Monday, July 1, 2024

ಗಾಲಿಬ್

ಹುದೋಟದ ತುಂಬೆಲ್ಲ... ಬಗೆಬಗೆಯ
ಹೂಗಳು ಅರಳಿ ನಿಂತಿವೆ, ಒಂದೇ...ಒಂದು
ದುಂಬಿಯೂ ಇತ್ತ ಸುಳಿಯುತ್ತಿಲ್ಲವಲ್ಲ ಗಾಲೀಬ್...
ಅವುಗಳ ಹಾಗೆ ನಿನಗೂ... ನನ್ನದರದ ಸವಿ
ಸಪ್ಪೆಯಾಯಿತೇನು..? ಇಲ್ಲವೆ, ಮತ್ತೇರಿಸುವ
ಮದಿರೆಯೇನಾದರು... ಮಜ್ಜಿಗೆಯಾಯಿತಾ...?

ಹಿಂದಿನ ದಿನಗಳ ಹಾಗೆ ಎದೆಯೀಗ ಬಿಗಿಯುತ್ತಿಲ್ಲ..!!
ಜೋತು ಬಿಳುತ್ತಿದೆ.., ಬಳ್ಳಿಯ ನಡುವಿನ ಸುತ್ತ...
ಹರೆಯ ಕಳಚಿದ ಹೆಬ್ಬಾವೊಂದು ಬಳಿದು ಬಿಗಿಯುತ್ತಿದೆ
ಗಾಲೀಬ್...
ಮಾರುಕಟ್ಟೆಯಲ್ಲಿ ಸುಕ್ಕುಗಟ್ಟಿದ್ದಕ್ಕೆ ಯಾವಾಗಲೂ
ಬೆಲೆ ಕಡಿಮೆಯೆ...
ಇಲ್ಲಿ ಹಸಿದವರಿಗಿಂತ, ಹೊಟ್ಟೆ ತುಂಬಿದವರಿಂದ ಚೌಕಾಸಿಯೆ ಜಾಸ್ತಿ..

ಹುಗಿಯುವ ಸ್ಮಶಾನಗಳು ಎಷ್ಟೊಂದು ಸುಂದರವಾಗಿವೆ
ಗೊತ್ತಾ....!!, ಹೆಣ ಹೋದರೆ ಸಾಕು ಮದುವಣಗಿತ್ತಿಯಂತೆ ಅದು ಸಿಂಗಾರಗೊಳ್ಳುತ್ತದೆ..!!
ಗಾಲೀಬ್...
ನಾನು ಹೊರಟುಬಿಡಲೆ, ಒಂದು ಮದ್ಯದ ಹೂಜಿಯನ್ನು ಹೊತ್ತುಕೊಂಡು...ಅಲ್ಲಿಗೆ..!!
ನನ್ನಲ್ಲಿ ಬರುವ ಗಿರಾಕಿಗಳ ಕೊನೆಯ ನಿಲ್ದಾಣ
ಅದೆ ಅಲ್ಲವೇನು...?

ಲೋಕಕ್ಕೆ ವಾಸಿ ಮಾಡಿಕೊಡುವ ಕಹಿಯ ಇಷ್ಟವಿಲ್ಲ
ಒಳಗೊಳಗೆ ಕೊಳೆತು ನಾರಿಸುವ ಸಿಹಿಯೆ ಬೇಕು..
ಗಾಲೀಬ್ ಸಿಹಿಯೆ ಬೇಕು..!!
ಯಾಕೋ...ನನ್ನ ಸರತಿ ಬಂದಂತೆನಿಸುತ್ತಿದೆ ನನಗೆ
ಈ ಸಂಜೆಗೆ ನಿ ಬರುವೇಯೊ ಇಲ್ಲವೊ...?
ಬಟ್ಟಲಲ್ಲಿ ನಿನ್ನ ಪಾಲಿನ ಮದ್ಯವನ್ನು ಎತ್ತಿಟ್ಟಿದ್ದೇನೆ
ಹಾಗೆ ಹೋದರೆ ನಾನೂ ಮೋಸಗಾತಿಯೆ...
ಆಗುವುದಿಲ್ಲವೇನು..ನಿನ್ನ ಪಾಲಿಗೆ...

Friday, June 28, 2024

ಚುಟುಕುಗಳು


ಮುಡಿಯಲ್ಲಿ ಕೇವಲ
ಹೂವನ್ನು ಮುಡಿಸಿ ಹೋದ
ಮಾತ್ರಕ್ಕೆ... ಆಗಿಬಿಡುವೆಯಾ..?
ನೀ...ನಲ್ಲ..!!
ಕಾದು...ಕಾದು.. ಹಂಚಾಗಿ
ಹೋದ, ಗಲ್ಲದ ಮೇಲೊಂದು
ಸಿಹಿ ಮುದ್ರೆಯನೊತ್ತದೆ
ಸತಾಯಿಸುವಂತವನು
ಹೇಗೆ ಸಂಗಾತಿಯಾಗುವೇಯೊ?
ನೀ...ನಲ್ಲ..!!

ಅವಳಂದು
ಹೂವನ್ನು ಹಿಡಿದು
ಎದುರಿಗೇತಕೆ
ಬಂದು ಹೋದಳೋ...!!?
ನಾನದೇಷ್ಟು
ಸುಖವಾಗಿದ್ದೆ...!!
ಕಲ್ಲು ಹೊಡೆಯುವವರ
ಸಂತೆಯಲ್ಲಿ...!!

