ಹಸಿವು.. ಹಸಿವೆನ್ನುತ ಸಾಯುವ ಮಣ್ಣಲಿ
ಎನ್ನ ಜೀವದ ಬೀಜಾಂಕುರವಾಗಿದೆ...
ನಾಟಿ, ಚಿಗುರೊಡೆದಿರುವೆ... ರೆಂಬೆ
ಕೊಂಬೆಗಳ ಹರಡಿ.. ಮುಗಿಲು ಮುಟ್ಟಲು
ಬೇಕಿದೆ ನೀರು ಗೊಬ್ಬರಗಳು...
ಬಲಿಯುವ ಮೊದಲೆ.... ಬಡವಾಗಿ ಬಗ್ಗಿದೆ
ನಡುವು... ಹಸಿವಿನೊಂದಿಗೆ ಕಾದಾಡುವ
ಮೊದಲೆ ಸೋತು ಶರಣಾಗಿವೆ ತೋಳುಗಳು..
ಹೊತ್ತಿಗೆ ಕುಡಿಸಿದ ನೀರು ಅಮೃತವಾಯಿತು..
ನೀನೀಡಿದ ತುತ್ತೊಂದು ಮೃಷ್ಟಾನ್ನವಾಯಿತು
ಈ ಘಳಿಗೆಯ ಸಾವು ಇನ್ನೊಂದು
ಹೊತ್ತಿಗೆ ಸರಿದು ಕೂತಿತು
ಹಸಿವೆನ್ನುವುದು ಈ ನಾಡಿನ ಶಾಪ
ಹುಟ್ಟುತ್ತಿರುವವೊ ಅರಿವಿಲ್ಲದೆ ನನ್ನಂತ
ಎಷ್ಟೊಂದು... ಪಾಪ
ತಟ್ಟುತ್ತಿಲ್ಲವಲ್ಲ ಆ ದೇವನಿಗೆ ನಮ್ಮಯ ಹಸಿವಿನ ತಾಪ
ಇರಬೇಕು ಅದೇಷ್ಟು ನಮ್ಮ ಮೇಲೆ ಕೋಪ
ನಡೆಯಬೇಕಿದೆ ಬದುಕಿದು ಹೀಗೆ..
ರವಿಯ ತಾಪಕೆ ಕರಗುವವರೆಗೂ..
ಕಾಲನ ಕಾಲಿಗೆ ಸಿಕ್ಕು ಮುದುಡುವವರೆಗೂ...
ಬೆಂದು ಬಾಯ್ಬಿಟ್ಟ ಭೂ ಒಡಲಲಿ
ಮಣ್ಣಾಗುವವರೆಗೊ..
ನಾನರಿಯೆ..
ಸೊಗಸಾದ ಸಾಲುಗಳು ಕವಿಮಿತ್ರರೆ
ಶುಭೋದಯ
No comments:
Post a Comment