Monday, August 24, 2020

ಶಾಯರಿ

ತುಂಬಿಟ್ಟ ಮಧು
ಬಟ್ಟಲಿಗೆ, ಎಷ್ಟಾದರು
ಲಿಂಬೆಯ ರಸವನ್ನು
ಹಿಂಡಿಟ್ಟುಬಿಡು.
ನನ್ನ ಬದುಕಿನ
ಕಹಿಯನ್ನೇನದು
ಕಡಿಮೆಗೊಳಿಸುವುದಿಲ್ಲ
ಸಾಕಿ...
ಬಟ್ಟಲು ಬರಿದಾಗುತ್ತದೆ
ಮಾತ್ರ.
ನೋವಿನ ಒರತೆ
ಬಸಿಯುತ್ತಲೆ ಇರುತ್ತದೆ
ಸದಾ.

No comments:

Post a Comment