Thursday, July 26, 2018

ಶಾಯರಿ ೨೫೫

ಪುಣ್ಯ...!!!
ಮಧುಶಾಲೆಯ
ಮುಖ್ಯದ್ವಾರಕ್ಕೆ
ಹೊಸ್ತಿಲೊಂದು
ಇಲ್ಲ...
ಸಾಕಿ...

ಯೌವ್ವನದಲ್ಲಿ
ಎಚ್ಚರವಿದ್ದಾಗಲೇ...
ಎಡವಿ ಬಿದ್ದವರು
ಇನ್ನೂ... ಮದ್ಯವನ್ನು
ಕುಡಿದ ಮೇಲೆ...?

Wednesday, July 25, 2018

ಶಾಯರಿ ೨೫೬

ಬೇಕಿದ್ದರೆ,
ನಿನ್ನ
ಕಹಿ ಮದ್ಯವನ್ನು
ಕುಡಿದು...
ಕುಡಿದೆ...
ಸತ್ತುಬಿಡುವೆ
ಸಾಕಿ...

ಅವಳಿಂದಲೆ
ಅಳೆದದ್ದು..
ಎಂಬ ಕಹಿ
ಸತ್ಯವನ್ನು...
ನಾ...ಯಾರಲ್ಲಿಯೂ...
ಹೇಳಲಾರೆ

ಶಾಯರಿ ೨೫೭

ಅವಳಿಲ್ಲದ
ಈ ಸಂಜೆಗಳಲ್ಲಿ
ಜೊತೆಗುಳಿದದ್ದು
ಕಣ್ಣೀರು.. ನಿನ್ನ
ಮಧು ಬಟ್ಟಲು
ಸಾಕಿ...

ಒಂದು ಉಪ್ಪು...
ಒಂದು ಕಹಿ...
ಆರಿಸಿಕೊಂಡದ್ದು
ಕಹಿಯನ್ನೆ...
ಉಪ್ಪು ಅವಳನ್ನು
ನೆನಪಿಸಿದರೆ...
ಕಹಿಯಾದರೂ...
ಚೂರು...ಚೂರು..
ಅವಳ ನಗೆಯನ್ನು
ಮರೆಸುತ್ತಿತ್ತು..

ಶಾಯರಿ ೨೫೨

ಜನರಿಗೆಲ್ಲ..
ಏನು ಗೊತ್ತು
ಸಾಕಿ...
ತಿಳಿದಿಹರು
ಮದ್ಯವೆ...
ನನ್ನನು
ಕೊಲ್ಲುತಿಹುದೆಂದು

ಅವರಿಗಿನ್ನು
ಗೊತ್ತಿಲ್ಲ ‌..
ನಿತ್ಯ
ಕೊಲ್ಲುತ್ತಿದ್ದವಳ
ನೆನಪುಗಳನ್ನೆ...
ನಿನ್ನ ಮದ್ಯವಿಂದು
ಕೊಲ್ಲುತಿಹುದೆಂದು

ಶಾಯರಿ ೨೫೦

ಕುಡಿಯುವುದನ್ನೆ
ಬಿಟ್ಟು ಬಿಡುವೆ
ಸಾಕಿ....
ಅವಳ ನೆನಪನ್ನು
ನೆನಪಿಸದ
ಜಾಗವೊಂದು ಇದ್ದರೆ
ಹೇಳು ಈ
ಲೋಕದಲ್ಲಿ...

ಬದುಕನ್ನೆ ಕಟ್ಟಿಕೊಳ್ಳುವೆ...
ಮರಳಿ....
ನಿನ್ನ ಮದ್ಯವೊಂದನ್ನು
ಹೊರತುಪಡಿಸಿ
ಅವಳನ್ನು
ಮರೆಸುವ ಬೇರಾವ
ಮದ್ದೊಂದಿದ್ದರೂ...
ತಿಳಿಸು

ಸಾಕಿ ೧೧

ಅವಳು ಬರುವ ಹೊತ್ತಾಯಿತು...
ನಿನ್ನ ಮಧುಶಾಲೆಯ ಗುಲಾಬಿಯ ತೋಟಕ್ಕೊಂದು
ಪರದೆಯನ್ನು ಕಟ್ಟಿಸಿಬಿಡು ಸಾಕಿ....
ಅವಳಂದವ ಕಂಡು...ಹೂಗಳೆಲ್ಲ ಸುಟ್ಟು ಹೋದಾವು..!!!
ನಾನೇನೊ....ಅಧರದ ಮಧುವು ಸಿಗದೆ, ಬಿಕ್ಕಿ...
ಬಿಕ್ಕಿ.....ಬಂದಿರುವೆನಿಲ್ಲಿಗೆ,
ಹೂವೆದೆಯ ಗಂಧವು ಸಿಗದೆ...ಹಾರಾಡುವ ದುಂಬಿಗಳು
ಸದ್ದಿಲ್ಲದೆ ಗೋರಿಯನ್ನು ಸೇರಿ ಹೋದಾವು...!!!

