Saturday, April 25, 2020

ನಮ್ಮವ್ವ

ಸತ್ತ ಹೆಣಕ್ಕ ಸಿಂಗಾರ ಮಾಡಿ
ಬಾಯ್ಬಡ್ಕೊಂತ
ಕುಂದ್ರತಾರು...
ನೋಡವ್ವ...
ಉಸಿರಿದ್ದಾಗ ಕಿವಿಯಾಗದವ್ರು
ಉಸ್ರ ನಿಂತಮ್ಯಾಲ
ಏನ್..ಹೇಳ್ತಾರೊ
ನಮ್ಮವ್ವ

ಮನಿ ಬಾಗ್ಲಿಗೆ ಬಂದಾಗ
ಎರ್ಡ ರೂಪೆ ಚಾ..‌
ತರ್ಸಿ, ಕುಡ್ಸಿ
ಕಳ್ಸಿಲಿಲ್ಲ 
ಕೇಳವ್ವ...
ಸತ್ತವ್ನ ಮನಿಗೆ
ಇಸ್ಬಾಯಿ ತೊಳ್ಸಾಕಂತ
ಯಾಡ್ನೂರೂಪೆ
ಖರ್ಚ ಮಾಡ್ಕೊಂಡ
ಬಂದಾರ ನೋಡೊ
ನಮ್ಮವ್ವ

ಮ್ಯಾಲನ್ಯಾವ...ಲೆಕ್ಕಾ
ಎಲ್ಲಾ ಬರ್ದಿಟ್ಟಿರ್ತಾನ
ಅಂತಾ ದೊಡ್ಡ...ದೊಡ್ಡ
ಪುರಾಣ ಹೇಳ್ತಾರು
ಕೇಳವ್ವ...
ಸತ್ತ ಹೆಣಕ್ಕ ಹಚ್ಚಿದ
ಬೆಂಕಿ..ಬೂದಿಯಾಗಿಲ್ಲ...
ಕೊಟ್ಟ ರೊಕ್ಕಕ್ಕ, ಲೆಕ್ಕ
ಕೇಳಾಕ, ಆಗ್ಲೆ ಮನಿ
ಹೊಸ್ಲ ಹೊರ್ಗ ನಿಂತಾರಲ್ಲೊ
ನಮ್ಮವ್ವ

ನಮ್ಮವ್ವ

ನಮ್ಮವ್ವ

ಎದಿಮ್ಯಾಲಿನ ಸೀರಿ
ಸೆರ್ಗ ಜಾರಿದ್ರ
ಹೊದ್ಕೊಬೋದು
ಕೇಳವ್ವ...
ಎದಿಯಾಗಿನ ಮನಸ್ಸ
ಒಮ್ಮೆ ಜಾರ್ತಂದ್ರ...
ಸಂಭಾಳ್ಸೋದು ಭಾಳ
ಕಷ್ಟೈತೊ ನಮ್ಮವ್ವ

ಹೀಗೆ

ಮನಸಿನ ನಿರ್ಭಾವತನಕ್ಕೆ
ಮೂಕ ಸಾಕ್ಷಿಯು ನಾನಿಲ್ಲಿ
ಬಾಗಿಲು ಹಾಕಿದವರಾರು? ಗೊತ್ತಿಲ್ಲ...
ಹುಡುಕಿ, ಸುಮ್ಮನೆ ಕುಳಿತಿರುವೆನೀಗ ಕೈ ಚೆಲ್ಲಿ

ಬಾಗಿಲುಗಳಿದ್ದಿದ್ದರೆ ಎಷ್ಟು ಚೆಂದವಿರುತ್ತಿತ್ತು
ಬೀಗ ಹಾಕಿಕೊಂಡು, ಸುಮ್ಮನೆ ಕುಳಿತುಕೊಳ್ಳಬಹುದಿತ್ತು
ನೆರೆ ಮನೆಯವರ ಜಗಳವು ಹೊಸ್ತಿಲು ದಾಟಿ
ಒಳ ಬರುತ್ತಿರಲಿಲ್ಲ, ತೆರದ ಕಿಟಕಿಗಳಿಂದಾದರೂ...
ನೆಮ್ಮದಿಯನ್ನು ಕಂಡುಕೊಳ್ಳಬಹುದಿತ್ತು.

