Tuesday, June 16, 2020

ಶಾಯರಿ

ಬದುಕಲು ಬಿಡದಂತಹ
ನೆನಪುಗಳೊಟ್ಟಿಗೆ
ಹೇಗೆ ಬದುಕಿಬಿಟ್ಟೆಯೊ?
ಗಾಲಿಬ್..!!!
ಮಧುವನ್ನು ಕುಡಿದೆ
ಮರೆಯತ್ತೆನೆಂದು,
ಗೋರಿಯ ಸೇರಿದ ಕಥೆಯ
ವ್ಯಥೆಯನ್ನು ನಾನು
ಯಾರಲ್ಲಿ ತೊಡಿಕೊಳ್ಳಲಿ!

Tuesday, June 9, 2020

ಚುಟುಕುಗಳು

ನೀನು ಬಿಟ್ಟು
ಹೋದ ಘಳಿಗೆ!
ಎದೆಯ ನೆಲವೀಗ
ಪದಗಳೆ ಹುಟ್ಟದಷ್ಟು
ಬರುಡು!!
ಬರಬೇಡ ಇಲ್ಲಿಗೆ
ಎಂದು ದಿಗ್ಬಂಧನವ
ಹಾಕಿಬಿಟ್ಟಿದೆ
ಸುಡುಗಾಡು!

ಎದೆಗೆ ಮಾಡಿದ
ಗಾಯವನ್ನು
ಲೆಕ್ಕಿಸದೆ, ಕೆನ್ನೆಗೆ
ಸವರಿಕೊಂಡಿದ್ದಾಳೆ
ಅರಿಷಿಣ!
ಅವಳಿಗೆ ಅಕ್ಕಿಕಾಳು
ನೆತ್ತಿಗೆ, ಅಳಿದುಳಿದವು
ನನ್ನ ಬಾಯಿಗೆ. 
ಸಾಕಿನ್ನು ಎತ್ತಿಬಿಡಿ
ಊರ ಹೊರಗಲ್ಲಿ,
ನನಗಾಗಿ ಕಾಯುತಿದೆ
ಮಸಣ!

ನಿಜ.
ನಾನು ಕಡಿದು
ಹಾಕುವಷ್ಟು ದೊಡ್ಡ
ಮರವೇನಲ್ಲ!
ಸಾವಿರ ಜನರು
ತುಳಿದು ಹೋದರು
ಎದ್ದು ನಿಲ್ಲುವ ನಿಮ್ಮ
ಕಾಲಡಿಯ ಗರಿಕೆ!

ಎದೆಯಲ್ಲಿ ಎದ್ದು
ಹೋದ 
ಚಂಡಮಾರುತಗಳಿಗೆ
ಲೆಕ್ಕವೆ ಇಲ್ಲ!!
ಬದುಕನ್ನು ಚೆಂಡನ್ನಾಗಿಸಿ
ಆಟವಾಡಿದ ಕಪಟಿಯ
ನಾಟಕ ಮುಗ್ದ
ಜನರಿಗೇಕೊ
ಅರಿವಾಗುತಿಲ್ಲ!!

ಹಲ್ಲಿ ಲೊಚಗುಟ್ಡಿದರು
ಪ್ರೀತಿ ಹುಸಿಯಾಗಿ
ಹೋಯಿತಲ್ಲ
ಸಾಕಿ...
ಪಾಲಿಗೆ ಬಂದ
ವಿಷವನ್ನು ಹಿಡಿದು
ಯಾರಲ್ಲಿ ನ್ಯಾಯವನ್ನು
ಕೇಳಲಿ.

ತುಂಬಿಟ್ಟ ಮಧು
ಬಟ್ಟಲಿಗೆ, ಎಷ್ಟಾದರು
ಲಿಂಬೆಯ ರಸವನ್ನು
ಹಿಂಡಿಬಿಡು, ಅದೇನು
ನನ್ನ ಬದುಕಿನ
ಕಹಿಯನ್ನೇನು
ಕಡಿಮೆಗೊಳಿಸುವುದಿಲ್ಲ
ಸಾಕಿ...
ಬಟ್ಟಲು ಬರಿದಾಗುತ್ತದೆ
ಮಾತ್ರ.
ನೋವಿನ ಒರತೆ
ಎಂದು 

ಮೊದಲ ಹೆಜ್ಜೆಯನಿಟ್ಟಾಗ
ಎಲ್ಲರೂ...
ನಕ್ಕರು!
ಗೆದ್ದಿರುವೆನೆಂದುಕೊಂಡಿಲ್ಲ
ನಕ್ಕವರೆಲ್ಲ ಇಂದು
ಪಕ್ಕದಲ್ಲೆ ನಿಂತಿದ್ದಾರೆ.

