Monday, May 1, 2017

ಕದನ ಜಯಲಕ್ಷ್ಮಿ


ಹರಿಯುವ ನೀರಿನಂತೆ
ನಿನ್ನ ಮನ..
ಹರಿದು ಬಂದೆ ಹೃದಯದ ಮನೆಗೆ..
ಅರಿಯದೆ ಹರಿದು ಹೊರಟೆ
ಮತ್ತೊಂದೆಡೆ...
ನಿನ್ನ ನಾ ಸೇರಬಲ್ಲನೆ..
ಹಿಡಿಯಬಲ್ಲನೆ.. ಅಸಾಧ್ಯ ಇದನರಿತು..
ಬಿಟ್ಟೆ ಮನ ಬಂದಂತ್ತೆ ಹರಿಯಲು... # ಜಯ #


ಹರಿಯುವ ನೀರಿನಂತೆ
ನನ್ನ ಮನ ನಿಜ ಗೆಳತಿ..
ಹರಿಯುವ ಮನವೆಂದು
ತಿಳಿದು ತಿಳಿದು ನಿನ್ನ
ಮನವದು...
ಕೊಳವಾಗಲಿಲ್ಲವೇಕೆ?
ನನ್ನ ಪ್ರೀತಿಗೆ ಕಟ್ಟೆಯ ಕಟ್ಟಿ
ನಿಲ್ಲಿಸಲಿಲ್ಲವೇಕೆ ?

ನೀರೆಂದಿರುವೆ ನನ್ನ ಮನವನು
ನಿಲ್ಲುವುದೆ ಒಂದೆ ಕಡೆ ..
ಹರಿಯದೆ.. ಹುಚ್ಚು ಕೊಡಿ
ಮನಸ್ಸಿದು..

ತಪ್ಪನೆಲ್ಲ ನಿನ್ನಲಿಟ್ಟುಕೊಂಡು
ದೂಷಿಸದಿರು ಚೆಲುವೆ ನನ್ನೊಲವನು
ಬರುವೆ ಮತ್ತೆ ಮುಂಗಾರಿಗೆ
ನಿನ್ನೊಲವಿನ ಮಳೆಹನಿಯಾಗಿ
ಸಾಧ್ಯವಾದರೆ....
ತಡೆಹಿಡಿದಿಕೊ...


ಹರಿಯುವ ನೀರು
ತಡೆಯಲಾಗದು ಗೆಳೆಯ.
ಅರಿಯದೆ ಹೋದೆ ನಿನು
ಅರಿತು ಹೊಗಿದ್ದರೆ
ನಾ ಹಾಕುತ್ತಿದ್ದೆ...
ನನ್ನ ಪ್ರೀತಿಯ ಕಟ್ಟೆ


ಇದು ನಿಜವೆ..
ಹರಿಯುವ ನೀರನು ತಡೆಯಲಾಗದು
ಆದರೆ.. ಆ ಹರಿದು ಹೋಗುವ ನೀರಲಿ
ಸ್ವಲ್ಪನ್ನಾದರೂ ಎತ್ತಿಟ್ಟುಕೊಳ್ಳಬಹುದಿತ್ತಲ್ಲ
ನೆನಪಿಗಾಗಿ..


ಹರಿಯುವ ಮುನ್ನ
ನಿನಗರಿಯದೆ
ನಿ ಬಿಟ್ಟ ನೆನಪುಗಳು
ಅಲ್ಲಿ ಅಲ್ಲೇ ನಿಂತ
ಹನಿ ಹನಿ ನೀರಿನ ರೂಪದಲ್ಲಿ
ನೆಲೆಸಿದೆ ಗೆಳೆಯ..

ನಾ ಹೊರ ಹಾಕಿದರು
ಹೋಗದಂತೆ ನಿಂತಿದೆ
ನಿನ್ನ ನೆನಪುಗಳು..

