ಇಂದಿನ ೭೨ ನೇ ವಾರದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಹಾಗೂ ಉಪನ್ಯಾಸಕರು. " ಕರ್ನಾಟಕದಲ್ಲಿ ಸ್ಮಾರಕಗಳು" ವಿಷಯ ಕುರಿತು ಶ್ರೀಯುತ ಇಮಾಮಸಾಬ ಕೋಲಕಾರ (ಭೂ ಸೇನಾ ನಿವೃತ್ತಿ ಸೈನಿಕರು, ಸದರಿ ಭಾರತೀಯ ಪುರಾತತ್ವ ಇಲಾಖೆ ಸ್ಮಾರಕಗಳ ಸಂರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವರು) ಇವರು ಉಪನ್ಯಾಸವನ್ನು ನೀಡಿದರು. ಅದರ ಕುರಿತು ಕೆಲವು ಉಪಯುಕ್ತ ಮಾಹಿತಿ ನಿಮ್ಮ ಅವಗಾಹನೆಗಾಗಿ..
ಪ್ರಾರಂಭದಲ್ಲಿ ಶ್ರೀಯುತರು ತಮ್ಮ ಸೇನಾ ಕಾರ್ಯಸೇವೆಯ ಬಗ್ಗೆ ಮಾತನಾಡಿದರು. ಇಪ್ಪತ್ತು ವರ್ಷ ಮತ್ತು ಮೂನ್ನುರ ನಾಲ್ವತ್ತೊಂದು ದಿನಗಳಲ್ಲಿ ದೇಶದ ಮುಖ್ಯ ಗಡಿಭಾಗಗಳಲ್ಲಿ ಸೇವೆಗೈಯ್ಯುಯದದನ್ನು ನೆನೆದು ಸ್ಮಾರಕಗಳ ಕುರಿತು ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದರು. ಬಸವಣ್ಣನನ್ನು ನೆನೆದು
೧೯೯೬ರಲ್ಲಿ ನಮ್ಮ ಕರ್ನಾಟಕದ ಪ್ರಧಾನ ಮಂತ್ರಿಯಾದಂತಹ ದೇವೆಗೌಡ ಹಾಗೂ ದಿ. ಎಸ್ ಆರ್ ಬೊಮ್ಮಾಯಿ ಇವರ ಆಸಕ್ತಿಯೊಂದಿಗೆ ಧಾರವಾಡದಲ್ಲಿ ಭಾರತೀಯ ಪುರಾತತ್ವ ವಲಯ ಎಂಬ ಶಾಖೆಯು ತೆರೆಯಲ್ಪಟ್ಟಿತು. ಈ ಒಂದು ಕಟ್ಟಡವನ್ನು ಉಧ್ಘಾಟಿಸಿದ್ದು ದಿ.ಎಮ್.ಎಮ್. ಕಲ್ಬುರ್ಗಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಬೀದರನಿಂದ ಹಿಡಿದು ಭಟ್ಕಳದವರೆಗೂ ಇದರ ವ್ಯಾಪ್ತಿಗೊಳಪಡುತ್ತದೆ. ಧಾರವಾಡದ ವಲಯಗಳ ಕೆಳಗೆ ಹನ್ನೊಂದು ಉಪ ವಲಯಗಳು ಬರುತ್ತವೆ. ಅದರಲ್ಲೂ ಬಿಜಾಪುರ ಪೂರ್ವ, ಪಶ್ಚಿಮ ಬಿಜಾಪುರ ಎಂದು ವಿಂಘಡಿಸಿದ್ದಾರೆ ಕಾರಣ ನಮ್ಮ ಉತ್ತರ ಕರ್ನಾಟಕದಲ್ಲಿ ಬಿಜಾಪುರದಲ್ಲಿ ಸಾಕಷ್ಟು ಸ್ಮಾರಕಗಳು ಬರುವುದರಿಂದ ಇದನ್ನು ವಿಭಾಗಿಸಲಾಗಿದೆ. ೧೯೫೮ ರ ಕಾನೂನಿನ ಪ್ರಕಾರ ಆ ಕಾಯ್ದೆಯಲ್ಲಿ ಏನನ್ನು ತಿಳಿಸಲಾಗಿದೆಯೊ.. ಆ ಕಾನೂನುಗಳ ಪ್ರಕಾರ ಸ್ಮಾರಕಗಳನ್ನು ಹಾಗೆ ಸಂರಕ್ಷಿಸಬೇಕಾಗುತ್ತದೆ. ಇದರ ಪ್ರಕಾರ ಗುಡಿಯಾಗಲಿ, ಮಸೀದಿಯಾಗಲಿ, ಜೈನ ಮಂದಿರಗಳಾಗಲಿ ಇದ್ದ ಸ್ಥಿತಿಯಲ್ಲಿಯೆ ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಧಾರವಾಡದ ವಲಯದಲ್ಲಿ ಎರಡ್ನೂರ ಇಪ್ಪತ್ಮೂರು
ಕುಕನೂರು ಇಟಗಿಯ ಮಹಾದೇವ ಸ್ಮಾರಕ ಗುಡಿಯ ಕುರಿತು ಉಪನ್ಯಾಸವನ್ನು ನೀಡಲು ಡಿ.೧೫. ೧೬. ೧೭. ರಂದು ಇಟಗಿ ಉತ್ಸವವು ನಡೆಯುತ್ತಿದ್ದು ಕಾರಣ ಸಕಲರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಎಂದು ವಿನಂತಿಸಿಕೊಳ್ಳುತ್ತಾ...ಇಟಗಿ ಸ್ಮಾರಕ
ಸೋಮನಾಥೇಶ್ಚರ ದೇವಾಲಯ ಪೂರ್ವ ಉತ್ತರ ಮತ್ತು ದಕ್ಷಿಣ ಕ್ಕೆ ಮೂರು ದ್ವಾರ ಬಾಗಿಲಗಳಿದ್ದು
No comments:
Post a Comment