ಹೇಗೆ ತೆರೆಯಲಿ ಕಿಟಕಿಯನ್ನೂ ಧೈರ್ಯಮಾಡಿ!!!
ಸುತ್ತಲಿಂದಲೂ...ಸುತ್ತಿ..ಸುತ್ತಿ... ಸುಳಿಸುಳಿಯಾಗಿ
ಕೊಳೆತ‌ ಮನಸುಗಳ ವಾಸನೆಯೆ, ಹರಡುತಿಹುದಲ್ಲ!!!
ನನ್ನ ಮನೆಯಲ್ಲಿಯೇ ನಾ ಮೂಗು ಮುಚ್ಚಿಕೊಂಡು
ಕುಳಿತುಬಿಡಲೇ?

ಹುಚ್ಚನೆಂದುಬಿಡುವುದಿಲ್ಲವೆ!!!? ಅನ್ನುವುದೇನು?
ಕರೆಯುತ್ತಾರೆ, ಹುಟ್ಟಿಸುತ್ತಾರೆ, ಬರೆಯುತ್ತಾರೆ..
ಊರ ತುಂಬೆಲ್ಲಾ  ಸಸಿ ನೆಟ್ಟು ಬರುತ್ತಾರೆ, ಆಗಾಗ
ಬೇರೆಯವರ ಕೈಯಿಂದ ನೀರನ್ನು ಹನಿಸುತ್ತಾರೆ.

ಸುಮ್ಮನಿದ್ದುಬಿಡಲೆ.... ಹೇಡಿ ಎನ್ನುತ್ತಾರೆ, ಮಾತನಾಡಿ
ಬಿಡಲೆ... ಅಯ್ಯಯ್ಯೊ!!! ಬಾಯ್ಬಡಕ ಎನ್ನುವುದಿಲ್ಲವೆ.
ಹೇಗೆ ಇರಲಿ ನಾನು.. ಕುರಿಯಂತೆ, ಸಾಗುತಿರಲೆ ಮಂದೆಯೊಳಗೆ
ಹೆಜ್ಜೆ ಹಾಕಿದರೆ ನನ್ನ ಗಮ್ಯ...? ಎಲ್ಲಿಯದು ಬರೀ ಶೂನ್ಯ!!!
ಅಕ್ಷರದ ಲೋಕದಲ್ಲೂ ತಾರತಮ್ಯ!!, ಹೇಗಿದ್ದುಬಿಡಲಿ ನಾನು ಸೌಮ್ಯ?

ಬೇಕಿದೆ ನನ್ನ ಮನಸ್ಸಿನ ಬಾಗಿಲಿಗೊಂದು ಕೀಲಿ ಕೈ
ಎತ್ತಿಡಬೇಕಿದೆ, ಯಾರ ಕೈಗೂ ಸಿಗದ ಹಾಗೆ,
ಉಸಿರಬೇಕಿದೆ ಒಂದೆ ಸಲವಾದರು, ನೆಮ್ಮದಿಯ ಉಸಿರನು ಉಸಿರುಗಟ್ಟಿಸುವವರ ಮಧ್ಯದಲ್ಲೆ... ಕಾರಣ
ಬದುಕಬೇಕಿದೆಯಲ್ಲ ನಾನೂ... ಈ ಜಗದಲ್ಲೆ!!

ನಮ್ಮವ್ವ

ಕನ್ನುಡಿ‌ ಮುಂದ
ನಿಂತ್ಗೊಂಡ, ಹಣ್ಗಿಲೆ
ತಲೀ ಕೂದ್ಲಾನ
ಬಾಚ್ಗೊಳ್ಳಾಕ
ಬರುವಲ್ದು ನೋಡವ್ವ...
ವಲಿ ಮುಂದ
ಕುಂದ್ರಿಸಿ, ಕೊಣ್ಗಿ 
ಕೊಟ್ಟು... ಒಂದೊಬ್ಬಿ
ರೊಟ್ಟಿ ಬಡಿಯಂತಾರಲ್ಲೊ
ನಮ್ಮವ್ವ..

