Friday, August 3, 2018

ಸಾಕಿ ಸೃಷ್ಟಿಸುವುದಾದರೂ ಹೇಗೆ ಇತಿಹಾಸವನ್ನು

ನನ್ನ ಹೆಣವ ಹೊತ್ತುಕೊಂಡು ಸಾಗುವ
ಹಾದಿಯನ್ನು.... ತಳಿರು ತೋರಣಗಳಿಂದ
ಸಿಂಗರಿಸಿಬಿಡು ಸಾಕಿ....
ಜಾತಿ...ಜಾತಿಯೆಂದು ಬೀದಿಯಲ್ಲಿ ಕಚ್ಚಾಡುವವರಿಗೆ,
ಪ್ರೀತಿಯ ಜಾತಿಯಲ್ಲಿ ಹೊಡೆದಾಡದೆ....!!!! ಸತ್ತು
ಹೋದವನು ನಾನೊಬ್ಬನೆ ಎಂದು ಅವರಿಗೆಲ್ಲ ತಿಳಿಯಲಿ...

ಮಸಣದ ಹಾದಿಯುದ್ದಕ್ಕೂ... ಪರಿಮಳವನ್ನೆ
ಸೂಸುವ ಹೂಗಳನ್ನು ಚೆಲ್ಲಿಬಿಡು ಸಾಕಿ...
ಅಂತಿಮ ದರ್ಶನಕ್ಕೆ ಅವಳು ಬರುತ್ತಾಳಂತಂದಲ್ಲ...
ಮೂಡ ಮನಗಳ ಘರ್ಷಣೆಗೆ ಸಿಕ್ಕು...ಅದೇಷ್ಟೊ
ಅಮಾಯಕರ ಜೀವಗಳು.... ದಾರಿ ಮಧ್ಯದಲ್ಲೆ...
ಹರಿದಿಹವು...ಅವುಗಳ ಆತ್ಮಕ್ಕೆ ಶಾಂತಿಯನ್ನುವುದು
ನಿನ್ನ ಕೈ ಸ್ಪರ್ಶಸಿ ಚೆಲ್ಲಿದ ಮಲ್ಲಿಗೆಗಳಿಂದಾರು ಸಿಗಲಿ...

ದಾರಿಯುದ್ದಕ್ಕೂ....ನನ್ನ ಇತಿಹಾಸವನ್ನೆ ಬೈದುಕೊಳ್ಳುತ್ತಾ
ನಿಂತ...ಜನರಿಗೆಲ್ಲ... ಒಂದೊಂದು ಬಟ್ಟಲು ಮದಿರೆಯನ್ನು
ಕುಡಿಸುತ್ತಾ ಹೋಗು ಸಾಕಿ....
ಅವಳ ನೆನಪುಗಳನ್ನು... ಮದಿರೆಯ ಕುಡಿದು...ಕುಡಿದು
ಮರೆಯಲಾರದೆ ಸತ್ತುಹೋದೆ...!!! ಇವರಾದರೂ...
ಕುಡಿದ ಅರೆಘಳಿಗೆ ವೈಷ್ಯಮ್ಮವ ಮರೆತು ನಗಾಡುತಿರಲಿ...

ಹುಗಿದ ಗೋರಿಯ ಮೇಲೊಂದು ಪುಟ್ಟದಾದ
ಕಟ್ಟೆಯೊಂದನ್ನು ಕಟ್ಟಿಸಿ..ಚಿಕ್ಕ ಮಾಡದಲ್ಲೊಂದು
ಹಣತೆಯನ್ನು ಹಚ್ಚಿಟ್ಟುಬಿಡು ಸಾಕಿ....
ಕಲ್ಲು ಗೋಡೆಗಳ ಮಧ್ಯದಲ್ಲಿ ದೇವರನ್ನೆ ಕಟ್ಟಿಹಾಕಿ,
ಶಾಂತಿಯ ಹೆಸರಲ್ಲಿ ನೆತ್ತರನೆ ಹರಿಸುವ ಮತಾಂಧರೆಲ್ಲ
ಒಮ್ಮೆ ನನ್ನ ಗೋರಿಯತ್ತ ಗಮನ ಹರಿಸಲಿ... ಶಾಂತಿ
ಎಂಬುದು ಕತ್ತರಿಸುವುದರಲ್ಲಿಲ್ಲ...ಪ್ರತಿಫಲವನ್ನೂ ಬೇಡದ ಪ್ರೀತಿಯನ್ನು ಹಂಚುವದರಲ್ಲಿದೆಂಬುದು ಅವರಿಗೂ..
ಚೂರು ಅರ್ಥವಾಗಲಿ...

