Saturday, December 12, 2020

ಶಾಯರಿ

ಮುರಿದು ಹೋದ
ಲೇಖನಿಯ ನಿಬ್ಬಿನ
ಕುರಿತು ಚಿಂತಿಸದಿರು.
ಎದೆಯಲ್ಲಿನ್ನೂ ಬತ್ತದ
ನೂರಾರು ಸಾಲುಗಳಿವೆ
ಸಾಕಿ...
ಒಡೆದು ಹೋದ,
ಗಾಜಿನ‌ ಮಧು ಬಟ್ಟಲಿನ
ಚಿಂತೆ ಏಕೀಗ?
ಸುರಿದುಬಿಡು ಬೊಗೆಸೆಗೊಂದಿಷ್ಟು 
ತೀರ್ಥವನ್ನೆ ಉಂಡ
ಅಂಗೈ ರೇಖೆಗಳಿಗೂ
ಮಧುವಿನ ಸ್ಪರ್ಶ ಸುಖ
ಸಿಗಲಿ.

No comments:

Post a Comment