ಹೋಗಲಿ ಬಿಡು,
ಊರು ನೂರು
ಮಾತನಾಡುತ್ತದೆ
ಗೆಳೆಯ...
ಒಂದು ಮಾತಿಗಾಗಿ
ಇಲ್ಲೊಂದು ಜೀವ
ಕಾದಿದೆ..!!
ನೆನಪಿಲ್ಲದೆ ಹೋದೆಯಾ...?
ನಾನು ಹೀಗೆ
ಬರೆದ ಅದೇಷ್ಟೋ....
ಪತ್ರಗಳಿಗೆ ಅವಳು
ಉತ್ತರಿಸಲೆ...
ಇಲ್ಲ..!! ರಂಗೀ....
ಅರ್ಧಂಬರ್ದ ಕಲಿತಿದ್ದ
ರದ್ದಿ ಅಂಗಡಿಯ
ಮಾಲೀಕ, ಅಲ್ಲಿ
ನನ್ನ ಕವಿತೆಗಳನ್ನು
ಓದುತ್ತಿದ್ದ..!!
ಹಳಿಯ ಮೇಲೆ
ಹೊರಟಿರುವ ಬೋಗಿಗಳಲ್ಲಿ
ನಮ್ಮವರೆಂದು ಯಾರು
ಇಲ್ಲ...!!
ಜಾನೇಮನ್...
ಕುಳಿತುಕೊಂಡರೆ ಇಲ್ಲಿಯೆ
ಕೂರಬೇಕಾಗುತ್ತದೆ...
ಎದ್ದೇಳು ಏನನ್ನಾದರೂ
ಸಾಧಿಸೋಣ...
ನಾಳೆ ಸಾಯಲೆಬೇಕು...!!!
ಆ ಸಾವಿಗಾದರೂ
ಒಂದು ನ್ಯಾಯ ಸಿಗಬೇಕಲ್ಲವೆ..!!
ಕಾಲಡಿಯಲ್ಲಿ
ಒಲವನ್ನೇನೂ...
ಹಾಕಬೇಡ!!
ನಂಬಿಕೆಯನ್ನುವ
ಬುನಾದಿಯನ್ನು
ಸುರಿದುಬಿಡು..
ಹೊತ್ತು ನಡೆದು ಬಿಡುತ್ತೇನೆ
ಬದುಕನ್ನು...
ಉಸಿರಿರುವ ತನಕ!!
ಒಲವೆಂದೋ...
ಉಸಿರುಗಟ್ಟಿ ಹೋಗಿದೆ
ಮೌನದ ಕುಣಿಕೆಯಲ್ಲಿ..!!
ಕುದಿಯುವ ಹಾಲಿನಲ್ಲಿ
ಬಿದ್ದು ಒದ್ದಾಡುವ
ಹಲ್ಲಿಯಂತಹ ಪಾಡಾಗಿ
ಹೋಗಿದೆ ಈಗ
ಬದುಕಿನಲ್ಲಿ..!!
ಯಾರ ಎದುರಿಗೆ
ತಲೆ ಎತ್ತಿ ಬಾಳಬೇಕೆಂದು
ನಿರ್ಧರಿಸಿಕೊಂಡಿರುತ್ತೇವೆಯೋ...
ಅಂತವರ ಮುಂದೆಯೆ ಬದುಕು
ಒಮ್ಮೊಮ್ಮೆ ನಮ್ಮನ್ನು
ಚಿಲ್ಲರೆಯನ್ನಾಗಿಸಿಬಿಡುತ್ತದೆ...!!
ರಂಗೀ...
ಇಂತಹ ಸಂದರ್ಭದಲ್ಲೂ..
'ನಾನು' ತಲೆಬಾಗಿಸಿಕೊಂಡೆ
ಇರುತ್ತೇನೆ... ಯಾಕೆಂದರೆ
ಪ್ರತಿ ಸಾರಿ ತೂರಿದ ನಾಣ್ಯ
ಬಕ್ಕಾ (ರಾಣಿ)ವಾಗಿ
ಬಿಳುವುದಿಲ್ಲ... ಅಲ್ಲವೆ..?
ಹಿಂದೆ ಆಡಿಕೊಳ್ಳುತ್ತಾರೆ
ಎಂದ ಮಾತ್ರಕ್ಕೆ
ಮುಡಿಗೆ ಮಲ್ಲಿಗೆಯನ್ನು
ಮುಡಿಯದೆ ಇರಲಾದಿತೇನು..?
ಗೆಳೆಯ...
ಉಪ್ಪನ್ನು ಸುರಿಯಲೆಂದೆ
ನಿಂತವರಿಗೆ... ಹಾಲಾದರೇನು?
ಅನ್ನವಾದರೇನು?
No comments:
Post a Comment