Tuesday, February 18, 2020

ಹಾಯ್ಕುಗಳು ೧೨೧-೧೫೦

೧೨೧.
ಅವಳೆ
ಕೂಸು.
ಕಂಕುಳಲ್ಲಿ ಅವಳ
ಕೂಸು.

೧೨೨.
ಇಲ್ಲಿ
ಮನಸ್ಸುಗಳಿಗು 
ಮೈಲಿಗೆ ಅಂಟಿಕೊಂಡಿದೆ.

 ೧೨೩.
ಜಯಂತಿಗಳಿಗೆಲ್ಲ
ಬೈಕುಗಳು
ರಾಕ್ಷಸಗಳಾಗುತ್ತವೆ.

೧೨೪.
ಇವನ ಬಾಯಿ ತುಂಬಿದಾಗಲೆಲ್ಲ
ಕಛೇರಿಯ ಮೂಲಿ 
ರಂಗೇರುತ್ತದೆ.

೧೨೫.
ಶವದ ಪೆಟ್ಟಿಗೆಗೆ
ಮೊಳೆ ಜಡಿದರು.
ಮದುಮಗನಾಗಲು ರೆಡಿಯಾದ.

೧೨೬.
ಪಂಜು ಇನ್ನೂ
ಉರಿಯುತ್ತಿದೆ.
ಪಡೆದ ಬಲಿಗಳು ಸಾಕಾಗುತ್ತಿಲ್ಲ.

 ೧೨೭.
ಯಾರು
ಹಾಡುವವರು?
ಸ್ವಜಾತಿ- ಗೆದ್ದರು.

೧೨೮.
ಮಧು ಬಟ್ಟಲು
ತುಂಬಿದೆ.
ಅವಳ ನೆನಪುಗಳಿಗೀಗ ಆಕಳಿಕೆ.

೧೨೯.
ಲಕ್ಷಗಟ್ಟಲೆ ಸುರಿದು
ಮನೆಯನ್ನು ಕಟ್ಟಿಸಿದ್ದ.
ನಿದ್ದೆ ಹತ್ತುತ್ತಿಲ್ಲ, ಅವ್ವನ ಮಡಿಲಿಲ್ಲಿ
ಖಾಲಿ...ಖಾಲಿ.

೧೩೦.
ಕಸವನ್ನೆ
ಬಿತ್ತುತ್ತಾರೆ.
ಫಸಲಿಗಾಗಿ

೧೩೧.
ಕೊರೊನಾ ವೈರಸ್
ಆಗಬಹುದು
ಮತ್ತಷ್ಟು ಜನ ಮೈನಸ್.

 ೧೩೨.
ಸಾಕ್ಷಿಯನ್ನು
ಕೇಳಬೇಡಿ.
ಗುಲಾಬಿಯು ಅಸುನೀಗಿದೆ.

೧೩೩.
ಕಾಯುತಿರಿ.
ಅವಕಾಶವಿದ್ದೆ ಇದೆ.
ಅವಸರಕ್ಕೆ ಮಸಣವಂತು ಕಾದಿದೆ.

೧೩೪.
ಕಪ್ಪು ಮೋಡ
ಕಪ್ಪು ನೆಲ
ಪೈರೆಲ್ಲ ಹಸಿರು.

 ೧೩೫.
ಮಳೆ ಸಾಕಷ್ಟು
ಬರುತ್ತದೆ.
ಬೇಡದಿದ್ದಾಗ

೧೩೬.
ಅಳಿಸಿದರೇನಾಯಿತು?
ಕಾಗದದ ಮೇಲೆ
ಕಲೆ ಉಳಿದೆ ಹೋಯಿತು.

೧೩೭.
ಕಣ್ಣೀರನ್ನು
ಸುರಿಸದೀರಿ.
ನಾಟಕಿಯತೆಗಳು ಸಾಕಾಗಿವೆ.

೧೩೮.
ಸೀತೆ, ತುಂಬು
ಬಸುರಿ.
ಇವರು ಸರಕಾರಿ ಆಸ್ಪತ್ರೆಗೆ
ಹೋಗಲೊಲ್ಲರು.

೧೩೯.
ತುಪ್ಪದ ವಾಸನೆ
ಮೊದಲಿನ ಹಾಗಿಲ್ಲ.
ಅಜ್ಜಿಯ ಕುಡಗೋಲು ಅಟ್ಟದಲ್ಲಿದೆ.

೧೪೦.
ಇಂದಿನ ನಾರಿ
ಕಾಮದ ಬೊಂಬೆ.
ಹೇರುವ ಯಂತ್ರ.

೧೪೧.
ಓಬವ್ವ
ನೆನಪಾಗುವುದಿಲ್ಲ.
ಹೊಸ ಮನೆಗಳಲ್ಲಿ ವಳ್ಳುಗಳೆ ಇಲ್ಲ!

೧೪೨.
ವನಕೆಯನ್ನು
ಕಂಡಾಗಲೆಲ್ಲ
ಇತಿಹಾಸ ನೆನಪಾಗುತ್ತದೆ.

೧೪೩.
ಬದುಕಬೇಕು.
ಹೇಗೆ?
ತಿಂದಾದರೂ ಸರಿ.

೧೪೪.
ಕಣ್ಣು, ಕಿವಿಗಳು
ಬಹಳಷ್ಟು ಚುರುಕು.
ಶರಣರಿಲ್ಲ!.

೧೪೫.
ಹರಿದ ಹಾಳೆ
ಕಸ.
ಉದುರಿದ ಎಲೆ
ರಸ.

೧೪೬.
ಬೆಂಕಿಯನ್ನು ಹಚ್ಚಲು
ಕಿಡಿ ಬೇಕಿಲ್ಲ.
ಮಾತು ಸಾಕು.

೧೪೭.
ಎಡವದೆ ನಡೆಯಬೇಕು.
ಕಣ್ಮುಚ್ಚಿಕೊಳ್ಳಿ.
ಎತ್ತುಕೊಂಡು ಹೋಗುತ್ತಾರೆ.

೧೪೮.
ಬದುಕಬೇಕೆಂದು
ಗಿಡವನ್ನು ನೆಡುತ್ತಾರೆ.
ಬದುಕಿಸಬೇಕೆಂದು ಅದು
ಚಿಗುರುವುದಿಲ್ಲ.

೧೪೯.
ಅಣ್ಣ ಹೊರಟು
ಹೋದಾಗ,
ಭರತನನ್ನು ಕಾಣುವುದೆ
ಅಪರೂಪ.

೧೫೦.
ಮಾತುಗಳು 
ಹಗುರವಾಗಿವೆ.
ತಕ್ಕಡಿಯ ತೂಗುವ ಕಲ್ಲುಗಳು
ಮಾಯವಾಗಿವೆ.

No comments:

Post a Comment