ಪ್ರತಿ ಸಂಜೆಗೂ...
ಮದ್ಯದ ಬಾಟಲಿಯನ್ನು
ಹಿಡಿಯುತ್ತೇನೆ...!!
ಅವಳ
ನೆನಪುಗಳೆಂದೂ
ಸೋಲುವುದೆ ಇಲ್ಲ..!!

ನನ್ನ ಪದಗಳಲ್ಲಿ
ಕಾಮವನ್ನು ಹುಡುಕಬೇಡಿ..
ಅದು ನಿಮಗೆ
ಸಿಗುವುದಿಲ್ಲ...!!
ಪ್ರೇಮವನ್ನಂತೂ
ಮೊದಲೇ.. ಹುಡುಕಬೇಡಿ..
ಯಾಕೆಂದರೆ ಅದೇ
ನನಗಿನ್ನೂ....
ಸಿಕ್ಕಿಲ್ಲ..!!

ಈ ಅಮಲುಗಣ್ಣಿನಲ್ಲಿ
ಅವಳ ಚಿತ್ರವನ್ನು
ಹುಡುಕಲು ಪ್ರಯತ್ನಿಬೇಡಿ...!!
ಒಲವಿನ ಕೆಸರಿನಲ್ಲಿ
ಬಿದ್ದವನು ನಾನು...
ಗಟಾರಿನಲ್ಲಿ ಬೀಳದ ಹಾಗೆ
ಒಂದು ಮೂಲೆಯಲ್ಲಿ
ಮಲಗಿಸಿಬಿಡಿ...!!

ಅಂಗಡಿ ಮಾಲೀಕ...
ಮದ್ಯದ ಬಾಟಲಿಗೆ ದುಪ್ಪಟ್ಟು
ದರವನ್ನೇನು ಪಡೆದುಕೊಂಡ
ನಿಂದು... ಆದರೆ
ಮತ್ತೇನು ಹೆಚ್ಚಾಗಲಿಲ್ಲವಲ್ಲ...!!
ಅವಳ ಏರಿಸಿದ ನಶೆಗೆ
ಬೆಲೆಯೆ ಇಲ್ಲ....
ಇಂದಿಗೂ.. ಇಳಿಯುತ್ತಲೆ
ಇಲ್ಲ...!!

ಅವಳ ಮನೆಯ
ಹಾದಿಯಲ್ಲಿ ನನ್ನ ಹೆಜ್ಜೆ
ಗುರುತುಗಳನ್ನು
ಹುಡುಕುತ್ತ ಹೋಗಬೇಡಿ..!!
ಅಲ್ಲಿಗ ದಿನಕ್ಕೊಂದು
ಗುರುತುಗಳು ಸಿಗುತ್ತ
ಹೋಗುತ್ತವೆ..

ಮದ್ಯದ ಜೊತೆಯಲ್ಲಿ
ಇಟ್ಟ..‌ ಉಪ್ಪಿನಕಾಯಿಗೂ
ಬೂಸ್ಟ್ ಹತ್ತಿದೆ...
ಅವಳ ನೆನಪುಗಳಂತೆ..
----
ಕೇವಲ...
ಅವಳ ನೆನಪುಗಳನ್ನು
ಮರೆಯಲು ಇದ್ದ-ಬದ್ದ
ಆಸ್ತಿಯಲ್ಲ ಹರಾಜಾಗಿ
ಹೋಯಿತಲ್ಲ...!!
ಹಾಳಾದ್ದು ಈ ಜೀವ
ಹೋಗಲಿಲ್ಲ...!
ಹತ್ತು ಪೈಸೆ ಬೆಲೆನೂ
ಇಲ್ಲದಾಗಿ ಹೋಗಿದೆ
ಈಗ...

ನೆತ್ತಿಗೆ ನಿಂಬೆ ಹಾಕಿ
ತಿಕ್ಕಿದರೂ... ಪಿತ್ತ
ಇಳಿಯಬಹುದು...
ಅವಳ ಮತ್ತಲ್ಲ...!!
ಮರೆತುಬಿಡು
ಎನ್ನುತ್ತದೆ ಜಗತ್ತು..!!
ಅವಳ ಬಗ್ಗೆ ಜನರಿಗೆ
ಇನ್ನೂ ಸರಿಯಾಗಿ
ಗೊತ್ತಿಲ್ಲ..!!

ಎಲ್ಲರೂ ಬೈಯ್ಯುತ್ತಾರೆ
ಅವನು ಕುಡಿದ
ಅಮಲಿನಲ್ಲಿದ್ದಾನೆ ಬಿಡಿ ಎಂದು..!!
ವಾಸ್ತವದ ಅರಿವು
ಅವರಿಗಿಲ್ಲ..!!
ಕಾಣದ ಭವಿಷ್ಯದ
ಕುರಿತು ನನಗಂತೂ
ಭಯವಿಲ್ಲ..!!

ತಪ್ಪೇನಿದೆ...!!
ಬುದ್ಧನೆ ಅವನ
ಮಡದಿಗೆ ಹೇಳದೆ
ಅರಮನೆಯಿಂದ ಎದ್ದು
ಹೋದದ್ದಲ್ಲವೇನು..?
ಇನ್ನೂ ಇವಳು
ನನ್ನ ಮನಸ್ಸಿನಿಂದ
ಹೇಳದೆ ಹೊರಟು ಹೋದದ್ದು
ನ್ಯಾಯವೆ ಬಿಡಿ..


