ದಿ.೦೩-೦೨-೨೦೧೮ ಶನಿವಾರ ಸಂಜೆ ೬.೦೦ ಕ್ಕೆ ಮೈಸೂರು ಮಠದಲ್ಲಿ ನಡೆದ ೮೦ ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿಯ ಉಪನ್ಯಾಸಕರಾಗಿ ಆಗಮಿಸಿದ್ದಂತಹ ಶರಣಪ್ಪ ಕ. ಬೇವಿನಕಟ್ಟಿ ಗ.ಗಡ ಇವರು ವ್ಯಕ್ತಿಯ ಒಂದು ಸಾಹಿತ್ಯದ ಹಸಿವು ಎಷ್ಟು ಉನ್ನತಮಟ್ಟದವರೆಗೆ ತೆಗೆದುಕೊಂಡು ಹೋಗುತ್ತದೆ ಎಂದು ಹೇಳುವುದರ ಮೂಲಕ ಕಳೆದ ತಿಂಗಳು ಮುಂಬೈನಲ್ಲಿ ಆಯೋಜಿಸಿದ್ದಂತಹ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿ ಇವರ 'ಚಂದ್ರವ್ವ' ಎಂಬ ಕಥೆಗೆ ತೀರ್ಪುಗಾರರ ವಿಶೇಷ ಬಹುಮಾನವು ಲಭಿಸಿದ್ದು ಅದರ ವಿಷಯವಾಗಿ ನಾನು ನನ್ನ ಕಥೆ ಎಂಬ ತಮ್ಮದೆ ಕಥೆಯ ಹುಟ್ಟು, ಸಾರಾಂಶ ಮತ್ತು ವೈಶಿಷ್ಟ್ಯತೆ ಹಾಗೂ ತಾವು ಸಾಹಿತ್ಯದೆಡೆಗೆ ನಡೆದು ಬಂದ ಹಾದಿಯ ವಿವರವನ್ನು ಪ್ರಸ್ತುತಪಡಿಸಿದರಲ್ಲದೆ, ಸಮಾಜದಲ್ಲಿ ಕಿತ್ತು ತಿನ್ನುವ ಬಡತನಕ್ಕೆ ಸಿಕ್ಕ ಕುಟುಂಬವು ಕಾಮಾಂದನ ಕೈಗೆ ಸಿಕ್ಕ ಹೆಣ್ಣು ಪಡುವ ಪಾಡನ್ನು ಹೇಳುವ ಮೂಲಕ ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು. ತದ ನಂತರದಲ್ಲಿ ಅತಿಥಿಗಳಾಗಿ ಆಗಮಿಸಿದ್ದಂತಹ ಜಗದೀಶ ಹುಲ್ಲೂರ ಅವರು ಕಥೆಯ ಕುರಿತು ವಿಮರ್ಶಾತ್ಮಕ ನುಡಿಗಳನ್ನಾಡುತ್ತ ಕಥೆಯು ಹೇಗಿರಬೇಕು, ಅದರಲ್ಲಿ ಬಳಸಿಕೊಳ್ಳುವ ಪದಗಳು, ಮುಕ್ತಾಯ ಹೇಗಿರಬೇಕು ಹಾಗೂ ಈ ಕಥೆಯಲ್ಲಿ ಕಥೆಗಾರರು ದಾನವನ್ನು ಮಾನವನ್ನಾಗಿಸಿ ಮಾನವನಿಂದ ಭಗವಂತನನ್ನಾಗಿಸುವ ಪರಿ ಹಾಗೂ ಇವರು ಬಳಸಿದಂತಹ ಶಬ್ದಗಳು, ನಿರೂಪಣಾ ಶೈಲಿ ಓದುಗರ ಕಣ್ತೆರೆಸುವಂತಿವೆ, ಕಥೆ ಓದುಗನನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ ಎಂದು ಅಭಿನಂದಿಸಿದರು.ಎ.ಕೆ.ವಂಟಿ ಕಾರ್ಯಕ್ರಮದ ಉಪಸ್ಥಿತಿಯ ಕುರಿತು ಮಾತನಾಡಿದರೆ, ಕಾವ್ಯ ಪರಿಚಯವನ್ನು ಕು. ಎ.ಟಿ.ಪೋಲಿಸ್ ಪಾಟೀಲ ನಡೆಸಿಕೊಟ್ಟರೆ, ಕವನ ವಾಚನವನ್ನು ಕು. ಕೆ.ಬಿ. ಮಾಳೋತ್ತರ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷಿಯ ಭಾಷಣವನ್ನು ಶರಣಮ್ಮ ಅಂಗಡಿ ಶಿ. ಕ.ಸಾ.ಪ.ಮಹಿಳಾ.ಅ.ಇವರು ಮಾತನಾಡಿದರು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಎಸ್.ಎ. ನರೆಗಲ್ ಅವರು ನಿರೂಪಿಸಿಕೊಟ್ಟರೆ, ಹನಮಂತಪ್ಪ ಭಜಂತ್ರೀ ಅವರು ವಂದನಾರ್ಪಣೆಯ ಮೂಲಕ ಕಾರ್ಯಕ್ರಮಕ್ಕೆ ತೆರೆಯನೆಳೆದರು. ಈ ಒಂದು ಯಶಸ್ವಿ ಕಾರ್ಯಕ್ರಮದಲ್ಲಿ
ಕೆ.ಎಸ್.ಗಾರವಾಡಹಿರೇಮಠ, ಕೆ.ಜಿ. ಸಂಕಟಿ, ಸಾಂಗ್ಲಿಕರ, ಎಮ್.ಎಸ್.ಮಕಾನದಾರ, ಲಲಿತಾ ಪವಾರ, ಎಚ್. ಎ ಚಿಂತಗುಂಟಿ ಹುಚ್ಚಪ್ಪ ಹಾವೇರಿ, ಚಂದ್ರಶೇಖರ ಮಾಡಲಗೇರಿ, ವಿನಾಯಕ ಕರ್ಣೆ, ವಿಶ್ವಬ್ರಾಹ್ಮಣ ಮುಂತಾದ ಕನ್ನಡದ ಮನಸ್ಸುಗಳು ಉಪಸ್ಥಿತರಿದ್ದರು.
Friday, January 26, 2018
ಚಂದ್ರವ್ವ ಸಾಹಿತ್ಯ ಸಂಜೆ
Subscribe to:
Post Comments (Atom)
No comments:
Post a Comment