Wednesday, September 28, 2016

ನೀ ನೀಡಿದ ನೋವು

ನೀ  ನೀಡಿದ ನೋವು ಹನಿ ಹನಿಯ
ಜಡಿಮಳೆಯಂತೆ ನನ್ನೆದೆಯಂತರಂಗದ
ಪಾತಾಳದ ಕೆಸರಾಗಿದೆ, ಎಷ್ಟೆ ನುಂಗಿದರು
ಬತ್ತದ ಸೆಲೆಯಾಗಿದೆ, ಅದನ್ನೇಷ್ಟೆ
ಮರೆಯಲೆತ್ನಿಸಿದಾದರೂ ಒಣಗದ
ರಾಡಿಯಂತಾಗಿದೆ

ಎಷ್ಟೋ ಯತ್ನಿಸಿದೆ ನಿನ್ನ ನಗುವಿನ
ಮಾತಿನ, ಮುತ್ತಿನ, ಮೌನದ,
ಮುನಿಸಿನ, ಮುಂಗೋಪದ ಹನಿಗಳನೆಲ್ಲವ 
ಮತ್ತೆ ಒಸರದಂತೆ ಬತ್ತಿಸಲು ಆದರದಾಗಲೇ ಇಲ್ಲ
ತೂತು ಬಿದ್ದ ತೆಪ್ಪದಂತಿನ್ನೂ ಬಸೆಯುತ್ತಲೇಯಿದೆ

ಮೊಗ್ಗು ಹೂವಾಗುವ ಮುನ್ನ ಬಾಡಿದಂತೆ
ಕಾಯಿ ಹಣ್ಣಾಗುವ ಮೊದಲೇ ಉದುರಿದಂತೆ
ಹಾಲು ಮೊಸರಾಗುವ ಮುನ್ನವೇ ವಡದಂತೆ
ನನ್ನ ಪ್ರೀತಿಯು ಬಲಿಯುವ ಮೊದಲಿಗೆ
ಕತ್ತರಿಸಿಬಿಟ್ಟೆ ರಂಬೆಯಂತೆ

ದೇವರಿರದ ಗುಡಿಯ ಸುತ್ತಿ ಸುತ್ತಿ
ಕಾಲು ನೋವು ಬಂದಂತೆ
ರಸವಿರದ ಹೂವುನು ಸುತ್ತಿ ಸುತ್ತಿ
ದುಂಬಿಯ ರೆಕ್ಕೆ ಸೋತಂತೆ
ಪ್ರೀತಿಯನರಿಯದ ನಿನ್ನ ನಾ ಸುತ್ತಿ ಸುತ್ತಿ
ಬದುಕಿರುವೆನಲ್ಲೆ  ಸತ್ತಂತೆ

Wednesday, September 21, 2016

ನಿನ್ನಿಂದ

ನಿನ್ನಿಂದ ಎಲ್ಲ ಕಳೆದುಕೊಂಡೆ
ಹಿನ್ನೀರಿಗೆ ಹಾಳಾದ ಗದ್ದೆಯಂತೆ
ಹಣ, ಗುಣ, ಊಟ, ನಿದ್ದೆ
ಸಮಯ, ದುಡಿಮೆ, ಎಲ್ಲರೊಂದಿನ
ಒಡನಾಟವನೆಲ್ಲವ ಹರಿಯಬಿಟ್ಟೆ
ಬಂಜರು ನೆಲಕೆ ನೀರುಣಿಸಿದ ಹಾಗೆ

ನಾನೇಣಿಸಿರಲಿಲ್ಲ ನೀನು ಕೋಗಿಲೆ
ರೂಪದ ಕಾಗೆಯಂದು, ಹಾಲಿನ
ರೂಪದ ಸಿಹಿವಿಷವೆಂದು ನೋಡು...
ಹಣ, ಗುಣ ನಾ ಮರಳಿ ಗಳಿಸಬಲ್ಲೆ
ಆದರೆ ನನ್ನ ಸಮಯ, ನನ್ನವರೊಂದಿನ
ಒಡನಾಟದ ಕ್ಷಣಗಳನ್ನ ಗಳಿಸಬಲ್ಲೇನೇನೆ?

