ದಿನಗಳನು
ಹೇಗೆ ಕಳೆಯಲಿ ನೀ ಬಾರದ
ದಿನಗಳನು
ಬಡವನ ಮೇಲೆ
ಯಾಕಿಷ್ಟು ಕೋಪ ಭೂದೇವಿಯ
ಮೇಲೆ
ಕೆರೆಯ ಮರೆಸಿ ಮನೆಯ ಕಟ್ಟಿದುದಕೆ
ಭೂಗಂಗೆಯನು ನೀರರ್ಥಕವಾಗಿ ಹರಿಬಿಡುವದಕೆ
ನಿನ್ನಯ ನೀರನು ಉಳಿಸದೆ ಹಳ್ಳಕೆ ಹರಿಸಿದುದಕೆ
ಒಡಲೊಡೆಯ, ಸಕಲ ಜೀವರಾಶಿಗಳ
ಆತ್ಮಜನೆ ಸುರಿದುಬಿಡು ಧೊ ಎಂದು
ಎಲ್ಲರೆದೆಯ ಉರಿಯಾರುವಂತೆ
ಮೂಕ ಜೀವಿಗಳ ದಾಹ ತಣಿಸುವದಕೆ
ಧರಣಿಯು ಹಸಿರುಡುಗೆಯ ಹೊಂದುವದಕೆ
ಕೊರಡೊಂದು ಚಿಗುರೊಡೆಯುವದಕೆ
ಕೂಗಿದರೆ ಮನೆಯಲಿ ಹಿಡಿ ಹಿಟ್ಟಿಲ್ಲ
ಸೇರು ಅಕ್ಕಿಯಿಲ್ಲ, ಕೊಟ್ಟಿಗೆಯ ದನಗಳು
ಅಂಬಾ... ಎಂದು ಕೂಗಿದರೆ ಹಾಕಲು ಮೇವಿಲ್ಲ
ಕುಡಿಸಲು ನೀರಿಲ್ಲ
ಕಟುಕನಿಗೆ ಮಾರಿಬಿಡಬಹುದು, ಮೇವಿಲ್ಲದೆ ಬಾಯಾರಿ
ಸಾಯಲೆಂದು ಗುಡ್ಡದ ತೆಪ್ಪಲಿನಲ್ಲಿ ಬಿಟ್ಟು ಬರಬಹುದು
ಶಿವ್ನೆ ನನ್ನನ್ನೇ ನಂಬಿ ಬಂದ ನನ್ನ ಮಡದಿ, ಎಷ್ಟೇ
ಹಡೆದ ಮಕ್ಕಳನೇನು ಮಾಡಲಿ, ಅವರನ್ನೂ.....?
ಹಂಗಲಿ ಬೀಳದಂತೆ, ಯಾರೊಬ್ಬರ ಮುಂದೆ
ಕೈ ಚಾಚದಂತೆ, ಕುಹಕ ಮಂದಿಯ ನಡುವೆ
ಕುಗ್ಗಿ ನಡೆಯದಂತೆ, ನನ್ನೆದೆಯ ಉಸಿರು
ನಿಟ್ಟುಸಿರಾಗುದಂತೆ ತಡೆಯಲು
ನಾನು ಮಣ್ಣ ಸೇರುವ ಮುನ್ನ
ಇಳಿದು ಬಿಡು ಧರೆಗೆ ಇಲ್ಲವೆ ನಾವೆ
ಸೇರುತ್ತೇವೆ ಮಣ್ಣಿಗೆ
ಮಳೆಯಾಕಾಂಕ್ಷಿ