ಮರಳಿ ಬರುವ
ದಾರಿಯ ಕಾಯುತ್ತಾ
ತವಕದಿ ನಿಂತಿದೆ ನೆನಪುಗಳು


ಕಾಯಿಸುವ ಹನಿಗಳು ನಾನಲ್ಲ
ಕಣ್ಣಂಚಿದ ಜಾರುವ ಹನಿಗಳಿಗೆ
ಹೊಣೆಗಾರನು ನಾನೂ ಅಲ್ಲ..

ಬಿಟ್ಟು ಕೆಟ್ಟಿರುವೆ ನೀನು
ನೋಡು ಈಗ...
ಇನ್ನೊಬ್ಬರ ಮನದಲಿ
ಕಟ್ಟಿ ಹಾಕಿರುವರು ನನ್ನ

ಹರೆಯುವ ಮುನ್ನ ಒಂದೆ... ಒಂದು
ಕಲ್ಲನ್ನಿಟ್ಟಿದ್ದರೂ ಸಾಕಿತ್ತು..
ನಿನ್ನ ಮನದ ಬಾಗಿಲನು ದಾಟದೆ
ಇರುತ್ತಿದ್ದೆ..


ಹೋಗಲಿ ಬಿಡು ಗೆಳೆಯ
ನನ್ನ ಅರಿವಿಗೆ ಬಾರದೆ
ಹೊರಟಿದ್ದು ನಿನ್ನ ತಪ್ಪು..

ನಿ ಹೋಗಲು ಸದ್ದಿವಾಗಿದ್ದೆ
ನಾ ಏನೂ ಮಾಡಲಾದಿತು
ಹೇಗೂ ಅಲ್ಲಿಯಾದರು
ಶಾಶ್ವತವಾಗಿ ನೆಲೆಸು

ನಾ ನಿನ್ನ ಹೊಣೆ ಮಾಡಲಾರೆ
ವಿಧಿಯ ಆಟದ ಮುಂದೆ
ಸಾಗದು ನಮ್ಮ ಆಟ..

ಚನ್ನಾಗಿ ಸಂತೋಷದಿಂದ
ತುಂಬಿ ಹರಿ
ಅವಳ ಮನದ ಒಡೆಯನಾಗಿ
ಹರಿದು ಬಿತ್ತು ನಿ ಪ್ರೀತಿಯ ಬೆಳೆ


ಏಕೆ ಈ ವಯ್ಯಾರದ ಮಾತುಗಳು
ಮಲ್ಲಿಗೆ..
ನಿನ್ನರಿವಿಗೆ ಬಾರದೆ ನಾನು ನಡೆದನೆ..
ಹೊರಡುವಾಗ ಕೂಗಿ ಕೂಗಿ ಹೇಳಿದೆ
ಕೇಳಿಯು ಕೇಳದಂತೆ ಕಿವುಡಿಯಾಗಿ
ಅತ್ತ ಹೊರಳಿ ನಿಂತೆ...
ಆ ನಾಗರಜಡೆಗೆ ನಾ ಮುಡಿಸಿದ್ದ
ಮಲ್ಲಿಗೆ ನಿನ್ನ ಕಾಲಡಿಯಲ್ಲಿ ನಲುಗಿತ್ತು..

ವಿಧಿಯ ತಂದು ಅಪರಾಧವೆಸಗದಿರು..
ನಿನ್ನ ಅಹಂಕಿಗೆ ಆ ಹೆಸರನ್ನೇಕೆ ಬಳಸುವೆ

ಇನ್ನೆಲ್ಲಿಯ ಸಂತೋಷದ ಹೊಳೆ
ಮನದ ತುಂಬ ನಿನ್ನ ತುಂಬಿಕೊಂಡಿರುವ
ನನಗೆ... ಬಿತ್ತಲಾದರೂ ಹೇಗೆ ಅವಳ
ಮನದಲಿ ಬೆಳೆ


ನಿನ್ನ ತಪ್ಪು ನಿ ಅರಿಯಲಾದರೆ
ನಾ ಯಾರ ಮಾಡಲಿ ಹೊಣೆ..