ನನಗನ್ನಿಸುತಿದೆ ಮರೆಯದ ರೂಪವ
ತೊರಿಸಿ, ಮಾಸದ ಕಹಿ ನೆನಪುಗಳ
ಉಳಿಸಿಬಿಟ್ಟೆ, ನಿನ್ನಂದದಷ್ಟು ನಿನ್ನ
ಗುಣವು ಮೌಲ್ಯವಾಗಿದ್ದರೆ ಎಷ್ಟು
ಸುಂದರವಾಗುತ್ತಿತ್ತು ನಮ್ಮಿಬ್ಬರ
ಬದುಕು....

ಮರೆಯಲಾಗದ, ಅಳಿಸಲಾಗದ, ಹೇಳಲಾಗದ
ಸಾವಿರಾರು ನುಡಿಗಳ ನನ್ನೆದೆಯ ಗರ್ಭಕೆ ತುರುಕಿಬಿಟ್ಟು
ನಮ್ಮಿಬ್ಬರ ಬಂಧನದ ಮಾತನ್ನು ಮಿಸುಕಾಡಲು ಬಿಡದಂತೆ 
ನೋವಿನ, ಮೌನದ ಬೀಗವ ಹಾಕಿಬಿಟ್ಟೆ ನನ್ನದರಕೆ
ಕರಗದ ಹಗಲನು, ಮಲಗದ ಕತ್ತಲನಷ್ಟೆ ಬಟ್ಟುಬಿಟ್ಟೆ 
ನನ್ನ ಬಾಳಿಗೆ

ನಿನ್ನಿಂದ

ನಿನ್ನಿಂದ ಎಲ್ಲ ಕಳೆದುಕೊಂಡೆ
ಹಿನ್ನೀರಿಗೆ ಹಾಳಾದ ಗದ್ದೆಯಂತೆ
ಹಣ, ಗುಣ, ಊಟ, ನಿದ್ದೆ
ಸಮಯ, ದುಡಿಮೆ, ಎಲ್ಲರೊಂದಿನ
ಒಡನಾಟವನೆಲ್ಲವ ಹರಿಯಬಿಟ್ಟೆ
ಬಂಜರು ನೆಲಕೆ ನೀರುಣಿಸಿದ ಹಾಗೆ

ನಾನೇಣಿಸಿರಲಿಲ್ಲ ನೀನು ಕೋಗಿಲೆ
ರೂಪದ ಕಾಗೆಯಂದು, ಹಾಲಿನ
ರೂಪದ ಸಿಹಿವಿಷವೆಂದು ನೋಡು...
ಹಣ, ಗುಣ ನಾ ಮರಳಿ ಗಳಿಸಬಲ್ಲೆ
ಆದರೆ ನನ್ನ ಸಮಯ, ನನ್ನವರೊಂದಿನ
ಒಡನಾಟದ ಕ್ಷಣಗಳನ್ನ ಗಳಿಸಬಲ್ಲೇನೇನೆ?

ನನಗನ್ನಿಸುತಿದೆ ಮರೆಯದ ರೂಪವ
ತೊರಿಸಿ, ಮಾಸದ ಕಹಿ ನೆನಪುಗಳನ್ನಷ್ಟೆ
ಉಳಿಸಿಬಿಟ್ಟೆ, ನಿನ್ನಂದದಷ್ಟು ನಿನ್ನ
ಗುಣವು ಮೌಲ್ಯವಾಗಿದ್ದರೆ ಎಷ್ಟು
ಸುಂದರವಾಗುತ್ತಿತ್ತು ನಮ್ಮಿಬ್ಬರ
ಬದುಕು....

