Monday, February 17, 2020

ಹಾಯ್ಕುಗಳು ೩೧-೬೦

[2/17 7:00 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೧.
ಕೊಡಲಿಯ ಹರಿತವನ್ನು
ಪರೀಕ್ಷಿಸಿದೆ.
ಗೂಡಿನಲ್ಲಿ ಹಕ್ಕಿಗಳ ಸದ್ದು ಹೆಚ್ಚಾಯಿತು.
[2/17 7:42 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೨.
ತೋಟದಲ್ಲಿ ಅವಳ
ಕೈಯನ್ನು ಹಿಡಿದಾಗ,
ಒತ್ತೆಯಿಟ್ಟ ಅವ್ವನ ಖಾಲಿ ಕೈಗಳು
ಕಣ್ಮುಂದೆ ನಿಂತುಕೊಂಡವು.
[2/17 7:54 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೩.
ದಾರಿಯಲ್ಲಿ ಬೆಕ್ಕು ಅಡ್ಡವಾಯಿತು
ಮುಂದಕ್ಕೆ ನಡೆದೆ.
ಅವನು ಎದುರಾದ, ಮರಳಿ ಬಂದೆ.
[2/17 7:55 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೪.
ಬಲತ್ಕರಿಸುವುದು ಏನು
ಬೇಕಿದ್ದಿಲ್ಲ.
ನೋಡಿದ ನೋಟವೆ ಸಾಕಿತ್ತು.
[2/17 7:58 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೫.
ಮದಿರೆ
ದೂರವಿಡುತ್ತದಂತೆ
ಮಂಥರೆಯ ನೋವಿನಿಂದ ನಿಜವಾ?
[2/17 8:00 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೬.
ಕಾಲಕಾಲಾಂತರದಿಂದಲೂ
ಪೆಟ್ಟನ್ನು ತಿಂದವಳಿಗೆ, ಕೊಟ್ಟ
ಹೆಸರು 'ಸಹನಾಮಯಿ'.
[2/17 11:00 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೭.
ನಾನು ಸೋಲನ್ನು
ಒಪ್ಪಿಕೊಂಡೆ.
ನ್ಯಾಯಾಲಯದ ಸಮಯ ಉಳಿಯಿತು.
[2/17 12:59 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೮.
ಅಕ್ಕ
ಭಾವ
ಲೆಕ್ಕ! ಸಿಗುತ್ತಿಲ್ಲ.
[2/17 5:05 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೯.
ಆತ್ಮೀಯತೆಗಿಂತ
ಚುಚ್ಚುವವರ ಮಾತಿಗೆ
ಕಿವಿಯಾಗುತ್ತೇವೆ.
[2/17 6:37 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೦.
ಮತ್ತೊಬ್ಬ ಕವಿ
ಹುಟ್ಟಿದ.
ಮತ್ತೊಂದು ಮರದ ಅವಸಾನವಾಯಿತು.
[2/17 6:38 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೧.
ಕವಿ
ಅರಳಿದ.
ಭಾವ- ಬಾಡಿತು.
[2/17 6:42 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೨.
ದೇವರಿಗೆ ಕೈ
ಮುಗಿದೆ.
ಕಾಸು ನೀಡಲಿಲ್ಲ.
[2/17 9:25 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೩.
ನಂಬಿಕೆ ಇಲ್ವಾ?
ಎಂದವರಿಂದಲೆ
ಮೋಸ ಹೋಗುವುದು.
[2/17 10:34 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೪.
ಸೀತೆ
ಎಂದಾಗ,
ರಾವಣ ನೆನಪಾದದ್ದು ಸುಳ್ಳಲ್ಲ!
[2/17 10:35 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೫.
ಗುಡಿ ಗುಂಡಾಂತರಗಳನ್ನು
ಸುತ್ತಿ ಹಾಕಿದರು.
'ಅದು' ಸಿಗಲಿಲ್ಲ.
[2/17 10:37 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೬.
