Friday, December 10, 2021

ರಂಗೀ

ಎಷ್ಟೊಂದು ಕಾಟ
ಕೊಡ್ತಿಯೇ... ಮಾರಾಯ್ತಿ
ಸಾಕಪ್ಪ!! ಸಾಕು... 
ನಿನ್ನ ಸಹವಾಸ
ರಂಗೀ....
ನಾನು ಇಂತಹದೊಂದು
"ಕೈ? ಲಾಸ್" ವನ್ನು
ಕಟ್ಟಿಕೊಂಡಿದ್ದುಬಿಡುತ್ತೇನೆ
ಭೈರಾಪೂರ ಗುಡ್ಡದಲ್ಲಿ.

Wednesday, December 8, 2021

ರಂಗೀ

ಕೊನೆಗೂ...
ನಿರಾಕರಣೆಯ ನೋವಿಗೆ
ಸಿಕ್ಕು, ಹೂವುಗಳೆಲ್ಲ ನರಳಿ...
ನರಳಿ...ನಲುಗಿ ಹೋಗುವಂತೆ
ಮಾಡಿಬಿಟ್ಟೆಯಲ್ಲ!
ರಂಗೀ...
ಇವುಗಳ ಅಕಾಲಿಕ 
ಮರಣಕ್ಕೆ ನೀನೆ.... ಕಾರಣಳೆಂಬ
ಸಾಕ್ಷಿಯೊಂದು, ಮರಣೋತ್ತರ
ಪರೀಕ್ಷೆಯಲ್ಲಿ ಸಿಕ್ಕಿದೆಯಲ್ಲ!!

Sunday, December 5, 2021

ಗೆಳೆಯ

ಯೌವ್ವನವನ್ನೇ....
ಬಸಿದು, ನಿನ್ನ ಪ್ರತಿರೂಪವನ್ನು
ನೀಡಿರುವೆ
ಗೆಳೆಯ...!!
ಪದೇ...ಪದೇ...
ಪ್ರಶ್ನಿಸುತ್ತಿರಬೇಡ
ನನ್ನನೇಷ್ಟು ಪ್ರೀತಿಸುತ್ತಿ
ಎಂದು!!!

Saturday, December 4, 2021

ಗೆಳೆಯ

ನಾಯಿ ಮುಟ್ಟಿದ ಮಡಿಕೆಯೆಂಬ
ಗಾಳಿ ಮಾತುಗಳನ್ನೆ ಕೇಳಿ,
ನಂಬಿಕೆಯ ಬೇರುಗಳನ್ನೆ
ಅಲ್ಲಾಡಿಸಿಬಿಟ್ಟೆಯಲ್ಲ
ಗೆಳೆಯ....
ಇಷ್ಟು ದಿನ ಈ ಮಡಿಲಲ್ಲಿ
ಉಂಡಂತಹ ಸುಖ
ಹೆಚ್ಚಾಗಿ, ನಂಜಾಗಿದೆಯೇನು?

Thursday, December 2, 2021

ಗೆಳೆಯಾ

ಹೂವು ಮಾರುವವನ
ಅಂಗೈಯೊಳಗಿನ ಮೃದುತನವು
ನಿನ್ನ ಮಾತಿನಲ್ಲಿ 
ಇಲ್ಲವಾಯಿತಲ್ಲೊ
ಗೆಳೆಯಾ....!!
ಕಟ್ಟುವ ಮೊದಲೇ...
ಹೊಸಕುವ ಉತ್ಸಾಹವಿರುವಾಗ,
ಸಂಬಂಧಗಳನ್ನು ಪೋಣಿಸಿಕೊಳ್ಳುವ
ಜರೂರೊತ್ತಾದರು....
ಏನಿತ್ತು?

ರಂಗೀ

ಈ ಥಂಡಿ... ಥಂಡಿ
ದಿನ್ದಾಗ, ತಣ್ಣೀರನ ಕೊಳ್ದ
ಮುಂದ ಹಿಂಗ ತಣ್ಗ
ನೋಡ್ಕೊಂತ ಕುಂತ್ರ
ಹ್ಯಾಂಗ ರಂಗೀ....
ಮಾತಾಡ್ಲಿಕ್ಕ ಅಷ್ಟ ಹೋತು...
ನಕ್ಕಾರ ನಕ್ಬಿಡೊಮ್ಮೆ!! 
ಆ ನಗುವಿನ ಬೆಂಕ್ಯಾಗರ 
ಚೂರು ಬೆಂದ ಹೊಕ್ಕಿನಿ

Wednesday, December 1, 2021

ರಂಗೀ

ಬರೆದು ಕಳುಹಿಸಿದ್ದ
ಇವೀಷ್ಟು ಒಲೆಗಳನ್ನು
ಮರಳಿ ಕಳುಹಿಸುವ ಬದಲು,
ನಿನ್ನ ಮದುವೆಯ ಅಗ್ನಿ
ಕುಂಡದಲ್ಲಿ ಸುರಿದುಕೊಂಡಿದ್ದರೂ
ಸಾಕಿತ್ತಲ್ಲವೆ?
ರಂಗೀ....
ಪ್ರೇಮ ಸೇತುವೆಯ 
ಸಾಕ್ಷಿಗಳನ್ನಿಂದು.... ಗೆದ್ದಲುಗಳಿಗೆ
ಆಹಾರವಾಗುವುದಕ್ಕೆ ಬಿಟ್ಟ
ನಿನ್ನ ಪರಿಗೆ.... ನಾನೇನು
ಹೇಳಲಿ!!?