ಮರೆಯಲಾಗದ, ಅಳಿಸಲಾಗದ, ಹೇಳಲಾಗದ
ಸಾವಿರಾರು ನುಡಿಗಳ ನನ್ನೆದೆಯ ಗರ್ಭಕೆ ತುರುಕಿಬಿಟ್ಟು
ನಮ್ಮಿಬ್ಬರ ಬಂಧನದ ಮಾತನ್ನು ಮಿಸುಕಾಡಲು ಬಿಡದಂತೆ ನೋವಿನ, ಮೌನದ ಬೀಗವ ಹಾಕಿಬಿಟ್ಟೆ ನನ್ನದರಕೆ, ಕರಗದ ಹಗಲನು, ಮಲಗದ
ಕತ್ತಲನಷ್ಟೆ ಬಿಟ್ಟುಬಿಟ್ಟೆ ನನ್ನ ಬಾಳಿಗೆ

Tuesday, August 23, 2016

ಶರಣ

ಕುಡಿಯುವ ನೀರು
ವಿಷವಾದರೆಂತಯ್ಯ
ಸುರಿಯುವ ಮಳೆಯು
ಬೆಂಕಿಯಾದೊಡೆಂತಯ್ಯ
ತಾಯಿ ಮಗನಿಗೆ ವ್ಯೆರಿಯಾದೊಡೆ
ಯಾರಗೆ ದೂರಲಿ ಶರಣ

Saturday, August 20, 2016

ಏನೆಂದು ಬರೆಯಲಿ

ಏನೆಂದು ಬರೆಯಲಿ ನಾ
ಲೋಕದ ತಿರುಗ ಕಂಡು
ಏನೆಂದು ಅರಿಯಲಿ ನಾ
ಲೋಕದ ಸತ್ಯವ ಕಂಡು

ಹುಟ್ಟಿದ ಕೂಡಲೆ ತಾಯಿಯ
ಎದೆಹಾಲಿಗೆ ಬಾಯಿ ತೆರೆಯುವ
ಮಗ ಮಮತೆಯನುಣ್ಣುತ್ತಾನೆ
ಮದುವೆಯ ನಂತರ ಮಡದಿ
ಎದೆಯ ಬಯಸುವ ಮಗ
ಕಾಮವನುಣ್ಣುತ್ತಾನೆ 

ನದಿಯು ತನ್ನ ಹುಟ್ಟುಗುಮವ ಬಿಟ್ಟು
ಶರದಿಯನು ಸೇರುವಂತೆ
ಹೆತ್ತೊಡಲ ಮರೆತು
ಕಾಮದೊಡಲ ಸೇರುವ ಮಗನೇ...
ಜೀವವಿತ್ತವಳ ಮರೆತು
ದೇಹವಿತ್ತವಳನು ಸೇರುವೆಯಲ್ಲೋ

ತಾಯಿ ಹೆಣ್ಣೆ, ಮಡದಿ ಹೆಣ್ಣೆ
ಇವೆರಡರಂತರವನರಿತು
ಬಾಳು ಮಗನೇ
ತಾಯಿ ಮಡಿಲು ತಂಪು
ಮಡದಿ ಮಡಿಲು ಬೆಂಕಿ
ಮಡಿಲ ತಂಪಿನೊಳರಳುವೆಯೋ
ಮಡಿಲ ಬೆಂಕಿಯೊಳು ನರಳುವೆಯೋ

ಏನದು?

ಕದ್ದ ತಿಂದ್ರ ದಿಡ್ಡಿಗೆ
ದುಡಿದ ತಿಂದ್ರ ರೆಟ್ಟಿಗೆ
ಉಳುಮೆ ಮಾಡಿದ್ರ ಭೂಮಿಗೆ
ಚೀಲ  ರಾಶಿ ಮನೆಗೆ

Friday, August 12, 2016

ಸಹಿಸೋದು

ಹದಮಾಡಿದ ಹೊಲನ
ಸಾಕಷ್ಟು ನೀರನ್ನ ನುಂಗತ್ಯೆತಿ
ಬದುಗಟ್ಟಿದ್ದ ಕೆರಿನ ಸಾಕಷ್ಟು
ನೀರನ್ನ ಹಿಡದಿಡತ್ಯೆತಿ

ಹದವಾದ ಮನಸ್ಸಿದ್ರನ
ಸುಖ-ದುಃಖನ ನುಂಗತ್ಯೆತಿ