ನಿ ಒಮ್ಮೆ ಕೊಗಿದರೆ ಸಾಕು
ಎಂದು ಕಾಯುವವಳು ನಾನು

ನಿ ಬಿಟ್ಟು ಹೋಗಿ ನನ್ನ ಹೊಣೆ ಮಾಡಿದೆಯಲ್ಲ ಸರಿಯೇ..

ಸಾವಿರ ಸಲ ಅ ಹೃದಯ ಕರೆದರು
ನಿ ಹೋಗಿದ್ದು ಯಾಕೆ..

ನಿ ಇಲ್ಲಿಯೇ ನೆಲಸಿ ಕೊಡ
ಬಹುದಿಂತ್ತು ನಿ ಉತ್ತರ ವ..

ನಿ ಅವಳ ಮೇಲೆ ಮನಸ್ಸು ಮಾಡಿ
ನನ್ನ ಅರಿವು ಬಾರದೆ ಹೋಗಿದ್ದೆ
ಗೆಳೆಯ..

ನನ್ನ ಕೊಗಿದ್ದರೆ ನನ್ನ ಉಸಿರು
ಬಿಗಿ ಹಿಡುದು ನಾ ನಿನ್ನ
ನಿಲ್ಲಿಸುತ್ತಿದ್ದೆ ಗೆಳೆಯ...


ನನ್ನುಸಿರಿನಲಿ ನಿನ್ನುಸಿರಿದೆ ಎಂದವಳು
ಈ ಉಸಿರನು ಇನ್ನೊಬ್ಬರ ಮನದ
ಉಸಿರಾಗಿಸಿದ್ಹೇಗೆ..

ಕೂಗಿ ಕರೆಯಲೆಂದೆ ಮನದ ಮನೆಯ ತಟ್ಟಿದೆ
ಕಲ್ಲುಗಳೆ ಕಟ್ಟಿದ ಮನೆಯಲಿ ಕುಳಿತು ನೀನು
ನಿನ್ನ ಮನವು ಕಲ್ಲಾಗಿ ಹೋಗಿತ್ತು..

ನಿನ್ನ ಮನದ ಬಾಗಿಲನು ಬಡೆದು
ಬಡೆದು ಕೈಗಳೆ ಸೋತು ಹೋದವು
ನಿನ್ನ ಮನವು ಮಾತ್ರ ಕರಗಲಿಲ್ಲ

ಅವಳ ಮೇಲೆ ಮನಸ್ಸು ಮಾಡಿ
ಅಲ್ಲ ಹುಡುಗಿ..
ನಿನ್ನಷ್ಟು ಅಂದವಿಲ್ಲದಿರಬಹುದು
ಮನಸಿನಲಿ ನಿನಗಿಂತಲೂ ಎರಡು
ಹೆಜ್ಜೆ ಮುಂದೆಯೆ..


ಅಯ್ಯು ಗೆಳೆಯ
ನನ್ನ ಮನಸ್ಸು ಕಲ್ಲು
ಮನಸ್ಸು ಅಲ್ಲ..

ನಿನು ಎಷ್ಟೇ ಅದರು ಹರಿಯುವ ನೀರು.
ನಿನಗೆ ಒಂದು ನೆಪ ಬೇಕು ಅಷ್ಟೇ..

ಹೋಗಲಿ ಬೀಡು
ನಾನು ಕಲ್ಲು ಬಂಡೆಯಾದರೆ
ಅದರ ಮೇಲೆ ನಿ ಯಾಕೆ ಕೆತ್ತಲಿಲ್ಲ
ನಿನ್ನ ಹೆಸರು...

