ಮನಕೆ ತೊಟ್ಟಿರುವ ನಾನೆಂಬ
ವಸ್ತ್ರವ ವಿವಸ್ತ್ರಗೊಳಿಸಿ ಬಿಡು
ಕಣ್ಣುಗಳಿಗೆ ಮೆತ್ತಿರುವ ಅಹಂ ನ
ಪರದೆಯನು ಕಳಚಿ ನೋಡು
ಎಲ್ಲ ನಿನ್ನಂತವರಿಲ್ಲ, ಒಳಗಣ್ಣ
ತೆರದು ಓದು, ಮೇಲೇರಿದವರದೇಷ್ಟು
ತಲೆಬಾಗಿ ನಡೆಯುತಿಹರು, ಬರೆಯುತಿರುವವರು ನಿನ್ನನೆ ದಿಟ್ಟಿಸಿ
ನೋಡುತಿಹರು
ಮೇಲೆರಿದವರ ಕಾಲೆಳೆಯಬೇಡ
ಹಿಂಬಾಲಕರ, ದಟ್ಟ ಕಾನನದ ಒಂಟಿ
ದಾರಿಯಲಿ ಕೈ ಬಿಡಬೇಡ
ಪದಪದಗಳು ಅರಳುವವು ನಿನ್ನಂತರಂಗದೊಳು, ಪರರ ನಿಂದಿಸಲು
ಬಳಸಬೇಡ, ಪರರು ಇಲ್ಲದೆ ನಿನ್ನ
ಪದಗಳಿಗೆ ಬೆಲೆಯಿಲ್ಲ
ಹೆಗಲೆರುವುದು ಆಗಾಗ ಯಶಸ್ಸಿನ
ಭಾರ, ಹಿರಿಯರ ಮುಂದೆ ಬಾಗಿ ಬಾಗಿ
ಅರ್ಪಿಸಿಬಿಡು ಅವರ ಪಾದಗಳ ಧೂಳಿಗೆ
ಹಗುರಾಗಿ ಎಲ್ಲರೊಡಗೂಡಿ ಸಾಗಲು
ಅನುವಾಗುವುದು ಆವಾಗ
ನಿನ್ನ ಮನದ ಜ್ಯೋತಿಯ ಇನ್ನೊಬ್ಬರ
ಮನಕೆ ಹಚ್ಚುವ ದೀವಿಗೆಯಾಗಲಿ
ಅವರ ನಡೆದು ಹೋಗುವ ದಾರಿಯ
ಕತ್ತಲನು ಕಳೆಯುವ ಪಂಜಾಗಲಿ
ನಾನೆ ಜ್ಞಾನಿಯಂಬ ಹುಚ್ಚು ಯಜ್ಞದಲಿ
ಸುಟ್ಟು ಕರಕಲಾಗಬೇಡ
ಕಲಿ..ಕಲಿಸು.. ಕಲಿಯುತಿರು
ಬದುಕಿದು ನಿರಂತರ... ನಿನ್ನ
ಬರವಣಿಗೆಯೊಂದೆ ನಿಲ್ಲದಿರಲಿ
ಬರಲಿ ಬದುಕಲಿ ಅದೇಷ್ಟು ಅಂತರ
ನೀ ಜಗಕೆ ಶರಣಾಗದ ಹೊರತು
ನಿನಗೆ ಜಯವಿಲ್ಲ
🙏🙏🙏🙏🙏🙏🙏🙏🙏🙏
No comments:
Post a Comment