಮೆಟ್ಟಿಲೇರಿದರೂ ಮುಕ್ತಿಗೆ
ದಾರಿ ದೀವಿಗೆಯ ತೋರಬೇಕು
ಏನು ಮಾಡುವುದು
ಒಳಗಿರುವ ಜನರೇನೂ ಸಾಮಾನ್ಯರಲ್ಲ
ಬರುವ ಜನರಿಗೆ ಮುಕ್ತಿಯ ಮಾರ್ಗ ತೋರದೆ
ರಾಜಕೀಯಕ್ಕೆ ಜಾತಿಯ ಆಧಾರದ ಓಟ್ ಬ್ಯಾಂಕಿನಂತೆ
ಇವರ ಧರ್ಮದ ಪ್ರಚಾರಕ್ಕಾಗಿ ಮತಾಂತರದ
ಮಾತುಗಳ ಮೂಲಕ ಅವರ ಸುಪ್ತ ಮನಸ್ಸಿಗೆ
ಕಿಡಿಯನಿಟ್ಟು ಸ್ವಾಸ್ಥ ಸಮಾಜದಲ್ಲಿ ಧರ್ಮದ
ಹೊಗೆಯನೆಬ್ಬಿಸುವರು

ಕುಂತಿರುವ ನಿಂತಿರುವ ಇಲ್ಲದಿರುವ ಕಟ್ಟಡದೊಳಗಿನ
ದೇವರಾದರೂ ಏನು ಮಾಡಬೇಕು ಸೂತ್ರದಾರಿಯ
ಮುಂದೆ ಇವರಾಡುವ ನಾಟಕವ ಕಂಡು ಮನದಲಿ
ನಗುವುದನೊಂದ ಬಿಟ್ಟು
ಬರುವ ಭಕ್ತರಿಗಾದರೂ ಬುದ್ದಿಯಿಲ್ಲ ಯಾಕೆಂದರೆ
ಅವರ ಬುದ್ದಿ ಬಾಗಿಲ ಬಳಿ ಬಿಟ್ಟ ಮೆಟ್ಟನು
ಕಾಯುತ್ತಿರುವದಲ್ಲ
ಮನಸಿನ ಶಾಂತಿ ಬದುಕಿನ ಮುಕ್ತಿ ಎರಡು
ನಿಮ್ಮ ನಡೆ ನುಡಿಗಳಲೆ ಅಡಗಿದೆ
ಮನದ ಕದವ ತೆರೆದು ನೋಡಿರಿ
ಲೋಕವನೊಮ್ಮೆ ಒಳಗಣ್ಣಿಂದ ಕಾಣಿರಿ
ದಾನವ ನೀಡುವ ಶಾಂತಿಗಿಂತ ಮಿಗಿಲಿಲ್ಲ
ಇನ್ನೊಬ್ಬರ ಏಳ್ಗೆಗೆ ಬಾಳುವ ಬದುಕಿಗಿಂತ ಮುಕ್ತಿಯಿಲ್ಲ

ನಿಮ್ಮ ಮನಕೆ ನೀವು ಶಾಂತಿಯ ತರಲಾರದೆ
ಸಮಾಜ ನಾಡು ವಿಶ್ವದಲಿ ಶಾಂತಿಯ ಹೇಗೆ
ಕಾಣುವಿರಿ ತುಂಬುವಿರಿ
ನಿಮ್ಮ ದಾರಿಗೆ ಮುಕ್ತಿಯ ಪಡೆಯದೆ
ಪರರಿಗೆ ಯಾವ ಹಾದಿಯ ತುಳಿಸುವಿರಿ
ಸಾಕಿನ್ನೂ ಪ್ರಕೋಪಗಳಿಗೆ ಬುಡಸಡಿಲುಗೊಳ್ಳುವ
ಭೂಕಂಪಗಳಿಗೆ ಉರುಳುವ, ಗುಡುಗು ಸಿಡಿಲಿಗೆ
ಕತ್ತರಿಸಿ ಛಿದ್ರಗೊಳ್ಳುವ ಕಟ್ಟಡಗಳ ನಂಬದೆ
ಮನದ ದೇವರ ಮನುಷ್ಯರ ಏಳ್ಗೆಯಲಿ
ಪ್ರತಿಫಲಾಕ್ಷೆ ಬಯಸದೆ ಮಾಡುವ ಕಾರ್ಯಗಳಲಿ
ಕಾಣೊನ

ನೀನಿಲ್ಲದ ಮನ

ನೀನಿಲ್ಲದ ಮನೆ
ನೀರಿಲ್ಲದ ಕೆರೆಗೆ ಬಾಯಾರಿ
ಬಂದ ಹಸುವಿನಂತಾಗಿದೆ

ನೀನಿರದ ಸಂಜೆಗಳು
ಹಿಂಡಿನಿಂದ ಬೇರ್ಪಟ್ಟ ಕಿರುಚುತ
ಹಾರುವ ಗಿಳಿಯಂತಾಗಿದೆ

ನೀನಿರದ ಸಮಯ
ಮುಳ್ಳುಗಳೆ ಇರದ ಗಡಿಯಾರವು
ನಿಂತಿರುವುದೊ ಓಡುತಿರುವುದೊ
ಚಲನೆಯಿಲ್ಲದಂತಾಗಿದೆ

ಮಾತುಗಳಿಲ್ಲದ ಕೋಣೆ
ಬೆಟ್ಟದಲಿ ಸಿಡಿಮದ್ದು ಸಿಡಿದು
ತೆಳೆಯುವ ನಿಶ್ಯಬ್ದದಂತಿದೆ

ಹೆಜ್ಜೆಗಳ ಸದ್ದಿಲದ ವರಾಂಡ
ಕಾಲಿಗೆ ಗೆಜ್ಜೆಯ ಕಟ್ಟದೆ ನರ್ತಿಸುವ
ರಂಗಮಂದಿರದಂತಾಗಿದೆ

ನೀನಿರದ ಈ ಮನ
ಉಸಿರಾಟ ನಿಂತು ಎದೆಯ
ನೆತ್ತರೆಲ್ಲ ಹೆಪ್ಪುಗಟ್ಟಿದಂತಿದೆ