Tuesday, November 27, 2018

ತಮ್ಮಾ ೨

ಜನಾ ಅದಾರು.. ನನ್ಹಿಂದ ಜನಾ
ಅದಾರು  ಅಂದ್ಕೊಂಡ ಹುಚ್ಚ ಕುದ್ರಿ
ಹಂಗಾ ಹಾರಾಡಬೇಡ್ಲೆ ತಮ್ಮಾ...
ಸತ್ತಾಗ, ಹೊತ್ಗಂಡ ಹೋಗೊ ಮುಂದ
ಹೊರು ಹೆಗ್ಲಗಳು ಸೈತ ಬ್ಯಾರೆ ಬ್ಯಾರೆ ಆಕ್ಕಿರ್ತಾವ್ಲೆ ತಿಮ್ಮ

ನಾ...ಕಟ್ಟಿದ್ದು... ನಾ ಗಳ್ಸಿದ್ದಂತಂದು
ಎದೆಯುಬ್ಬಿಸಿ ಬಿಗಬ್ಯಾಡ್ಲೆ ತಮ್ಮಾ..
ಮಣ್ಣಿಂದ ಹುಟ್ಟಿದ್ದು ಹೊಳ್ಳಿ ಮಣ್ಣಾ
ಸೇರ್ತೈತಿ ಅನ್ನೊ ಸತ್ಯ ನಿ ಮೊದ್ಲ ತಿಳ್ಕೊಂಡ
ಬಾಳೆ ಮಾಡ್ಲೆ ತಿಮ್ಮಾ...

ಜನ ಕಾಲ್ಕೆಳ್ಗ ಅದಾರು... ಅಂದ್ಕೊಂಡ
ಕಣ್ಮುಚ್ಗೊಂಡ ಕುಂದ್ರಬ್ಯಾಡ್ಲೆ ತಮ್ಮಾ...
ಮೈ ಮರ್ತೆಂದ್ರ...ಕಾಲೊತ್ತೊ ಜನಾನ
ನಾಳೆ‌ ಕುತ್ಗಿ ಹಿಸ್ಕತಾರೋ ತಿಮ್ಮ...

No comments:

Post a Comment