Sunday, July 3, 2016

ಕುಶಲೊಪಚಾರ

ಸಗಣಿ ಸಾರಿಸಿ, ಚುಕ್ಕಿಯಿಟ್ಟಂಗಳ್ಕ
ಅಲಂಕಾರ ಮಾಡಿದ್ರೆದ್ಕ ಬಂತ
ಗಾದ್ಯಾಗ ಕುಳ್ಳರಿಸಿ, ಬಿಸಣಕಿ
ಬೀಸಿದ್ರೇನ ಬಂತ
ನೀರಿಗೆ ನಿಂಬೆ ಸಕ್ರಿಯ ಹಾಕಿ
ಪಾನಕ ಮಾಡಿಕೊಟ್ರೇನ ಬಂತ
ಬಾಗಿಲಿಗೆ ಬಂದೊರಿಗೆ ಹೆಂಗದಿರಂತ
ಕೇಳದಿದ್ರ ಇವ್ನೆಲ್ಲಾ ಯಾಕ
ಮಾಡಬೇಕಂತ

No comments:

Post a Comment