Monday, November 29, 2021

ರಂಗೀ

ಮದುವೆಯಾಗಿ
ಮೂರು ಮಕ್ಕಳ
ತಂದೆಯಾಗಿರುವೆ ಈಗ...
ಹೂವನ್ನೀಡಿದು ಎದುರು
ಬಂದು ನಿಂತರೆ ಹೇಗೆ?
ರಂಗೀ...
ಸಾಲದ್ದಕ್ಕೆ ಲೈಫ್ ಟೈಮ್
ಒಂಬತ್ತು ತಿಂಗಳಿನ ಹೊಟ್ಟೆಯನ್ನು
ಹೊತ್ತು ನಿಂತಿರುವ "ಚಿರು ಯುವಕ" 
ನಾನೆಂದು ನಿನಗೆ ತಿಳಿದಿಲ್ಲವೇನು?

ರಂಗೀ

ಹೀಗೆ ಒಂಟಿ ಕಣ್ಣಲಿ
ಎಷ್ಟಂತ ಅಳುವೆ?
'ಅಲ್ಫಾ, ಡೆಲ್ಟಾ, ಕರೋನಾದಂತ'
ಅಲೆಗಳೆ ಇಳಿದಿರುವಾಗ, ಇನ್ನೀ...
ಒಮಿಕ್ರಾನಿನ ಭಯವೇತಕೆ
ರಂಗೀ....
ಹೋಗಲಿಬಿಡು ಇದೊಂದು
ಸೀಜನ್ನು!!
ಮುಂದಿನ ಸಲ ತಂದರಾಯಿತಲ್ಲವೆ
ಬಂಗಾರವನ್ನು!!

Sunday, November 28, 2021

ರಂಗೀ...

ಹೇಳಿದ್ದೆ..!!
ಕೇಳಲಿಲ್ಲ "ಡಯಟ್"
ಮಾಡಿ...ಮಾಡಿ... ನಡುವು
ನೋವಾಗುತಿಹುದೆಂದು
"ಬೇವಿನ ಮರ" ಕ್ಕೆ
ಭಾರವಾಗಿ ಏಕೆ ನಿಂತೆ?
ರಂಗೀ....
ಕೂಗಿದ್ದರೆ... ಈ
"ಬೇವಿನಕಟ್ಟಿ" ಇದ್ದನಲ್ಲ!!
ಹತ್ತಿಯಂತೆ ಎತ್ತಾಡಲು.

ರಂಗೀ

ಮನಸಿನ ಮಾತನ್ನು
ಹೇಳಲು....
ಕಲ್ಲು ಬಂಡೆಗಳ ಮೇಲೆ
ಕುಳಿತು, ಬರೆಯುತ್ತಾ-ಗೀಚುತ್ತಾ
ಪಾಪದ ಹಾಳೆಗಳನ್ನು ಹರಿದು
ಬಿಸಾಡುವ ಜರೂರೊತ್ತಾದರೂ...
ಏನಿತ್ತು?
ರಂಗೀ....
ಜೇನು ತುಂಬಿದ 
ತುಟಿಯಂಚಿಂದೊಂದು ಸಣ್ಣ
ಕಿರುನಗೆಯನ್ನು ಬೀರಿದ್ದರೂ
ಸಾಕಿತ್ತಿಲ್ಲವೇನು?

Saturday, November 27, 2021

ಚುಟುಕು

"ನೀನು" ಸತ್ತು
ಹೋದ ಮೇಲೆ, ಐದು
ರೂಪಾಯಿಯ ಊದಿನಕಡ್ಡಿಗೂ
ಭಾರವಾಗಿಬಿಡುವೆಯಲ್ಲೋ!!!
ಬದುಕಿದ್ದಾಗ, ಬೇಕು-ಬೇಡಗಳನ್ನೆಲ್ಲವನ್ನು
ಪೊರೈಸಿಕೊಂಡವರು..
"ನಿನ್ನ" ಹೆಣಕ್ಕೆ
ಬಾಡಿದ ಹೂ, ಹಳಸಿದ ಕಾಯಿಯನ್ನು
ಪೂಜೆಗೆಂದೆ ಹೊತ್ತು
ತರುವರಲ್ಲೊ...!!

ಚುಟುಕು

ಕೊನೆಗೂ.....
ಈ ಹೂಗಳೆದೆಯಳಲು
ಕೇಳಿಸಿಕೊಳ್ಳದೆ ನಡೆದು
ಹೋದೆಯಲ್ಲ!!!
ರಂಗೀ.....
ತೋಟದ ಮಾಲೀಕನಿಗೆ
ಕಟ್ಟಬೇಕಿದೆ ಹೂ ಬಾಕಿಯ
ಸುಂಕ. ಯಾರಲ್ಲಿ ಹೇಳಿಕೊಳ್ಳಬೇಕು
ಹೇಳೀಗ? ನನ್ನೊಳಗಿನ
ಸಂಕಟ.

ಚುಟುಕು

ಎಷ್ಟೊಂದು ತುಂಬಿಕೊಳ್ಳುವೆ?
ನನ್ನೀ... ರೂಪವನು, ನಿನ್ನ
ಕಂಗಳ ಬಟ್ಟಲಿನಲ್ಲಿ!!
ರಂಗೀ...
ಹುಷಾರು!! ಅಪ್ಪಿತಪ್ಪಿಯೂ
ಕಣ್ಣೀರನ್ನು ಹಾಕಬೇಡ.
ಮತ್ತೆ ನಾನು ಜಾರಿ ಬಿಳಬೇಕಾದಿತು
ಮಧುಶಾಲೆಯ ಮಾನಿನಿಯ
ತೆಕ್ಕೆಯಲ್ಲಿ!!


ರಂಗೀ

ಸಮಾನ ಮನಸ್ಕರ ಸಾವು,
ನೋವು-ಸಂಕಟಗಳನ್ನೆಲ್ಲವ
ಕಂಡು, ತಳಮಳಿಸುತ್ತಿರುವ
ಈ ಮನಸ್ಸಿಗೆ ಸಂತೈಸುವರಾದರು
ಯಾರು? ರಂಗೀ.....
ಮರೆತು ಬಿಡಿ, ಆದದ್ದು
ಆಗಿ ಹೋಯಿತು ಎನ್ನುವವರ
ಮಧ್ಯೆ, ಹೋದವರೆಲ್ಲ, ಕೈ
ಒರೆಸಿಕೊಂಡು ಬಿಸಾಡುವ "ರದ್ದಿ"
ಹಾಳೆಗಿಂತ ಕಡೆಯೇನು?