ನೆತ್ತಿ ಮ್ಯಾಲಿನ
ಬಿಸ್ಲ್
ತಡ್ಕೊಳ

ನಮ್ಮವ್ವ

ಕನ್ಯೆ ನೋಡೊ ಮುಂದ
ಹುಡ್ಗಿ ಬಂಗಾರ..ಬಂಗಾರ
ಆಗೀರ್ಬೆಕು ಅಂತಿರ್ತಾರ
ನೋಡವ್ವ...
ಬಂಗಾರದಂತ ಹುಡ್ಗಿ
ಸಿಕ್ಕ ಮ್ಯಾಲ, ಕಬ್ಬಿಣ್ದಂಗ
ಕಾಸಿ...ಕಾಸಿ ಬಡಿತಾರಲ್ಲೊ
ನಮ್ಮವ್ವ.

ಹುಡ್ಗಿ ಲಕ್ಷ್ಮೀ ಇದ್ದಂಗಿರ್ಲಿ
ಅಂತಂದ, ಮೈ ತುಂಬಾ ಲಕ್ಷ್ಮೀ
ಹಾಕ್ಕೊಂಡಕ್ಕಿನ ಮನಿ
ತುಂಬ್ಸಕೋತಾರು
ನೋಡವ್ವಾ...
ನಡೆಯೊ ಮುಂದ
ಲಕ್ಷ್ಮೀ ಕಟಾಕ್ಷ ಚೂರ
ಕಮ್ಮ್ಯಾದ್ರ...ಹಟ್ಟಿ 
ಹೊಸ್ತಲಾನ ದಾಟಿಸಿ
ಬಿಡ್ತಾರಲ್ಲೊ ನಮ್ಮವ್ವ

ಹೆಣ್ಣಿನ ಕಣ್ಣೀರ್ಗೆ
ಬೆಲೆ ಐತಿ ಅಂದಾರು,
ನ್ಯಾಯದ ತಕ್ಕಡ್ಯಾಗಿಟ್ಟು
ತೂಗಿ ನೋಡೊರಾದ್ರು
ಯಾರವ್ವ...
ಆಕಿ ಎದಿ ಮ್ಯಾಲಿನ
ಸೆರ್ಗ ಎಳಿಯೊರದಾರು...
ಮನಸ್ಸನ್ನ ಅರಿಯೊರು
ಯಾರ ಅದಾರೊ ನಮ್ಮವ್ವ

ತಮ್ಮಾ

ರೊಕ್ಕದ ಮಾರಿ ನೋಡಿ...
ಹಿಂದ ನಿಂತೋರ ನಂಬ್ಕಿ ಕುತ್ಗಿ
ಮೂರಿಬ್ಯಾಡೊ ತಮ್ಮಾ...
ಗೊತ್ತಿಲ್ಲೇನೊ? ಲಕ್ಷ್ಮೀ.. ಚಂಚಲ್ದಾಳ
ಇವತ್ತಿಲ್ಲೆ, ನಾಳೆ ಅಲ್ಲೆ, ಆಮ್ಯಾಕ
ಹಣಾ ಕೊಟ್ಟ ನಂಬ್ಕಿನ ಕೊಂಡ ತರಾಕ
ಆಗ್ತೈತೇನೊ ತಿಮ್ಮ

ಚಿಉ

ನನ್ನದೂ...
ಇಲ್ಲಿ ಇದೆ ಪಾಡು
ಗೆಳತಿ!
ನಿ ಕುಳಿತುಕೊಂಡ
ಕೆರೆ ದಂಡೆಯೇನೊ
ಗಟ್ಟಿಯಿದ್ದ ಹಾಗಿದೆ...
ನಿನ್ನ ನೆನೆದ ಮನದ
ದಂಡೆಯಿಲ್ಲಿ
ಮೆತ್ತಗಾಗಿದೆ.

