Saturday, November 18, 2017

೬೯ ನೇ ವಾರದ ಸಾಹಿತ್ಯ ಚಿಂತನೆ

ಇಂದು ನಮ್ಮ ಗಜೇಂದ್ರಗಡದಲ್ಲಿ ನಡೆದ ೬೯ ವಾರದ ಸಾಹಿತ್ಯ ಸಂಜೆಯಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ಮಹಿಳಾ ಮಣಿಗಳು. ಇಂದಿನ ವಿಷಯ "ಕರ್ನಾಟಕ ಏಕೀಕರಣದಲ್ಲಿ ಮಹಿಳೆಯರ ಪಾತ್ರ " ಎಂಬ ವಿಷಯ ಕುರಿತಾಗಿ ಉಪನ್ಯಾಸಕರಾಗಿ ಆಗಮಿಸಿದ್ದಂತಹ ಶ್ರೀಮತಿ ಮಂಗಳಾ ಕುಲಕರ್ಣಿ ಅಕ್ಕನವರು ಬಹಳ ಸೊಗಸಾಗಿ ಕರ್ನಾಟಕದ ಏಕೀಕರಣದಲ್ಲಿ ಮಹಿಳೆಯ ಪಾತ್ರವ ಕುರಿತು ಸವಿಸ್ತಾರವಾಗಿ ವಿವರಣೆಯ ನೀಡಿ ಸಭೆಯಲಿದ್ದ ಎಲ್ಲ ಸಾಹಿತ್ಯ ಮನಸ್ಸುಗಳ ಅರಳಿಸಿದರು. ಅವರ ಉಪನ್ಯಾಸದ ಕೆಲವು ತುಣುಕುಗಳು ನಿಮಗಾಗಿ