ಒಂದು ಗುಟುಕಿಗೆ...
ಎದೆಯಲ್ಲ ಉರಿದು
ಹೋಯಿತು....!!
ನಿತ್ಯ ನನ್ನ ನೆನಪಿನಲ್ಲಿ
ಮದ್ಯದಲ್ಲಿಯೇ...
ಮುಳುಗಿರುವ
ಅವನ ಪಾಡು ಏನಾಗಿರಬೇಡ...!!

ಅವಳು ಬಿಟ್ಟು
ಹೋದ ಹಾದಿಗೆ
ಹೂಗಿಡವೊಂದನ್ನು
ನೆಟ್ಟುಬಿಡುತ್ತೇನೆ..
ಮೋಸದ ವಾಸನೆ
ದಾರಿಹೋಕರಿಗೆಲ್ಲ
ಬಡಿಯದಿರಲಿ..

ಪ್ರೀತಿಸಿದಾಗ
ಅವಳೊಂದೆ... ಕಡ್ಡಿಯನ್ನು
ಗೀರಿ ಹೋಗಿದ್ದಳು...!!
ಸತ್ತ ಮೇಲೆ...
ಸಾವಿರ ಜನ, ನೂರು
ಕಟ್ಟಿಗೆಗಳನ್ನಿಟ್ಟು
ಸುಟ್ಟು
ಹೋದರು...!!


ನಿನ್ನ ಹಣೆಯ
ಬರಹವನ್ನು ಬದಲಿಸಿದವರಾರು?
ಕೇಳಿದವರಿಗೆಲ್ಲ....
ಬಿದ್ದು,  ಕೊಳೆತು
ಹೋಗುತ್ತಿರುವ
ಹೂವಿನ ಜಾಗವನ್ನು
ತೋರಿಸಿದೆ..
ಅವಳ ಮನೆಯ
ದಾರಿಯನ್ನು
ತೋರಿಸಿದೆ...


ಜೇಬಿನಲ್ಲಿ
ಕಾಸಿಲ್ಲದಿದ್ದರೂ...
ಹೃದಯದಿಂದ
ಶ್ರೀಮಂತನಾಗಿರಬೇಕಂತೆ...!!
ಅವಳಿಂದಾಗಿ,
ನಾನಲ್ಲೂ..
ಫಕೀರನಾಗಿದ್ದೇನೆ..!!

ಮಾತುಗಳಿಂದ
ಹುಷಾರಾಗುವ ಹಾಗಿದ್ದರೆ
ನಾನೆಂದೊ...ಎದ್ದು
ಅಡ್ಡಾಡುತ್ತಿದ್ದೆ...!!
ಆ ಮಾತುಗಳನ್ನು ನೆಚ್ಚಿ
ತಾನೆ, ನಾನಿಲ್ಲಿ
ಮಲಗಿರುವುದು..!

ಹೊತ್ತು ಮೀರಿದ
ಮೇಲೆ, ಹೂವು ಬಾಡಿ
ಹೋಗುತ್ತದೆ...!!
ದಿನಗಳು ಕಳೆದು
ಹೋದಂತೆ... ಹರೆಯವು
ಬಸಿದು ಹೋಗುತ್ತದೆ..!!
ಗೆಳೆಯ
ಪೂಜಿಸದೆ ಹೋದ
ಹೂವು...
ಚುಂಬಿಸಿಕೊಳ್ಳದೆ ಕಳೆದ
ಯೌವ್ವನ... ಎರಡು
ನಿರರ್ಥಕವಲ್ಲವೇನು..?


ಅದು ಹೇಗೆ ನನ್ನನ್ನು
ಸಂಪೂರ್ಣವಾಗಿ
ಮರೆತು ಹೋಗಿರುವಳೋ...!!
ನಾನೀನ್ನೂ...
ಅವಳು ಬಿಟ್ಟುಹೋದ
ತಿರುವಿನ ಹೆಸರನ್ನೆ
ಮರೆತಿಲ್ಲ...!!

ಗಲ್ಲಿ...ಗಲ್ಲಿಗಳಲ್ಲೊಂದು
ಔಷಧಿಯ ಅಂಗಡಿಗಳಿವೆ..!!
ವಿಷಾದವೆಂದರೆ‌‌‌‌.....
ಯಾವ ದುಖಾಃನಿನಲ್ಲೂ
ನನ್ನ ದುಖಃಕ್ಕೊಂದು
ಮದ್ದಿಲ್ಲ...!!

ಮಧುಶಾಲೆಗೆ
ನಾನು ನಿತ್ಯದ ಗಿರಾಕಿ..!!
ಆದರೂ ಮಾಡಬೇಡ
ವೆನ್ನಾತ್ತಾಳವಳು ಚೌಕಾಸಿ..!!





ಚುಟುಕುಗಳು

ಜಗತ್ತು...
ಕಲೆತಂತಹ
ಇತಿಹಾಸವನ್ನೆ...
ಮರೆತುಬಿಡುತ್ತದೆ..!!!
ಇನ್ನೂ ನಾವು
ಯಾವ ಲೆಕ್ಕ..?
ಮಾತಿರಲಿ...
ಕಣ್ಣೆತ್ತಿಯೂ...
ನೋಡದ ಹಾಗೆ
ಓಡಿಸಿಕೊಂಡು ಹೋಗುತ್ತಿದೆ
ರೊಕ್ಕ.‌.!!