ಅವಳ ಮುಖಕ್ಕೆ ಪರದೆಯನ್ನಾದರೂ...
ಕಟ್ಟಿಕೊಂಡು ಬರಲು ಹೇಳಿ ಕಳುಹಿಸು ಸಾಕಿ...
ಹೆಚ್ಚಾಗಿಬಿಟ್ಟಿದೆ...ಬೀದಿಯಲ್ಲಿ ಹಿಂದೆ ಬಿದ್ದು ಕಣ್ಣು ಹೊಡೆಯುವವರ ಸಾಲು...
ಅವಳಾದರೂ...ಹಂಚುವಳದೇಷ್ಟು ಪ್ರೀತಿಯಲ್ಲಿ ಪಾಲು..
ದಕ್ಕದೆ ಹೋದವರೆಲ್ಲ ನಿನ್ನ ಮಧುಶಾಲೆಯ ಬಟ್ಟಲನು
ಹಿಡಿದು.....ಬಿದ್ದಿರುವರಲ್ಲ ಮುರಿದುಕೊಂಡು ಕಾಲು

ನೋಡಲ್ಲಿ...!!! ಊರ ಹೊರಗಿನ ದೇವಿಯ ಜಾತ್ರೆಯಲ್ಲಿ
ಸದ್ದುಗದ್ದಲವಿಲ್ಲದೆ ಎಷ್ಟೋ...ಪ್ರಾಣಿಗಳ ನೆತ್ತರು ಮಣ್ಣಿನಲ್ಲಿ
ಇಂಗಿ ಹೋಗುತ್ತಿದೆ ಸಾಕಿ....
ಅವಳು ನಗುವುದನ್ನು ಕೆಲದಿನ ಮರೆಯಲಿಕ್ಕಾದರು ಹೇಳು..
ಹಿಂದೆ ನಗುವಿಗೆ ಸೋತವರೆಲ್ಲ, ನೆತ್ತರನ್ನೆ ಕಾರಿಕೊಳ್ಳುತಿಹರು
ನಿನ್ನ ಹೂದೋಟದಲ್ಲಿ... ರಕ್ತ ಮೆತ್ತಿದ ಗುಲಾಬಿಗಳೇನೊ
ನಗುನಗುತಿಹವು...ಏನು ಆಗಿಲ್ಲದಂತೆ, ಕೊಟ್ಟ ಹೂವನು
ಮೂಸಿಯು ನೋಡದೆ, ಹೊಸಕಿ ಹೋದಳವಳು
ಏನು ಗೊತ್ತಿಲ್ಲದಂತೆ...

ಆ ಮಿಣಮಿಣಗುವ ತುಟಿಗಳಿಗಾದರೂ...
ನೋಡುಗರೆದೆಯಲ್ಲಿ ಮತ್ತೇರಿಸುವಂತಹ ..ಬಣ್ಣವನ್ನು
ಹಚ್ಚಿಕೊಳ್ಳದಿರೆಂದು ವಿನಂತಿಸಿಕೊ.. ಸಾಕಿ....
ತುಟಿಯಂಚಿನ ಸವಿಯನು ಸವಿಯಲು ಹೋದವರೆಲ್ಲ...
ಬಟ್ಟಲೊಳಗಿನ ಕಹಿ ಮದ್ಯಕ್ಕೆ......ದಾಸರಾಗಿಹರೆಲ್ಲ
ತುಟಿಯ ರಂಗಿನ ಗುಂಗಿನೊಳು ಬಿದ್ದವರೆಲ್ಲ.....ಹೂಜಿ..
ಹೂಜಿಗಳನೆ ಖಾಲಿ ಮಾಡುತ್ತಿದ್ದರೂ......ನಶೆ ಇಳಿಯುವ
ಸೂಚನೆಯೆ ಇನ್ನೂ ಸಿಗುತ್ತಿಲ್ಲ...ಮಧುಶಾಲೆಯಲ್ಲಿ‌ ಮಲಗಿದ
ಲಕ್ಷ್ಮೀಗೂ...ಕೂಡಾ ಎಚ್ಚರವಾಗಿಲ್ಲ...!!!!

Monday, July 23, 2018

ಶಾಯರಿ...೨೫೪


ಹುಣ್ಣಿಮೆ
ರಾತ್ರಿಯಲ್ಲಿ
ಇನ್ನಷ್ಟೂ
ಸಿಂಗರಿಸಿಕೊಳ್ಳದಿರೆಂದು
ಅವಳಿಗೆ ನಿ...
ಹೇಳಿಬಿಡು
ಸಾಕಿ....

ತುಂಬು ಚಂದಿರ...
ನಾಚಿ.. ಬಿದ್ದಾನು
ಬೀದಿಗೆ...