Thursday, January 9, 2020

ನಿರ್ಭಾವುಕತೆಗಳು


ತಿರುವಿ ಬಿಗಿದುಕೊಂಡ ತುರುಬು
ಮೊದಲಿನಷ್ಟು ಹೇರಳಾಗಿಲ್ಲ!
ಮೊದಲು, ಮುಡಿಗೆ ಮಲ್ಲಿಗೆಯ
ಮುಡಿಸಿ ಮನವ ತಣಿಸುವ ಮುದುಕನು
ಮಣ್ಣಾಗಿ ಹೋಗಿದ್ದಾನೆ!
ಇರುಳುಗಣ್ಣಿನ ಕನ್ನಡಕಕ್ಕಾಗಿ, ಬಿಚ್ಚಿಕೊಟ್ಟ
ಕಿವಿಯೋಲೆಯ ಸಂಧು ತುರಿಕೆಯ ಬಿಡುತ್ತಿದೆ!
ಈ ಏಕಾಂತ ಇಷ್ಟು ಕ್ರೂರವಾದದ್ದೆಂದು
ನನಗೆ ಮೊದಲೆ ಅರಿವಾಗಿದ್ದರೆ, ಅವರ 
ಹಿಂದೆ ನಾನುನೂ ಹೆಜ್ಜೆಗಳನ್ನು ತುಳಿದುಬಿಡುತ್ತಿದ್ದೆ!
ಹೊತ್ತು ತುತ್ತಿಗಾಗಿ ಬದುಕುವುದು
ನನಗೀಗ, ಅಸಹನೀಯವೆನಿಸಿಬಿಟ್ಟಿದೆ!
ಅರಿವಾಗುತ್ತಿಲ್ಲ ನನಗೆ... ಈಗ ಯಾವ
ದಾರಿಯನ್ನು ತುಳಿಯಲಿ.

No comments:

Post a Comment