ಅವನು ಚಾಕುವಿನಿಂದ
ಇರಿದಾಗ,
ನೆತ್ತರು ನೆಲದ ಮೇಲೆ ಚೆಲ್ಲಿತ್ತು.
[2/17 10:39 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೭.
ವಿದ್ಯಾಭ್ಯಾಸಕ್ಕೆ ಪೇಟೆಗೆ
ಹೊರಡಲು ನಿಂತಾಗ,
ಅಡುಗೆ ಮನೆಯಲ್ಲಿ ಮುಚ್ಚಳ ತೆಗೆಯುವ
ಶಬ್ದ ಕೇಳಿತ್ತು.
[2/17 10:46 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೮.
ನಾಳೆ ಗಾಂಧೀ
ಜಯಂತಿ.
ಹೌದಾ? ಹಾಗಿದ್ದರೆ ಇವತ್ತೆ ತಯಾರಿ
ಮಾಡಿಟ್ಟಕೊಳ್ಳಬೇಕು.
[2/17 10:51 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೯.
ಪೂರ್ಣ ಚಂದಿರ
ಬಾನಿನಲ್ಲಿದ್ದ.
ಬೇಸಿನ್ ನಲ್ಲಿ ತಾಟು ಬೊರಲು
ಮಲಗಿತ್ತು.
[2/17 11:04 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೦.
ಹರೆಯ
ಹರದಾಡಿದಾಗ
'ಕಾಂಡೋಮ್'ನಾಚಿಕೆಯನ್ನು ಬಿಟ್ಟಿತ್ತು.
[2/17 11:14 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೧.
ಅವರಿಬ್ಬರ ಮಿಲನ
ಮಹೋತ್ಸವಕ್ಕೆ,
ಮಲ್ಲಿಗೆಯ ಬಳ್ಳಿ ಬಡವಾಯ್ತು.
[2/17 11:19 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೨.
ಅವಳೆದೆಯ ಮೇಲೆ
ಕೈ ಇಟ್ಟವನಿಗೆ
ಅದರ ಕೆಳಭಾಗದ ಕಾವಿನ
ಅರಿವಾಗಲಿಲ್ಲ.
[2/17 11:21 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೩.
ತುಂಡು ಬೀಡಿಯನ್ನು
ಹಚ್ಚುವಾಗ,
ಪಾಕೇಟ್ ಸಿಗರೇಟ್ ನ್ನು ದಾನ ಮಾಡಿದ
ನೆನಪಾಗಲಿಲ್ಲ.
[2/17 11:23 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೪.
ಊರಿಗೆ ಊರೆ
ಬಾಯ್ಮುಚ್ಚಿದರು,
ಪೊದೆಗಳು ಮಾತ್ರ ಮಾತನಾಡುತ್ತಿದ್ದವು.
[2/17 11:26 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೫.
ಅವನ ದಾಳಿಗೆ
ಇವರೆಲ್ಲ
ಬೂದಿಯಾಗಿ ಹೋದರು.
[2/17 11:28 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೬.
ಅವರಂದು ಕೊರೆದ
ಗೆರೆಗೆ
ನಾವಿಂದೂ ನೆತ್ತರನ್ನು
ಬಸಿಯುತ್ತಿದ್ದೇವೆ.
[2/17 11:29 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೭.
ಹಡಪದ ಅಪ್ಪಣ್ಣನ
ಕತ್ತಿ ಇನ್ನಷ್ಟು ಹರಿತವಾಗಿರಬೇಕಿತ್ತು.
ಎಲ್ಲರು ಸಮಾನರಾಗಿರುತ್ತಿದ್ದರು.
[2/17 11:35 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೮.
ಮದುವೆಗೂ ಮುನ್ನವೆ
ಬಸುರಿಯಾದಳು.
ಆದರೂ ಕುಂತಿಯಾಗಲಿಲ್ಲ.
[2/17 11:38 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೯.
ನಿಂತಲ್ಲೆ, ನಿಂತಿದ್ದೆ
ಕಲ್ಯಾಣಿಯಾಗಲೆಂದು.
ಯಾರು ಕಟ್ಟೆಯನ್ನೆ ಕಟ್ಟಿಸಲಿಲ್ಲ!
[2/17 11:39 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೦.
ಬರೆಯುತ್ತೇನೆ
ಎಂದಾಗಲೆಲ್ಲ,
ಡೈರಿಯಲ್ಲಿನ ಕವಿತೆಗಳು ನಗುತ್ತವೆ.

No comments:

Post a Comment