ರಂಗಿ..

ಹುಷಾರು....!!
ಬಳ್ಳಿಯಂತಹ ನಡುವಿಗೆ
ಹೂವಿನ ಮುಳ್ಳುಗಳು
ಚುಚ್ಚಿಬಿಟ್ಟಾವು
ರಂಗೀ...
ಹ್ಞೂಂ.... ಅನ್ನು
ಬೇಕಿದ್ದರೆ, ಒಂಬತ್ತು
ತಿಂಗಳಲ್ಲಿ ಹೂವಂತ ಮಗುವನ್ನೆ
ನೀಡುವೆ ಕಂಕುಳಿಗೆ.

Wednesday, October 13, 2021

ಚುಟುಕು

ಎದೆಗೊದ್ದು ಹೋಗುವುದೇನು?
ಬಗೆದು ಹೋಗಿದ್ದರೂ....
ಸಾವರಿಸಿಕೊಳ್ಳುತ್ತಿದ್ದೆ
ರಂಗೀ....
ಬಾಳಿನ ಹಾದಿಗೆ ಬೆನ್ನನ್ನೆ
ತೋರಿಸಿಬಿಟ್ಟಳಲ್ಲ!!!
ಸ್ವಾರ್ಥ ಸಂಬಂಧಗಳು
ನಡೆದು ಹೋಗುವ
ಹಾಗೆ.

Saturday, September 25, 2021

ಚುಟುಕು

ದೇಹಗಳ ಹಸಿವಿನ ಕಾದಾಟಕ್ಕೆ
ಈ ಹೂವುಗಳು
ಆಹಾರವಾಗಬೇಕೇನು?
ಸುಂದ್ರಿ....
ಇರುಳ ಕಳೆದು, ಹೊನಲು
ಮೂಡುವವರೆಗೂ...
ಒಂದು...ಎರಡು..ಮೂರೆಂದು
ಗುಣಿಸುತ್ತಾ, ಹೂಮುತ್ತುಗಳ
ನೀಡುವೆ!
ಇಷ್ಟು... ಸಾಕಲ್ಲವೇನು?

Sunday, September 19, 2021

ಚುಟುಕು

'ತೀರಿ'ಕೊಂಡವರ
ಶೃದ್ಧಾಂಜಲಿಯ ಪುಟವನ್ನಿಲ್ಲಿ...
ಎಷ್ಟು ಬೇಗ
'ತಿರುವಿ' ಹಾಕಿಬಿಡುತ್ತಾರೆ
ಗೊತ್ತೇ...!!?
ವಾರ ಹೋಗಲಿ, ಒಂದು
ದಿನವು ಬಾಧಿಸದವರ ಸಾವಿನ
ನೋವಿಗೆ, ಮಗ, ಅಣ್ಣ, ಗೆಳೆಯ
ತಂಗಿ, ಅಕ್ಕಂದಿರೆಂಬ ಪೊಳ್ಳು
ನಂಟುಗಳ ಕಟ್ಟಿಕೊಳ್ಳುವ
ಗೊಡವೆಯಾದರೂ...
ಬೇಕಿತ್ತೇ...!!?

ಚುಟುಕು

'ತೀರಿ'ಕೊಂಡವರ
ಶೃದ್ಧಾಂಜಲಿಯ ಪುಟವನ್ನಿಲ್ಲಿ...
ಎಷ್ಟು ಬೇಗ
'ತಿರುವಿ' ಹಾಕಿಬಿಡುತ್ತಾರೆ
ಗೊತ್ತೇ...!!?
ವಾರ ಹೋಗಲಿ, ಒಂದು
ದಿನವು ಬಾಧಿಸದವರ ಸಾವಿನ
ನೋವಿಗೆ, ಮಗ, ಅಣ್ಣ, ಗೆಳೆಯ
ತಂಗಿ, ಅಕ್ಕಂದಿರೆಂಬ ಪೊಳ್ಳು
ನಂಟುಗಳ ಕಟ್ಟಿಕೊಳ್ಳುವ
ಗೊಡವೆಯಾದರೂ...
ಬೇಕಿತ್ತೇ...!!?

ಚುಟುಕು

'ತೀರಿ'ಕೊಂಡವರ
ಶೃದ್ಧಾಂಜಲಿಯ ಪುಟವನ್ನಿಲ್ಲಿ...
ಎಷ್ಟು ಬೇಗ
'ತಿರುವಿ' ಹಾಕಿಬಿಡುತ್ತಾರೆ
ಗೊತ್ತೇ...!!?
ವಾರ ಹೋಗಲಿ, ಒಂದು
ದಿನವು ಬಾಧಿಸದವರ ಸಾವಿನ
ನೋವಿಗೆ, ಮಗ, ಅಣ್ಣ, ಗೆಳೆಯ
ತಂಗಿ, ಅಕ್ಕಂದಿರೆಂಬ ಪೊಳ್ಳು
ನಂಟುಗಳ ಕಟ್ಟಿಕೊಳ್ಳುವ
ಗೊಡವೆಯಾದರೂ...
ಬೇಕಿತ್ತೇ...!!?

