Thursday, December 28, 2017

ಪ್ರೂಫ್

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ರೋಣ
ಕ.ಸಾ.ಪ ತಾಲೂಕ ಘಟಕ ಗಜೇಂದ್ರಗಡ ಇವರ ಸಂಯುಕ್ತಾಶ್ರಯದಲ್ಲಿ ೮೦ ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆ ಶ್ರಿ ಆಯ್. ಎ. ರೇವಡಿ ಅಧ್ಯಕ್ಷರು ಕ.ಸಾ.ಪ. ರೋಣ. ವಿದ್ಯಾದರ್ ಮುತಾಲಿಕ್ ದೇಸಾಯಿ. ವಿದ್ಯಾದರ ಕನ್ನಡ ಪ್ರತಿಷ್ಠಾನ (ಠಾಕುರ್ಲಿ-ಠಾಣೆ ಮಹಾರಾಷ್ಟ್ರ) ಇವರು ಕಳೆದ ತಿಂಗಳು ಆಹ್ವಾನಿಸಿದ್ದ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ ನಮ್ಮೂರಿನವರೆ ಆದ ಶ್ರೀ ಶರಣಪ್ಪ ಕ. ಬೇವಿನಕಟ್ಟಿ ಇವರ "ಚಂದ್ರವ್ವ" ಎಂಬ ಕಥೆಗೆ ವಿಶೇಷ ಪುರಸ್ಕಾರವು ಲಭಿಸಿದ್ದು, ಈ ಒಂದು ವಿಷಯವಾಗಿ "ನಾನು ನನ್ನ ಕಥೆ" ಎಂಬ ವಿಷಯದ ಕುರಿತು ಶ್ರೀ ಶರಣಪ್ಪ ಕ. ಬೇವಿನಕಟ್ಟಿ ಗ.ಗಡ  ಇವರು ಉಪನ್ಯಾಸವನ್ನು ನೀಡುತ್ತಿದ್ದು, ಅತಿಥಿಗಳಾಗಿ ಶ್ರೀ ಬಿ.ಕೆ ಮಾದಿ   ಮತ್ತು ಡಾ|| ಜಗದೀಶ. ಹುಲ್ಲೂರ ಪ್ರಾಧ್ಯಾಪಕರು  ಸ.ಪ್ರ.ದ.ಕಾಲೇಜ್ ಗ.ಗಡ. ಇವರು ಕಥೆಯ ಕುರಿತು ವಿಮರ್ಶಾತ್ಮಕ ನುಡಿಗಳನ್ನು ಆಡಲಿದ್ದು ಕವನ ವಾಚನವನ್ನು  ಕುಮಾರಿ.ಕೆ.ಬಿ.ಮಾಳೋತ್ತರ ವಾಚಿಸಲಿದ್ದು ೧೨ ನೇ ಶತಮಾನದ ಮೊದಲ ವಚನಗಾರ್ತಿಯಾದಂತ ಅಕ್ಕಮಹಾದೇವಿ ಯವರ ಕುರಿತು ಪರಿಚಯದ ನುಡಿಗಳನ್ನಾಡಲಿದ್ದಾರೆ ಕುಮಾರಿ. ಎ.ಟಿ.ಪೋಲಿಸ್ ಪಾಟೀಲ ಇವರುಗಳು ನಡೆಸಿಕೊಡಲಿದ್ದಾರೆ.
ಎಂದಿನಂತೆ ಕಾರ್ಯಕ್ರಮವು ಸಹ ಅಂದರೆ ದಿ.೦೩-೦೨-೨೦೧೮ ಶನಿವಾರದಂದು ಸಂಜೆ, ಸಮಯ ೬.೦೦ ಕ್ಕೆ ಸರಿಯಾಗಿ ಮೈಸೂರು ಮಠದಲ್ಲಿ ನಡೆಯಲಿದೆ ಕಾರಣ ಸಕಲ ಕನ್ನಡದ ಮನಸ್ಸುಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಎಂದು ವಿನಂತಿಸಿಕೊಳ್ಳುತ್ತಾ ಸರ್ವರಿಗೂ ಹಾರ್ದಿಕ ಸ್ವಾಗತ.

No comments:

Post a Comment