ಅಮವಾಸೆಯ,
ಕಗ್ಗತ್ತಲಲ್ಲೂ....
ಹುಣ್ಣಿಮೆ ಚಂದ್ರನ ಕಾಣಲು
ಹವಣಿಸುತ್ತಿದ್ದೆ...!!
ತುಂಬು ಹುಣ್ಣಿಮೆಯು
ಸ್ಖಲಿಸಿದ ಬೆಳಕಿನಲ್ಲಿ
ಅವನು ಕತ್ತಲನ್ನೆ
ತುಂಬಿ ಹೋಗಿದ್ದ..!!

@@@@@

ಕಾದ ಎಣ್ಣೆಗೆ...
ವಗ್ಗರಣೆ ಹಾಕಿ
ಬಿಟ್ಟು ಬಿಟ್ಟರೆ...
ಸೀದು ಹೋಗುತ್ತದೆ..!!
ಪ್ರೀತಿಸುತ್ತಿದ್ದಾಳಲ್ಲವೆಂದುಕೊಂಡರೆ
ಜೀತದಾಳಿನ ಭಾವ
ಎದೆಯನ್ನು ಸುಡುತ್ತಿರುತ್ತದೆ..‌!!

@@@@

ಗಿಡವನ್ನು ನೆಟ್ಟು
ನೀರೆರೆದವನಾರೋ...?
ಇಲ್ಲಿ ಶಿಲ್ಪಿಯನ್ನು
ವೈಭವಿಕರಿಲಾಗುತ್ತದೆ...!!!
ಮುಡಿಗೆ ಮಲ್ಲಿಗೆ
ಮುಡಿಸಿದವನನ್ನು ಬಿಟ್ಟು
ಮುಡಿಸಿಕೊಂಡವಳ
ಮುಡಿಯನ್ನು ಹಿಡಿದು
ಜಗತ್ತು...ಕಿತ್ತಾಡತೊಡಗುತ್ತದೆ....!!

@@@

ಹಾಸಿಗೆಯಲ್ಲಿ ....
ಕಳೆದುಕೊಂಡಿದ್ದಕ್ಕಿಂತ
ಲೋಕದ ನಿಂದನೆಯನ್ನು
ಪಡೆದುಕೊಂಡದ್ದೆ ಹೆಚ್ಚು...!!
ಹುಳಿಯುಂಡ ನಾಲಿಗೆ,
ಬಿಡುವುದೆ...
ಕಿಚ್ಚಿನೊಳಗೆ ನೂಕುವ
ಹುಚ್ಚು...!!

ಹೇಗೆ ಅರಿಯಬಲ್ಲೇನು
ನಿನ್ನ ಮನಸಿನೊಳಗಿನ
ಮರ್ಮ..!!
ಕೃಷ್ಣ ಪರಮಾತ್ಮನನ್ನೆ
ಬಿಡಲಿಲ್ಲ ಕರ್ಮ..‌!!
ಈ ಬಡಪಾಯಿ ಅಕ್ಷರ
ಬಡವನನ್ನು ಉಳಿಸುವುದೆ
ಹುಸಿ ಪ್ರೇಮ..
@@@@@@

ಕೈಗಳು ಹೂಗಳನ್ನು
ಕಿತ್ತಿದ ಪಾಪದ ನಂಟನ್ನು
ಹೊತ್ತುಕೊಂಡಿವೆ...!!
ನೀನೆ ಮುಡಿದು
ಈ ಅಕ್ಷರ ಬಡವನನ್ನು
ಕೃತಾರ್ಥನನ್ನಾಗಿಸು
ಚೆಲುವೆ...

@@@

ಕಾಡಿಗೆ ಕಣ್ಣುಗಳ ಪಾಶಕ್ಕೆ
ಸಿಕ್ಕು..‌.ಎದೆಯಲ್ಲಿಯೆ
'ದಫನ್' ಆಗಿ ಹೋಯಿತಲ್ಲ
ಹುಟ್ಟಿದ್ದ ಎರಡು ಸಾಲು....!!
ಯಾವ ನ್ಯಾಯಾಲಯದಲ್ಲಿ
ದಾವೆ ಹೂಡಲಿ ಹೇಳು...
ಹಂಚಿಕೊಳ್ಳಲು ವಿರಹದ
ಪಾಲು...!!



ಹುಟ್ಟಿದ್ದೆ... ಎರಡು ಸಾಲುಗಳು
ಕಾಡಿಗೆ ಕಣ್ಣುಗಳ ಪಾಶಕ್ಕೆ
ಸಿಲುಕಿ, ಅವುಗಳು ಎದೆಯಲ್ಲಿಯೇ...
'ದಫನ್' ಆಗಿ
ಹೋದವಲ್ಲ...!!
ಹೇಳದೆ ಹೋದರೆ...!!
ಸಂಜೆ ವೇಳೆಗೆ, ಗೆಳೆಯರೆಲ್ಲ
'ಕಫನ್' ನನ್ನು ತರಲು
ಪೇಟೆಗೆ ಹೊರಡುವರಲ್ಲ..!!

@@@@@

ಸಂಪಾದಿಸದ್ದನ್ನೆಲ್ಲ
ಅವಳ ಪ್ರೇಮ ಪತ್ರಗಳಿಗಾಗಿ
ಖರ್ಚು ಮಾಡಿಬಿಟ್ಟೆ
ಅವುಗಳನ್ನೆಲ್ಲ ಈಗ
ತೂಕಕ್ಕೆ ಹಾಕಿದರೂ...
ಸಂಜೆಯ ಒಂದು ಮದು
ಬಟ್ಟಲು ಬರಯವುದಿಲ್ಲ...