ಮೌನವಾಗಿ
ಹೀಗೆ....
ಗಿಡದ ನೆರಳನಲ್ಲಿ
ನಿಂತುಕೊಳ್ಳಬೇಡ
ಗೆಳತಿ...
ಬಿಸಿ ಬರುವ
ತಂಗಾಳಿಯಲ್ಲಿ
ಎದೆಯ ಮಾತುಗಳನ್ನು
ಕಳುಹಿಸಿ ಕೊಟ್ಟಿದ್ದೇನೆ,
ಆಲಿಸದೆ...
ಸುಮ್ಮನಿರಬೇಡ.

ನಾ ಹೇಳುವ
ಮಾತುಗಳೆಲ್ಲ
ಕವಿತೆಗಳಾಗಿವೆ!
ನೀ ಹೇಳುವ
ಮಾತುಗಳಿಗೆ 
ಅವುಗಳೆಲ್ಲ....
ಈಗ
ಕಿವಿಯಾಗಿವೆ!

ಸೃಷ್ಟಿಯ
ಸೊಬಗದು
ಎಂದಿಗೂ
ಮುಗಿಯದ
ಯಾನ!!
ನೋಡುತ್ತಲೆ...
ಮಾಡುತ್ತಿರಬೇಡ
ಕಾಲಹರಣ..
ಮುರಿದುಬಿಡು
ಇಂದಾದರು
ಬಿಗು ಮೌನ!!

ಉಕ್ಕುವ ಬೇವರಿನ
ಬಗ್ಗೆ ಚಿಂತಿಸಬೇಡ...
ಅದು ಕಾಮದಲ್ಲೂ
ಹರಿಯುವುದು...
ಎಂಟಂಕಣದ
ಅರಮನೆಯೇನಿಲ್ಲ
ಬಂದು ಸೇರೊಮ್ಮೆ
ತೋಳ್ಬಂಧನದಲಿ
ಒಲವ ಸುಧೆಯೆ
ಹರಿಯುವುದು...

ಕಾಮ!!!!!!
ಬೇಡ...ಬೇಡವೆನ್ನುತಲೆ
ವಂಶಗಳೆ ಹುಟ್ಟಿ...
ಅಳಿದು ಹೋಗಿವೆ
ಈ ಮಣ್ಣಿನಲ್ಲಿ...
ಎಸಳು ಹೂಗಳನ್ನು
ಹೊಸಕಿ ಹಾಕುತ್ತಿರುವರು
ಕರುಣೆ ಇಲ್ಲದಲಿ..
ಮರೆತು ಬಿಟ್ಟೆಯಾ?
ಕಾಮಸೂತ್ರದ
ಕಟ್ಟನ್ನು ಕಟ್ಟಿಕೊಟ್ಟ
ಕೋಟೆಯಿದೆಂಬುದನು...
ಮರೆತುಬಿಡು, ಹೊರಗೆ
ಬಂದುಬಿಡು ಮೈ ಮೈಲಿಗೆಗಳಿಂದಾಚೆ
ಮಗುವಾಗಿ ಬಿಡು 
ಮಡಿಲೊಳಗೊಮ್ಮೆ... ತೇಲಿಸಿ
ಕರೆದೊಯ್ದು ಬಿಡುವೆ ಈ
ಲೋಕದಾಚೆ...
ಅಲ್ಲಿ ನವರಸಗಳ ಹಂಗಿಲ್ಲ
ಇವರು ಹೀಗೇಕೆ ಎಂದು ಹಂಗೀಸುವರು ಇಲ್ಲ...

ಬಿಟ್ಟು ಹೋದೆಯೆಂದು
ನಾನೇನು
ಸಾಯುವುದಿಲ್ಲ!!!
ಸಾಯುವೆನೆಂದರೆ?
ನಿನ್ನ ನೆನಪುಗಳು
ಬಿಡುವುದಿಲ್ಲ!!

