ಚಂದ್ರಿ" ಎಂದು ಕೂಗಿದಳು ಕಲ್ಲವ್ವ, ಮನೆಯಿಂದ ಹೊರಗೋಡಿ ಬಂದಳು ಕಂಕುಳಲ್ಲಿ ಅಕ್ಕನ ಮಗಳನ್ನು ಎತ್ತಿಕೊಂಡು. "ಹೇಳ್ಬೇ.." ಎಂದು ನಿಂತಳು ಚಂದ್ರವ್ವ ಕಲ್ಲವ್ವನ ಆರನೇ ಮಗಳು, ಕಿತ್ತು ತಿನ್ನುವ ಬಡತನಕ್ಕೆ ಅಸರೆಯಾಗಲೆಂದು ಗಂಡು ಗಂಡೆಂದು ಸಾಲು ಸಾಲಾಗಿ ಆರು ಹೆಣ್ಣು ಮಕ್ಕಳ ಹಡೆದಿದ್ದಳು ಕಲ್ಲವ್ವ. ಕೊನೆಗೆ ಆರು ಹೆರಿಗೆಗಳ ನಂತರ " ನಿನಗೆ ರಕ್ತಹೀನತೆಯಿದೆ, ಮತ್ತೆ ಏನಾದರೂ ಗರ್ಭವನ್ನು ಧರಿಸಿದರೆ ನಿನಗೆ ಪ್ರಾಣಾಪಾಯವಿದೆ" ಎಂದು ಸರಕಾರಿ ಆಸ್ಪತ್ರೆಯ ಡಾಕ್ಟ್ರಮ್ಮ ಕಲ್ಲವ್ವನ ಗಂಡ ಸಿದ್ದಪ್ಪನಿಗೆ ಹೇಳಿದ ಮೇಲೆ ಅದೇ ವಾರದಲ್ಲಿ ವಿಧಿಯಿಲ್ಲದೆ ಸಂತಾನ ಹರಣ ಚಿಕಿತ್ಸೆಯನ್ನು ಮಾಡಿಸಿಕೊಂಡು, ಗಂಡು ಸಂತಾನದ ಆಸೆಗೆ ಎಳ್ಳು ನೀರು ಬಿಟ್ಟು ಊರು ಸೇರಿದ್ದರು." ಯವ್ವಾ... ಇನ್ನೊಂದೆರ್ಡ ಬಿಂದ್ಗಿ ನೀರ...ರ ತಂದ ಹಾಕ್ಬೇ, ಮುಸುರಿ, ಬಟ್ಟಿ ವಗ್ಯಾಣ ಭಾಳ ಅದಾವು" ಎಂದು ದಣಿದ ದನಿಯಲ್ಲಿ ನುಡಿದಳು. "ಅಯ್ಯ... ಸಾಕ ಬಾರ್ಬೆ, ಈಕೀನ್ನ ನೀನ ಎತ್ಗೊ ಬಾ ಇಲ್ಲೆ, ನಾನ ಎಲ್ಲ ಅರ್ಬಿ ವಗ್ದ ಹಾಕಿ, ಮುಸರಿನೂ ತೋಳ್ಕೊಂಡು ಬರ್ತೀನಿ, ನಿನ್ಗ ಆಗ್ಲೆ ಹೇಳಿದ್ದೀಲ್ಲಾ ನಾನು