@@@@@

ಅವಳು ಹಾದು ಹೋಗದೆ
ಹೂವುಗಳರಳುವುದಿಲ್ಲ...!!
ಎಂದುಕೊಂಡಿದ್ದೆ..
ಅರಳಿವೆ..,
ನನ್ನನ್ನು ಕೈ ಬಿಡಲಾರಳೆಂಬ
ಭರವಸೆಯಲ್ಲಿದ್ದೆ....
ಮರೆತು ಹೋಗಿದ್ದಾಳೆ
ಅಷ್ಟೇ...

@@@@

ಆ ಗಲ್ಲದ ಮೇಲೊಂದು
ಸಿಹಿಯಾದ ಬೆಲ್ಲವಿದೆಯಂತೆ..!!
ಸವಿದವರಾರೋ...!!?
ಬರೆದು ಕಳುಹಿಸಿದ
ಪತ್ರಕ್ಕೆ ಉತ್ತರವಿಲ್ಲ...
ಮನದೊಳಗೆನಿದೇಯೊ
ಬಲ್ಲವರಾರು..?

@@@

ಬೇಲಿಯ ಮೇಲೆ ಹರಡಿದ
ಬಳ್ಳಿಯ ಹೂಗಳು ಜಾರಿ
ಬೀಳುವುದು ಮುಳ್ಳುಗಳ
ಮೇಲೆಯೆ...!!
ನೋವಾಯಿತೆ..!! ನೆಂದು
ದುಂಬಿಯೂ...ಕೇಳುವುದಿಲ್ಲ..!!


ಕಲ್ಲು ಬಂಡೆಗಳ ಮೇಲೂ...
ಪ್ರೀತಿ ಕುರುಹುಗಳನ್ನು
ಬಿಟ್ಟು ಬರುತ್ತಾರೆ...

Saturday, May 11, 2024

ಚುಟುಕು


ಹಾಸಿಗೆಯಲ್ಲಿ ....
ಕಳೆದುಕೊಂಡಿದ್ದಕ್ಕಿಂತ
ಲೋಕದ ನಿಂದನೆಯನ್ನು
ಪಡೆದುಕೊಂಡದ್ದೆ ಹೆಚ್ಚು...!!
ಹುಳಿಯುಂಡ ನಾಲಿಗೆ,
ಬಿಡುವುದೆ...
ಕಿಚ್ಚಿನೊಳಗೆ ನೂಕುವ
ಹುಚ್ಚು...!!

Wednesday, May 8, 2024

ಚುಟುಕು


ಅಮವಾಸೆಯ, 
ಕಗ್ಗತ್ತಲಲ್ಲೂ....
ಹುಣ್ಣಿಮೆ ಚಂದ್ರನ ಕಾಣಲು
ಹವಣಿಸುತ್ತಿದ್ದೆ...!!
ತುಂಬು ಹುಣ್ಣಿಮೆಯು
ಸ್ಖಲಿಸಿದ ಬೆಳಕಿನಲ್ಲಿ
ಅವನು ಕತ್ತಲನ್ನೆ
ತುಂಬಿ ಹೋಗಿದ್ದ..!!

@@@@@

ಕಾದ ಎಣ್ಣೆಗೆ...
ವಗ್ಗರಣೆ ಹಾಕಿ 
ಬಿಟ್ಟು ಬಿಟ್ಟರೆ...
ಸೀದು ಹೋಗುತ್ತದೆ..!!
ಪ್ರೀತಿಸುತ್ತಿದ್ದಾಳಲ್ಲವೆಂದುಕೊಂಡರೆ
ಜೀತದಾಳಿನ ಭಾವ
ಎದೆಯನ್ನು ಸುಡುತ್ತಿರುತ್ತದೆ..‌!!

@@@@

ಗಿಡವನ್ನು ನೆಟ್ಟು
ನೀರೆರೆದವನಾರೋ...?
ಇಲ್ಲಿ ಶಿಲ್ಪಿಯನ್ನು
ವೈಭವಿಕರಿಲಾಗುತ್ತದೆ...!!!
ಮುಡಿಗೆ ಮಲ್ಲಿಗೆ
ಮುಡಿಸಿದವನನ್ನು ಬಿಟ್ಟು
ಮುಡಿಸಿಕೊಂಡವಳ
ಮುಡಿಯನ್ನು ಹಿಡಿದು
ಜಗತ್ತು...ಕಿತ್ತಾಡತೊಡಗುತ್ತದೆ....!!

ಅಕ್ಷರ ಬಡವ....

Friday, March 22, 2024

ಚುಟುಕುಗಳು

ಮುಡಿಯಲ್ಲಿ ಕೇವಲ
ಹೂವನ್ನು ಮುಡಿಸಿ ಹೋದ
ಮಾತ್ರಕ್ಕೆ... ಆಗಿಬಿಡುವೆಯಾ..?
ನೀ...ನಲ್ಲ..!!
ಕಾದು...ಕಾದು.. ಹಂಚಾಗಿ
ಹೋದ, ಗಲ್ಲದ ಮೇಲೊಂದು
ಸಿಹಿ ಮುದ್ರೆಯನೊತ್ತದೆ
ಸತಾಯಿಸುವಂತವನು
ಹೇಗೆ ಸಂಗಾತಿಯಾಗುವೇಯೊ?
ನೀ...ನಲ್ಲ..!!

