Thursday, August 30, 2018

ಮನದೊಳಗಿನ ಅಶಾಂತಿಯ ಪಥವು
ನಡೆಸಿತ್ತು ಪಾಪ ಕಾರ್ಯಗಳೆಡೆಗೆ...
ಮಾಡಿದ ಪಾಪವು ಸುತ್ತಿಕೊಳ್ಳದೀರುವುದೇನು..?
ಸುತ್ತಿಸದೆ ಬಿಡುವುದೇನು..? ಏಳೆಳು ಜನ್ಮಗಳನು

ಬಲಿಯಕೊಟ್ಟು ಶಾಂತಿಯ ಪಡೆದವರುಂಟೇನು..?
ಮಾಂಸಖಂಡಗಳನೆ ಕತ್ತರಿಸಿ ಕಟ್ಟಿದ
ಕಲ್ಲುಗೋಡೆಗಳ ಮಧ್ಯೆ..... ಅಮರವಾಗಿ
ನಿಂತವರುಂಟೇನು...?
ಪರರ ಹಾದಿಗೆ ಮುಳ್ಳಿನ ಹಾಸಿಗೆಯನ್ನೆ ಹಾಸಿ
ಕಣ್ಮುಚ್ಚಿಕೊಂಡು ಗುರಿಯ ಸೇರಬಹುದೇನು..?

ಭೂಮಿ ನಿಂತಿದೆ...ನಿಂತವರಿಗೆ, ಅದು ತಿರುಗತ್ತಲೆ ಇದೆ, ಹೊಸತನವ ಹುಡುಕುವವರಿಗೆ
ಕಟ್ಟಬೇಕಾಗಿರುವುದು, ಅಶಾಂತಿಯ ಕಿಡಿಗಳನೆ ಚಿಮ್ಮುವ ಕಲ್ಲು ಕಟ್ಟಡಗಳನ್ನಲ್ಲ..
ನಮ್ಮೊಳಗೆ ಕಟ್ಟಿಕೊಳ್ಳಬೇಕಿದೆ ನಿರ್ಮಲ
ಶಾಂತಿಯ ಕೋಟೆಯನ್ನ...

ಮನದ ಕಾಮನೆಗಳ ತಣಿಸಿಕೊ....
ಆಗುಹೋಗುವುದು ನಿನ್ನ ಕೈಯಲ್ಲಿಲ್ಲ
ಶಾಂತಿ ಮಂತ್ರವ ಜಪಿಸುತಿರು....(ಹೇಡಿಯಂತಲ್ಲ)
ಜಗವೆಲ್ಲ ನಿನ್ನ ಮುಂದೆ ಶರಣಾಗದೆ ಇರುವುದಿಲ್ಲ...

No comments:

Post a Comment