ಸಿಂಹವೂ...
ಇಂದು ಹಳ್ಳಕೆ
ಬಿದ್ದಿದೆ!!!
ಉರಿದುರಿದು
ಮೆರೆಯುತ್ತಿದ್ದವರು
ಸದ್ದಿಲ್ಲದೆ ಮಣ್ಣಲ್ಲಿ
ಹೂತು ಹೋದದ್ದು
ಎಷ್ಟು ಜನರಿಗೆ
ಗೊತ್ತಿದೆ!!

ಎದೆಗೆ ಸುಧೆಯನ್ನು
ಸುರಿಯುತ್ತೇನೆ
ಎಂದವರು...
ಹೊಟ್ಟೆಗೆ ಹಾಲಾಹಲವನ್ನೆ
ಕುಡಿಸಿಬಿಟ್ಟರಲ್ಲ..!!
ಬೆನ್ನಿಗೆ ಚೂರಿ
ಹಾಕಿದ್ದರು ಚಿಂತಿಸುತ್ತಿರಲಿಲ್ಲ,
ನಂಬಿಕೆಯ ಕತ್ತನ್ನೆ
ಹಿಸುಕಿಬಿಟ್ಟರಲ್ಲ...!!

ಎಷ್ಟು ಮತ್ತು
ತುಂಬಿದೆ ಈ
ಒಂಟಿ 
ಕಣ್ಣಿನಲ್ಲಿ....!!!
ನೋಡುಗರ
ಎದೆ ಬಡಿತವು
ನಿಂತು ಹೋಗುವುದೇನೊ?
ಈ ಕ್ಷಣದಲ್ಲಿ!!!

ನನಗೂ...
ಮತ್ತೊಬ್ಬರ ಬೆನ್ನ
ತುಳಿದು, ಮೇಲೆ
ಹೋಗಲು ಸಾಕಷ್ಟು
ಅವಕಾಶಗಳಿವೆ!
ಹೀಗೆ ಹೋದಾಗ,
ಕೀಳರಿಮೆಯೆಂಬ 
ರಣಹದ್ದುಗಳು...
ನನ್ನನು ಕುಕ್ಕಿ
ತಿಂದು ಬಿಡುತ್ತವೆ!!

ಮೌಲ್ಯವಿದ್ದರೆ...
ಹರಿದ ನೋಟು
ಚಲಾವಣೆಗೊಳ್ಳುವುದು!!
ಬರೀ...ಧನವನ್ನೆ
ತುಂಬಿಟ್ಟುಕೊಳ್ಳುತ್ತಿದ್ದರೆ?
ಮಾನವೀಯ ಮೌಲ್ಯ
ದ್ವಿಗುಣಗೊಳ್ಳದು!!

ನಮ್ಮನೂ...
ಬೆಳೆಸುತ್ತಿದ್ದಾರೆ
ಎಂದುಕೊಳ್ಳುವುದು
ತಪ್ಪು...!!!
ನಮ್ಮಿಂದಲೆ
ಅವರು
ಬೆಳೆಯುತ್ತಿದ್ದಾರೆ
ಇದು 
ಒಪ್ಪು..!!!

ಕಲಬೆರಕೆ ಮಾಡಲು
ಬಾರದ, ತೆಂಗಿನಕಾಯಿಯ
ನೀರು... ಒಮ್ಮೊಮ್ಮೆ
ಹುಳಿಯಾಗಿರುವುದು
ಸಾಕಿ...

ಶುಭವಾಗಲೆಂದೆ
ದೇವರ ಮುಂದೆ
ಒಡೆಯುತ್ತಾರೆ
ಕಾಯಿ...!!!
ಶುಭ ಘಳಿಗೆ
ಬರುವವರೆಗಾದರೂ
ನೀನು ಸ್ವಲ್ಪ
ಕಾಯಿ...!!

ನಿದಿರೆ 
ಮಾಡಲು 
ಮುಚ್ಚಿಕೊಳ್ಳಲೆಬೇಕು
ಕಣ್ಣು ರೆಪ್ಪೆಗಳನ್ನು !!
ಮಲಗುವ ಮುಂಚೆ...
ನಾವಿಬ್ಬರು 
ಮುಚ್ಚಿಕೊಳ್ಳಲೆಬೇಕು
ಕೋಣೆಯ ಬಾಗಿಲನ್ನು !!!