ಕೇವಲ,
ಕಾಮದ ನೋಟದಲ್ಲೆ
ನನ್ನನ್ನು ಮೈಲಿಗೆಯಾಗಿಸಬೇಡ!
ನಮಗೆಂದೆ
ಮಧುಮಂಚ ಕಾದಿದೆ
ಇಲ್ಲಿ, ಬರುವುದಕ್ಕೆ
ಲಜ್ಜೆಯ
ನೆಪವನ್ನು ಮಾತ್ರ
ಒಡ್ಡಬೇಡ!

ಎದೆಯ ಕಡಲಿನ
ತುಂಬಾ....
ವಿರಹದ
ನಂಜನ್ನೆ ಸುರಿದು
ಹೋದೆಯಲ್ಲ
ನಂಜಿ!
ಮನಸಿನ ಭಾವನೆಗಳಿಗೆ
ಮೂರು ಕಾಸಿನ
ಬೆಲೆಯನ್ನೆ ಕೊಡದ
ಊಸರವಳ್ಳಿಯ
ಜನರ ಮಾತಿಗಿಂಜಿ!

Tuesday, June 2, 2020

ಚು

ನೀನು ಬಿಟ್ಟು
ಹೋದ ಘಳಿಗೆ!
ಎದೆಯ ನೆಲವೀಗ
ಪದಗಳೆ ಹುಟ್ಟದಷ್ಟು
ಬರುಡು!!
ಬರಬೇಡ ಇಲ್ಲಿಗೆ
ಎಂದು ದಿಗ್ಬಂಧನವ
ಹಾಕಿಬಿಟ್ಟಿದೆ
ಸುಡುಗಾಡು!

ಎದೆಗೆ ಮಾಡಿದ
ಗಾಯವನ್ನು
ಲೆಕ್ಕಿಸದೆ, ಕೆನ್ನೆಗೆ
ಸವರಿಕೊಂಡಿದ್ದಾಳೆ
ಅರಿಷಿಣ!
ಅವಳಿಗೆ ಅಕ್ಕಿಕಾಳು
ನೆತ್ತಿಗೆ, ಅಳಿದುಳಿದವು
ನನ್ನ ಬಾಯಿಗೆ. 
ಸಾಕಿನ್ನು ಎತ್ತಿಬಿಡಿ
ಊರ ಹೊರಗಲ್ಲಿ,
ನನಗಾಗಿ ಕಾಯುತಿದೆ
ಮಸಣ!

ನನ್ನೆದೆಯ ಗಾಯದ
ಮದ್ದು, ಅವಳ
ಕೆನ್ನೆಯ ಮೇಲೆಯೆ
ನಗುತ್ತಿತ್ತು.
ಅವಳು ಕೊಡಲಿಲ್ಲ!
ನಾನು ಕೇಳಲಿಲ್ಲ!

Sunday, May 24, 2020

ಶಾಯರಿಗಳು

ಅವಳಿಗಿನ್ನೂ...
ನನ್ನಮೇಲದಷ್ಟು
ಕೋಪವಿರಬಹುದು
ಸಾಕಿ....
ಮದುವೆಯ
ಮೊದಲ ರಾತ್ರಿಯಲ್ಲಿ
ಚೂರಾದ ಬಳೆಗಳನ್ನು
ತಂದು.... ನನ್ನ ಗೋರಿಯ
ಮೇಲೆ ಚೆಲ್ಲಿರುವಳಲ್ಲ!!

ಚುಟುಕುಗಳು


ಭಾರವಾಗುವುದಿಲ್ಲೇನು?
ಚೆಲುವೆ, ಮೂಗಿಗೆ
ಈ ನತ್ತು!!
ತರದಿದ್ದರೆ ಸಾಕು...
ನಿನ್ನ ಸೌಂದರ್ಯಕ್ಕೆ
ಕುತ್ತು!!

ಚುಟುಕು

ನನ್ನೊಳಗಿನ ಬರಹಗಾರ
ಮಲಗಿಕೊಂಡಿದ್ದಾನೆ.
ಸತ್ತು ಹೋಗಿಲ್ಲ!
ಲೇಖನಿಯೊಳಗಿನ
'ಶಾಯಿ' ಖಾಲಿಯಾಗಿದೆಯೆ
ಹೊರತು, ನಿಬ್ಬಿನ
ಹರಿತವಿನ್ನು
ಕಡಿಮೆಯಾಗಿಲ್ಲ!

Monday, May 18, 2020

ಹಾಯ್ಕು ೨೦೧-೨೫೦

ಇಂದು ಅವರ
ಹುಟ್ಟು ಹಬ್ಬ.
ಓ!!! ಅವರಿನ್ನೂ... ಬದುಕಿದ್ದಾರ!