ಬಾಳ ಕಾನನದಿ ತೊಟ್ಟಿಲು ತೂಗಿ
ಕೈ ಬಿಟ್ಟಿಹನು ಭಗವಂತ....
ನಡೆವ ದಾರಿ ಕಲ್ಲೊ....ಮುಳ್ಳೊ.....
ಎಚ್ಚೆತ್ತು ನಡೆಯುತ್ತಾ ಸಾಗುತ್ತಿರಬೇಕು
ಕಣ್ತಪ್ಪಿ ತುಳಿದ ಮುಳ್ಳಿನ ನೋವು
ಮುಂದಿನ ದಾರಿಯ ಬಗ್ಗೆ ಎಚ್ಚರವಹಿಸುವಂತೆ ಮಾಡುತ್ತದೆ
ಈಗ ಎಡವಿದ ಕಲ್ಲು, ಮುಂದೆಂದೂ
ಎಡವದಿರೆಂದು ಎಚ್ಚರಿಸುತ್ತದೆ.
ನಮ್ಮಂತೆ ಎಷ್ಟೊ.... ಜನರಿಹರಿಲ್ಲಿ
ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು
ನಡೆಯಬೇಕಿದೆ ಇಲ್ಲಿ.... ದುಷ್ಟ ಮನಗಳ
ಮೃಗಗಳ ಕಣ್ತಪ್ಪಿಸಿ
ನಡೆಯುವುದೊಂದೆ ಆಯ್ಕೆ,
ನಡೆಯುತಿರಬೇಕು ದಣಿವಾದರೂ...
ಸೂರ್ಯಾಸ್ತವ ಹೊಂದುವವರೆಗೂ
🙏🙏🙏🙏🙏🙏🙏
👌👌👌👌👌👌👌
No comments:
Post a Comment