Tuesday, August 23, 2016

ಶರಣ

ಕುಡಿಯುವ ನೀರು
ವಿಷವಾದರೆಂತಯ್ಯ
ಸುರಿಯುವ ಮಳೆಯು
ಬೆಂಕಿಯಾದೊಡೆಂತಯ್ಯ
ತಾಯಿ ಮಗನಿಗೆ ವ್ಯೆರಿಯಾದೊಡೆ
ಯಾರಗೆ ದೂರಲಿ ಶರಣ

Saturday, August 20, 2016

ಏನೆಂದು ಬರೆಯಲಿ

ಏನೆಂದು ಬರೆಯಲಿ ನಾ
ಲೋಕದ ತಿರುಗ ಕಂಡು
ಏನೆಂದು ಅರಿಯಲಿ ನಾ
ಲೋಕದ ಸತ್ಯವ ಕಂಡು

ಹುಟ್ಟಿದ ಕೂಡಲೆ ತಾಯಿಯ
ಎದೆಹಾಲಿಗೆ ಬಾಯಿ ತೆರೆಯುವ
ಮಗ ಮಮತೆಯನುಣ್ಣುತ್ತಾನೆ
ಮದುವೆಯ ನಂತರ ಮಡದಿ
ಎದೆಯ ಬಯಸುವ ಮಗ
ಕಾಮವನುಣ್ಣುತ್ತಾನೆ 

ನದಿಯು ತನ್ನ ಹುಟ್ಟುಗುಮವ ಬಿಟ್ಟು
ಶರದಿಯನು ಸೇರುವಂತೆ
ಹೆತ್ತೊಡಲ ಮರೆತು
ಕಾಮದೊಡಲ ಸೇರುವ ಮಗನೇ...
ಜೀವವಿತ್ತವಳ ಮರೆತು
ದೇಹವಿತ್ತವಳನು ಸೇರುವೆಯಲ್ಲೋ

ತಾಯಿ ಹೆಣ್ಣೆ, ಮಡದಿ ಹೆಣ್ಣೆ
ಇವೆರಡರಂತರವನರಿತು
ಬಾಳು ಮಗನೇ
ತಾಯಿ ಮಡಿಲು ತಂಪು
ಮಡದಿ ಮಡಿಲು ಬೆಂಕಿ
ಮಡಿಲ ತಂಪಿನೊಳರಳುವೆಯೋ
ಮಡಿಲ ಬೆಂಕಿಯೊಳು ನರಳುವೆಯೋ

ಏನದು?

ಕದ್ದ ತಿಂದ್ರ ದಿಡ್ಡಿಗೆ
ದುಡಿದ ತಿಂದ್ರ ರೆಟ್ಟಿಗೆ
ಉಳುಮೆ ಮಾಡಿದ್ರ ಭೂಮಿಗೆ
ಚೀಲ  ರಾಶಿ ಮನೆಗೆ

Friday, August 12, 2016

ಸಹಿಸೋದು

ಹದಮಾಡಿದ ಹೊಲನ
ಸಾಕಷ್ಟು ನೀರನ್ನ ನುಂಗತ್ಯೆತಿ
ಬದುಗಟ್ಟಿದ್ದ ಕೆರಿನ ಸಾಕಷ್ಟು
ನೀರನ್ನ ಹಿಡದಿಡತ್ಯೆತಿ

ಹದವಾದ ಮನಸ್ಸಿದ್ರನ
ಸುಖ-ದುಃಖನ ನುಂಗತ್ಯೆತಿ

ಬರಹಗಾರ ?

ನಾನೊಬ್ಬ ಬರಹಗಾರನಷ್ಟೆ
ಅಲ್ಲೊ ಇಲ್ಲೊ,  ಯಾರೊ ಬಿಟ್ಟ
ಬಿಸಾಡಿದ ಪದಗಳ ಹುಡುಕಿ
ನನ್ನ ನೋವು ನಲಿವುಗಳೆಂಬ
ಪದ್ಯವೊ, ಗದ್ಯವೊ ಎಂಬಂತಹ
ಸಾಲಿಗೆ ತುರುಕುವೆನಷ್ಟೆ

ನಾನೊಬ್ಬ ಕೇಳುಗಾರನಷ್ಟೆ
ಅವರಿವರೂ ಹಾಡಿದ, ನುಡಿದ
ಮಾತುಗಳರ್ಥವ ಹಿಡಿದು
ಕುಡಿದು, ಮಲಗೆದ್ದು
ಅದರಲರ್ಥವಾದುದ
ಬರೆಯುವನಷ್ಟೆ

