ನನಗೂ ಒಬ್ಬ ಶರಣರೂ ಬೇಕು
ಕರುನಾಡಿನಲ್ಲಿ, ನಮ್ಮೂರಿನಲ್ಲಿ
ಅವರು ಶರಣರಾಗಿರಬೇಕು
ಅದರಲ್ಲೂ ಅವರು ಕೆಳ
ಸಮಾಜದವರಾಗಿರಬೇಕು
ಬಸವಣ್ಣನ ಅನುಯಾಯಿಯಾಗಿರಬೇಕು
ಇರುವ ಶರಣರಲ್ಲಾರೂ ಖಾಲಿ
ಇಲ್ಲ | ಎಲ್ಲ ಶರಣರೂ ಎಲ್ಲ
ಸಮಾಜದ ಮೊಹರುಗಳಾಗಿದ್ದಾರೆ
ಸಮಾಜದ ಚಿರಾಸ್ತಿಯಾಗಿದ್ದಾರೆ
ಚೆನ್ನಮ್ಮ ಅವರಿಗೆ, ಅಪ್ಪಣ್ಣ ಅವರಿಗೆ
ಮಾಚಯ್ಯ ಅವರಿಗೆ, ಚೌಡಯ್ಯ,
ಸಂಗಯ್ಯ, ಭೀಮಯ್ಯ, ಶಿವಯ್ಯ
ಕೇತಯ್ಯ, ಮಾರಯ್ಯ, ಅಲ್ಲಮರು
ಎಲ್ಲ ಶರಣರೂ ಅವರವರಿಗೆ
ಅವರ ಕುಲದವರೆ, ಅಂದವರು
ವಚನ-ಸಾಹಿತ್ಯದಿಂದಲೆ ಕುಲವನಳಿಸಿ
ಏಕತೆಯ ಸಮಾನತೆಯ ಹುಡುಕಿದರು
ಇಂದಿವರು ಕುಲದಿಂದಲೆ
ಶರಣರ ಹುಡುಕುತಿಹರು ನಮ್ಮ
ಕುಲವೆ ಬೇರೆಂದು ಬಸವಣ್ಣ
ನೀನಿರದ ನಾಡು ಇನ್ನೆಲ್ಲಿ
ನನಗೂ ಒಬ್ಬ ಶರಣರೂ ಬೇಕು
ಅವರ ವಚನ-ಸಾಹಿತ್ಯವನೊದದಿದ್ದರೂ
ಬೇಕು ಕೊಮಿಗೆ, ರಥಯಾತ್ರೆಗೆ,
ಸುಲಿಗೆಗೆ, ಸರಕಾರಿ ಸೌಲಭ್ಯಕ್ಕೆ
ಜನಗಣತಿಗೆ, ಅಲ್ಪಸಂಖ್ಯಾತರಾಗಲೂ
ಓಣಿಯ, ಊರಿನ, ತಾಲೂಕಿನ
ಜಿಲ್ಲೆಯ, ರಾಜ್ಯ ರಾಜಕೀಯದಲಿ
ಓಟಿನ ಖಾತೆಯನು, ಜಾತಿಯ
ಬಲದಲಿ ಪಡೆಯುವ ಸೀಟನು
ಇವೆಲ್ಲದರ ಅನುಕೂಲತೆಗಾಗಿ
ಬೇಕಾಗಿದೆ ಒಬ್ಬ ಶರಣರೂ
ಯಾರ ಸಮಾಜದ ಮೊಹರಲ್ಲದ
ಒಬ್ಬ ಶರಣರು
No comments:
Post a Comment