ಎಲ್ಲಾ ಕೆಲ್ಸ ನಾ ಇಕ್ಕಟ್ಟ ಮಾಡ್ತೀನಿ ಅಂತಂದ ಆಗ್ಲೆ ಬಂದ ಕುಂತ ಬಿಟ್ಟಿಯನ ಇಲ್ಲೆ ಅಂಗಳ್ದಾಗ ಬಂದ, ನಡಿ.. ನಡಿ.. ಎಳ ಎದ್ದೇಳ... ನಾನೆಲ್ಲ ಕೆಲ್ಸ ಮುಗ್ಸಿಕೊಂಡ ಬರ್ತಿನ ನಡಿ". ಎನ್ನುತ್ತಾ ಅಕ್ಕನ ಮಗಳನ್ನು ತಾಯಿ ಕಂಕುಳಿಗೆ ವರ್ಗಾಯಿಸುತ್ತಾ, ಲಂಗಾವನ್ನು ಎತ್ತಿ ನಡುವಿಗೆ ಸಿಕ್ಕಿಸಿಕೊಂಡು, ಮುಸುರಿ ಮತ್ತು ಬಟ್ಟೆಗಳನ್ನು ಒಗೆಯಲು ಅಣಿಯಾದಳು ಚಂದ್ರವ್ವ. ಚಂದ್ರವ್ವ ಅಷ್ಟೊಂದು ಹೇಳಿಕೊಳ್ಳುವಷ್ಟೇನು ಸುಂದರಿಯಲ್ಲ, ಆದರೆ ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕೆನ್ನುವ ಅಂಗಸೌಷ್ಠವ. ಐದು ಅಕ್ಕಂದಿರ ಮದುವೆ, ಬಾಣೆಂತನ ಅವರು ಹಬ್ಬ ಹರಿದಿನಗಳಿಗೆ ಬಂದರೆ ಅವರ ಮಕ್ಕಳ ಚಾಕರಿ, ಅವರವರ ಅತ್ತೆ ಮನೆಗಳಲ್ಲಿ ನಡೆಯುತ್ತಿದ್ದಂತಹ ವಿಚಾರಗಳ ಕೇಳಿ, ದುಃಖಕ್ಕೆ ಸಂತೈಸುತ್ತಿದ್ದರೆ... ನಲಿವಿಗೆ ಮತ್ತಷ್ಟು ಜೇನನ್ನು ಬೇರಸುತ್ತಿದ್ದಳು. ಅಕ್ಕಂದಿರದೆಲ್ಲರ ಬಾಳನ್ನು ಕಂಡು, ವಿದ್ಯಾವಂತೆಯಲ್ಲದಿದ್ದರೂ... ಬಾಳಿನ ಒಳಾರ್ಥವನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಳು. ವಿವೇಚನೆಯುಳ್ಳವಳಾಗಿದ್ದು, ಸ್ವಾಭಿಮಾನಿಯು ಆಗಿದ್ದಳು.
ಹೀಗೆ ದಿನಗಳು ಕಳೆದಂತೆ.. ಚಂದ್ರವ್ವ ಮಾಗಿದ ಹಣ್ಣಾದಳು, ಆ ಹಣ್ಣನ್ನು ಜೋಪಾನದ ಜವಾಬ್ದಾರಿಯ ಭಾರವನ್ನು ಹೋರುವ ಗಂಡಿನ ಹುಡುಗಾಟಕ್ಕಾಗಿ ತಂದೆ ಸಿದ್ದಪ್ಪ ಅಲೆದಾಡಿ ಊರೊರನ್ನು ವಿಚಾರಿಸುತ್ತಿದ್ದನು.
