Friday, July 17, 2020

ಶಾಯರಿ

ನಿನ್ನರಮನೆಯ ಮದ್ಯವೆಲ್ಲ
ನನಗೆ ಬೇಕೆಂಬ
ಹುಚ್ಚು ಹಠವೇನಿಲ್ಲ
ಸಾಕಿ...
ರಂಗೀಯ ನೆನಪುಗಳು
ಅಳಿಸಿ ಹೋಗುವವಂತಿದ್ದರೆ
ಈ ಒಂದು ಬಟ್ಟಲು
ಮದಿರೆಯಷ್ಟೆ ಸಾಕು.

ಚುಟುಕು

ಹೀಗೆ...
ಗುಲಾಬಿಗಳನ್ನೆ ತೋರಿಸುತ್ತ
ಸುಮ್ಮನೆ ನನ್ನನು
ಕೊಲ್ಲಬೇಡಿ!
ಬಿಟ್ಟು ಹೋದ
ಹೂವಂತವಳನ್ನೊಮ್ಮೆ
ದಯಮಾಡಿ...
ಕರೆತಂದುಬಿಡಿ!

Thursday, July 16, 2020

ಚುಟುಕು

ಬದುಕಿಗೆ ಹೆಗಲು
ಕೊಟ್ಟವರ ಬುಡವನ್ನೆ
ಅಲ್ಲಾಡಿಸುವ
ಜನರಿಹರಿಲ್ಲಿ!
ಮೌಲ್ಯಗಳಿಗಿಂತ,
ಧನ-ಕನಕಗಳನ್ನೆ
ಹೆಚ್ಚು... ತೂಗಿ ನೋಡುತ್ತಾರೆ
ನಾಲ್ಕು ದಿನದ
ಸಂತೆಯ ತಕ್ಕಡಿಯಲ್ಲಿ!

Tuesday, June 30, 2020

ಚುಟುಕು

ಹೀಗೆ, ಎಲ್ಲರಿಗೂ
ತೆರೆದ ಬೆನ್ನನ್ನು 
ತೋರಿಸುತ್ತಿರಬೇಡ!
ಬೆಣ್ಣೆಯಂತ ಮಾತುಗಳಿಂದಲೆ,
ಸಣ್ಣನೆಯ ಗೀರುಗಳನ್ನು
ಎಳೆದು ಹೋಗುತ್ತಾರೆ.
ನಂಜು ಎರಿದ ಮೇಲೆ
ನೆಮ್ಮದಿಯ ಔಷಧಿಗಾಗಿ 
ಆಗ ತಡಕಾಡಬೇಡ!

ಕಾವೇರಿ ಆನ್ಲೈನ್

KAVERI ONLINE NOTIFICATION: Your Login Name is : www.sharanubesha@gmail.com, Password is : Sharanappa@616885 and Activation Code is : 794693

Monday, June 22, 2020

ಎಡಿಟ್ಸ್

ನೀನು ಬಿಟ್ಟು
ಹೋದ ಘಳಿಗೆ!
ಎದೆಯ ನೆಲವೀಗ
ಪದಗಳೆ ಹುಟ್ಟದಷ್ಟು
ಬರುಡು!!
ಇಲ್ಲಿಗೂ... ಬರಬೇಡವೆಂದು
ದಿಗ್ಬಂಧನವ ಹಾಕಿಬಿಟ್ಟಿದೆ
ಸುಡುಗಾಡು!


ನಿಜ.
ನಾನು ಕಡಿದು
ಹಾಕುವಷ್ಟು ದೊಡ್ಡ
ಮರವೇನಲ್ಲ!
ಸಾವಿರ ಜನರು
ತುಳಿದು ಹೋದರು
ಎದ್ದು ನಿಲ್ಲುವ ನಿಮ್ಮ
ಕಾಲಡಿಯ ಗರಿಕೆ!

ಎದೆಯಲ್ಲಿ ಎದ್ದು
ಹೋದ 
ಚಂಡಮಾರುತಗಳಿಗೆ
ಲೆಕ್ಕವೆ ಇಲ್ಲ!!
ಬದುಕನ್ನು ಚೆಂಡನ್ನಾಗಿಸಿ
ಆಟವಾಡಿದ ಕಪಟಿಯ
ನಾಟಕ ಮುಗ್ದ
ಜನರಿಗೇಕೊ
ಅರಿವಾಗುತಿಲ್ಲ!!

ಹಲ್ಲಿ ಲೊಚಗುಟ್ಡಿದರು
ಪ್ರೀತಿ ಹುಸಿಯಾಗಿ
ಹೋಯಿತಲ್ಲ
ಸಾಕಿ...
ಪಾಲಿಗೆ ಬಂದ
ವಿಷವನ್ನು ಹಿಡಿದು
ಯಾರಲ್ಲಿ ನ್ಯಾಯವನ್ನು
ಕೇಳಲಿ.

