ನೀನು ಬಿಟ್ಟು
ಹೋದ ಘಳಿಗೆ!
ಎದೆಯ ನೆಲವೀಗ
ಪದಗಳೆ ಹುಟ್ಟದಷ್ಟು
ಬರುಡು!!
ಬರಬೇಡ ಇಲ್ಲಿಗೆ
ಎಂದು ದಿಗ್ಬಂಧನವ
ಹಾಕಿಬಿಟ್ಟಿದೆ
ಸುಡುಗಾಡು!
ಎದೆಗೆ ಮಾಡಿದ
ಗಾಯವನ್ನು
ಲೆಕ್ಕಿಸದೆ, ಕೆನ್ನೆಗೆ
ಸವರಿಕೊಂಡಿದ್ದಾಳೆ
ಅರಿಷಿಣ!
ಅವಳಿಗೆ ಅಕ್ಕಿಕಾಳು
ನೆತ್ತಿಗೆ, ಅಳಿದುಳಿದವು
ನನ್ನ ಬಾಯಿಗೆ.
ಸಾಕಿನ್ನು ಎತ್ತಿಬಿಡಿ
ಊರ ಹೊರಗಲ್ಲಿ,
ನನಗಾಗಿ ಕಾಯುತಿದೆ
ಮಸಣ!
ನನ್ನೆದೆಯ ಗಾಯದ
ಮದ್ದು, ಅವಳ
ಕೆನ್ನೆಯ ಮೇಲೆಯೆ
ನಗುತ್ತಿತ್ತು.
ಅವಳು ಕೊಡಲಿಲ್ಲ!
ನಾನು ಕೇಳಲಿಲ್ಲ!
No comments:
Post a Comment