ಅವನು ಮಲ್ಲವ್ವನನ್ನು ಕೋಣೆಯೊಳಗೆ ಕರೆದುಕೊಂಡು ಬಂದು ಬಾಗಿಲ ಚೀಲಕವನ್ನು ಹಾಕಿ, ಮೆಲ್ಲಗೆ ಕೋಣೆಯ ಕಿಡಕಿಯನ್ನು ತೆಗೆಯುತ್ತಾನೆ. ತಣ್ಣನೆ ಗಾಳಿಯು ಸುಳಿ ಸುಳಿದು ಬಂದು ಅವನ ಮೈಯೆಲ್ಲಾ ಆವರಿಸಿ ಕಾದ ಹಂಚಿನ ಮೇಲೆ ಸಿಡಿಸಿದ ನೀರಿನಂತೆ ಚುರ್ರೆಂದು ಅವನ ದೇಹದೊಳಗಿನ ಕಾಮದ ಪಿತ್ತವನ್ನು ಹೆಚ್ಚಿಸುತ್ತದೆ, ಆರು ತಿಂಗಳ ಗರ್ಭಿಣಿಯಂತೆ ಅರ್ಧಾಕೃತಿಯಂತಿರುವ ಚಂದ್ರನ ಬೆಳಕು ಅತ್ತ ಹೆಚ್ಚು ಅಲ್ಲ ಇತ್ತ ಕಡಿಮೆಯೂ ಇಲ್ಲದಂತೆ ಕೋಣೆಯ ಒಂದು ಭಾಗಕ್ಕೆ ಹರಡುತ್ತದೆ. ಕತ್ತಲಿನಲ್ಲಿ ಮರೆಯಾಗಿ ನಿಂತಿದ್ದ ಮಲ್ಲವ್ವನ ಭುಜವನ್ನು ಎರಡು ಕೈಗಳಿಂದ ಹಿಡಿದುಕೊಂಡು ಬೆಳಕಿನತ್ತ ಕರೆತರುತ್ತಾನೆ. ಮೆಲ್ಲಗೆ ಅವಳೆದೆಯ ಮೇಲಿನ ಸೆರಗನ್ನು ಜಾರಿಸುತ್ತಾನೆ. ಆ ಮಂದ ಬೆಳಕಿನಲ್ಲಿ ಮಲ್ಲವ್ವನ ಹಾಲು ತುಂಬಿದ ಎದೆಯ ಕಂಡು ಉನ್ಮಕ್ತನಾಗಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಇದೆಲ್ಲದರ ಅರಿವಿಲ್ಲದಂತೆ ಮಲ್ಲವ್ವ ಕಣ್ಣೀರು ಸುರಿಸುತ್ತಾ ನಿಂತಿರುತ್ತಾಳೆ. ಇನ್ನೇನು, ಹೊತ್ತು ಸರಿದರೆ ತುಪ್ಪ ಜಾರಿದಂತಯೆ ಲೆಕ್ಕ ಇಷ್ಟು ದಿನ ಮನದಲ್ಲಿ ಮಂಡಿಗೆ ತಿನ್ನುತ್ತಿದ್ದವನಿಗೆ ಇಂದು ಆ ದೇವರು ಅನಾಯಾಸವಾಗಿ ಬಾಳೆಲೆಯ ತುಂಬ ಮೃಷ್ಟಾನ್ನವನ್ನೆ ಉಣಲು ಕೊಟ್ಟಂತಾಗಿದೆ, ಅಬ್ಬಾ ಇನ್ನೂ ತಾಳಲಾಗದು" ಎಂದು ಮನದಲ್ಲಿಯೆ ಮಾತನಾಡಿಕೊಳ್ಳುತ್ತ ತಡಮಾಡದೆ ತಿಮ್ಮಣ್ಣ ಅವಳ ಎಲ್ಲ ವಸ್ತ್ರಗಳನ್ನು