ಬೆತ್ತದ ರುಚಿಯಲಿ
ಬತ್ತದ ಅಕ್ಷರಗಳ ಕಲಿಸಿದವರು
ಗೆಜ್ಜೆಗಳ ನಾದದಲಿ
ಗೋವಿನ ಹಾಡನು ಹಾಡಿಸಿದವರು
ಒಂಟಿ ಕಾಲಲೆ ನಿಲ್ಲಿಸಿ
ಸಾಲು ಸಾಲು ಮಗ್ಗಿಗಳ ಕಲಿಸಿಕೊಟ್ಟವರು
ಹಗಲಿರುಳು ತಮ್ಮ ತಾ ಸುಟ್ಟುಕೊಂಡು
ನಮ್ಮ ಬಾಳಿಗೆ ಬೆಳಕ ಚೆಲ್ಲಿದವರು
ಬಗ್ಗದ.. ಜಗ್ಗದ ದಡ್ಡ ಕಬ್ಬಿಣಗಳ
ಕಾಯಿಸಿ..ಕಾಯಿಸಿ ರೂಪವ ಕೊಟ್ಟವರು
ಜೀವನದ ಹಾಳೆಯಲಿ ತಪ್ಪುಗಳನೆಲ್ಲವ
ಅಳಿಸಿ.. ಮರಿಸಿ..ಒಳ್ಳೆಯದಕ್ಕೆ ಮುನ್ನುಡಿಯ
ಬರೆದವರು
ಬೆಟ್ಟ ಗುಡ್ಡಗಳ ಸುತ್ತಾಡಿಸಿ.. ಪ್ರಕೃತಿಯ ಮಡಿಲಲಿ
ಬೇರಸಿ.. ಮಲಗಿಸಿ ಮಾಸದ ಅನುಭವವ
ಕಟ್ಟಿಕೊಟ್ಟವರು
ಗೆಲುವೆಂದರೆ ಅದು ನಿನ್ನಿಂದ ಎಂಬ
ಹುರುದುಂಬಿಸುವ ಮಾತುಗಳಿಂದ ಕ್ರೀಡೆಗಳಿಗೆ
ಕಳಿಸುತ್ತೀದವರು
ನಮಗಾಗಿ ಬದುಕುವುದು ಬದುಕಲ್ಲ..
ಇನ್ನೊಬ್ಬರಿಗಾಗಿ ಬದುಕುವುದು ಬದುಕೆಂದು
ಬದುಕಿ ತೋರಿಸಿಕೊಟ್ಟವರು
ಜಡವಾದ ಕೊರಡಾಗಿದ್ದೇನ್ನನು.. ನೆಟ್ಟು
ಜ್ಞಾನದ ನೀರೆರೇದು ಪೋಷಿಸಿದವರು
ಮನಸಿನ ಕಲ್ಮಷವನು ಶಿಕ್ಷಣದ ಗಂಗೆಯಲಿ
ತೊಳೆದು ಸನ್ಮಾರ್ಗವ ತೋರಿದವರು
ಸಮಾಜಕ್ಕೆ ನೆರಳಾಗಿಸಿ.. ದೇಶಕ್ಕೆ ಉತ್ತಮ
ಫಲಕಾರ್ಯಗಳ ನೀಡುವಂತೆ ರೂಪಿಸಿದವರು
ಗುರುಗಳೆ...ನೀವು ಬಿತ್ತಿದ ಪದ ಪದಗಳಿಗೂ
ನಾನವ ಬೆಲೆಯ ಕಟ್ಟಲಿ... ಅದಾವ ರೀತಿಯಲ್ಲಿ
ಗುರು ಕಾಣಿಕೆಯನರ್ಪಿಸಲಿ...
No comments:
Post a Comment