ಇದರಲ್ಲಿ ಅರಿತಿಕೊ ಗೆಳೆಯ
ನಿನ್ನ ತಪ್ಪು ಒಪ್ಪದಿದ್ದರು
ಚಿಂತೆ ಇಲ್ಲ..
ಮನಸಾಕ್ಕಿ ಹೇಳುವುದು ಕೇಳಿ ನಿ ನಡೆ ಗೆಳೆಯ..

ಹರಿಯುವ ನೀರು ಎಂದು
ಗೋತ್ತಿದ್ದರು ನಾ ಸ್ಥಾನ ಕೊಟ್ಡೆ..
ಪ್ರೀತಿಯ ಧಾರೆ ಎರೆದು ನಿನ್ನ
ನಂಬಿ ಹೃದಯದಲ್ಲಿ ಹರಿಯಲು ಸ್ಥಳ ಕೊಟ್ಟೆ...

ಇಂದು ನಿ ನನ್ನ ನಿಂದಿಸಿ
ಹೊರಟೆ ಮತ್ತೊಂದು ಮನಸ್ಸಿನ ಕಡೆ..
ಹರಿಯುವ ನೀರು ಚಂಚಲ ಎಂದು
ಸಾಭಿತು ಮಾಡಿದೆ ಗೆಳೆಯ

ಹರಿಯುವ ನೀರು ಚಂಚಲವಲ್ಲ ಒಡತಿ..
ಹೆಣ್ಣಿನ ಮನಸ್ಸು ಚಂಚಲ...
ನಿನ್ನ ನಿಂದಿಸಿ ಆನಂದ ಪಡುವ
ಮನವಲ್ಲ ನನ್ನದೂ... ಅದು ನಿನಗೂ ಗೊತ್ತು..

ನನ್ನ ನಂಬಿ ಹೃದಯದಲ್ಲಿ ಹರಿಯಲು
ಸ್ಥಳಕೊಟ್ಟೆ ನಿಜ ನಾ ಇಲ್ಲವೆಂದಿಲ್ಲ..
ನಾನು ಕೇಳುತ್ತಿರುವುದನ್ನೂ ಇದನ್ನೆ..
ಹರಿಯುವ ನೀರೆಂದು ಗೊತ್ತಿದ್ದರೂ..
ಗೋಡೆಯೊಂದನು ಏಕೆ ಕಟ್ಟಲಿಲ್ಲ..

ಮನಸಾಕ್ಷಿಯನೆ ಕೊಂದು ನಿ ಹೋಗಿರುವಾಗ
ಇನ್ನಾರಲಿ ನನ್ನ ದುಗುಡವ ಹೇಳಲಿ, ಕೇಳಲಿ

ಕೆತ್ತಲೇನೂ ನಿನ್ನ ಹೆಸರು.. ಮನವದು
ಬದಾಮಿಯ ಮೇಣಬಸದಿಯ ಬಂಡೆಯಾಗಿರಲಿಲ್ಲ
ಆಗಿದ್ದರೆ... ಕೇವಲ ಹೆಸರೊಂದೆ ಏನೂ..
ನಮ್ಮ ಪ್ರೇಮದ ಇತಿಹಾಸವನೆ ಕೆತ್ತುತ್ತಿದ್ದೆ...

ನೆಪವ ನೀ ಮಾಡಿಕೊಟ್ಟೆ ಹರಿದು ಹೋಗಲು
ತುಂಬಿದ ಕೆರೆಗೆ ಒಂದು ಸಣ್ಣ ಬಿರುಕು ಸಾಕು
ಒಡೆದು ಹರೆಯಲು..
ನೀನು.. ಕಾಲುವೆಯನೆ ಹರಿಸಿಬಿಟ್ಟೆ.


ಇಲ್ಲ ಗೆಳೆಯ
ಎಂದು ಆ ತಪ್ಪು ನಾ ಮಾಡಿಲ್ಲ.