ಕಳಚಿ, ನೆಲದ ಮೇಲೆ ಮಲಗಿಸಿ ಅವಳ ಮೇಲೆ ಹುಲಿಯಂತೆ ಎಗರುತ್ತಾನೆ, ಸುಖದ ತುತ್ತ ತುದಿಯನೇರಬೇಕೆನ್ನುವಾಗ ಮಲ್ಲವ್ವನನ್ನು ಕೇಳುತ್ತಾನೆ, "ನಿನಗೆ ಈಗ ಹೇಗೆ ಎನ್ನಿಸುತ್ತಿದೆ". ಎಂದು ನಾನೆ ಗೆದ್ದೆ ಎಂಬ ಧ್ವನಿಯಲ್ಲಿ, ಆಗ ಮಲ್ಲವ್ವ ಇದನ್ನೆಲ್ಲ ಕಣ್ಮುಚ್ಚಿ ಸಹಿಸಿಕೊಳ್ಳುತ್ತಿದ್ದಳು, ತಿಮ್ಮಯ್ಯನ ಮಾತುಗಳನ್ನು ಕೇಳಿ, ಕಣ್ಬಿಟ್ಟು ಮಬ್ಬುಗತ್ತಲಿನಲ್ಲಿ ಅವನನ್ನು ದಿಟ್ಟಿಸಿ ನೋಡಿದಳು, ಕಾಮದ ಬೆಂಕಿಗೆ ಬೆವರಿ ನೀರು ನೀರಾಗಿದ್ದನು, ಕಣ್ಣುಗಳಲ್ಲಿ ನಿನ್ನ ಹೆಣ್ತನದ ಅನ್ನವನ್ನು ನಾನಿಂದು ತಿಂದು ತೇಗುವೆ ಎನ್ನುವ ಭಾವ ತುಂಬಿ ಹರಿದಾಡುತ್ತಿತ್ತು, ಮಲ್ಲವ್ವ ಮೆಲ್ಲನೆ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಹೇಳಿದಳು " ನೋಡು ತಿಮ್ಮಯ್ಯ, ಕಾಲವೆಂಬ ಹುಲಿಯ ಬಾಯಿಗೆ ಸಿಕ್ಕ ಹರಿಣಿ ನಾನು, ನೀನು ನನ್ನ ದೇಹವನ್ನೆಲ್ಲವ ಆಕ್ರಮಿಸಿಕೊಳ್ಳುತಿರುವೆ, ನನ್ನ ಶೀಲದ ಕೊಳಕ್ಕೆ ಕೆಸರಿನ ಕಳಕಂವ ಸುರಿಯಲು ಹಾತೊರೆಯುತ್ತಿರುವೆ, ಏನು ಮಾಡಲಿ ? ನನಗಿದು ಅನಿವಾರ್ಯವಾಗಿದೆ ನನ್ನ ಮಾಂಗಲ್ಯ ಭಾಗ್ಯವ ಉಳಿಸಿಕೊಳ್ಳಲು, ನಿನಗಿದು ಕಾಮದೂಟ, ನನಗೆ ಇದನ್ನು ಚಿಕ್ಕ ಮಗುವಿನಾಟವಾಗಿ ನೋಡಿತ್ತಿದ್ದೇನೆ, ಕೇಳು, ಕೆಳಗಿನ ಭಾಗವ ನೀನು ಆಕ್ರಮಿಸಿದರೆ, ನಾನು ನನ್ನ ಎರಡನೇಯ ಮಗುವಿಗೆ ಜನ್ಮವ ನೀಡುತ್ತಿರುವ ಹೆರಿಗೆಯ ನೋವು ಎಂದುಕೊಂಡು ಹಿಂಸೆಯನ್ನೆಲ್ಲಾ.... ಸಹಿಸಿಕೊಳ್ಳುತ್ತೇನೆ, ಮತ್ತೆ ನನ್ನೆದೆಯ ಮೇಲೆ ನೀನು ಎರಗಿದರೆ, ಹುಟ್ಟಿದ ಹಸುಗೂಸಿನ ಹೊಟ್ಟೆಯ ಹಸಿವನಿಂಗಿಸಲು ಎದೆಹಾಲ ನೀಡುತ್ತಿರುವೆನೆಂದು ಸಹಿಸಿಕೊಳ್ಳುವೆ, ನನ್ನ ಮೊಗದ ತುಂಬಾ ನಿನ್ನ ಮುಳ್ಳು ಚುಂಬನಗಳು ಮುದ್ರೆಯ ಒತ್ತಲು ಬರುವುದಾದರೆ, ಅಂಗಳದಿ ಆಡಿ ಓಡೋಡಿ ಬಂದ ಮಗವು ತನ್ನ ತಾಯಿಯನ್ನು ಅಪ್ಪಿ ಮುದ್ದಾಡಿತೆಂದು ಮಲಗಿ ಬಿಡುವೆ, ಗಂಡು ಸಂತಾನವಿರದ ನನಗೆ ನಿನ್ನನೆ ಮಗನೆಂದುಕೊಳ್ಳುವೆ", ಎಂದು ಮಲ್ಲವ್ವ ಅವನ ಕಾಮದೋಕುಳಿಗೆ ಸಹಕರಿಸಲು ಮುಂದಾದಳು, ಮೈತುಂಬಾ ವಿದ್ಯುತ್ ಶಕ್ತಿಯ ತರಂಗಗಳು ಹರಿದಾಡಿದಂತಾಗಿ, ಧಿಕ್ಕನೆ ಮಲ್ಲವ್ವನ ಮೈ ಮೇಲಿಂದ ಎದ್ದು ಬಿಟ್ಟನು ತಿಮ್ಮಯ್ಯ, ಮಳೆಯಲ್ಲಿ ನೆಂದವರಂತೆ ಮೈಯಿಂದ ಸರಸರನೆ ಬೆವರು ಕಿತ್ತು ಬರಲಾರಂಭಿಸಿತು. ನೆತ್ತಿಗೇರಿದ್ದ ಕಾಮದ ಪಿತ್ತವು ಪಾಪಪ್ರಜ್ಞೆಯ ಬೆಂಕಿಗೆ ಸುಟ್ಟು ಕರಗಿ ಇಳಿದು ಹೋಗಿತ್ತು, ನಿಂತ ನೆಲವು ಬಾಯ್ತೆರೆದು ನುಂಗುವಂತೆ ಭಾಸವಾಗಹತ್ತಿತು, ಅರೆ ಕ್ಷಣವು ಅಲ್ಲಿ ನಿಲ್ಲದೆ, ಹೊರಳಿ ಮಲ್ಲವ್ವನತ್ತ ಕಣ್ಣೇತ್ತಿಯೂ ನೋಡದೆ, ಬಟ್ಟೆಯ ಧರಿಸಿಕೊಂಡು ಹೊರ ನಡೆದುಬಿಟ್ಟ, ಇದನ್ನು ಊಹಿಸದೆ ಇರದ ಮಲ್ಲವ್ವ, ಸರಕ್ಕನೆ ಎದ್ದು ಕುಳಿತಳು "ಅಯ್ಯೋ ಭಗವಂತ ಇದೇನಾಯಿತು ? ಬಾಯಿಗೆ ಬಂದಂತೆ ನಾನು ಏನೇನೊ ಮಾತನಾಡಿಬಿಟ್ಟೆ, ಒಂದು ವೇಳೆ ಇವನು ರಕ್ತವ ಕೊಡದೆ ಹೋದರೆ ನನ್ನ ಮಾಂಗಲ್ಯದ ಗತಿಯೇನು?" ಎನ್ನುತ್ತಲೆ ಮಲ್ಲವ್ವ ಬಟ್ಟೆಗಳನ್ನೆಲ್ಲ ಉಟ್ಟುಕೊಂಡು ತಿಮ್ಮಯ್ಯನನ್ನೆ ಹುಡುಕಲು ಮಹಡಿಯ ಹತ್ತಿ ಬಂದಳು, ಅಷ್ಟರಲ್ಲಾಗಲೆ ತಿಮ್ಮಯ್ಯನು ರಕ್ತಭಂಡಾರ ಕೋಣೆಯಲ್ಲಿ ತನ್ನ ರಕ್ತವನ್ನು ಕೊಡುತ್ತಿದ್ದನು. ಅರ್ಧ ತಾಸಿನಲ್ಲಿ ಮಲ್ಲವ್ವನ ಗಂಡ ಸಣ್ಣಯ್ಯನಿಗೆ ರಕ್ತವ ಹಾಕಿದರು. ರಕ್ತವ ಕೊಟ್ಟ ತಿಮ್ಮಯ್ಯ ತಲೆತಗ್ಗಿಸಿಕೊಂಡು ಬಂದು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ ಸಣ್ಣಯ್ಯನ ಪಾದವ ಹಿಡಿದುಕೊಂಡು ಅಳುತ್ತಾ, ಅಲ್ಲೆ ನಿದ್ರೆಗೆ ಶರಣಾಗಿದ್ದ, ಮಲ್ಲವ್ವನಿಗೆ ಏನು ತಿಳಿಯದೆ ಗೋಡೆಗೆ ಆಸರೆಯಾಗಿ ಕುಳಿತುಕೊಂಡು ನೆಲಕ್ಕೆ ಮಲಗಿಸಿದ್ದ ಮಗವನ್ನು ಮಡಿಲಲ್ಲಿ ಹಾಕಿಕೊಂಡು ಎದೆಹಾಲನ್ನು ಕೊಡುತ್ತಾ, ಗಂಡನಿಗೆ ರಕ್ತ ಸಿಕ್ಕಿದುದಕೆ ಸಮಾಧಾನಗೊಂಡು ಹಾಗೆ ಸ್ವಲ್ಪ ನಿರಾಳವಾಗಿ ಕಣ್ಮುಚ್ಚಿದಳು.
ಮುಂಜಾವು ನಾಲ್ಕರ ಸಮಯ, ಸಣ್ಣಯ್ಯ ಸಣ್ಣಗೆ ಬಿಕ್ಕ ತೊಡಗಿದನು, " ಮಲ್ಲಿ, ಮಲ್ಲಿ," ಎಂದೆರಡು ಸಲ ಕೂಗಿದನು. ಮಲ್ಲವ್ವನಿಗೆ ತಟಕ್ಕನೆ ಎಚ್ಚರವಾಗಿ ಮಗಳನ್ನು ನೆಲದ ಮೇಲೆ ಮಲಗಿಸಿ, ಗಂಡನ ಬಳಿ ಸರಿದು " ಏನಾಯ್ತು, ಹೇಳ್ರಿ, ಏನ್ಬೇಕಿತ್ತು ? ನೀರು ಕುಡಿತೀರಾ ಇರೀ ನರ್ಸಮ್ಮನ್ನ ಕರೀತಿನಿ" ಎಂದು ಅವಸರಿಸಿದಳು. ಸಣ್ಣಯ್ಯ ಗೋಣಾಡಿಸುತ್ತಲೆ ಬೇಡವೆಂದ, ಮೆಲ್ಲಗೆ ನಡುಗುವ ಕೈಗಳಿಂದ ಅವಳ ಕೈಯನ್ನು ಹಿಡಿದುಕೊಂಡು " ಮಗ....ಳು... ಹು...ಷಾ..ರು" ಎನ್ನುತ್ತಲೆ ಅವನ ಪ್ರಾಣಪಕ್ಷಿ ಎದೆಗೂಡಿನಿಂದ ಬಿಡುಗಡೆಯ ಹೊಂದಿತ್ತು.
