ನನ್ನದೂ...
ಇಲ್ಲಿ ಇದೆ ಪಾಡು
ಗೆಳತಿ!
ನಿ ಕುಳಿತುಕೊಂಡ
ಕೆರೆ ದಂಡೆಯೇನೊ
ಗಟ್ಟಿಯಿದ್ದ ಹಾಗಿದೆ...
ನಿನ್ನ ನೆನೆದ ಮನದ
ದಂಡೆಯಿಲ್ಲಿ
ಮೆತ್ತಗಾಗಿದೆ.
ಮೌನವಾಗಿ
ಹೀಗೆ....
ಗಿಡದ ನೆರಳನಲ್ಲಿ
ನಿಂತುಕೊಳ್ಳಬೇಡ
ಗೆಳತಿ...
ಬಿಸಿ ಬರುವ
ತಂಗಾಳಿಯಲ್ಲಿ
ಎದೆಯ ಮಾತುಗಳನ್ನು
ಕಳುಹಿಸಿ ಕೊಟ್ಟಿದ್ದೇನೆ
ಆಲಿಸದೆ...
ಸುಮ್ಮನಿರಬೇಡ.
ನಾ ಹೇಳುವ
ಮಾತುಗಳೆಲ್ಲ
ಕವಿತೆಗಳಾಗಿವೆ!
ನೀ ಹೇಳುವ
ಮಾತುಗಳಿಗೆ
ಅವುಗಳೆಲ್ಲ....
ಈಗ
ಕಿವಿಯಾಗಿವೆ!
ಸೃಷ್ಟಿಯ
ಸೊಬಗದು
ಎಂದಿಗೂ
ಮುಗಿಯದ
ಯಾನ!!
ನೋಡುತ್ತಲೆ...
ಮಾಡುತ್ತಿರಬೇಡ
ಕಾಲಹರಣ..
ಮುರಿದುಬಿಡು
ಇಂದಾದರು
ಬಿಗು ಮೌನ!!
ಉಕ್ಕುವ ಬೇವರಿನ
ಬಗ್ಗೆ ಚಿಂತಿಸಬೇಡ...
ಅದು ಕಾಮದಲ್ಲೂ
ಹರಿಯುವುದು...
ಎಂಟಂಕಣದ
ಅರಮನೆಯೇನಿಲ್ಲ
ಬಂದು ಸೇರೊಮ್ಮೆ
ತೋಳ್ಬಂಧನದಲಿ
ಒಲವ ಸುಧೆಯೆ
ಹರಿಯುವುದು...
ಕಾಮ!!!!!!
ಬೇಡ...ಬೇಡವೆನ್ನುತಲೆ
ವಂಶಗಳೆ ಹುಟ್ಟಿ...
ಅಳಿದು ಹೋಗಿವೆ
ಈ ಮಣ್ಣಿನಲ್ಲಿ...
ಎಸಳು ಹೂಗಳನ್ನು
ಹೊಸಕಿ ಹಾಕುತ್ತಿರುವರು
ಕರುಣೆ ಇಲ್ಲದಲಿ..
ಮರೆತು ಬಿಟ್ಟೆಯಾ?
ಕಾಮಸೂತ್ರದ
ಕಟ್ಟನ್ನು ಕಟ್ಟಿಕೊಟ್ಟ
ಕೋಟೆಯಿದೆಂಬುದನು...
ಮರೆತುಬಿಡು, ಹೊರಗೆ
ಬಂದುಬಿಡು ಮೈ ಮೈಲಿಗೆಗಳಿಂದಾಚೆ
ಮಗುವಾಗಿ ಬಿಡು
ಮಡಿಲೊಳಗೊಮ್ಮೆ... ತೇಲಿಸಿ
ಕರೆದೊಯ್ದು ಬಿಡುವೆ ಈ
ಲೋಕದಾಚೆ...
ಅಲ್ಲಿ ನವರಸಗಳ ಹಂಗಿಲ್ಲ
ಇವರು ಹೀಗೇಕೆ ಎಂದು ಹಂಗೀಸುವರು ಇಲ್ಲ...
ಬಿಟ್ಟು ಹೋದೆಯೆಂದು
ನಾನೇನು
ಸಾಯುವುದಿಲ್ಲ!!!
ಸಾಯುವೆನೆಂದರೆ?
ನಿನ್ನ ನೆನಪುಗಳು
ಬಿಡುವುದಿಲ್ಲ!!
ಸಿಂಹವೂ...
ಇಂದು ಹಳ್ಳಕೆ
ಬಿದ್ದಿದೆ!!!
ಉರಿದುರಿದು
ಮೆರೆಯುತ್ತಿದ್ದವರು
ಸದ್ದಿಲ್ಲದೆ ಮಣ್ಣಲ್ಲಿ
ಹೂತು ಹೋದದ್ದು
ಎಷ್ಟು ಜನರಿಗೆ
ಗೊತ್ತಿದೆ!!
ಎದೆಗೆ ಸುಧೆಯನ್ನು
ಸುರಿಯುತ್ತೇನೆ
ಎಂದವರು...
ಹೊಟ್ಟೆಗೆ ಹಾಲಾಹಲವನ್ನೆ
ಕುಡಿಸಿಬಿಟ್ಟರು..!!