Thursday, June 17, 2021

ಗಾಲಿಬ್

ಹಾಳೂರ ಸಂತೆಯಲಿ ಹಾಳಾದ ರೋಗವೊಂದು
ಎಲ್ಲರನೂ ನುಂಗಿ ಹಾಕುತಿರಲು, ನೀನೆಲ್ಲಿ ಹಾಳಾಗಿ
ಅಲೆಯುತಿರುವೇಯೊ? ಗಾಲಿಬ್!!
ಈಗಲೋ...ಆಗಲೋ...ಎಂಬಂತೆ ಬಿದ್ದು ಹೋಗಲು
ಹಾತೊರೆಯತ್ತಿರುವ, ಕಲ್ಲು ಕಟ್ಟಡದ ನಡುವೆ
ಹರೆಯದ ಸಕ್ಕರೆಯ ಗೊಂಬೆಯು ಕಾಯುತ್ತಿರುವುದು
ನಿನಗರಿವಿಲ್ಲದೆ ಹೋಯಿತೇನು?

ಹರವಿಕೊಂಡ ನಿಂತ ಈ... ಹೆರಳುಗಳಿಗಿನ್ನು
ಸಾಂಭ್ರಾಣಿಯ ಭಾಗ್ಯ ದೊರೆತಿಲ್ಲ, ಎಣ್ಣೆಯಂತೂ
ದೂರದ ಮಾತು ಗಾಲಿಬ್!!!
ಮೊಳವಿಲ್ಲದಿದ್ದರೂ ಸರಿ, ಅಂಗೈಯಲ್ಲಾಷ್ಟಗದಿದ್ದರೂ..
ಹಾದಿ ಬದಿಯ ಮನೆಯ ಕಂಪೌಡಿನ ಸರಹದ್ದನ್ನು
ದಾಟಿ ಬಂದಂತ ಬಳ್ಳಿಯೊಳಗಿನ ಒಂದೆ...ಒಂದು
ಹೂವಿನ ದಳವಾದರು ಸಾಕು, ಇವುಗಳ ವಿರಹದ
ಹಸಿವು ಇಂಗಿದರೂ ಇಂಗಬಹುದು....

ಮೈ ಮೇಲೆಲ್ಲ ಧರಿಸಿಕೊಂಡಿರುವ ಆಭರಣಗಳೆಲ್ಲ
ಚುಚ್ಚುತ್ತಿವೆ, ಮೊನಚಾದ ಮುಳ್ಳುಗಳ ಹಾಗೆ ಗಾಲಿಬ್!!!
ಗುಂಜಿಯಷ್ಟೂ.... ಬೇಕಿಲ್ಲ ಬಂಗಾರ ನನಗೆ ನಿನ್ನಿಂದ
ಒಮ್ಮೆ... ಒಮ್ಮೆ ನವಿಲುಗರಿಯಿಂದ ಈ ದೇಹ
ಸಿರಿಯನ್ನು ಸವರಿ ಬಿಡಬಾರದೆ? ಅಡಿಯಿಂದ
ಮುಡಿಯವರೆಗೂ.... ಏರಿದ ಬಿಸಿಯ ತಾಪ,
ಚೂರು ತಣ್ಣಗಾದರು ಆಗಲಿ

ಈ ಸಂಜೆಯ ಮಧು ಬಟ್ಟಲಿಗೆ ಒಂದೆ..ಒಂದು
ದಮ್ಮಡಿಯನ್ನು ತೆಗೆದುಕೊಳ್ಳುವುದಿಲ್ಲ ಗಾಲಿಬ್!!
ಅದರದಂಚಿನಲಿ ಹೇಳಿಕೊಳ್ಳಲಾರದಷ್ಟು ನೋವಿದೆ,
ಕಚ್ಚಿಬಿಡು ಗಿಣಿಯಂತೆ, ಹೀರಿಬಿಡು ಗಂಧವನು ದುಂಬಿಯಂತೆ, ನಿನ್ನೊಳಗಿನ ನೋವು ಶಮನವಾಗದಿದ್ದರು ಸರಿ,
ನನ್ನೊಳಗಿನ ವೇದನೆಯನ್ನು ತಣ್ಣಗಾಗಿಸಿದರಷ್ಟೆ ಸಾಕು.

ಅದ್ಹೇಗೆ ಕಾದಳೊ? ಶಬರಿ!!! ರಾಮನಿಗಾಗಿ ಕಲ್ಲಾಗಿ
ಪಾಪ-ಪುಣ್ಯಗಳ ಸುಳಿಯಲ್ಲಿ ಸಿಕ್ಕು, ಹಣ್ಣಾಗಿ
ಹೋದದ್ದು ದೂರಾದೃಷ್ಟವಲ್ಲವೇನು? ಗಾಲಿಬ್!!
ನಾನು...ಹೆಣ್ಣಲ್ಲವೇನು?, ಹಣ್ಣಾಗಿಲ್ಲವೇನು? ಕಲ್ಲಾಗಬೇಕೆನು? ಕಾಯಬೇಕೆನು? ಹರೆಯದ ಹೊರೆಯನೆಲ್ಲ ಪರಿತಪಿಸುವುದರಲ್ಲಿಯೆ...
ಕಳೆದುಕೊಂಡುಬಿಡಲೇನು? ಹೇಳು ಏನು ಮಾಡಲಿ
ನಾನೀಗ... ಗಾಲಿಬ್ ಹೇಳು ಏನು ಮಾಡಲಿ
ನಾನೀಗ..

ಅಕ್ಷರ ಬಡವ.

Monday, June 14, 2021

ಚುಟುಕು

ಮಲ್ಲಿಗೆ ಮುಡಿದು
ನೀ.. ಹೀಗೆ ನಾಚಿ
ನಿಂತಿರಲು, ನೂರೆಂಟು
ಹೂ ಮಾತುಗಳ
ಗೊಡವೆಯೇತಕೆ?
ಬೇಕಿದ್ದರೆ, ಕಾಲ್ಬೆರಳ
ತುದಿಯಿಂದಲೆ ಗೀರಿ
ಒಪ್ಪಿಗೆಯನ್ನು ಸೂಚಿಸಿಬಿಡು!
ತಣ್ಣನೆಯ ಮೌನದಲ್ಲಿ
ಕೊಲ್ಲುವ ಈ....
ಸಂಚಾದರೂ... ಏತಕೆ?