ನಾ ಪ್ರೀತಿಯ ಗೋಡೆ ಹಾಕಿದ್ದೆ
ನಿನ್ನ ಮೇಲೆ ಅಪಾರ ನಂಬಿಕೆ ಇಟ್ಟು

ನಾ ಹಾಕಿದ್ದೆ ಪ್ರೀತಿಯ ಗೋಡೆ
ಅದನ್ನು ನಿ ಅರಿಯದೆ..
ನನ್ನ ಕಲ್ಲು ಬಂಡೆ ಮಾಡಿದೆಯಲ್ಲ..

ನಾ ಕಲ್ಲು ಬಂಡೆಯಾಗಿದ್ದರೆ ನಿನಗೆ
ಪ್ರೀತಿಯ ಗೋಡೆ ಕಟ್ಟಿ ಸ್ವೇಚ್ಛೆಯಾಗಿ
ಹರಿಯಲು ಬಿಡುತ್ತದ್ದೆಯನು...

ಪ್ರೀತಿ, ವಿಶ್ವಾಸ, ನಂಬಿಕೆಯ ಗೋಡೆಯ ಮುಂದೆ ಬೇರೆ ಗೋಡೆ
ಬೇಕಾ ಗೆಳೆಯ..

ಹೆಣ್ಣು ಚಂಚಲೆ ಅಲ್ಲ ಗೆಳೆಯ
ಅವಳು ವಿಶಾಲ ಮನಸ್ಸಿನವಳು
ತುಂಬು ಹೃದಯದವಳು..

ನಿ ನನ್ನ ಮನ ಅರಿತಿದ್ದರೆ ನನ್ನ ಪ್ರೀತಿಯ ಗೋಡೆ ಎಂದು
ದಾಟಿ ಮತ್ತೊಂದು ಮನ ಸೇರುತ್ತಿರಲಿಲ್ಲ ಗೆಳೆಯ...

ನಾನು ಹೂ ಮನಸ್ದಿನವಳು
ನಿ ಮಾಡಿದೆ ನನ್ನ ಕಲ್ಲು ಮನಸ್ಸು ಇಂದು...


ಈ ಕಲ್ಲು ಮನಸಿನ ಅರಗಿಣಿಯ
ಮನವ ಹೂವಾಗಿಸಿದ್ದೆ ನಾನು
ಇಲ್ಲವಾದರೆ.. ಮನದ ಮನೆಯ
ಹೊಸ್ತಿಲನ್ನಾದರೂ.. ದಾಟಿಸುತ್ತಿದ್ದೇಯಾ
ನೀನು..

ಹೌದು ಹೆಣ್ಣು ವಿಶಾಲ ಹೃದಯವದಳು
ಆ ನಂಬಿಕೆಯಿಂದಲೆ ತಾನೆ ನಿನ್ನ ಬಳಿ
ಹರಿದದ್ದು ನಾನು..
ಹಿಡಿದಿಡಿಯದೆ ನನ್ನೊಲವಿನ ಭಾವ ಗಂಗೆಯನು
ಹರಿಬಿಟ್ಟು... ಈಗ ತಲೆಯ ಮೇಲೆ
ಕೈ ಇಟ್ಟು ಕುಳಿತರೆ..
ಹರಿದ ನೀರು ಹಿಮ್ಮುಖವಾಗೆಂದು ಹರೆಯದು

ನನಗೆ ಬೇಕಿರುವುದು ಕಾಣುವುದನೆಲ್ಲವ
ನೋಡುವ ಹೊರಗಣ್ಣುಗಳಲ್ಲ..
ಮನದೊಳಗಿದನೆಲ್ಲವ ಅರಿಯುವ ಒಳಗಣ್ಣಿನ
ಅಂತಃಕರುಣೆಯ ದೇವತೆ ಬೇಕು..

