ಜೋಡು ಹಾಸಿಗೆಯಲಿ ನಿನ್ನೊಬ್ಬಳನೆ...
ಒಂಟಿಯಾಗಿಸಿ, ಬರುವಾಸೆಯು
ನನಗೂ... ಇರಲಿಲ್ಲ
ಎಷ್ಟೇ.. ಹೊರಳಾಡಿ.. ಕಣ್ಮುಚ್ಚಿದರೂ...
ಗಡಿಯಾರದ ಶಬ್ದವು... ಮಲುಗಲೆ ಬಿಡುತಿಲ್ಲ
ಸವಿ ನೆನಪುಗಳೊಂದಿಗೆ...ಹಿಂಡಿ
ಹಿಪ್ಪಿಕ್ಕುವ ಚಳಿಯ ತೊಳಿಗೆ ನಿನ್ನ
ಕೊಟ್ಟು ಬರಲು ನನ್ನಲಿ ಅದೇಷ್ಟು
ಸಂಕಟ.. ನಿನಗೂ ಗೊತ್ತು..!!! ಕ್ಷಣ..ಕ್ಷಣವು
ಅಣು...ಅಣುವನು ಸುಡುತಿಹುದು ನಿನ್ನದೆ ಮತ್ತು..!!!
ತೋಳ್ಬಂದಗಳಿ ಬಂಧಿಯಾಗಿಯಿಬ್ಬರು
ಕನಸಿನರಮನೆಗೆ ಕಿಚ್ಚು ಹಚ್ಚಿ...
ಅದರ ಕಾವಲ್ಲೆ... ಇರುಳನು
ಸ್ವರ್ಗವಾಗಿಸಿಕೊಳ್ಳುವ ಪರಿಯನ್ನು
ನಿನ್ನಿಂದಲೇ...ತಾನೆ ನಾ ಕಲಿತದ್ದು...
ಜಗಕೆ.. ಊರ್ಮಿಳೆ, ಸೀತೆಯರ ಒಂಟಿ
ವನವಾಸದ ವಿರಹವಷ್ಟೇ ಗೊತ್ತು...
ರಾಮ, ಲಕ್ಷ್ಮಣರೆದೆಯಲರಳುತಿದ್ದ
ಕನಸುಗಳು ಕಸುವಿಲ್ಲದೆ ಸಾಯುತ್ತಿದ್ದುದು...
ಯಾರಿಗೆ ತಾನೆ ಗೊತ್ತು..?
ನಿನ್ನ ಹಾಗೆಯೇ...
ನನ್ನದು ಹಾಗೆ ಇದೆ ಪರಿಸ್ಥಿತಿ..
ತಿಳಿನೀರ ಕೊಳದಲ್ಲಿ ಕಲ್ಲುಬಿದ್ದ ಹಾಗೆ...
ಮಾಗಿಯ ನಡುಕದಲಿ... ತಣ್ಣೀರಿನ ಕಲ್ಯಾಣಿಯಲಿ
ಮುಳುಗೆದ್ದ ಹಾಗೆ...!!!
ನಿನ್ನ ಮನದ ಭಾವಗಳನು...
ಆ ತುಂಬು ಚಂದಿರನಲ್ಲಾದರು ನೀ...
ತೊಡಿಕೊಳ್ಳಬಹುದು !!
ನನ್ತನುಮನದ ಉರಿಯ ಹೇಗಾದರು...
ತಣಿಸಿಕೊಳ್ಳಲಿ ನಾನು....?
No comments:
Post a Comment