Sunday, June 13, 2021

ಚುಟುಕು

ಕತ್ತಲ ಗರ್ಭದೊಳಗೆ
ನನ್ನೊಬ್ಬಳನ್ನೇಕೆ
ದೂಡಿಬಿಟ್ಟೆ?
ಗೆಳೆಯಾ......
ಬಾಳು 
ಬೆಳಗುವುದಂದರೇನು?
ಸಿಗರೇಟಿನ ತುದಿಗೆ
ಕಡ್ಡಿಯನ್ನು ಗೀರಿದಷ್ಟು
ಸುಲಭವೆಂದುಕೊಂಡುಬಿಟ್ಟೆಯೇನು?

ಹಾಗೆ

ಅವಳಿಂದ ಮೋಸ ಹೋದ ವಿಷಯವನ್ನು 
ಮದಿರೆ ಮನೆಯಲ್ಲೂ ತೋಡಿಕೊಳ್ಳುತ್ತಿರುವೆಯಲ್ಲೊ 'ಹುಚ್ಚ'

ಇಲ್ಲಿ ಮದಿರೆಯೊಳಗು ಹುಳಿ
ಹಿಂಡುವ ಜನರಿದ್ದಾರೆ!


ಶಾಯರಿ

ನಿನ್ನ ಕಳೆದು
ಹೋದ ಹೊನ್ನ
ಮದಿರೆ ಬಟ್ಟಲನ್ನು
ಬೇಕಿದ್ದರೆ ನಾನು ತಂದು
ಕೊಡಬಲ್ಲೆ
ಸಾಕಿ...
ರಂಗೀಯೊಂದಿಗೆ
ಕಳೆದ ಸುವರ್ಣ
ದಿನಗಳನ್ನು ಮತ್ತೆ
ನೀ.. ತಂದು
ಕೊಡಬಲ್ಲೆಯೇನು?

Saturday, June 12, 2021

ಚುಟುಕು

ಇಲ್ಲಿ....
ಕರೋನಾದ ಹಾವಳಿ
ಹೆಚ್ಚಿದೆ, ನೋಡಬೇಡ
ನೀನು....ಹೀಗೆ 
ಸುಮ್ಮನೆ!
ಜೇಬಿನಲ್ಲಿ 'ಕಾಸಿಲ್ಲ',
ತನು-ಮನವು ಉರಿಯುವಂತೆ
ಮಾಡಬೇಡ ನೀ...
ಹಚ್ಚಿ, ಹಸಿ-ಬಿಸಿಯ
ಕಾಮನೆ!

Monday, June 7, 2021

ಶಾಯರಿ

ಸಾಲು...ಸಾಲು..
ಆತ್ಮೀಯರ ಸಾವುಗಳ ಕಂಡು, 
ಕಣ್ಣೊಳಗಿನ
ಕಣ್ಣೀರ ಕೊಳವು
ಬತ್ತಿ ಹೋಗಿದೆ
ಸಾಕಿ...
ಎದೆಯೊಳಗಿನ ದುಃಖಕ್ಕೀಗ
ಮಧುಶಾಲೆಯೊಳಗಿನ 
ಮಧುವೇನು ಬೇಕಿಲ್ಲ. 
'ಕಡ' ಕೊಡುವುದಾದರೆ
ಒಂದಿಷ್ಟು ಕಣ್ಣೀರನ್ನು 
ಕೊಡು!!

ಅಕ್ಷರ ಬಡವ.

Monday, May 24, 2021

ಕಾದಂಬರಿ ವಿಮರ್ಶೆ

#ಕಾದಂಬರಿ_ನಿರ್ಣಯ

#ಕಾದಂಬರಿಕಾರ_ಶರಣಪ್ಪ_ಬೇವಿನಕಟ್ಟಿ

ಸೃಜನಶೀಲ ಬರೆಹಗಾರರಾದ ಶರಣಪ್ಪ ಬೇವಿನಕಟ್ಟಿ ಅವರ ಸೃಜನಶೀಲ ಕೃತಿ #ನಿರ್ಣಯ, ನನಗೆ ಯಾವುದು ಸರಿಯೆಂದು ನಿರ್ಣಯಿಸುವಲ್ಲಿ ಗೊಂದಲವನ್ನೇ ಉಂಟು ಮಾಡಿದ ಕೃತಿ. ಈ ಕೃತಿ ಓದಿದ ನಂತರ ಮತ್ತೆ ಮತ್ತೆ ಕಾಡುವ ಗುಣವನ್ನು ಹೊಂದಿದ್ದು ಮನಸಿಗೆ ಅತೀವವಾದ ನೋವನ್ನು‌ ನೀಡಿತು. ಹಾಗೆಂದು ಕೃತಿಯ ದೋಷವಲ್ಲ, ಅದು ಕೃತಿಯ ಶ್ರೇಷ್ಠತೆ. ಇಂತಹ ಒಂದು‌ ಕಾಡುವ ನೋವನ್ನು ನೀಡುವ ಕೃತಿ ನೀಡಿದ ಶರಣಪ್ಪ ಬೇವಿನಕಟ್ಟಿ ಅವರಿಗೆ ಅಭಿನಂದನೆಗಳನ್ನು ಕೋರುವೆ.

