ನಮ್ಮ ಪ್ರೀತಿ....
ಹರಿಯುವ ನೀರಿನಲ್ಲಿ
ಬಿಟ್ಟ ಕಾಗದದ
ದೋಣಿಯಂತಾಯಿತಲ್ಲ..!!
ಗೆಳೆಯ....
ಹುಟ್ಟು ಹಾಕುವ
ಮೊದಲೇ... ಕೈ ಚೆಲ್ಲಿ
ಕುಳಿತರೆ...
ತೀರದ ಮೇಲಿನ ದುರಾಸೆ
ತಪ್ಪಲ್ಲವೇನು..?
ಜನರು ಆಡಿದ ಚುಚ್ಚು
ಮಾತುಗಳಿಗಿಂತ
ನಿಮ್ಮ ಸೂಜಿಯ
ನೋವೇನು ದೊಡ್ಡದಲ್ಲ
ಬಿಡಿ ಡಾಕ್ಟ್ರೆ.....
ಕೆಲವೊಂದು ಕಾಯಿಲೆಗಳಿಗೆ
ಔಷಧಿಯ ಅವಶ್ಯಕತೆ
ಇರುವುದಿಲ್ಲ... ಭರವಸೆಯ
ನಾಲ್ಕು ಮಾತುಗಳೆ
ಸಂಜೀವಿನಿಯಾಗಿ ಬಿಡುತ್ತವೆ.
No comments:
Post a Comment