ಬತ್ತಿ ಹೋದ ಈ
ತುಟಿಯ ತೊರೆಗೊಂದಿಷ್ಟು
ಸವಿಜೇನ ಸುರಿಸಿಬಿಡು!
ಕರಾಳತೆಯ ತುಂಬಿದೀ...
ಕಂಗಳ ಕೊಳದಲ್ಲಿ, ಭರವಸೆಯ
ಬೆಳಕನ್ನು ತುಂಬಿಬಿಡು!
ಬೇಕು-ಬೇಡಗಳ ಸಂದಿಗ್ಧಗಳ
ಸಂಕೋಲೆಯಲಿ ಸಿಕ್ಕ ಮಸ್ತಕಕ್ಕೆ
ಹೆಗಲೊಂದನ್ನು ನೀಡು!
ಮಾತಲ್ಲಿಯೆ ಬೆನ್ನ ಮೇಲೆ ಗೀರಿದ,
ಮಾಯದ ಗಾಯಗಳ ಮೇಲೆ
ಬೆರಳುಗಳಿಂದ, ನಾನಿರುವೆನೆಂದು ದೃಢೀಕರಿಸು.
ನಾಳೆಯ ಚಿಂತೆ ನನಗಿಲ್ಲ!
ಬರುವಂತಿದ್ದರೆ ಸಾವು, ಅದಿಂದೆ,
ಈಗಲೇ ಅಪ್ಪಿಕೊಂಡು ಬಿಡಲಿ!
ಜಗದ ಬೇರಾವ ಸುಖವು ಬೇಡ
ನನಗೀಗ!
ಜಗವು ಅಳುತ್ತದೆ ಮೂರು ದಿನ!
ಮತ್ತೆ, ಬದುಕು ನಗುತ್ತಲೆ ಸಾಗುತ್ತದೆ ಮರುದಿನ!
No comments:
Post a Comment