ಸ್ವಾತಂತ್ರ್ಯವೇನೊ ಸಿಕ್ಕಿದ್ದು ಕಡು ಕಗ್ಗತ್ತಲಲ್ಲೆ....
ಹಾಗೆಂದು ಕತ್ತಲಲ್ಲೆ ಮುಳುಗಿರುವಿರೇಕಿನ್ನು
ಬಂಧುಗಳೆ..
ತೊಡೆದು ಬನ್ನಿ....ಧರ್ಮದ ಸಂಕೋಲೆಗಳನ್ನು
ಸ್ವಾತಂತ್ರ್ಯವೆಂಬ ಉಸಿರಾಟವು ದಕ್ಕಿದ್ದು...
ಬೇವರು ಹನಿಗಳ ಮುತ್ತಿನಿಂದಲ್ಲ...
ಮೇಲು ಕೀಳು ನೀಚ ಉತ್ತಮ ಅಧಮ
ಬಾಲಕ ಯುವಕ ಸಂಸಾರಿಕರೆಂಬರೆಲ್ಲರ ನೆತ್ತರು...
ಕಾಲುವೆಯಾಗಿಯೆ ಹರಿದು...ಪಡೆದುಕೊಂಡ
ಉಸಿರಿದು...
ನಮಗೆ ಗೊತ್ತಿಲ್ಲ... ಸಂಪೂರ್ಣವಾಗಿ..
ಜೈಲಿನ ಸರಳುಗಳ ಹಿಂದೆ ಸೊರಗಿಹೋದ ಅದೇಷ್ಟೊ
ಯುವಕರ ಯೌವ್ವನ, ಹೆತ್ತೊಡಲಿಗೆ ಕೊಳ್ಳಿಯಿಡದೆ
ನರಳಾಡಿದ ಮಕ್ಕಳ ನೋವು.. ವಿವಾಹಿತೆಯರ ಹಣೆಯ ಹುಡಿಯು ಬ್ರಿಟಿಷರ್ ಗಲ್ಲಿನ ಬಿರುಗಾಳಿಗೆ ಸಿಕ್ಕು ಅಳಿಸಿ ಹೋದದ್ದು..., ಲೆಕ್ಕವಿಟ್ಟಿಲ್ಲ ಬಿದ್ದ ಬಾಸುಂಡೆಗಳ
ಏಟು...ಎದೆಗೆ ಹೊಕ್ಕ ನೆತ್ತರನೆ ಕುಡಿದ ಗುಂಡುಗಳು...
ಊರೆಲ್ಲ ಹಬ್ಬವಾಗಿಬಿಡುವುದಂದು...ಯಾರ
ಸಮಾಜದೊಬ್ಬರ ಜಯಂತಿಯಿದ್ದರೆ...ಬೀದಿ..
ಬೀದಿಗಳು ತಳಿರು ತೋರಣಗಳಿಂದಲೆ ತುಂಬಿ
ಹೋಗುವುದು... ಕುಣಿದು ಕುಪ್ಪಳಿಸಲಿಕ್ಕೆಂದೆ
ಲಕ್ಷ...ಲಕ್ಷ ಹಣವನ್ನು ಖರ್ಚು ಮಾಡುವರು... !!!
ಏಕೆ ಬಂಧುಗಳೆ ಈ ದಿನ ನಮಗಿದು ಹಬ್ಬವಲ್ಲವೆ..!!!
ಭಾರತಾಂಬೆಯ ಮೆರವಣಿಗೆಯು ಬೇಡವೆ..
ಅವಳ ತ್ಯಾಗ ಬಲಿದಾನಗಳ ಅರಿವು ಮುಂದಿನ
ಪೀಳಿಗೆಗೆ ಬೇಡವೆ....
ಕಲ್ಲುಗೋಡೆಗಳ ಮೇಲಾಗದಿದ್ದರು ಹೋಗಲಿ...
ನಿಮ್ಮೆದೆಯ ಮೇಲಾದರೊಂದು ತ್ರಿವರ್ಣ
ಧ್ವಜವನ್ನು ಹಚ್ವಿಕೊಳ್ಳಿರಿ....ಈ ಒಂದು
ದಿನವಾದರು ನಾವೆಲ್ಲ ಒಂದೆ ಎಂಬ ಭಾವ
ಮೂಡುವಂತೆ..ಮನದ ವೈಶೈಮ್ಯಗಳ ಮರೆತು
ಬೆರೆಯಬಹುದಲ್ಲವೆ...
ಜಗದಾವ ಮೂಲೆಯಲ್ಲಿಯು ದೊರಕದು...
ನಿಮಗಿಷ್ಟು ಧರ್ಮಗಳ ವೈವಿಧ್ಯ...
ಸ್ವಾರ್ಥದ ಬಲಿಗೆ ಬಿದ್ದು ಕೇವಲ ಒಳಧರ್ಮಗಳನ್ನಷ್ಟೆ
ಬೆಳಸಿಕೊಳ್ಳದಿರಿ... ಇದನ್ನರಿತೆ ಅಲ್ಲವೆ ಆಂಗ್ಲರು
ನಮ್ಮನು ಬಳಸಿ...ಬಳಸಿ ಆಳಿಹೋದದ್ದು...ಕೊಳ್ಳೆ
ಹೊಡೆದು..ಹೊಡೆದು ಹೊತ್ತು ಓಡಿದ್ದು..
ಎಲ್ಲ ಧರ್ಮಗಳ ಕರ್ಮಭೂಮಿಯಿದು...
ಧರ್ಮೊ ರಕ್ಷತಿ ರಕ್ಷಿತಃ ಎಂಬ ನಾಣ್ಣುಡಿಯಂತೆ
ತಾಯೆ ರಕ್ಷಿತೆ ರಕ್ಷಿತಃ ಎಂಬ ಉಕ್ತಿಯು ನಮ್ಮ
ನರನಾಡಿಗಳಲ್ಲಿ ತುಂಬಿ ಹರಿಯಲಿ.. ವಂದೆಮಾತರಂ
ಎಂಬ ಮಂತ್ರ ಘೋಷವನ್ನು ಪ್ರಪಂಚದಾದ್ಯಂತ ಮೊಳ..
ಮೊಳಗಿಸೋಣ ಮೊಳ..ಮೊಳಗಿಸೋಣ
No comments:
Post a Comment