ಅವಳ ಮೊಗದಲ್ಲಿ ಸದಾ ನಗುವಿರಲೆಂದೆ...ಕಹಿಯಾದರೂ
ಗುಟುಕು...ಗುಟುಕು...ಮದ್ಯವನ್ನೆ ಕುಡಿಯುತ್ತಾ...
ನಾನು ಸತ್ತದಲ್ಲವೆ ಸಾಕಿ....
ಕಹಿಯ ನುಂಗಿಕೊಳ್ಳಲಾಗದೆ... ಪರರಿಗೆ ನಾವು
ಹೇಗಾದರೂ ಸಿಹಿಯನ್ನು ಹಂಚಬಹುದು...
ದುಃಖವನ್ನೆ ಅರಗಿಸಿಕೊಳ್ಳಲಾರದವರು...ಸುಖವನ್ನು
ಅನುಭವಿಸಲು ಎಷ್ಟು ಅರ್ಹರು....?
ಇತಿಹಾಸವನ್ನೇ.. ಅರಿಯದೆ ಹೋದವರು....
ಸೃಷ್ಟಿಸುವುದಾದರು ಹೇಗೆ..? ಇತಿಹಾಸವನ್ನು...

ಶಾಯರಿ ೨೫೧

ಸಾಯುವುದು
ಎಷ್ಟು ಸುಲಭ
ಸಾಕಿ...
ಗುಟುಕು
ವಿಷದಲ್ಲಿ
ಎಲ್ಲವು ಮುಗಿದು
ಹೋಗಿಬಿಡುತ್ತದೆ...

ಗುಟುಕು...ಗುಟುಕು
ಮದಿರೆಯನ್ನು
ಕುಡಿಯುತ್ತಾ....
ಅವಳ ಮೋಸವನ್ನು
ನೆನೆದು..ನೆನೆದು
ಬದುಕುವುದು....
ಅದೇಷ್ಟು ಕಷ್ಟವಲ್ಲವೆ...?

ಶಾಯರಿ ೨೫೩

ಸ್ವರ್ಗ ಲೋಕದ
ಸುರಪಾನಕ್ಕೆ
ಮಾಡಬೇಕಂತೆ
ಸಾಕಿ..
ಸಾಕಷ್ಟು
ಪುಣ್ಯ...

ನನಗೀಗಾಲೆ
ದಕ್ಕಿದೆಯಲ್ಲ
ಮಧುಶಾಲೆಯ
ಬಟ್ಟಲು...ಪುಣ್ಯ
ಮಾಡುವ ಚಿಂತೆ
ನನಗೇಕಿಗ...?

ಶಾಯರಿ ೨೪೯

ಅವಳ
ಮನೆಗೆ ಹೋಗುವ
ಬೀದಿಯ ತುಂಬಾ
ಮಲ್ಲಿಗೆಯ ಘಮಲಿನ
ವಾಸನೆಯೆ
ತುಂಬಿಕೊಂಡಿದೆ
ಸಾಕಿ...

ಹೂದೋಟವೆನಿಲ್ಲ..
ನಿರಾಕರಣೆಗೆ ಸಿಕ್ಕು...
ನೊಂದು ಬಿದ್ದ
ಮಲ್ಲಿಗೆ ಗುಚ್ಚಗಳ
ತಿಪ್ಪೆಯೊಂದಿಹುದಲ್ಲ

ಶಾಯರಿ ೨೪೮

ಆ ತುಟಿಯಂಚಿನ
ನಗೆಯಿಂದ...
ನನ್ನೆದೆಯನು
ಘಾಸಿಗೊಳಿಸುವ
ಜರೂರತ್ತಾದರೂ
ಏನಿತ್ತು
ಸಾಕಿ....
ಅವಳಿಗೆ

ಕಣ್ಣಂಚಿನ
ಕುಡಿ ನೋಟದ
ಬಾಣದಿಂದಲೆ
ಕೊಂದು
ಬಿಡಬಹುದಿತ್ತಲ್ಲ

ಸಾಕಿ..೧೦

ಗಂಧದ ಕೊರಡುಗಳೇನು ಬೇಕಿಲ್ಲ.....
ಬೇವಿನ ಕಟ್ಟಿಗೆಗಳಿಂದಾದರೂ ಸರಿ...
ಇಂದು ಸಂಜೆಗೆ, ನನ್ನನು ಸುಟ್ಟು ಹಾಕಿಬಿಡು ಸಾಕಿ...
ನಾಳೆಯವಳ ಮದುವೆ ಮೆರವಣಿಗೆ ಸಾಗುವುದು..!!!
ಹೇಗೆ ಸಹಿಸಿಕೊಳ್ಳಲಿ ನಾನು...? ಬ್ಯಾಂಡ್ ಬಾಜಾದ ಸದ್ದನು...
ಅದಕ್ಕೂ ಮೊದಲೆ, ನನ್ನ ತಮಟೆಯ ಸದ್ದು ಬೀದಿ...
ಬೀದಿಗಳಲ್ಲಿ ಪ್ರತಿಧ್ವನಿಸಿಬಿಡಲಿ...