ಹುಟ್ಟುತ್ತಲೆ
ಸಾವನ್ನು ಬೆನ್ನಿಗೆ
ಕಟ್ಟಿಕೊಂಡು
ಬಂದವರು ನಾವು!!
ಬಂದಾಗ ಬರಲಿ...
ಅಲ್ಲಿಯವರೆಗಾದರೂ
ತೆಕ್ಕೆಯಲಿ ಕೊಡುತ್ತಿರು
ನೀ... ಪ್ರೀತಿಗೆ
ಕಾವು!!!

ನಾಲಿಗೆಯ
ತುದಿಯಲ್ಲಿ
ಕಾರ್ಕೊಟಕ
ವಿಷವು ತುಂಬಿದೆ
ಕಚ್ಚಿಸಿಕೊಂಡವನು
ನಾನೊಬ್ಬನೇನಾ?
ಮದ್ದಿಲ್ಲದೆ
ತ್ರೇತಾಯುಗದಲ್ಲಿ
ಇದಕ್ಕೆ ಸೀತೆಯು
ಬಲಿಯಾಗಿದ್ದಾಳೆ
ಅವಳಿಗಿಂತಲೂ...
ನಾನು ದೊಡ್ಡವನಾ?

ಮರೆತಿಲ್ಲ
ನಾನು... ಹಳೆ
ಬಾವಿಯ ಕಟ್ಟೆ
ಬರುತ್ತಿದ್ದೆಯಲ್ಲ
ಒಗೆಯಲು ನೀನು
ಬಟ್ಟೆ
ನೀರನ್ನು ಸೇದಿ
ಹಾಕಲು 
ಎಷ್ಟೊಂದು
ಬಲವಿದ್ದವು ನನ್ನ
ರಟ್ಟೆ
ಸೇದಿಸಿಕೊಂಡು
ನೀನು ನನಗೇನು
ಕೊಟ್ಟೆ

ಅವಳನ್ನು
ಕಲ್ಪನೆಗಳ
ಭಾವದಲ್ಲಿ
ಬಂದಿಸಿಟ್ಟೆ....
ಕವಿಯಾಗಿ!!
ಬಿಗಿದಪ್ಪಿ
ಕೊಳ್ಳಲಾಗುತ್ತಿಲ್ಲ!!!
ವಾಸ್ತವದಲ್ಲಿ
ಪ್ರೇಮಿಯಾಗಿ...

ಅವಳು
ತಲೆಯನ್ನು
ನೇವರಿಸಿ...ನೇವರಿಸಿ
ಹಣವನ್ನು ಖಾಲಿ
ಮಾಡಿದಳು...
ಜೊತೆಗೆ ತಲೆಯೂ
ಬೋಳಾಯಿತು!!!
ಬೋಳಾದ ತಲೆ,
ಖಾಲಿಯಾದ ಬಕ್ಕಣವನ್ನು
ನೆನೆಯುತ್ತ ಕೂರುವುದೆ
ನನಗೊಂದು
ಗೋಳಾಯಿತು.

ಗೀತಾಧರ ಅವರ ಕವನಕ್ಕೆ

ಅವಳ ನೋಡಿ
ಹುಚ್ಚೆದ್ದು
ಕುಣಿದಿದೆ ಈ
ಮನಸಿನಾ
ಕೋಡಿ...
ರಾತ್ರಿಗಳು
ಕೂಡಾ 
ಹಗಲಾಗಿಬಿಟ್ಟಿವೆ..
ಅವಳ ಸಂಗವ
ಬೇಡಿ..