ತುಂಬಿಟ್ಟ ಮಧು
ಬಟ್ಟಲಿಗೆ, ಎಷ್ಟಾದರು
ಲಿಂಬೆಯ ರಸವನ್ನು
ಹಿಂಡಿಬಿಡು, ಅದೇನು
ನನ್ನ ಬದುಕಿನ
ಕಹಿಯನ್ನೇನು
ಕಡಿಮೆಗೊಳಿಸುವುದಿಲ್ಲ
ಸಾಕಿ...
ಬಟ್ಟಲು ಬರಿದಾಗುತ್ತದೆ
ಮಾತ್ರ.
ನೋವಿನ ಒರತೆ
ಎಂದು 

ಮೊದಲ ಹೆಜ್ಜೆಯನಿಟ್ಟಾಗ
ಎಲ್ಲರೂ...
ನಕ್ಕರು!
ಗೆದ್ದಿರುವೆನೆಂದುಕೊಂಡಿಲ್ಲ
ನಕ್ಕವರೆಲ್ಲ ಇಂದು
ಪಕ್ಕದಲ್ಲೆ ನಿಂತಿದ್ದಾರೆ.

ಕೇವಲ,
ಕಾಮದ ನೋಟದಲ್ಲೆ
ನನ್ನನ್ನು ಮೈಲಿಗೆಯಾಗಿಸಬೇಡ!
ನಮಗೆಂದೆ
ಮಧುಮಂಚ ಕಾದಿದೆ
ಇಲ್ಲಿ, ಬರುವುದಕ್ಕೆ
ಲಜ್ಜೆಯ
ನೆಪವನ್ನು ಮಾತ್ರ
ಒಡ್ಡಬೇಡ!

ಎದೆಯ ಕಡಲಿನ
ತುಂಬಾ....
ವಿರಹದ
ನಂಜನ್ನೆ ಸುರಿದು
ಹೋದೆಯಲ್ಲ
ನಂಜಿ!
ಮನಸಿನ ಭಾವನೆಗಳಿಗೆ
ಮೂರು ಕಾಸಿನ
ಬೆಲೆಯನ್ನೆ ಕೊಡದ
ಊಸರವಳ್ಳಿಯ
ಜನರ ಮಾತಿಗಿಂಜಿ!

ನನಗೆ ಮುಖಕ್ಕೆ
ಬಣ್ಣ ಹಚ್ಚಿಕೊಳ್ಳುವುದು
ಗೊತ್ತಿಲ್ಲ! ಹೀಗಾಗಿ
ಎಲ್ಲರ ಮುಂದೆ
ನಾಟಕವಾಡಲು
ಬರುವುದಿಲ್ಲ!
ಹೇಳಿದ್ದನ್ನು ಕೇಳುತ್ತೇನೆ.
ತಿಳಿದಿದ್ದನ್ನು ಹೇಳುತ್ತೇನೆ.
ಇವೆರಡರ ಮಧ್ಯದಲ್ಲಿ,
ಎದ್ದು ಹೋದವರ ಬೆನ್ನ
ಹಿಂದೆ ಮಾತನಾಡುವುದನ್ನು
ಈಗೀಗ ನಿಲ್ಲಿಸಿಬಿಟ್ಟಿದ್ದೇನೆ.

ಸೊಂಕು ಯಾವುದಾದರೆನು?
ಎದುರಿಸಿ ಗೆಲ್ಲಬಲ್ಲೆನು.
ಸೊಂಕಿತ ಮನಸ್ಸುಗಳನ್ನು
ಹೇಗೆ ಎದುರಿಸಲಿ!
ಮದ್ದಿಲ್ಲದ‌ ರೋಗಕ್ಕೆ,
ಸಾವಾದರು ಔಷಧಿಯಾಗಬಹುದು!
ಹುಟ್ಟು- ಸಾವಿನ ನಡುವೆ
ನರಳುವಂತೆ ಮಾಡುವ ಈ
ಜಗದ ಸ್ನೇಹವನ್ನು  ನಾ
ಹೇಗೆ ಗಟ್ಟಿಕೊಳಿಸಿಕೊಳ್ಳಲಿ!

ಆಡುವ ಮಾತುಗಳಲ್ಲಿ
ನೂರೆಂಟು ಅರ್ಥಗಳಿವೆ.
ವ್ಯರ್ಥವಾಗಿ ಹುಡುಕಬೇಡ!
ಹಚ್ಚಿಕೊಳ್ಳುವವರಿಗೆ ಬಣ್ಣ
ಯಾವುದಾದರೇನು?
ನಮಗೆ ಮಸಿಯನ್ನು 
ಬಳೆಯವುದು ಮಾತ್ರ
ಮರೆಯುವುದಿಲ್ಲ!

Tuesday, June 16, 2020

ಶಾಯರಿ

ಮದ್ದಿಲ್ಲದ ಸೊಂಕಿಗೆ
ತುತ್ತಾಗಿ, ನರಳಿ...ನರಳಿ
ಬಳಲಿಹೋಗಿದ್ದೇನೆ
ಸಾಕಿ...
ಸಾಕಿನ್ನು, ನೋವಿನಂಗಳ.
ಸುತ್ತಿಸುಬಿಡು ನನ್ನನಿಂದು
ಹರಕು ಛಾಪೆಯಲ್ಲಿ