ಬೆನ್ನಿಗೆ ಚೂರಿ
ಹಾಕಿದ್ದರು ಚಿಂತಿಸುತ್ತಿರಲಿಲ್ಲ
ನಂಬಿಕೆಯ ಕತ್ತನ್ನೆ
ಹಿಚುಕಿಬಿಟ್ಟರು..!!
ಎಷ್ಟು ಮತ್ತು
ತುಂಬಿದೆ ಈ
ಒಂಟಿ
ಕಣ್ಣಿನಲ್ಲಿ....!!!
ನೋಡುಗರ
ಎದೆ ಬಡಿತವು
ನಿಂತು ಹೋಗುವುದೇನೊ?
ಈ ಕ್ಷಣದಲ್ಲಿ!!!
ನನಗೂ...
ಮತ್ತೊಬ್ಬರ ಬೆನ್ನ
ತುಳಿದು, ಮೇಲೆ
ಹೋಗಲು ಸಾಕಷ್ಟು
ಅವಕಾಶಗಳಿವೆ!
ಹೀಗೆ ಹೋದಾಗ,
ಕೀಳರಿಮೆಯೆಂಬ
ರಣಹದ್ದುಗಳು...
ನನ್ನನು ಕುಕ್ಕಿ
ತಿಂದು ಬಿಡುತ್ತವೆ!!
ಮೌಲ್ಯವಿದ್ದರೆ...
ಹರಿದ ನೋಟು
ಚಲಾವಣೆಗೊಳ್ಳುವುದು!!
ಬರೀ...ಧನವನ್ನೆ
ತುಂಬಿಟ್ಟುಕೊಳ್ಳುತ್ತಿದ್ದರೆ?
ಮಾನವೀಯ ಮೌಲ್ಯ
ದ್ವಿಗುಣಗೊಳ್ಳದು!!
ನಮ್ಮನು
ಬೆಳೆಸುತ್ತಿದ್ದಾರೆ
ಎಂದುಕೊಳ್ಳುವುದು
ತಪ್ಪು...!!!
ನಮ್ಮಿಂದಲೆ
ಅವರು
ಬೆಳೆಯುತ್ತಿದ್ದಾರೆ
ಇದು ಒಪ್ಪು..!!!
ಕಲಬೆರಕೆ ಮಾಡಲು
ಬಾರದ, ತೆಂಗಿನಕಾಯಿಯ
ನೀರು... ಒಮ್ಮೊಮ್ಮೆ
ಹುಳಿಯಾಗಿರುವುದು
ಸಾಕಿ...
ಶುಭವಾಗಲೆಂದೆ
ದೇವರ ಮುಂದೆ
ಒಡೆಯುತ್ತಾರೆ
ಕಾಯಿ...!!!
ಶುಭ ಘಳಿಗೆ
ಬರುವವರೆಗಾದರೂ
ನೀನು ಸ್ವಲ್ಪ
ಕಾಯೀ...
ನಿದಿರೆ
ಮಾಡಲು
ಮುಚ್ಚಿಕೊಳ್ಲಲೆಬೇಕು
ರೆಪ್ಪೆಗಳನ್ನು
ನಾವಿಬ್ಬರು
ಮಲಗಲೂ...
ಮೊದಲು
ಮುಚ್ಚಲೆ ಬೇಕು
ಕೋಣೆಯ ಬಾಗಿಲನ್ನು
ಹುಟ್ಟುತ್ತಲೆ
ಸಾವನ್ನು ಬೆನ್ನಿಗೆ
ಕಟ್ಟಿಕೊಂಡು
ಬಂದವರು ನಾವು!!
ಬಂದಾಗ ಬರಲಿ...
ಅಲ್ಲಿಯವರೆಗಾದರೂ
ತೆಕ್ಕೆಯಲಿ ಕೊಡುತ್ತಿರು
ನೀ... ಪ್ರೀತಿಗೆ
ಕಾವು!!!
ನಾಲಿಗೆಯ
ತುದಿಯಲ್ಲಿ
ಕಾರ್ಕೊಟಕ
ವಿಷ ತುಂಬಿದೆ
ಕಚ್ಚಿಸಿಕೊಂಡವನು
ನಾನೊಬ್ಬನೇನಾ?
ಮದ್ದಿಲ್ಲದೆ
ತ್ರೇತಾಯುಗದಲ್ಲಿ
ಇದಕ್ಕೆ ಸೀತೆಯು
ಬಲಿಯಾಗಿದ್ದಾಳೆ
ಅವಳಿಗಿಂತಲೂ...
ನಾನು ದೊಡ್ಡವನಾ?
ಅವಳನ್ನು
ಕಲ್ಪನೆಗಳ
ಭಾವದಲ್ಲಿ
ಬಂಧಿಸಿಟ್ಟೆ....
ಕವಿಯಾಗಿ!!
ಬಿಗಿದಪ್ಪಿ
ಕೊಳ್ಳಲಾಗುತ್ತಿಲ್ಲ!!!
ವಾಸ್ತವದಲ್ಲಿ
ಪ್ರೇಮಿಯಾಗಿ...
No comments:
Post a Comment