ಪರರರನ್ನು ತುಳಿದು
ಬದುಕವ ಕಲೆಯನ್ನು
ಈಗ ಯಾರಿಗೂ
ಹೇಳಿ ಕೊಡುವ
ಹಾಗಿಲ್ಲ!!!
ನಮ್ಮನ್ನು ತುಳಿದರು
ಸರಿ...
ಮತ್ತೊಬ್ಬರನು ಜೊತೆಯಲ್ಲಿ
ಏಳ್ಗೆಯತ್ತ ಕರೆದುಕೊಂಡೆ
ನಡೆಯೋಣ!!

ಕಾಗದಗಳಿಲ್ಲವೆಂದ
ಮೇಲೆ.... ಹೇಳಿಕೊಳ್ಳಬೇಡ
ಸುಂಕದಾರರ ಮುಂದೆ
ನಿನ್ನ ಪಾಡು!!
ಕೊಟ್ಟುಬಿಡೊಂದು
ಬಣ್ಣದ ನೋಟು..
ಅವರಿಗೂ ಸಾಕಾಗಿರುತ್ತದೆ
ಕೇಳಿ...ಕೇಳಿ... ನಮ್ಮಂಥವರ
ಹಾಡು!!

ಏಳೂರ
ನೀರನ್ನು ಹುಡುಕಬೇಡ
ಹುಡುಗಿ ಮುಳುಗಿಸಲು..
ಕೆರೆಗಳೆಲ್ಲ
ಬತ್ತಿ ಹೋಗಿವೆ!!!
ಚಿಂತಿಸಬೇಡ,
ತೊಟ್ಟು ವಿಷವನ್ನು
ಕೊಟ್ಟುಬಿಡು
ಕುಡಿದು....ಸತ್ತು
ಹೋಗುವೆ!!!

ನೆನಪಿಸಬೇಡ
ಮೂರಿದು ಬಿದ್ದ
ಹಳೆಯ
ಮಾತು!!
ಸಂಬಂಧವೆ
ಹಳಸಿದ ಮೇಲೆ
ಬೇಕೆ? ಹೊಸ
ಮಾತು!!

ನಾ ಕೊಟ್ಟ ಪ್ರೇಮದ ಗುಲಾಬಿ ತೊರೆದು
ಒಲವ ಎಸಳುಗಳನೆಲ್ಲವ ಹರಿದು
ಉಳಿದ ಮುಳ್ಳಿನ ಕಡ್ಡಿಯ ನನ್ನೇದೆಗೆ ಇರಿದು
ಹೊರಟು ಹೋದೆಯಲ್ಲ.. ಮರು ಮಾತನಾಡದೆ
ನನ್ನನು ತೊರೆದು

ಪ್ರೀತಿಯಲಿ
ನೀನೇನೊ
ನನ್ನೆದೆಯ ಮಧುವ
ಹೀರಿ ಹೋದೆ...
ಮರಳಿ ಬಾರದೆ
ಹೋದ ನಿನ್ನನು 
ನೆನೆ ನೆನೆದು ನಾ
ಈ ಪ್ರೀತಿಯಲಿ
ಬಾಡಿ ಹೋದೆ...

ವೀಣೆಯಾಗಬಾರದೆ ಮನಸೆ
ಅವಳೊಲವಿನ ರಾಗವ ಮೀಟಲು
ಅವಳಿಲ್ಲದ ಈ ಸಮಯದಲಿ
ವಿರಹಕೆ ಹಾಡಿ.... ಹಾಡಿ....
ಮಲಗಿಸಲು..

ಎಲ್ಲ ವಿಷಯಗಳನ್ನೂ...
ಗಂಟಲಲ್ಲಿಯೆ 
ಹಿಡಿದಿಟ್ಟುಕೊಳ್ಳಲು
ನಾನೇನು
ನೀಲಕಂಠನಲ್ಲ!!
ಹಾಗಂತ, ಕಂಡ
ಕಂಡವರ ಮೇಲೆ
ವಿಷ ಕಾರುವ
ಘಟಸರ್ಪವು
ನಾನಲ್ಲ!!!

