ನನ್ನ ಹೆಣವ ಹೊತ್ತುಕೊಂಡು ಸಾಗುವ
ಹಾದಿಯನ್ನು.... ತಳಿರು ತೋರಣಗಳಿಂದ
ಸಿಂಗರಿಸಿಬಿಡು ಸಾಕಿ....
ಜಾತಿ...ಜಾತಿಯೆಂದು ಬೀದಿಯಲ್ಲಿ ಕಚ್ಚಾಡುವವರಿಗೆ,
ಪ್ರೀತಿಯ ಜಾತಿಯಲ್ಲಿ ಹೊಡೆದಾಡದೆ....!!!! ಸತ್ತು
ಹೋದವನು ನಾನೊಬ್ಬನೆ ಎಂದು ಅವರಿಗೆಲ್ಲ ತಿಳಿಯಲಿ...
ಮಸಣದ ಹಾದಿಯುದ್ದಕ್ಕೂ... ಪರಿಮಳವನ್ನೆ
ಸೂಸುವ ಹೂಗಳನ್ನು ಚೆಲ್ಲಿಬಿಡು ಸಾಕಿ...
ಅಂತಿಮ ದರ್ಶನಕ್ಕೆ ಅವಳು ಬರುತ್ತಾಳಂತಂದಲ್ಲ...
ಮೂಡ ಮನಗಳ ಘರ್ಷಣೆಗೆ ಸಿಕ್ಕು...ಅದೇಷ್ಟೊ
ಅಮಾಯಕರ ಜೀವಗಳು.... ದಾರಿ ಮಧ್ಯದಲ್ಲೆ...
ಹರಿದಿಹವು...ಅವುಗಳ ಆತ್ಮಕ್ಕೆ ಶಾಂತಿಯನ್ನುವುದು
ನಿನ್ನ ಕೈ ಸ್ಪರ್ಶಸಿ ಚೆಲ್ಲಿದ ಮಲ್ಲಿಗೆಗಳಿಂದಾರು ಸಿಗಲಿ...
ದಾರಿಯುದ್ದಕ್ಕೂ....ನನ್ನ ಇತಿಹಾಸವನ್ನೆ ಬೈದುಕೊಳ್ಳುತ್ತಾ
ನಿಂತ...ಜನರಿಗೆಲ್ಲ... ಒಂದೊಂದು ಬಟ್ಟಲು ಮದಿರೆಯನ್ನು
ಕುಡಿಸುತ್ತಾ ಹೋಗು ಸಾಕಿ....
ಅವಳ ನೆನಪುಗಳನ್ನು... ಮದಿರೆಯ ಕುಡಿದು...ಕುಡಿದು
ಮರೆಯಲಾರದೆ ಸತ್ತುಹೋದೆ...!!! ಇವರಾದರೂ...
ಕುಡಿದ ಅರೆಘಳಿಗೆ ವೈಷ್ಯಮ್ಮವ ಮರೆತು ನಗಾಡುತಿರಲಿ...
ಹುಗಿದ ಗೋರಿಯ ಮೇಲೊಂದು ಪುಟ್ಟದಾದ
ಕಟ್ಟೆಯೊಂದನ್ನು ಕಟ್ಟಿಸಿ..ಚಿಕ್ಕ ಮಾಡದಲ್ಲೊಂದು
ಹಣತೆಯನ್ನು ಹಚ್ಚಿಟ್ಟುಬಿಡು ಸಾಕಿ....
ಕಲ್ಲು ಗೋಡೆಗಳ ಮಧ್ಯದಲ್ಲಿ ದೇವರನ್ನೆ ಕಟ್ಟಿಹಾಕಿ,
ಶಾಂತಿಯ ಹೆಸರಲ್ಲಿ ನೆತ್ತರನೆ ಹರಿಸುವ ಮತಾಂಧರೆಲ್ಲ
ಒಮ್ಮೆ ನನ್ನ ಗೋರಿಯತ್ತ ಗಮನ ಹರಿಸಲಿ... ಶಾಂತಿ
ಎಂಬುದು ಕತ್ತರಿಸುವುದರಲ್ಲಿಲ್ಲ...ಪ್ರತಿಫಲವನ್ನೂ ಬೇಡದ ಪ್ರೀತಿಯನ್ನು ಹಂಚುವದರಲ್ಲಿದೆಂಬುದು ಅವರಿಗೂ..
ಚೂರು ಅರ್ಥವಾಗಲಿ...
ಅವಳ ಮೊಗದಲ್ಲಿ ಸದಾ ನಗುವಿರಲೆಂದೆ...ಕಹಿಯಾದರೂ
ಗುಟುಕು...ಗುಟುಕು...ಮದ್ಯವನ್ನೆ ಕುಡಿಯುತ್ತಾ...
ನಾನು ಸತ್ತದಲ್ಲವೆ ಸಾಕಿ....
ಕಹಿಯ ನುಂಗಿಕೊಳ್ಳಲಾಗದೆ... ಪರರಿಗೆ ನಾವು
ಹೇಗಾದರೂ ಸಿಹಿಯನ್ನು ಹಂಚಬಹುದು...
ದುಃಖವನ್ನೆ ಅರಗಿಸಿಕೊಳ್ಳಲಾರದವರು...ಸುಖವನ್ನು
ಅನುಭವಿಸಲು ಎಷ್ಟು ಅರ್ಹರು....?
ಇತಿಹಾಸವನ್ನೇ.. ಅರಿಯದೆ ಹೋದವರು....
ಸೃಷ್ಟಿಸುವುದಾದರು ಹೇಗೆ..? ಇತಿಹಾಸವನ್ನು...
No comments:
Post a Comment