ಉರಿದು.... ಸುಟ್ಟು ಹೋದ ನನ್ನ ಬೂದಿಯನ್ನು
ಹೊಳೆಯಲ್ಲಿ ವಿಸರ್ಜಿಸಬೇಡ ಸಾಕಿ...
ಒಡಕು ಮಡಕೆಯಲ್ಲಾದರು ಸರಿ, ಗಾಳಿಗೆ ಹಾರಿ
ಹೋಗದಂತೆ ಮುಚ್ಚಳವ ಮುಚ್ಚಿ...ಬಚ್ಚಿಟ್ಟುಬಿಡು...
ಗಂಗೆಯನ್ನು ಹೊತ್ತು ತರಲೆಂದು ಬರುವ ನೀರೆಯರು....
ಬೂದಿ ಬೇರೆತ ನೀರನ್ನೊಯ್ದು...ಸುರಿಗಿಯನ್ನಾಗಿ ಅವಳ
ಮೈ ಮೇಲೆ ಸುರಿದಾರು......ಮದುವೆಗೂ ಮುನ್ನವೆ...
ನಾನನುಭವಿಸಿದ ವಿರಹದ ಉರಿ...
ಅವಳನ್ನು ತಬ್ಬಿಕೊಂಡಾತು...

ಗೋರಿಗೆಂದೆ....ಹೂವಿನ ಚಾದರ ಕಟ್ಟುವ ಬುಟ್ಟಿಯಲ್ಲಿ...
ಒಂದೆ.... ಒಂದು ಮೊಗ್ಗಿನ ಎಸಳು ಉಳಿಯದಂತೆ,
ಕಟ್ಟಬೇಕೆಂದು....ಅಲ್ಲಾಭಕ್ಷಿಗೆ ಆಜ್ಞಾಪಿಸಿಬಿಡು ಸಾಕಿ...
ಮತ್ತೈದೆಯ ಮುಡಿಯನೇರುವ ದಂಡಿಯಲ್ಲಿ...ಸಾವಿನ
ಹೂವೊಂದು ಸೇರಿ..... ಅಪಶಕುನವಾದಾತು...!!!!
ಅವಳ ಮುತ್ತೈದೆತನಕ್ಕೆ ಕಂಟಕ ತರುವ ಪಾಪವು...
ನನ್ನನೆ ಸುತ್ತುಕೊಂಡು......ಹುಗಿದ ಮಣ್ಣಿನೊಳಗು ನನಗೆ
ನೆಮ್ಮದಿಯಿಲ್ಲದಂತಾದಾತು...

ಆತ್ಮಕ್ಕೆ ಶಾಂತಿ ಸಿಗಲೆಂದೇನು...ಮಸಣದಲ್ಲೊಂದು
ದೀಪವ ಹಚ್ಚದಿರು ಸಾಕಿ....
ನಿ ಹಚ್ಚಿಟ್ಟ ಹಣತೆಯ ಬೆಳಕಿನಲ್ಲಿ...ಮೊದಲ ರಾತ್ರಿಗೆ
ಅವಳಾರಿಸುವ ದೀಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ
ದೌರ್ಭಾಗ್ಯ ನನ್ನದಾಗದಿರಲಿ...ಹೂ ಮಂಚದಲಿ ಅವಳೊಂದಿಗೆ... ಮಲಗದೆ ಹೋದರು...ಈ ಜನ್ಮಕ್ಕೆ,
ಅವಳ್ಹೆಸರಲೆ ಮಣ್ಣಲೆ ಮಲಗುವ ಸೌಭಾಗ್ಯವಾದರು
ಹಾಗೆ ಇರಲಿ....

Thursday, July 26, 2018

ಶಾಯರಿ ೨೫೫

ಪುಣ್ಯ...!!!
ಮಧುಶಾಲೆಯ
ಮುಖ್ಯದ್ವಾರಕ್ಕೆ
ಹೊಸ್ತಿಲೊಂದು
ಇಲ್ಲ...
ಸಾಕಿ...

ಯೌವ್ವನದಲ್ಲಿ
ಎಚ್ಚರವಿದ್ದಾಗಲೇ...
ಎಡವಿ ಬಿದ್ದವರು
ಇನ್ನೂ... ಮದ್ಯವನ್ನು
ಕುಡಿದ ಮೇಲೆ...?