ಅವಳಂದು
ಹೂವನ್ನು ಹಿಡಿದು
ಎದುರಿಗೇತಕೆ
ಬಂದು ಹೋದಳೋ...!!?
ನಾನದೇಷ್ಟು
ಸುಖವಾಗಿದ್ದೆ...!!
ಕಲ್ಲು ಹೊಡೆಯುವವರ
ಸಂತೆಯಲ್ಲಿ...!!

ಪ್ರತಿ ಸಂಜೆಗೂ...
ಮದ್ಯದ ಬಾಟಲಿಯನ್ನು
ಹಿಡಿಯುತ್ತೇನೆ...!!
ಅವಳ
ನೆನಪುಗಳೆಂದೂ
ಸೋಲುವುದೆ ಇಲ್ಲ..!!

ನನ್ನ ಪದಗಳಲ್ಲಿ
ಕಾಮವನ್ನು ಹುಡುಕಬೇಡಿ..
ಅದು ನಿಮಗೆ
ಸಿಗುವುದಿಲ್ಲ...!!
ಪ್ರೇಮವನ್ನಂತೂ
ಮೊದಲೇ.. ಹುಡುಕಬೇಡಿ..
ಯಾಕೆಂದರೆ ಅದೇ
ನನಗಿನ್ನೂ....
ಸಿಕ್ಕಿಲ್ಲ..!!

ಈ ಅಮಲುಗಣ್ಣಿನಲ್ಲಿ
ಅವಳ ಚಿತ್ರವನ್ನು
ಹುಡುಕಲು ಪ್ರಯತ್ನಿಬೇಡಿ...!!
ಒಲವಿನ ಕೆಸರಿನಲ್ಲಿ
ಬಿದ್ದವನು ನಾನು...
ಗಟಾರಿನಲ್ಲಿ ಬೀಳದ ಹಾಗೆ
ಒಂದು ಮೂಲೆಯಲ್ಲಿ
ಮಲಗಿಸಿಬಿಡಿ...!!

ಅಂಗಡಿ ಮಾಲೀಕ...
ಮದ್ಯದ ಬಾಟಲಿಗೆ ದುಪ್ಪಟ್ಟು
ದರವನ್ನೇನು ಪಡೆದುಕೊಂಡ
ನಿಂದು... ಆದರೆ
ಮತ್ತೇನು ಹೆಚ್ಚಾಗಲಿಲ್ಲವಲ್ಲ...!!
ಅವಳ ಏರಿಸಿದ ನಶೆಗೆ
ಬೆಲೆಯೆ ಇಲ್ಲ....
ಇಂದಿಗೂ.. ಇಳಿಯುತ್ತಲೆ
ಇಲ್ಲ...!!

ಅವಳ ಮನೆಯ
ಹಾದಿಯಲ್ಲಿ ನನ್ನ ಹೆಜ್ಜೆ
ಗುರುತುಗಳನ್ನು
ಹುಡುಕುತ್ತ ಹೋಗಬೇಡಿ..!!
ಅಲ್ಲಿಗ ದಿನಕ್ಕೊಂದು
ಗುರುತುಗಳು ಸಿಗುತ್ತ
ಹೋಗುತ್ತವೆ..

ಮದ್ಯದ ಜೊತೆಯಲ್ಲಿ
ಇಟ್ಟ..‌ ಉಪ್ಪಿನಕಾಯಿಗೂ
ಬೂಸ್ಟ್ ಹತ್ತಿದೆ...
ಅವಳ ನೆನಪುಗಳಂತೆ..
----
ಕೇವಲ...
ಅವಳ ನೆನಪುಗಳನ್ನು
ಮರೆಯಲು ಇದ್ದ-ಬದ್ದ
ಆಸ್ತಿಯಲ್ಲ ಹರಾಜಾಗಿ
ಹೋಯಿತಲ್ಲ...!!
ಹಾಳಾದ್ದು ಈ ಜೀವ
ಹೋಗಲಿಲ್ಲ...!
ಹತ್ತು ಪೈಸೆ ಬೆಲೆನೂ
ಇಲ್ಲದಾಗಿ ಹೋಗಿದೆ
ಈಗ...

ನೆತ್ತಿಗೆ ನಿಂಬೆ ಹಾಕಿ
ತಿಕ್ಕಿದರೂ... ಪಿತ್ತ
ಇಳಿಯಬಹುದು...
ಅವಳ ಮತ್ತಲ್ಲ...!!
ಮರೆತುಬಿಡು
ಎನ್ನುತ್ತದೆ ಜಗತ್ತು..!!
ಅವಳ ಬಗ್ಗೆ ಜನರಿಗೆ
ಇನ್ನೂ ಸರಿಯಾಗಿ
ಗೊತ್ತಿಲ್ಲ..!!

ಎಲ್ಲರೂ ಬೈಯ್ಯುತ್ತಾರೆ
ಅವನು ಕುಡಿದ
ಅಮಲಿನಲ್ಲಿದ್ದಾನೆ ಬಿಡಿ ಎಂದು..!!
ವಾಸ್ತವದ ಅರಿವು
ಅವರಿಗಿಲ್ಲ..!!
ಕಾಣದ ಭವಿಷ್ಯದ
ಕುರಿತು ನನಗಂತೂ
ಭಯವಿಲ್ಲ..!!