ಮಹಿಳೆಯ ಪಾತ್ರ ಪ್ರಾಚೀನ ಕಾಲದಿಂದಲೂ ಪ್ರಾಮುಖ್ಯತೆಯನ್ನು ಪಡೆದುಕೊಂಡು ಬಂದಿದೆ. ಎಲ್ಲ ವರ್ಗಗಳಲ್ಲೂ ತನ್ನ ಹೆಜ್ಜೆಯ ಗುರುತನ್ನು ಮೂಡಿಸುತ್ತಾ ಪುರುಷರಿಗೆ ಸಹಾಯಕವಾಗುತ್ತಾ ಬಂದಿದ್ದಾಳೆ. ಇನ್ನೂ ಮಹಿಳೆ ಕನ್ನಡ ನಾಡು ನುಡಿ ಕಟ್ಟುವಲ್ಲಿ, ಏಕೀಕರಣದ ಪಾತ್ರದಲ್ಲಿ ಅವರ ಪಾತ್ರವನ್ನಿಂದು ನೆನೆಯೋಣ. ಜಯದೇವಿ ತಾಯಿ ಲಿಗಾಡೆ, ಸಿದ್ದಮ್ಮ ಬಳ್ಳಾರಿಯವರು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ. ಜಯದೇವಿ ತಾಯಿ ಲಿಗಾಡೆಯವರು ಗಡಿನಾಡಿನಲ್ಲಿ ಕನ್ನಡ ಶಾಲೆಯನ್ನು ತೆರದು ತಮ್ಮ ಕನ್ನಡ ಪ್ರೇಮವನ್ನು ಮೆರೆದರಲ್ಲದೆ, ಶಾಲಾ ಶಿಕ್ಷಕರ ಸಂಬಳದ ಸಲುವಾಗಿ ತಮ್ಮ ಮನೆಯ ವಸ್ತುಗಳನ್ನು ಮಾರಿ ಅವರಿಗೆ ಸಂಬಳವನ್ನು ನೀಡಿದ್ದರು. ಅಲ್ಲದೆ ಬಳ್ಳಾರಿಯಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಮಹಿಳೆಯರು ಕರ್ನಾಟಕ ಏಕೀಕರಣಕ್ಕೆ ವಿಳಂಬ ಮಾಡುತ್ತಿರುವ ನೀತಿಯನ್ನು ವಿರೋಧಿಸಿ ಬಳ್ಳಾರಿಗೆ ಬಂದಂತಹ ಕಾಂಗ್ರೆಸ್ ಸಮಿತಿಯ ಮುಂದೆ ತಮ್ಮ ಅಳುಲನ್ನು, ಅಸಮಾಧಾನವನ್ನು ಹಾಗೂ ಬಳ್ಳಾರಿ ಜಿಲ್ಲೆಯು ಆಂಧ್ರ ಪ್ರದೇಶಕ್ಕೆ ಸೇರುವುದನ್ನು ವಿರೋಧಿಸಿ ಜಾಗೃತಿಯನ್ನು ಮೂಡಿಸಿದರು. ಮನೆಯಲ್ಲಿದ್ದುಕೊಂಡೆ ಮಹಿಳೆಯರು ಪುರುಷರಿಗೆ ಬೆನ್ನುಲುಬಾಗಿ ಹೋರಾಟಕ್ಕೆ ನಿಂತರು. ಅನ್ನಪೂರ್ಣ ದೇಶಮುಖ ಎನ್ನುವವರು ಆಗೀನ ನಮ್ಮ ಸರಕಾರದ ಸದನ ಕಾರ್ಯಕಲಾಪಗಳು ಮುಂಬೈನಲ್ಲಿ ನಡೆಯುತ್ತಿದ್ದವು. ಅವತ್ತೀನ ಕರ್ನಾಟಕದ ಏಕೀಕರಣದ ಕೂಗಿಗೆ ಮೊದಲು ಬೆಂಬಲವನ್ನು ಸೂಚಿಸಿದ್ದರು. ವಿಮಲಾಭಾಯಿ ಮೇಲುಕೋಟೆ ಅವರು ಗಂಡನ ಸಹಾಯದೊಂದಿಗೆ ಮನೆಯಲ್ಲಿಯೆ ಯುವಕರನ್ನು ಸೇರಿಸಿಕೊಂಡು ಕನ್ನಡಪರ ಜಾಗೃತಿಯನ್ನು ಮೂಡಿಸಿದರು. ಕಾಸರಗೂಡಿನಲ್ಲಿ ಸರಸ್ವತಿ ಭಾಯಿ ಅವರು ಊರಿನಲ್ಲಿ ೧೪೪. ಸೆಕ್ಷನ್ ಜಾರಿಯಲ್ಲಿದ್ದರೂ ಅದನ್ನು ಎದುರಿಸಿ ಎಲ್ಲ ಮಹಿಳೆಯರು ಮೆರವಣಿಗೆ ಮಾಡಿ ಜಾಗೃತಿಯ ಮೂಡಿಸುವುದರೊಂದಿಗೆ ಜೈಲುವಾಸಿಯಾದರು. ಕಾಸರಗೂಡಿನಲ್ಲೂ ಮಹಿಳೆಯರು ಕಾಸರಗೂಡು ಕೇರಳಕ್ಕೆ ಸೇರುವುದನ್ನು ವಿರೋಧಿಸಿ ಪ್ರತಿರೋಧಿಸಿದರು. ಬೆಳಗಾವಿಯ ಪದ್ಮಾವತಿಯವರು ಮುಂತಾದವರು
ಟಿ.ಎಸ್. ನಿಜಲಿಂಗಪ್ಪ ನವರು ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂದಿನ ಮು.ಮಂತ್ರಿ ದೇವರಾಜ ಅರಸ. ನಂ ೧ ೧೯೭೩ ಹಂಪಿಯಲ್ಲಿ ರಾಜ್ಯಪಾಲರಾದಂತಹ ಜಯಚಾಮರಾಜ ಒಡೆಯರ್ ಜ್ಯೋತಿಯನ್ನು ಬೆಳಗುವುದರ ಮೂಲಕ ಕರ್ನಾಟಕ ಎಂಬ ನಾಮಕರಣವನ್ನು ಮಾಡಿದರು. ಇದೆ ಸಮಯದಲ್ಲಿ ಕುವೆಂಪು ಅವರು ಜಯಭಾರತ ಜನನೀಯ ತನುಜಾತೆ ಎಂಬ ನಾಡಗೀತೆಯ ರಚಿಸಿದರು. ರಾಧಾ ದೇವಿಯವರು ಮುಂತಾದ ಲೇಖಖಿಯರು ತಮ್ಮ ಬರವಣಿಗೆಯ ಮೂಲಕ ಈ ಒಂದು ಹೋರಾಟಕ್ಕೆ ಬೆಂಬಲವ ನೀಡಿದರು ಎಂದು ಹೇಳುವುದರ ಮೂಲಕ ತಮ್ಮ ಉಪನ್ಯಾಸಕ್ಕೆ ವಿರಾಮವ ನೀಡಿದರು.

    ಇದಾದ ನಂತರ ನಮ್ಮ ನೆಚ್ಚಿನ ನಿವೃತ್ತ ಇತಿಹಾಸ ಉಪನ್ಯಾಸಕರಾದತಂಹ ಶ್ರೀ ಕೆ. ಎಸ್. ಗಾರವಾಡ ಹೀರೆಮಠ ಗುರುಗಳು ಅತಿಥಿ ಉಪನ್ಯಾಸವನ್ನು ವಹಿಸಿ ಕೆಲವು ಕನ್ನಡದ ಏಕೀಕರಣದ ಮೆಲುಕಗಳನ್ನು ಹಾಕಿ ನೆರೆದಂತ ಕನ್ನಡದ ಮನಗಳನ್ನು ತಣಿಸಿದರು....

No comments:

Post a Comment