ಮರಳಿ ಅವನು ಮಾತನಾಡದೆ ಇರುವುದನ್ನು ನೋಡಿ ಮಲ್ಲವ್ವ ಜೋರಾಗಿ ಅಳುತ್ತಾ, ನರ್ಸಮ್ಮನನ್ನು ಕರೆಯಲು ಓಡಿದಳು. ಮಲ್ಲಮ್ಮನ ಚೀರುವಿಕೆಗೆ ಎಚ್ಚರಗೊಂಡ ತಿಮ್ಮಯ್ಯನು ಎದ್ದು ಸಣ್ಣಯ್ಯನನ್ನು ನೋಡುತ್ತಾನೆ, ಸಣ್ಣಯ್ಯನ ಕಣ್ಣುಗಳು ಇವನನ್ನೆ ದಿಟ್ಟಿಸಿ ತಿವಿದು ನೋಡುವ ಹಾಗೆ ತೆರದುಕೊಂಡಿರುತ್ತವೆ. ಮಲ್ಲವ್ವನ ಕರೆಗೆ ಓಡಿ ಬಂದ ನರ್ಸಮ್ಮ ಸಣ್ಣಯ್ಯನ ನಾಡಿ ಮಿಡಿತವನ್ನು ಪರೀಕ್ಷಿಸಿ, ಅವನೆರಡು ಕಣ್ಣುಗಳ ರೆಪ್ಪೆಯ ಮುಚ್ಚಿ, ಮಲ್ಲವ್ವನ ಮುಖವನೊಮ್ಮೆ ನೋಡಿ ಸಣ್ಣಯ್ಯ ಇನ್ನಿಲ್ಲ ಎಂಬಂತೆ ತಲೆಯಾಡಿಸಿ ಹೊರಟು ಹೋಗುತ್ತಾಳೆ. ತಲೆಯ ಮೇಲೆ ಬಂಡೆಕಲ್ಲು ಬಿದ್ದವರ ಹಾಗೆ ಮಲ್ಲವ್ವಳಿಗೆ ಏನು ಮಾಡುವುದು ತೋಚದೆ ಗೋಡೆಗೊರಗಿ ತಲೆಮ್ಯಾಲೆ ಎಡಗೈಯನ್ನಿಟ್ಟುಕೊಂಡು, ಸೀರೆಯ ಅಂಚನ್ನು ಬಲಗೈಯಿಂದ ಬಾಯಿಗೆ ಒತ್ತಿ ಹಿಡಿದು ಅಳಲಾರಂಭಿಸುತ್ತಾಳೆ.
ಪಕ್ಕದ ಮಂಚದಲ್ಲಿ ಇದನ್ನೇಲ್ಲವ ನೋಡುತ್ತಿದ್ದ ರೋಗಿ ಅಜ್ಜಿಯೊಬ್ಬಳು " ಶಿವ್ನೆ ಇಷ್ಟು ಚಿಕ್ಕ ವಯಸ್ಸನ್ಯಾಗ ಆ ಹುಡುಗಿನ ವಿಧವೆ ಮಾಡ್ದೆಲ್ಲಪ್ಪ, ಆ ತಾಯಿ ಮತ್ತ ಹಸುಗೂಸಿಗೆ ದಿಕ್ಕು ದೇಸಿಯಿಲ್ದ ಪರದೇಶಿ ಮಾಡ್ದೇಲ್ಲೊ, ಇನ್ನಾರ ದಿಕ್ಕ ಆಕ್ಕಾರ ಇವರ ಬಾಳ್ವಿಗೆ" ಎಂದು ಎರಡು ಹನಿ ಕಣ್ಣೀರನ್ನು ಸುರಿಸುತ್ತಾ ಹೇಳಿದಳು.