ತಪ್ಪೇನಿದೆ...!!
ಬುದ್ಧನೆ ಅವನ
ಮಡದಿಗೆ ಹೇಳದೆ
ಅರಮನೆಯಿಂದ ಎದ್ದು
ಹೋದದ್ದಲ್ಲವೇನು..?
ಇನ್ನೂ ಇವಳು
ನನ್ನ ಮನಸ್ಸಿನಿಂದ
ಹೇಳದೆ ಹೊರಟು ಹೋದದ್ದು
ನ್ಯಾಯವೆ ಬಿಡಿ..


ಒಂದು ಗುಟುಕಿಗೆ...
ಎದೆಯಲ್ಲ ಉರಿದು
ಹೋಯಿತು....!!
ನಿತ್ಯ ನನ್ನ ನೆನಪಿನಲ್ಲಿ
ಮದ್ಯದಲ್ಲಿಯೇ...
ಮುಳುಗಿರುವ
ಅವನ ಪಾಡು ಏನಾಗಿರಬೇಡ...!!

ಅವಳು ಬಿಟ್ಟು
ಹೋದ ಹಾದಿಗೆ
ಹೂಗಿಡವೊಂದನ್ನು
ನೆಟ್ಟುಬಿಡುತ್ತೇನೆ..
ಮೋಸದ ವಾಸನೆ
ದಾರಿಹೋಕರಿಗೆಲ್ಲ
ಬಡಿಯದಿರಲಿ..

ಪ್ರೀತಿಸಿದಾಗ
ಅವಳೊಂದೆ... ಕಡ್ಡಿಯನ್ನು
ಗೀರಿ ಹೋಗಿದ್ದಳು...!!
ಸತ್ತ ಮೇಲೆ...
ಸಾವಿರ ಜನ, ನೂರು
ಕಟ್ಟಿಗೆಗಳನ್ನಿಟ್ಟು
ಸುಟ್ಟು
ಹೋದರು...!!


ನಿನ್ನ ಹಣೆಯ
ಬರಹವನ್ನು ಬದಲಿಸಿದವರಾರು?
ಕೇಳಿದವರಿಗೆಲ್ಲ....
ಬಿದ್ದು,  ಕೊಳೆತು
ಹೋಗುತ್ತಿರುವ
ಹೂವಿನ ಜಾಗವನ್ನು
ತೋರಿಸಿದೆ..
ಅವಳ ಮನೆಯ
ದಾರಿಯನ್ನು
ತೋರಿಸಿದೆ...


ಜೇಬಿನಲ್ಲಿ
ಕಾಸಿಲ್ಲದಿದ್ದರೂ...
ಹೃದಯದಿಂದ
ಶ್ರೀಮಂತನಾಗಿರಬೇಕಂತೆ...!!
ಅವಳಿಂದಾಗಿ,
ನಾನಲ್ಲೂ..
ಫಕೀರನಾಗಿದ್ದೇನೆ..!!

ಮಾತುಗಳಿಂದ
ಹುಷಾರಾಗುವ ಹಾಗಿದ್ದರೆ
ನಾನೆಂದೊ...ಎದ್ದು
ಅಡ್ಡಾಡುತ್ತಿದ್ದೆ...!!
ಆ ಮಾತುಗಳನ್ನು ನೆಚ್ಚಿ
ತಾನೆ, ನಾನಿಲ್ಲಿ
ಮಲಗಿರುವುದು..!

ಹೊತ್ತು ಮೀರಿದ
ಮೇಲೆ, ಹೂವು ಬಾಡಿ
ಹೋಗುತ್ತದೆ...!!
ದಿನಗಳು ಕಳೆದು
ಹೋದಂತೆ... ಹರೆಯವು
ಬಸಿದು ಹೋಗುತ್ತದೆ..!!
ಗೆಳೆಯ
ಪೂಜಿಸದೆ ಹೋದ
ಹೂವು...
ಚುಂಬಿಸಿಕೊಳ್ಳದೆ ಕಳೆದ
ಯೌವ್ವನ... ಎರಡು
ನಿರರ್ಥಕವಲ್ಲವೇನು..?


ಅದು ಹೇಗೆ ನನ್ನನ್ನು
ಸಂಪೂರ್ಣವಾಗಿ
ಮರೆತು ಹೋಗಿರುವಳೋ...!!
ನಾನೀನ್ನೂ...
ಅವಳು ಬಿಟ್ಟುಹೋದ
ತಿರುವಿನ ಹೆಸರನ್ನೆ
ಮರೆತಿಲ್ಲ...!!

ಗಲ್ಲಿ...ಗಲ್ಲಿಗಳಲ್ಲೊಂದು
ಔಷಧಿಯ ಅಂಗಡಿಗಳಿವೆ..!!
ವಿಷಾದವೆಂದರೆ‌‌‌‌.....
ಯಾವ ದುಖಾಃನಿನಲ್ಲೂ
ನನ್ನ ದುಖಃಕ್ಕೊಂದು
ಮದ್ದಿಲ್ಲ...!!

ಮಧುಶಾಲೆಗೆ
ನಾನು ನಿತ್ಯದ ಗಿರಾಕಿ..!!
ಆದರೂ ಮಾಡಬೇಡ
ವೆನ್ನಾತ್ತಾಳವಳು ಚೌಕಾಸಿ..!!

Monday, January 29, 2024

ಗಾಲಿಬ್...

ಗಾಲಿಬ್....