ಪ್ರಾರ್ಥಿಸು ಆ ದೇವರಲ್ಲಿ...
ಆವಿಯಾಗಿ ಮಗಿಲೊಡಲ ಸೇರಿ
ಪರಿಶುಭ್ರವಾಗಿ ಮರಳಿ ಪ್ರೀತಿಯ
ಮಳೆಹನಿಯಾಗಿ ನಿನ್ನೆದೆಗೆ ಸೇರಲೆಂದು

ಆಗಲಾದರೂ..
ಹಿಡಿದಿಡುವೆಯೊ... ಹರಿಬಿಡುವೆಯೊ...
ಎರಡು ನಿನಗೆ ಬಿಟ್ಟಿದ್ದು


ಗೆಳೆಯ ನಾ ನಿನ್ನ ಮನದ ಅರಸಿಯಾದರೆ ನಿ ಇಂದಲ್ಲ ನಾಳೆ ಬರುವೆ..

ನಿ ಹಿಮ್ಮುಖ ಹರಿದು ಬಾ ಎಂದು
ನಾ ಬಯಸಲಾರೆ..

ಅಕೆಯು ಒಂದು ಹೆಣ್ಣು ನಿ ಅವಳ ಮನ ಹೊಕ್ಕಿದ್ದು ನಿನ್ನ ತಪ್ಪು..

ನಾ ಪ್ರಾರ್ಥನೆ ಮಾಡಿ ನಿನು ಆವಿ ರೂಪ ಪಡೆದು..
ಮರಳಿ ನನ್ನ ಮನದ ಮನೆಗೆ ಬರವೆ ಸರಿ..

ಆ ಹೆಣ್ಣು ಅವಳು ಏನೂ ಮಾಡಿಯಾಳು ಅವಳು ಯಾರ ಬಳಿ ಬೇಡಿಯಾಳು..

ನಿ ಹಿಮ್ಮುಖ ಬಾರದೆ ಅವಳ ಮನದ
ಮಡಿಲಲ್ಲಿ ಯೆ ಹರಿದು ಪ್ರೀತಿಯ ಬೆಳೆ
ಬಿತ್ತು ಅವಳಲ್ಲಿ ಯಾದರು ಭದ್ರ ಗೋಡೆಯ ಹಾಕಿಸಿಕೂ ಗೆಳೆಯ


ನಾನಾಗಿಯೆ ಹೊಕ್ಕಿಲ್ಲ ಕೋಗಿಲೆ..
ಅವಳಾಗಿಯೆ ಕರೆದಳು..
ಭಗೀರಥನು ಗಂಗೆಯನು ಭೂವಿಗೆ
ತಂದಂತೆ.. ನನ್ನ ಬರುವಿಕೆಗಾಗಿ
ಮನದ ತೊಟ್ಟಿಲಲಿ ಮಲಗಿಸಿ
ತೂಗಲಿಕ್ಕಾಗಿ ತಪವಗೈದಂತೆ
ನನ್ನ ಕಾಯುತ್ತಿದ್ದಳು..
ಕಾದಳು.. ನನ್ನ ಪಡೆದಳು

ಹಾಗಂತ ಅವಳಿಗೆ ನಾನೇನೂ
ಮೋಸ ಮಾಡುತ್ತಿಲ್ಲವಲ್ಲ
ಅವಳಿಗೆ ಮೋಸ ಮಾಡಿದರೆ
ಎರಡು ಕಂಗಳಿಗೆ ಸುಡುವ
ಕಬ್ಬಿಣದ ಸಲಾಕೆಗಳನ್ನಿಟ್ಟುಕೊಂಡು
ಕುರುಡನಾದಂತೆ...

ಸಿಗೋಣ ಮುಂದಿನ ಜನ್ಮದಲ್ಲಾದರೂ
ನಿನ್ನ ಸೀರೆಯ ಸೆರಗಂಚಲಿ ನನ್ನ ಹೆಸರಿದ್ದರೆ
ನನ್ನ ಎದೆಯ ಮೇಲೆ ಆ ದೇವರು ನಿನ್ನ ಹೆಸರನ್ನು
ಕೆತ್ತಿದ್ದರೆ..

No comments:

Post a Comment