ಇಂದು ಬೆಳಿಗ್ಗೆ ಎದ್ದವನೇ #ನಿರ್ಣಯ ಪುಸ್ತಕ ಹಿಡಿದು ಕುಳಿತೆ. ಓದಲು ಆರಂಭಿಸಿದ ಮೇಲೆ ಅದನ್ನು ಪೂರ್ಣಗೊಳಿಸಿಯೇ ಬಿಟ್ಟದ್ದು, ಅದರ ನಡುವೆ ಮಡದಿ ತಂದ ಚಹಾ ಓದಿನೊಡಗೂಡಿಯೇ ಮುಗಿದದ್ದು ವಿಶೇಷ. ಬಹು ವರ್ಷಗಳ ನಂತರ ಈ ರೀತಿ ಪುಸ್ತಕ ಓದಿದ್ದು ಇದೇ ಮೊದಲು. ಶಾಲಾ ಅವಧಿ, ಕಾಲೇಜು ದಿನಗಳಲ್ಲಿ ನಾನೊಬ್ಬ ಓದಿನ ರಾಕ್ಷಸನಾಗಿದ್ದೆ. ಈಗ ಓದೇ ಅಪರೂಪವಾಗಿ ಹೋಗಿದೆ. ಅದರ ನಡುವೆಯೂ ಬರೆಹವಂತೂ ನಿಂತಿಲ್ಲ. ಬರೆಹಕ್ಕಿಂತ ಓದು ಬಹು ಮುಖ್ಯ. ಓದಿನ ಪರಿಪಕ್ವತೆ ಇಲ್ಲದಿದ್ದರೆ ಬರೆಹ ಹೇಗೆ ಸಾರ್ಥಕವಾಗುತ್ತದೆ ಹೇಳಿ. ಅದು ಇರಲಿ ಬಿಡಿ. ಇತ್ತ ಶರಣಪ್ಪರ ಚಿಂತನಾಶೀಲತೆ, ಬದುಕಿನ ಸಂವೇದನಾ ಶೀಲ ಗುಣಧರ್ಮ, ಸತ್ಯದ ಹುಡುಕಾಟದಲ್ಲಿ ನೊಂದವರ ಬದುಕ ದೌರ್ಬಲ್ಯ ಮತ್ತು ಅದರ ಪರಿಣಾಮಗಳ ಘೋರತೆ ಕಾದಂಬರಿಯ ವಸ್ತು. ವಸ್ತುವಿನ ಆಯ್ಕೆ ಬಹಳ ಸುಂದರ ಮತ್ತು ಪ್ರಸ್ತುತವೂ ಹೌದು. ಆದರೆ ಕಥೆಯ ಅಂತ್ಯ ಅತ್ಯಂತ ಹೃದಯ ವಿದ್ರಾವಕವಾದುದು. ಗ್ರೀಕ್ ರುದ್ರ ನಾಟಕಗಳ ಪ್ರೇರಣೆ ಈ ಕಾದಂಬರಿಯಲ್ಲಿ ಕಾಣಬಹುದು. 

ಅಖಿಲ್ ಮತ್ತು ರಮೇಶ ಎಂಬೀರ್ವರ ಸುತ್ತ ಸುತ್ತುವ ಕಥೆಯು ಅವರ ಅತಿ ಘೋರವಾದ ಸವಾಲುಗಳ ನಡುವೆ ನರನರಳಿ ಸಾಗುವ ಬದುಕಿನ ಪಥ ಓದುಗನನ್ನು ಅತಿಯಾಗಿ ಕಾಡುತ್ತದೆ. ಸಾಮಾನ್ಯ ವರ್ಗದ ಜನರ ಜೀವನದ ಕಠೋರ ಸತ್ಯಗಳು ಕಥೆಯ ಕೇಂದ್ರ ವಸ್ತುವಾದರೂ ಅದರ ಮಹತ್ತರವಾದ ಉದ್ದೇಶ ಸಮಸ್ಯೆಯ ಪರಿಹಾರಕ್ಕೆ ತುಡಿಯುವಾಗ ಆಗುವ ಸಮಸ್ಯೆ ಮತ್ತು ಸವಾಲುಗಳನ್ನು ಓದುಗನಿಗೆ ಹೃದಯಸ್ಪರ್ಶಿ ಮುಟ್ಟುವಲ್ಲಿ ಕೃತಿ ಗೆಲ್ಲುತ್ತದೆ. 

ರಮೇಶ ಕೌಟುಂಬಿಕ ಬದುಕಿನಲ್ಲಿ ಕಾಣುವ ವ್ಯಥೆ, ಇಂದಿನ ಸಮಾಜದಲ್ಲಿನ ಅನಂತ ಕುಟುಂಬಗಳ ಸತ್ಯದ ಕಥೆಯೇ ಹೌದು.  ಅಖಿಲನ ಕಥೆಯು ಸಹ ಹೊರತಾದುದಲ್ಲ. ಆರಂಭದಲ್ಲೇ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತಾ ಸಾಗಿ, ಕೊನೆಯಲ್ಲಿ ಕುತೂಹಲ ಮೈನವಿರೇಳಿಸುವ ಬರೆಹವಿದೆ. ಬದುಕಿನ ಸ್ವಾರ್ಥಕ್ಕಾಗಿ ತೆಗೆದುಕೊಳ್ಳುವ ನಿರ್ಣಯ ಅದೆಷ್ಟು ಮುಖ್ಯ ಎಂಬುದನ್ನು ಕಾದಂಬರಿ ಸಮರ್ಪಕವಾಗಿ ಸಾಧಿಸುತ್ತದೆ. 

