ನಿನ್ನ ಹಾಗೆ ಅತ್ತು ಎದೆಭಾರವ
ಹಗುರ ಮಾಡಿಕೊಳ್ಳುವ ಧೈರ್ಯ
ನನಗಿಲ್ಲದಲೆ... ಮದಿರೆಯ ಬಟ್ಟಲನ್ನು
ಹಿಡಿದಿರುವೆ...
ನನ್ನೆದೆಯ ಉರಿಯ ತಣ್ಣಗಾಗಿಸಿಕೊಳ್ಳುವ
ದವಾ.. ವಾಗಿಸಿಕೊಂಡೆ ಮಧು...ರಾ
ಕರೆದರೂ.. ಕರಗದ ಕತ್ತಲಲಿ,
ಮೋಡದ ಮರೆಯಲ್ಲಿ ಅವಿತು...
ನಗೆಯ ಮುಳ್ಳನು ಚುಚ್ಚುವ
ಚಂದಿರನ ರಾತ್ರಿಗಳಷ್ಟನ್ನೆ..
ನೀನು ಅನುಭವಿಸಿದ್ದು !!!
ನೋವನು ಅವನೊಂದಿಗೆ ಹಂಚಿಕೊಂಡದ್ದು...
ಹಗಲಿರುಳಗಳ ಅಡಕತ್ತರಿಯಲ್ಲಿ
ಸಿಕ್ಕ ನನ್ನ ನೋವಿನ ಅಡಿಕೆಯ ಮನವನ್ನು
ಅರಿಯುವರೊಬ್ಬಾರು... ಇಲ್ಲವಿಲ್ಲಿ...!!!
ಎಲ್ಲರೂ... ನನ್ನಾವಸ್ಥೆಯ ಕಂಡು, ನಗುವೆಂಬ
ಕತ್ತರಿಯ ಹಿಡಿದೆ ನಿಂತಿರುವರು...ಕತ್ತರಿಸಲು !!!
ನೃತ್ಯದ ರಭಸಕೆ ಜಿನುಗಿದ ಹಿಮ್ಮಡಿಯ
ನಿನ್ನ ರಕ್ತಕ್ಕಿಂತ....
ನನ್ನೆದೆಯ ರಕ್ತವು ಎಷ್ಟೊ....
ಮದಿರೆಯ ಬಟ್ಟಲುಗಳಲ್ಲಿ
ಇಳಿದಿದ್ದು ನಿನಗೆ ತಿಳಿದೆ.. ಇಲ್ಲ !!!
ಬರೆದ ಪ್ರತಿಯೊಂದು ಕಾವ್ಯದ
ಪದಕೆ ನಿ ಕಿವಿಯಾಗಲೇ....ಇಲ್ಲ
ಮೇಣ ದೀಪದ ಬೆಳಕಲಿ ಮಿಂಚಿ,
ನಿನ್ನ ಕೆಂಪು ರಂಗೀನ ಮದರಂಗಿ ಪಾದಗಳಿಗಂಟಿದ,
ನನ್ನ ಕಣ್ಣಂಚಿಂದ ಜಾರಿದ ಹನಿಗಳ ನಿ....
ಎತ್ತಿಕ್ಕಲೆ ಇಲ್ಲ..
ಮುಂಗೈಗೆ ಸುತ್ತಿ ಘಮಘಮಿಸಿದ
ಮಲ್ಲಿಗೆಯ ಆಘ್ರಾಣಿಸಿ, ಮೆಚ್ಚಿ ನಿನ್ನ
ತುರುಬಿಗೆ ನಾ ಮುಡಿಸಿದ ಘಳಿಗೆಯ
ಒಂದಿನಿತು ನಿ....ನೆನೆಯಲೆ....ಇಲ್ಲ
ನಿನಗೆ ಹೇಗೆ ಹೇಳಲಿ, ನನ್ನೊಳಗಿನ ನೋವನು
ಬಟ್ಟಲೊಳಗಿನ....ಷರಾಬಿನ ಹನಿ... ಹನಿಗೂ
ಹೇಳುವೆ....ನಿನ್ನನ್ನು,
ಸ್ವಪ್ನದಲ್ಲಾದರೂ ಒಂದುಗೂಡಿಸು
ಇಲ್ಲವೆ ನನ್ನನ್ನು ಮಣ್ಣುಗೂಡಿಸು ಎಂದು
No comments:
Post a Comment