ಕೊಳಕು ಬಟ್ಟೆಗಳನ್ನು
ತೊಳೆಯಲು ಈಗ
ಅಗಸನಿಗೇನೊ
ಕೊಡಬೇಕಿಲ್ಲ!
ಇದಕ್ಕಾಗಿಯೆ ಮೆಷಿನ್
ಒಂದು ಬಂದಿದೆ.
ಹೀಗೆ ನಂ ಮನಸಿನ
ಕೊಳೆಯನ್ನು ತೊಳೆದುಕೊಳ್ಳಲು
ಇನ್ನೊಬ್ಬರಿಗೆ ಅವಕಾಶವನ್ನು
ಮಾಡಿಕೊಡುವುದು ಬೇಡ

ಒಂದು ಹೆಣ್ಣಿನ
ಬಗ್ಗೆ ಮಾತನಾಡುವಾಗ
ನೂರು ಬಾರಿ
ಯೋಚಿಸು!
ತಪ್ಪು ಮಾಡಿದ್ದಾಳೆ
ಎಂದವರಿದಾಗ
ಕೆನ್ನೆಗೆರಡು
ಬಾರಿಸು!

ಮದ್ಯವನ್ನು
ಕುಡಿದು ಮಲಗಿದವರನ್ನು
ಬೇಕಿದ್ದರೆ
ಎಬ್ಬಿಸಬಹುದು
ಸಾಕಿ....
ಮದವನ್ನು
ಏರಿಸಿಕೊಂಡು
ಮಲಗಿಕೊಂಡವರನ್ನು
ಎಬ್ಬಿಸಲಾಗದು

ಗೆಳತಿ..
ನಿನ್ನ ಮೋಹಕ ನಗುವಿನಲಿ
ತೂಗಿದೆ ಎನ್ನೆದೆಯ ಜೋಕಾಲಿ 
ಆ ಕಾಲ್ಗೆಜ್ಜೆಯ ಸದ್ದಿಗೆ ಸೋತ
ಒಲವಿದು... ಜಿಕುತಿದೆ ನಿನ್ನದೆ
ನೆನಪಿನಲಿ.

ಮನ್ ಕಿ ಬಾತ್ ತುಮ್ ನಾ ಕಹೀ
ಹೊಂಟೊಸೆ..
ಮೈ ಜಾನ್ ಜಾತಾ ಹ್ಞೂಂ ಜಾನೆಮನ್
ತೇರಿ ಆಂಖೋಸೆ...

ನೀ ಕೊಟ್ಟು ಹೋದ
ಮುತ್ತಿನ ಮಳೆಗಳ
ಮತ್ತೆ... ಇಳಿದಿಲ್ಲವಿನ್ನೂ
ಆಷಾಡವು ಕೂಡುವ
ಮೊದಲೆ... ಇನ್ನಷ್ಟು
ಮುತ್ತುಗಳ ಮಳೆಯ
ಸುರಿಸಿ ಹೋಗಬಾರದೆ 
ತವರಿಗೆ...

ಕೆಲವರು 
ನಗುವುದಕ್ಕೆ
ನಾವು ಕೊಡಲೆಬೇಕು
ನಗದು!!!
ಮರಳಿಸುವೀರಾ
ಎಂದು ಕೇಳಿದಾಗ,
ನಿಮಗೆ ಉತ್ತರವು
ಸಿಗದು!!!

ಸದಾ ಬೆಂಕಿಯುಂಡೆಯನೆ
ಉಗುಳುತ್ತಿದ್ದ
ತೋಪು ಇಂದು
ನಿಶ್ಯಬ್ದವಾಗಿದೆ!!
ಅವಳು ಯಾವ
ಘಳಿಗೆಯಲ್ಲಿ ಕೈ
ಇಟ್ಟು ಹೋದಳೊ...?
ಅಂದಿನಿಂದಲೂ
ತಣ್ಣಗಾಗಿದೆ!!!

ಆದರ್ಶಗಳಲ್ಲಿ
ವೈರುದ್ಯವಿದ್ದವರೂ...
ರಾಜಿಯಾಗಿ
ರಾಜ್ಯಭಾರವನ್ನು
ಮಾಡುತ್ತಾರೆ!!