ಒಬ್ಬ ಕಾದಂಬರಿಕಾರನಿಗೆ ಇರುವ ತಂತ್ರಗಾರಿಕೆ ಶರಣಪ್ಪರಿಗೆ ಸಿದ್ಧಿಸಿದೆ. ಮನೋವಿಜ್ಞಾನದ ಪ್ರಯೋಗಶೀಲತೆ, ವಾಸ್ತವದ ಸವಾಲುಗಳ ನಡುವೆ ಉಂಟಾಗುವ ಜಿಜ್ಞಾಸೆಗಳ ಮೂಲಕ ಕಾದಂಬರಿ ವಾಸ್ತವದ ಕಟು ಸತ್ಯವನ್ನೇ ಸಾಧಿಸುತ್ತಾರೆ. ಪಾರ್ಕಿನ ಸುತ್ತ ಆರಂಭವಾದ ಕತೆಯು ಪಾರ್ಕಿನ ನಡುವೆ ನಡೆವ ಕೆಲವು ಅಗೋಚರಿತ ವಿದ್ಯಮಾನಕ್ಕೂ ಸೂಕ್ಷ್ಮವಾದ ಸಂಕಲ್ಪಿಸಿ, ೫೦೦ ರೂಪಾಯಿ ಪಡೆದುದು ಅಷ್ಟಾಗಿ ಒಪ್ಪದಿದ್ದರು ಒಪ್ಪವಾಗಿಸಿದ್ದಾರೆ. ಅಂತ್ಯದಲ್ಲಿನ ತಿರುವು ತೀವ್ರವಾಗಿ ಓದುಗನಿಗೆ ಅಚ್ಚರಿಯ ಫಲಿತವನ್ನು ನೀಡುತ್ತದೆ. 

ಕಾದಂಬರಿಯನ್ನು ಸವಿವರವಾಗಿ ತಿಳಿಸಲು ಬಯಸಲಾರೆ. ಏಕೆಂದರೆ ಓದುಗನಿಗೆ ಕಾತುರತೆ ಇಲ್ಲವಾಗುತ್ತದೆ. ಕಾದಂಬರಿ ಎಲ್ಲರೂ ಓದಬೇಕಾದ ಗುಣಧರ್ಮಗಳನ್ನು ಹೊಂದಿದೆ. ಹಾಗಾಗಿ ಎಲ್ಲರೂ ಓದುವಂತೆ ಕೋರುವೆ. ಇಂದಿನ ಬರೆಹಗಾರರಿಗೆ ಬರೆಯುವುದೊಂದೇ ಧರ್ಮವಾಗಿ ಓದಿನ ಭಾವ ಇಲ್ಲದಾಗಿ ಬರೆಹಗಳು ನಿಸ್ಸಾರವಾಗಿವೆ. ಓದು ಕಾಡಬೇಕು, ಎದೆಯ ಪೀಡಿಸಬೇಕು, ಮತ್ತೆ ಮತ್ತೆ ಯೋಚಿಸಬೇಕು. ಅದೇ ಕೃತಿಯ ಗೆಲುವು. ಈ ನಿಟ್ಟಿನಲ್ಲಿ ಶರಣಪ್ಪ ಯಶಸ್ವಿಯಾಗಿದ್ದಾರೆ. 

ಕೃತಿ ಸಂಪೂರ್ಣಗೊಂಡ ಬಳಿಕ ನಿರುತ್ತರನಾಗಿ ಕುಳಿತ ನನಗೆ "ಏನಾಯ್ತು ರೀ ನಿಮಗೆ" ಎಂದು ಮಡದಿ ಪ್ರಶ್ನಿಸಿದಾಗ ಮೌನವೊಂದೇ ಉತ್ತರವಾಯಿತು. ಇಂತಹ ಕೃತಿಯ ಓದು ನಮಗೆ ಬೇಕು. ಆದರೆ ಬಡತನದವರು ಧರ್ಮ, ಸತ್ಯ, ನ್ಯಾಯದ ಪಥ ಹಿಡಿದು ಸೋಲುತ್ತಾರೆ ಆದರೆ ಸಿರಿವಂತರಿಗೆ ಇದರ ಹಂಗಿಲ್ಲ  ಆದರೂ ಗೆಲ್ಲುತ್ತಾರೆ. ಇಲ್ಲಿ ಈ ದ್ವಂದ್ವಗಳು ನನಗೆ ಕಾಡುವ ಪ್ರಶ್ನೆಯಾಗೇ ಉಳಿದವು. ಇವುಗಳಿಗೆ  ಉತ್ತರ ಏಕಿಲ್ಲ. ಕತೆಯನ್ನು ಸುಖಾಂತ್ಯಗೊಳಿಸಿದ್ದರೂ ಚೆನ್ನಾಗಿತ್ತು. ಆದರೆ ಕಾದಂಬರಿಕಾರ ಈ ಪ್ರಯತ್ನಕ್ಕೆ ಕೈಹಾಕದೇ ಗೆದ್ದಿದ್ದಾನೆ. 

ಒಟ್ಟಾರೆ #ನಿರ್ಣಯ ಕಾದಂಬರಿಯನ್ನು ಓದಿ ಅದರ ನಿರ್ಣಯವನ್ನು ನೀವೇ ಹೇಳಬೇಕು. ಇದು ನನ್ನ ಅನುಭವಕ್ಕೆ ದಕ್ಕಿದ್ದು. ಸೂಪರ್ ಶರಣಪ್ಪರೇ. ನಿಮ್ಮ ಬರೆಹಕ್ಕೊಂದು ಶರಣು.

👌👌👌👌🙏🙏🙏🙏

ಪ್ರೀತಿಯಿಂದ,.

ಡಾಕೇಶ್ ತಾಳಗುಂದ
೨೪.೦೫.೨೦೧೯

Monday, April 12, 2021

ಮಾಂವ

ನೀನಿಲ್ದ ಹೊತ್ತನ್ಯಾಗ, ಕರೆಂಟು
ಆಟ ಆಡಾಕ ಹತ್ತೈತಿ!
ಹಚ್ಚಿಟ್ಟ ಕಂದೀಲು ಸಣ್ಣ..ಗ ಹೊತ್ತ
ತಿನ್ನಾಕುಂತೈತಿ!
ಬ್ಯಾಸ್ಗಿ ಝಳ.. ಮೈ ಮ್ಯಾಲಿನ ಬಟ್ಟಿನೆಲ್ಲ
ತೊಯ್ಸಿ ಬಿಟ್ಟೈತಿ!
ಸುಡುಗಾಡ ಹಳೆ ನೆಪ್ಪೊಂದು ನೆನಪಾಗಿ
ಮೈಗೆಲ್ಲಾ ಬೆಂಕಿ ಹಚ್ಚಿ ಮಲಗಿಬಿಟ್ಟೈತಿ!