ಇಷ್ಟು ಹೊತ್ತು ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ಕುಳಿತಿದ್ದ ತಿಮ್ಮಯ್ಯ ಅಜ್ಜಿಯ ಮಾತುಗಳ ಕೇಳಿ, ಕಣ್ಣೀರೊರೆಸಿಕೊಳ್ಳುತ್ತಾ, ಸಣ್ಣಯ್ಯನ ಕಾಲ್ಬಳಿ ಬಂದು ಅವನ ಪಾದಗಳ ಮುಟ್ಟಿ ನಮಸ್ಕರಿಸಿ, ಧೀರ್ಘವಾದ ನಿಟ್ಟುಸಿರೊಂದನು ಬಿಟ್ಟು, ನೆಲದ ಮೇಲೆ ಮಲಗಿಸಿದ್ದ ಮಗುವನ್ನು ಎತ್ತಿಕೊಂಡು ಮಲ್ಲವ್ವನ ಬಳಿ ಬಂದು, ಅವಳ ಕೈಯನ್ನು ಹಿಡಿದೆಬ್ಬಿಸಿಕೊಂಡು, ಸಣ್ಣಯ್ಯನ ಶವದೇದುರು ನಿಂತು ಒಂದು ಮಾತನ್ನು ಹೇಳುತ್ತಾನೆ. " ಇಂದಿನಿಂದ ನನ್ನ ತಂಗಿ ಮತ್ತು......ನನ್ನ ತಾಯಿಯನ್ನು..... ನಾನು ಸಾಕುತ್ತೇನೆ". ಎಂದಾಗ, ಬಿಟ್ಟ ಕಣ್ಣನು ಹಾಗೆ ಬಿಟ್ಟು ಮಲ್ಲವ್ವಳು ತಿಮ್ಮಯ್ಯನನ್ನು ನೋಡುತ್ತಾಳೆ. ಆಗ ತಿಮ್ಮಯ್ಯನು " ನಿಜ ಅವ್ವ ಮಲ್ಲವ್ವ, ನನ್ನ ತಾಯಿ ನನಗೆ ಜನ್ಮವಕೊಟ್ಟು ಈ ಭುವಿಗೆ ತಂದಿರಬಹುದು. ಆದರಿನ್ನೂ ನಾನು ಕತ್ತಲಲ್ಲೆ ಇದ್ದೆ, ಮನದೊಳಗಿನ ಕೋಣೆ ಬೆಳಕನ್ನು ಬೇಡುತ್ತಿತ್ತು ಅದನ್ನು ನೀನಿಂದು ಕತ್ತಲಲಿ ಹೊತ್ತಿಸಿದೆ, ಕಾರ್ಗತ್ತಲಲೂ... ನನಗೆ ಬಾಳಿನ ಜ್ಞಾನೋದಯವ ಬೆಳಗಿಸಿದೆ. ನಿನ್ನ ಹೊಟ್ಟೆಯಲ್ಲಿ ಹುಟ್ಟಸಿದ್ದರೂ ನಿನ್ನ ದೇಹ ಸ್ಪರ್ಶದಿಂದ ಈ ಹಿಂದೆ ನಾ ಮಾಡಿದ ಪಾಪಗಳೆಲ್ಲವು ತೊಡೆದು ಹೋಗಿ ಮತ್ತೆ ನನಗೆ ಪುನರ್ಜನ್ಮವ ನೀಡಿದೆ. ಉಳಿದ ಪಾಪದ ಕೊಡಗಳನ್ನು ನಿನ್ನ ಪಾದ ಸೇವೆಯಲ್ಲಿ ಸುರಿಯುತ್ತಾ ಹಗುರು ಮಾಡಿಕೊಳ್ಳುವೆ.
ತಿರಸ್ಕರಿಸಬೇಡ ತಾಯಿ... ಮಲ್ಲವ್ವ... ನಿನ್ನ ಹಿರಿಮಗನೆಂದು ನಿನ್ನ ಸೇರಗಿಗೆ ಗಂಟು ಹಾಕಿಕೊಳ್ಳವ್ವ" ಎಂದೆನ್ನುತ್ತ ಗೋಳೊ ಎಂದಳತೊಡಗಿದನು.
ಮಲ್ಲವ್ವನಿಗೆ ಆತಂಕದೊಳಗೊಂದು ನಿರಾತಂಕದ ಕಿರಣವೊಂದು ಮೂಡಿತು. ಗಂಡ ಸಣ್ಣಯ್ಯನ ಮೊಗವನೊಮ್ಮೆ ನೋಡಿ ಅವನ ಪಾದವಮುಟ್ಟಿ ನಮಸ್ಕರಿಸಿ ಮುಂದಿನ ಕಾರ್ಯಕ್ಕೆ ಅಣಿಯಾಗತೊಡಗಿದರು.