Thursday, August 11, 2016

ಚಿನ್ನಕ್ಕಿಂತ ಭಾರ

ಕೇವಲ  ಚೂರು ಬಂಗಾರಕ್ಕಾಗಿ
ಭಾರವಾಗಿಬಿಟ್ಟೇನೆ ?
ಮಾತು ಮಾತಿಗೂ ಚಿನ್ನ, ರನ್ನ
ಬಂಗಾರವೆನ್ನುತ್ತಿದ್ದವರಿಂದು
ಆ ಹತ್ತು ಗ್ರಾಮಿನ ಬಂಗಾರದೆದುರು
ಈ ಐವತ್ತು ಕೆಜಿಯ ಬಂಗಾರ
ಅಗ್ಗವಾಗಿ ಹೋಯಿತೆ..

ಈ ಚಿನ್ನ ನನ್ನ ಬಾಳಿನಲಿ
ಬಂಗಾರ ಬೆಳಕನು ಚೆಲ್ಲುವ ಗಣಿ,
ನನ್ನ ವಂಶಕ್ಕೆ ಬಂಗಾರದಂಥ
ಮಕ್ಕಳನು ಹೆತ್ತ ಮಡದಿ
ರುಚಿ, ರುಚಿಯನಡುಗೆ ಮಾಡುವ
ಬಂಗಾರ ಬಳೆಗಳ ಕ್ಯೆ
ಎಂದು ಮಾತು ಮಾತಿಗೂ ಹೇಳುತ್ತಿದ್ದ
ನೀನು
ನಿನ್ನ ಕುಡಿತದ ಚಟಕ್ಕಾಗಿ  ಎಲ್ಲವ
ಅಳಿದು, ಮರೆತು ನಿಂತಿರುವೆ

ನನ್ನ ಮಣ್ಣ ಸೇರಿಸಿಯಾದರೂ ಚಿನ್ನವ
ಪಡೆಯುವೆನೆಂದಿರುವೆ,
ಭೂಮಿ ಅಗೆದರೆ ಚಿನ್ನ ಸಿಕ್ಕರೂ ಸಿಗಬಹದು
ಸಿಗದಲೆ ಇರಬಹುದು
ನಾ ಮಣ್ಣ ಸೇರಿದರೆ ಮರಳಿ ನಾ
ಬೇಕೆಂದು ನೀ ಮಣ್ಣ ಅಗೆದರೆ
ನಾನು ಸಿಗಲಿಕ್ಕಿಲ್ಲವೇನೊ ಆದರೆ
ನನ್ನ ಅಸ್ಥಿ ಪಂಜರ ಮಾತ್ರ ನಿನ್ನ
ದಾರಿ ಕಾಯುತ್ತಿರುತ್ತದೆ

ಬಂಗಾರ ನಾನೂ?

ದುಃಖ

ನಿನ್ನೆದೆಯ ದುಃಖ ಎಷ್ಟೆಂದು
ನೀ ಹೇಳದಿದ್ದರೂ
ನಿನ್ನದರುವ ಅದರಗಳು
ಸೂಚಿಸುತಿವೆ
ಕಣ್ಣಂಚಲಿ ಜಾರದೆ ನಿಂತ ಹನಿ
ತೋರುತಿದೆ
ಮೆದುವಾಗಿ ಮೆತ್ತಗಿದ್ದ ಆ ಗಲ್ಲವು
ಬಿರುಸಾಗಿದೆ
ಮುತ್ತಾಗಿದ್ದ ಮಾತು ಮೌನದ
ಹುತ್ತವಾಗಿದೆ
ಹಕ್ಕಿಯ ರೆಕ್ಕೆಯಂತಿದ್ದ ಆ ಮುಂಗರುಳುಗಳು
ಸೋತಂತಿವೆ
ಹಣೆಯ ಮೇಲಿನ ಬಿಂದು ಬೆವರಿಗೆ
ಕರಗಿದೆ

ಅತ್ತುಬಿಡೊಮ್ಮೆ ಕೆರೆಯ
ಕಟ್ಟೆ ಒಡೆವ ಹಾಗೆ
ಸುರಿಸು ಬಿಡು ಕಣ್ಣೀರನು ಕರಿಮೋಡ
ಸುರಿದು ಹಗುರಾಗುವ ಹಾಗೆ
ನಿನ್ನ ಬಾಳ ನೋವನೆಲ್ಲ ನನಗೆ ನೀಡಿ
ಒರಗಿ ಬಿಡು ನನ್ನ ಹೆಗಲ ಮೇಲೆ
ಯಾವ ನೋವಿನ ಅರಿವಿಲ್ಲದಂತೆ
ಈ ಜಗದ ಪರಿವಿಲ್ಲದಂತೆ