ಬೆಳಕ ಹರದ್ರ...ಯುಗಾದಿ ಐತಿ, ಬೇಗ ಬಂದು
ಕೊಡಬಾರದೇನೊ? ಗಲ್ಲಕ್ಕೊಂದು ಬೆಲ್ಲ!
ಸಿಹಿ ಬಿಟ್ಟು, ಬರೀ ಕಹೀ...ನ ಕೊಟ್ರ
ನಾ..ಹ್ಯಾಂಗರ ತಡಕೊಳ್ಳಲೊ ನಲ್ಲ!
ತೊಳದಿಟ್ಟ ಅನ್ನದ ಬೊಗೊಣಿ ಹಂಗ,
ಬರಿಗೈಯ್ಲೆ ಕಾಯಕ ಹತ್ತಿನೊ ಮಲ್ಲ!

ಬಿಸಿ ಜೋಳದ ರೊಟ್ಟಿ ಮ್ಯಾಲಿಟ್ಟ
ಬೆಣ್ಣಿಯಂತಾಗಿ ನಾ... ಕರಗಿ ಹೊಂಟೇನಿ!
ಎಷ್ಟ ಹಾರಾಡಿ, ಜಿಗಿದಾಡಿದ್ರು ಕೈಗೆ ಸಿಗ್ದ ಹಾಲನ್ನ
ಕಂಡ, ಚಟಪಟ ಒದ್ದಾಡೊ ಕಳ್ಳ ಬೆಕ್ಕನಂಗ ಆಗೀನಿ!

ಮೈ ಮ್ಯಾಲ ನಿನ್ ಮುತ್ತಿನ ಅಚ್ಚಿಲ್ದನ, ಮಣಭಾರ
ಬಂಗಾರದ ಸಾಮಾನ ಹಾಕ್ಕೊಂಡ ನಿಂತಿನಿ!
ಮತ್ತ ಇಳಿಲಾರ್ದನ ಗುಂಗ ಹಿಡ್ಸಾಕುಂತೈತಿ
ಮದ್ಯಾನದಾಗ...ಮುಡ್ಕೊಂಡ ಮಲ್ಗಿ ಹೂವಿನ
ವಾಸ್ನಿ!

ನಕ್ಕೆನಂದ್ರ ನಗು ಬರಾವಲ್ದು, ಅತ್ತೆನಂದ್ರ ಅಳು ಬರಾವಲ್ದು, ಏನೂ... ತಿಳಿದಂತ ಮಳ್ಳಿಯಂತಾಗಿನಿ!
ಇಳಕಲ್ ಸೀರಿ ಬ್ಯಾಡ, ಗುಳೇದಗುಡ್ಡದ ಖಣ ಬ್ಯಾಡ
ನಕ್ರ, ಸಾವ್ರ ಮುತ್ತ ಸುರಿಸೊ ಆ ನಗು ಮುಖಾನ
ಹೊತ್ಗೊಂಡ ಯಾವಾಗ ಬರ್ತೀಯಂತ ಕಾಯಾಕ
ಹತ್ತೀನಿ.... ನಾ ಕಾಯಾಕ ಹತ್ತೀನಿ...

Saturday, April 3, 2021

ರಂಗೀ..

ಹೀಗೇತಕೆ?
ಕೊರಡಾಗಿಸಿಬಿಟ್ಟೆ
ಎದೆಯ ಗೂಡನ್ನು!!
ರಂಗೀ...
ಸಾಧ್ಯವಾದರೆ ಸುಟ್ಟು
ಹಾಕಿಬಿಡು, 'ಪೀಡೆ' ತೊಲಗಿದರು
ತೊಲಗಬಹುದು!!
ಕಾರಣವಿಷ್ಟೆ. ಹನಿ ಕಣ್ಣೀರು
ಬಿದ್ದರು...ಮತ್ತೆ
ಚಿಗುರಬಲ್ಲದು ನಿನ್ನ
ಹೆಸರಿನಲ್ಲೆ!

Saturday, March 13, 2021

ಚುಟುಕು

ಸ್ಥಿರವಾಗಿ ನಿಂತಿದೆ
ಕುಡಿದು ತೂರಾಡುವಂತೆ
ಮಾಡುವ, ಬಾರೊಳಗಿನ
ಎಣ್ಣೆಯ ರೇಟು!!
"ಗಿರ್ರೆನ್ನಿಸುತ್ತಿದೆ"
ಕುಡಿಯದೆ ಇರುವವರ
ತಲೆಯನ್ನು.
ದಿನೆದಿನೆ ಏರುತ್ತಿರುವ
ಅಡುಗೆ ಮನೆಯ
ಎಣ್ಣೆಯ ರೇಟು!!

Sunday, March 7, 2021

ಶಾಯರಿ


ಆರಿ ಹೋದ
ಐದು ರೂಪಾಯಿಯ
ಚಹಾಕ್ಕೆ, ಎಂಟಾನೆ ಪ್ಲಾಸ್ಟಿಕ್
ಕಪ್ಪಿನ ಬೆಲೆಯೂ ಇಲ್ಲ
ಸಾಕಿ...
ನಿನ್ನಿಂದೇನೂ... ಆಗದು
ಎಂದರಿವಾದಕ್ಷಣವೆ, ಎಸೆದು 
ಬಿಡುತ್ತಾರೆ! ತೂಗು ತಕ್ಕಡಿ
ಯೊಳಗಿನ ಹುಳುಕು
ಬದನೆಯಂತೆ.