ಮುಗಿಲ ತುಂಬೆಲ್ಲಾ...‌‌ ಗರ್ಭ ಕಟ್ಟದ
ಮೋಡಗಳೆ ತುಂಬಿಕೊಂಡಿದ್ದರೆ ಏನು ಬಂದಿತು,
ಹುಳಿಯಾಡುವ ಮುನ್ನವೇ ಕಡೆದು
ಬೆಣ್ಣೆಯ ತೆಗೆಯದೆ ಹೋದರೆ ಏನು ಉಳಿಯುವುದು
ಗಾಲಿಬ್..
ಮಾತಿಲ್ಲದೆ...ಸುಮ್ಮನೆ ಗಾಳಿಗೆ ಚದುರಿ ಹೋಗುವ
ಮೋಡಗಳಂತೆ ದೂರ ಸರಿದು ಹೋದರೆ..!!
ಬಾಯಾರಿ, ಬಿರುಕು ಬಿಟ್ಟ ಎದೆಯ ಭಾವದ
ಬಯಲಿಗೆ ತಂಪನ್ನಾದರು ಎರೆಯುವುದಾದರು ಯಾರು?
ಇನ್ನೂ... ಹದಮಾಡದ ನೆಲದ ಮೇಲೆ
ವಿಷದ ಬೀಜವನ್ನು ಚೆಲ್ಲಿ ಹೋಗಿರುವರಲ್ಲ...
ಅದೆಂತಹ ಅದಮ್ಯ ನಂಬಿಕೆ ಅವರದ್ದು..!!


ಕಾಲ...ಕಾಲಭೈರವನ ಮಾತನ್ನೇ..ಕೇಳುವುದಿಲ್ಲ..!!
ಎಷ್ಟು ದೂರ ನಡೆದುಬರಲಿ ನಾನು...ನನ್ನ ಕಾಲೊಳಗಿನ
ಶಕ್ತಿಯು ಕುಂದುತ್ತಿದೆ ಗಾಲಿಬ್...
ಬಯಸಿದ್ದೆ ಮೂರು ಗಂಟು...ಬದುಕನ್ನೆ ಕಗ್ಗಂಟನ್ನಾಗಿ
ಮಾಡಿಬಿಟ್ಟರಲ್ಲ..!!
ಅರಿಷಿಣದ ದಾರವನ್ನು ಕುಣಿಕೆಯನ್ನಾಗಿಸಿ ನನ್ನೇದುರಿಗೆ
ಹಾಕಿರುವರು..!! ಕಣ್ಣುಮುಚ್ಚಿ ಕತ್ತನೊಡ್ಡುಬಿಡಲೆ..?
ಇಲ್ಲವೆ ಹೆದರಿ ಹಿಂದಕ್ಕೆ ಪಲಾಯನಗೈದುಬಿಡಲೆ...?
ಯಾವುದನ್ನು ಆಯ್ದುಕೊಳ್ಳಲಿ...

ಕಡ್ಡಿ ಮುರಿದ ಹಾಗೆ ಸಂಬಂಧವನ್ನು ಕಡೆದುಕೊಂಡು
ಹೋದರೆ ಹೇಗೇಳು....?
ಗಿಡದಿಂದ ಚಿವುಟಿದ ಮೇಲೂ ಹೂವಿನೆದೆಯಿಂದ
ಮಧುವು ಪಸರಿಸದೆ ಇರುವುದೇನು ಹೇಳು...?
ಗಾಲಿಬ್....
ಮುಂಬರುವ ಎಲ್ಲ ಬಂಜೆ ಸಂಜೆಗಳ ತೊಳಲಾಟಕ್ಕೆ
ಸುಂಕವನ್ನು ಕಟ್ಟುವವರು ಯಾರು..?
ಬುಲೆಟ್ ರೈಲಿನಲ್ಲಿ ಹೋದವರ ಹಿಂದೆ ಹೋಗಲು,
ನಾನು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೇನೆ
ಅವರು ಸಿಗುವರೇನು..?


ಯೋಚಿಸುತ್ತಾ ಕುಳಿತುಕೊಂಡುಬಿಟ್ಟರೆ ಯೌವ್ವನ..?
ಯೌವ್ವನ ಸುಡುಗಾಡಿನ ಗೇಟನ್ನು ದಾಟಿರುತ್ತದೆ..!!
ನಡುಗುವ ಕೈಗಳನ್ನು ಹಿಡಿದು, ನಡೆದಾಡಲು ಬಾರದ
ಮೊಣಕಾಲು ನೋವಿನೊಂದಿಗೆ ಕರೆದುಕೊಂಡು ಹೋಗಲು ಬಂದರೆ....!! ಏನು ಮಾಡಲಿ..
ಗಾಲಿಬ್....
ನಾನೇನು ಮಾವಿನಕಾಯಿಯ ಗೊಟ್ಟವೆ..? ಉಪ್ಪು,
ಎಣ್ಣೆ, ಅರಿಷಿಣದ ಮಸಾಲೆಯೊಂದಿಗೆ ಬೆರಸಿ ಡಬ್ಬದಲ್ಲಿ
ಹಾಕಿಟ್ಟು.. ಮಾಗಿದ ಮೇಲೆ ಉಣ್ಣಲು..!!
ಹೆಣ್ಣು-ಹಣ್ಣಾಗಿರುವೆ.. ಕೊಳೆತು ತಿಪ್ಪೆಯ ಸೇರಿ ಹಂದಿಯ ಬಾಯಿಗೆ ಆಹಾರವಾಗುವ ಬದಲು...
ಗಿಣಿ ಕಚ್ಚಿಬಿಟ್ಟ ಹಣ್ಣಂತಾದರೂ ನಾನಾಗಬೇಡವೆ..?