ಅರಮನೆಯ ಕೋಣೆಗಳೊಳಗೆ ಹಚ್ಚಿಟ್ಟ....
ದೀಪಗಳನ್ನೆಲ್ಲವ ಆರಿಸದಿರು ಸಾಕಿ....
ಕಣ್ಣಲ್ಲಿ ಅವಳು ಕೆಡವಿ ಹೋದ ಧೂಳಿನಿಂದ
ಈಗೀಗ ಕಣ್ಣುಗಳು ಮಂಜಾಗಿಬಿಟ್ಟಿವೆ...,
ನನಗೂ... ಕತ್ತಲಲ್ಲೆ ನಡೆದು...ನಡೆದು ಸಾಕಾಗಿಬಿಟ್ಟಿದೆ.., ಒಮ್ಮೆ ಎಡವಿದ ನೋವಿಗೆ ಇನ್ನೂ.. ಮದ್ದು ಸಿಕ್ಕಿಲ್ಲ..., ಮತ್ತೆ...ಮತ್ತೆ ಎಡವುತ್ತ ಹೋದರೆ....ಹಿಡಿದೆಬ್ಬಿಸುವರೊಬ್ಬರು
ಯಾರಿಲ್ಲವಿಲ್ಲಿ....
ಈ ರಾತ್ರಿಗೊಂದಿಷ್ಟು...ಮದ್ಯವನ್ನು ಕಡಿಮೆಯೆ ಕುಡಿಸು
ಸಾಕಿ... ಬೇಸರಿಸುವುದಿಲ್ಲ..
ಸುರಿದುಬಿಡು ಬೇಕಿದ್ದರೆ....ನನ್ನ ಪಾಲಿನ ಮದ್ಯವನ್ನು
ಹಣತೆಗೆ.....
ನನ್ನ ಬರುವಿಕೆಯ ಮುಂಚೆ...,ನನ್ನಳಿಯುವೆಕೆಯ
ನಂತರವು.... ಬಂದು ಹೋಗುವವರೆದೆಯ ನೋವಿಗೆ...
ಬೆಳಕನ್ನು ಚೆಲ್ಲಬೇಕಲ್ಲ...!!!!
ಇಂದೊಂದು ಇರುಳಾದರು... ತನ್ನನೆ ತಾ... ಉರಿದುಕೊಳ್ಳುವ
ನೋವನ್ನಾದರು..... ಮರೆಯಲಿ...
ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿಬಿಡು ಸಾಕಿ...
ಪರಿಮಳವನ್ನೆ ಹೊತ್ತು ತಂದ ಗಾಳಿಯು ಕೂಡಾ,
ದೀಪವನ್ನು ನಂದಿಸಿ ಹೋದಾತು...!!!
ಲೆಕ್ಕವಿರದಷ್ಟು ಭಗ್ನ ಎದೆಗಳ ಉಸಿರನು ಉರಿಸಿದ
ಬೆಳಕದು...ನನ್ನೆದೆಯ ನಿಟ್ಟುಸಿರೊಂದು ಅದರ
ಕಾವಲ್ಲಿ ಉರಿದು ಹೋಗಲಿ....
ಉಳಿಯುವುದಾದರು...ಏನು...? ಈ ಜಗದಲಿ
ನಿಸ್ತೇಜದ ದೇಹವೊಂದನು ಹೊರತುಪಡಿಸಿ...
ಇಂದು ನಿನ್ನ ಕಣ್ಣಲಿ ಕಣ್ಣಿಟ್ಟು...ಮಾತನಾಡುವಷ್ಟು
ಶಕ್ತಿಯು ನನ್ನಲಿ ಉಳಿದಿಲ್ಲ ಸಾಕಿ...
ಎಲ್ಲ ನಿನ್ನ ಮದಿರೆಯ ಅಮಲೆ ತುಂಬಿಕೊಂಡುಬಿಟ್ಟಿದೆ... ತಡಮಾಡದೆ, ಎದೆಯ ಮೇಲೆ ನಿನ್ನ ಕಿವಿಯಿಟ್ಟು ಬೇಕಾದರು
ಕೇಳು... ಪ್ರತಿ ಬಡಿತದಲ್ಲು ಅವಳ ಹೆಸರನ್ನೆ ಜಪಿಸುತಿಹುದು..
ನೀನೆ ಸಾಕ್ಷಿಯಾಗಾಬೇಕಲ್ಲವೆ ಆಗ, ಅವಳ್ಹೆಸರಲೆ ಈ
ಉಸಿರೊಂದು ಉರಿದು ಹೋದದ್ದಕ್ಕೆ...
No comments:
Post a Comment